Tuesday, October 14, 2025

Janaspandhan News

HomeCinemaಇಲ್ಲಿದೇ ನೋಡಿ "Kantara : Chapter 1" ಚಿತ್ರದ ಶೂಟಿಂಗ್ ನಡೆದ ಅದ್ಭುತ ಸ್ಥಳ.!
spot_img
spot_img
spot_img

ಇಲ್ಲಿದೇ ನೋಡಿ “Kantara : Chapter 1” ಚಿತ್ರದ ಶೂಟಿಂಗ್ ನಡೆದ ಅದ್ಭುತ ಸ್ಥಳ.!

- Advertisement -

ಜನಸ್ಪಂದನ ನ್ಯೂಸ್‌, ಸಿನಿಮಾ : ಉಡುಪಿ ಜಿಲ್ಲೆಯ ಕುಂದಾಪುರ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಕರ್ನಾಟಕದ ಕರಾವಳಿಯ ಈ ಭಾಗ ಇದೀಗ ಸಿನಿಮಾ ಪ್ರಿಯರ ಗಮನ ಸೆಳೆದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಮತ್ತು ಅಭಿನಯದ ʼಕಾಂತಾರ : ಚಾಪ್ಟರ್‌ 1 (Kantara : Chapter 1)ʼ ಸಿನಿಮಾದ ಬಹುಪಾಲು ಚಿತ್ರೀಕರಣ ಕುಂದಾಪುರ ಮತ್ತು ಅದರ ಸುತ್ತಮುತ್ತ ನಡೆದಿರುವುದು ಚಲನಚಿತ್ರ ಅಭಿಮಾನಿಗಳಿಗೆ ಹೊಸ ಕುತೂಹಲ ಹುಟ್ಟಿಸಿದೆ.

ಕುಂದಾಪುರದ ಕಾಡುಗಳಲ್ಲಿ ಕಾಂತಾರ (Kantara) ಮಾಯೆ :

Kundapur

ಕುಂದಾಪುರವು ದಟ್ಟ ಕಾಡುಗಳು ಮತ್ತು ಸಮುದ್ರದ ಸೌಂದರ್ಯದಿಂದ ಪ್ರಸಿದ್ಧವಾಗಿದೆ. ಇದೇ ಪ್ರದೇಶದಲ್ಲಿ ʼಕಾಂತಾರ (Kantara)ʼ ಚಿತ್ರದ ಪ್ರಮುಖ ಭಾಗಗಳನ್ನು ರಿಷಬ್ ಶೆಟ್ಟಿ ಚಿತ್ರೀಕರಿಸಿದ್ದರು. ಈಗ ‘ಚಾಪ್ಟರ್ 1’ಗೂ ಇದೇ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರತಂಡವು ಕೊಲ್ಲೂರು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಹಲವಾರು ದಿನಗಳ ಚಿತ್ರೀಕರಣ ನಡೆಸಿದೆ.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!

ಇದೇ ವೇಳೆ, ಕುಂದಾಪುರದಲ್ಲಿರುವ ಯುವಾ ಮೆರಿಡಿಯನ್ ಬೇ ಸ್ಟುಡಿಯೋಯಲ್ಲಿ ಕಾಂತಾರ (Kantara)ʼ ಸಿನಿಮಾದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

ಕೆರಾಡಿಯ ಮೂಡುಗಲ್ಲು — ರಿಷಬ್ ಶೆಟ್ಟಿಯ ತವರೂರು :

Keradi

ರಿಷಬ್ ಶೆಟ್ಟಿ ಅವರ ತವರೂರು ಕೆರಾಡಿ ಗ್ರಾಮ, ಕುಂದಾಪುರ ತಾಲ್ಲೂಕಿನಲ್ಲಿ ಇದೆ. ಈ ಪ್ರದೇಶದಲ್ಲಿರುವ ಮೂಡುಗಲ್ಲು ಗುಹಾಂತರ ದೇವಾಲಯವು ಶಿವನ ಕೇಶವನಾಥೇಶ್ವರ ರೂಪದ ಆರಾಧನೆಗೆ ಪ್ರಸಿದ್ಧ. ಭಕ್ತರು ಮೊಣಕಾಲು ಮಟ್ಟದ ನೀರಿನಲ್ಲಿ ಸಾಗಿಯೇ ದೇವರ ದರ್ಶನ ಪಡೆಯಬೇಕಾದ ಈ ಸ್ಥಳದಲ್ಲಿ ಪ್ರಕೃತಿ ಮತ್ತು ಧಾರ್ಮಿಕತೆ ಅನನ್ಯವಾಗಿ ಬೆರೆತಿವೆ.

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

ಕಾಂತಾರ (Kantara) ಚಿತ್ರದ ಕೆಲವು ದೃಶ್ಯಗಳು ಇಲ್ಲಿಯೂ ಚಿತ್ರೀಕರಿಸಲ್ಪಟ್ಟಿವೆ. ಇದೇ ದೇವಾಲಯಕ್ಕೆ ಹಿಂದೊಮ್ಮೆ ರಿಷಬ್ ಶೆಟ್ಟಿ ಅವರು ಟಾಲಿವುಡ್ ನಟ ಜೂ. ಎನ್‌ಟಿಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಕರೆತಂದಿದ್ದರು ಎಂಬ ಮಾಹಿತಿ ಇದೆ.

ಮಾಣಿ ಜಲಾಶಯದ ಹಸಿರು ಹಿನ್ನೆಲೆ :

Mani Falls

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಮೀಪದ ಮಾಣಿ ಜಲಾಶಯವೂ ‘ಕಾಂತಾರ: ಚಾಪ್ಟರ್ 1’ ಚಿತ್ರದ ಪ್ರಮುಖ ಶೂಟಿಂಗ್ ಸ್ಥಳವಾಗಿದೆ. ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಅಣೆಕಟ್ಟಿನ ಸುತ್ತಲಿನ ಕಾಡುಗಳು ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ್ದವೆ.

NWR : ವಾಯುವ್ಯ ರೈಲ್ವೆಯಲ್ಲಿ 2162 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಶೂಟಿಂಗ್ ವೇಳೆ ಇಲ್ಲಿ ದೋಣಿ ಮಗುಚಿ ಅಪಘಾತ ಸಂಭವಿಸಿದರೂ, ತಂಡದ ಎಲ್ಲ ಸದಸ್ಯರು ಸುರಕ್ಷಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಕಲೇಶಪುರದ ಮಂಜು ಮುಸುಕಿದ ಕಾಡುಗಳಲ್ಲಿ ಯುದ್ಧದ ದೃಶ್ಯಗಳು :

Sakaleshapur

ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಸಕಲೇಶಪುರ ಪ್ರದೇಶವು ಹಸಿರು ಕಾಡುಗಳಿಂದ ಆವರಿತವಾಗಿದೆ. ಚಿತ್ರದಲ್ಲಿನ ಯುದ್ಧದ ದೃಶ್ಯಗಳು ಇಲ್ಲಿ ಚಿತ್ರೀಕರಿಸಲ್ಪಟ್ಟಿವೆ. ಹಸಿರು ಕಾಡು, ಮಂಜು, ಹಾಗೂ ಪರ್ವತಗಳ ಮಧ್ಯೆ ನಿರ್ಮಾಣವಾದ ವಾತಾವರಣ ಚಿತ್ರಕ್ಕೆ ವಿಭಿನ್ನ ಭಾವನೆ ನೀಡಿದೆ.

ಬುಡಕಟ್ಟು ಜನಾಂಗ ಮತ್ತು ರಾಜ ಮನೆತನದ ಸಂಘರ್ಷವೇ ಕಥಾ ಹೃದಯ :

ʼಕಾಂತಾರ : ಚಾಪ್ಟರ್‌ 1ʼ ಚಿತ್ರದ ಮೂಲ ಕಥೆ ಕಾಡಿನ ಬುಡಕಟ್ಟು ಜನಾಂಗ ಮತ್ತು ರಾಜ ಮನೆತನದ ನಡುವಿನ ಸಂಘರ್ಷದ ಸುತ್ತ ನಡೆಯುತ್ತದೆ. ಈ ಹಿನ್ನೆಲೆಯಿಂದಾಗಿ ಚಿತ್ರದ ಬಹುತೇಕ ಭಾಗ ಕಾಡು ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಸುಮಾರು 250 ದಿನಗಳ ಕಾಲ ಶೂಟಿಂಗ್ ನಡೆದಿದ್ದು, ತಂಡದ ಪರಿಶ್ರಮದಿಂದ ಚಿತ್ರಕ್ಕೆ ಭಾರೀ ನಿರೀಕ್ಷೆ ಮೂಡಿದೆ.

Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”
ಕಾಂತಾರ (Kantara) ಚಿತ್ರತಂಡದ ಉದ್ದೇಶ :

ಪ್ರಕೃತಿಯ ಮಧ್ಯದಲ್ಲಿ ಅಡಗಿರುವ ಕರ್ನಾಟಕದ ಸಂಸ್ಕೃತಿ, ನಂಬಿಕೆ, ಧಾರ್ಮಿಕತೆ ಮತ್ತು ಜನಾಂಗೀಯ ಬದುಕಿನ ತೀವ್ರತೆಯನ್ನು ಕಾಂತಾರ (Kantara) ಚಿತ್ರವು ತೋರಿಸಲು ಪ್ರಯತ್ನಿಸಿದೆ.

Kantara Team

Courtesy : Vishwavani


eSIM : ಸಿಮ್ ಕಾರ್ಡ್ ಇಲ್ಲದೆ ಕಾಲ್, ಇಂಟರ್ನೆಟ್ ಸೌಲಭ್ಯ ; BSNL ನಿಂದ ಬಂಪರ್ ಸೌಲಭ್ಯ.!

esim

ಜನಸ್ಪಂದನ ನ್ಯೂಸ್‌, ನವದೆಹಲಿ : ಇತ್ತೀಚಿನವರೆಗೆ ಭಾರತದಲ್ಲಿ eSIM ಸೌಲಭ್ಯವನ್ನು ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್ ಮತ್ತು ವಿಐ ಮಾತ್ರ ಒದಗಿಸುತ್ತಿದ್ದವು. ಆದರೆ ಈಗ ಸರ್ಕಾರಿ ದೂರಸಂಪರ್ಕ ಸಂಸ್ಥೆಯಾದ ಭಾರತ ಸಂಚಾರ ನಿಗಮ್ ಲಿಮಿಟೆಡ್‌ (BSNL) ಕೂಡ ಈ ಪಟ್ಟಿಗೆ ಸೇರ್ಪಡೆಗೊಂಡಿದೆ. ಬಿಎಸ್‌ಎನ್‌ಎಲ್ ಈಗ ದೇಶಾದ್ಯಂತ eSIM (ಎಲೆಕ್ಟ್ರಾನಿಕ್‌ ಸಿಮ್) ಸೇವೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ.

ಈ ಹೊಸ ಸೌಲಭ್ಯದಿಂದ, ಕೇವಲ ಒಂದು ಭೌತಿಕ ಸಿಮ್ ಸ್ಲಾಟ್ ಇರುವ ಸ್ಮಾರ್ಟ್‌ಫೋನ್ ಬಳಕೆದಾರರೂ ಕೂಡ ಬಿಎಸ್‌ಎನ್‌ಎಲ್ ಸಂಪರ್ಕವನ್ನು ಇ-ಸಿಮ್‌ (eSIM) ರೂಪದಲ್ಲಿ ಬಳಸಬಹುದು. ಇದು ಗ್ರಾಹಕರಿಗೆ ಹೆಚ್ಚು ಅನುಕೂಲಕರ ಸಂಪರ್ಕ ಮತ್ತು ತಂತ್ರಜ್ಞಾನ ಪ್ರಗತಿಯನ್ನು ಒದಗಿಸಲಿದೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಟಾಟಾ ಕಮ್ಯುನಿಕೇಷನ್ಸ್ ಸಹಯೋಗದೊಂದಿಗೆ ಪ್ರಾರಂಭ :

ಈ ಯೋಜನೆಗಾಗಿ ಬಿಎಸ್‌ಎನ್‌ಎಲ್ ಟಾಟಾ ಕಮ್ಯುನಿಕೇಷನ್ಸ್ ಕಂಪನಿಯೊಂದಿಗೆ ಕೈಜೋಡಿಸಿದೆ.
ಟಾಟಾ ಕಮ್ಯುನಿಕೇಷನ್ಸ್‌ನ “MOVE” ಪ್ಲಾಟ್‌ಫಾರ್ಮ್ ಅನ್ನು ಇ-ಸಿಮ್ ಚಂದಾದಾರಿಕೆ ನಿರ್ವಹಣೆಗೆ ಬಳಸಲಾಗುತ್ತದೆ. ಈ ಪ್ಲಾಟ್‌ಫಾರ್ಮ್ GSMA ಮಾನ್ಯತೆ ಪಡೆದ ಸುರಕ್ಷಿತ ತಂತ್ರಜ್ಞಾನವಾಗಿದೆ ಎಂದು ಕಂಪನಿ ಪ್ರಕಟಿಸಿದೆ.

eSIM ಸೇವೆಯ ಮುಖ್ಯ ಪ್ರಯೋಜನಗಳು :
  • ಬಿಎಸ್‌ಎನ್‌ಎಲ್ eSIM 2G, 3G ಮತ್ತು 4G ನೆಟ್‌ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ.
  • ಡ್ಯುಯಲ್‌ ಸಿಮ್‌ ಸಪೋರ್ಟ್‌ ಇರುವ ಸ್ಮಾರ್ಟ್‌ಫೋನ್‌ ಬಳಕೆದಾರರು ಎರಡನೇ ಸ್ಲಾಟ್‌ನಲ್ಲಿ ಇ-ಸಿಮ್ ಉಪಯೋಗಿಸಬಹುದು.
  • ಭೌತಿಕ ಸಿಮ್ ಬದಲಿಸುವ ಅಗತ್ಯವಿಲ್ಲದೆ ಬೇರೆ ಸೇವೆ ಅಥವಾ ಪ್ಲ್ಯಾನ್‌ಗೆ ತ್ವರಿತವಾಗಿ ಬದಲಾಯಿಸಲು ಸಾಧ್ಯ.
  • ಹೆಚ್ಚು ಸುರಕ್ಷಿತ ಮತ್ತು ಪರಿಸರ ಸ್ನೇಹಿ ಆಯ್ಕೆಯಾಗಿದೆ.
ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಬಿಎಸ್‌ಎನ್‌ಎಲ್ ಪ್ರಸ್ತುತ 4G ಸೇವೆಯನ್ನು ದೇಶದಾದ್ಯಂತ ವಿಸ್ತರಿಸುತ್ತಿದೆ. ವರದಿಗಳ ಪ್ರಕಾರ, ಕಂಪನಿ ಈಗಾಗಲೇ ಸುಮಾರು 98,000 ಟವರ್‌ಗಳ ಮೂಲಕ 4G ಸೇವೆ ಪ್ರಾರಂಭಿಸಿದೆ. 2025ರ ಕೊನೆಯ ವೇಳೆಗೆ ಮುಂಬೈ ಮತ್ತು ದೆಹಲಿಯಲ್ಲಿ 5G ಸೇವೆ ಪ್ರಾರಂಭಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಸರ್ಕಾರವೂ ಈ ಯೋಜನೆಗೆ ತ್ವರಿತ ಅನುಮೋದನೆ ನೀಡಿದೆ.

BSNL eSIM ಪಡೆಯುವ ವಿಧಾನ :

ಬಿಎಸ್‌ಎನ್‌ಎಲ್ ಗ್ರಾಹಕರು ತಮ್ಮ ಹತ್ತಿರದ ಗ್ರಾಹಕ ಸೇವಾ ಕೇಂದ್ರ (CSC) ಗೆ ಭೇಟಿ ನೀಡಿ ಇ-ಸಿಮ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಸಹಿತ KYC ಪ್ರಕ್ರಿಯೆ ಅಗತ್ಯವಿರುತ್ತದೆ.

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!
ಇತರೆ ಟೆಲಿಕಾಂ ಕಂಪನಿಗಳಲ್ಲಿ eSIM ಪಡೆಯುವ ವಿಧಾನ :
  • ಜಿಯೋ : MyJio ಅಪ್ಲಿಕೇಶನ್ ಅಥವಾ ಹತ್ತಿರದ ಜಿಯೋ ಅಂಗಡಿಯಲ್ಲಿ ಇ-ಸಿಮ್‌ಗೆ ವಿನಂತಿಸಬಹುದು.
  • ಏರ್‌ಟೆಲ್/ವಿಐ: ಅಧಿಕೃತ ಅಪ್ಲಿಕೇಶನ್ ಮೂಲಕ ಅಥವಾ 121 ಗೆ ಕರೆ ಮಾಡುವ ಮೂಲಕ ಇ-ಸಿಮ್‌ ಸಕ್ರಿಯಗೊಳಿಸಬಹುದು.
  • SMS ಮೂಲಕವೂ ವಿನಂತಿಸಬಹುದು — eSIM_registered ಇಮೇಲ್ ವಿಳಾಸ ಟೈಪ್ ಮಾಡಿ 199 ಗೆ ಕಳುಹಿಸಬೇಕು.
- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments