ಜನಸ್ಪಂದನ ನ್ಯೂಸ್, ಡೆಸ್ಕ್ : ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾಕ್ರಮೆಂಟೋ ನಗರದಲ್ಲಿ ಮಂಗಳವಾರ ಸಂಜೆ (ಸ್ಥಳೀಯ ಕಾಲಮಾನ) ಭೀಕರ ಹೆಲಿಕಾಪ್ಟರ್ (helicopter) ಅಪಘಾತ ಸಂಭವಿಸಿದೆ.
ವರದಿಗಳ ಪ್ರಕಾರ, ಈ ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಪತನಗೊಂಡ ಹೆಲಿಕಾಪ್ಟರ್ (helicopter) ಒಂದು ಮಕ್ಕಳ ಆಸ್ಪತ್ರೆಯಿಂದ ಹೊರಟಿತ್ತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹೆದ್ದಾರಿಯ ಬಳಿ ಹೆಲಿಕಾಪ್ಟರ್ (helicopter) ನಿಯಂತ್ರಣ ತಪ್ಪಿ ತಿರುಗುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಕ್ಷಣಾರ್ಧದಲ್ಲಿ ನೆಲಕ್ಕೆ ಬಿದ್ದ ಹೆಲಿಕಾಪ್ಟರ್ (helicopter) ನಿಂದ ಕಪ್ಪು ಹೊಗೆ ಎದ್ದಿರುವುದೂ ವಿಡಿಯೋದಲ್ಲಿ ಕಾಣಬಹುದಾಗಿದೆ.
ಸ್ಥಳೀಯ ಸಮಯ ಸಂಜೆ 7.10ರ ಸುಮಾರಿಗೆ ಹೋವೆ ಅವೆನ್ಯೂ ಬಳಿಯ ಹೆದ್ದಾರಿ 50 ರ ಪೂರ್ವ ದಿಕ್ಕಿನ ಲೇನ್ಗಳಲ್ಲಿ ಈ ಘಟನೆ ನಡೆದಿರುವುದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಅಪಘಾತದ ನಂತರ ತಕ್ಷಣವೇ ಹೆದ್ದಾರಿಯ ಎರಡೂ ದಿಕ್ಕಿನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.
Young woman : ಯುವತಿಯೊಂದಿಗೆ ಡೆಲಿವರಿ ಬಾಯ್ ಅಸಭ್ಯ ವರ್ತನೆ ; ಘಟನೆ ವಿಡಿಯೋ ವೈರಲ್.!
ಪ್ರಾಥಮಿಕ ಮಾಹಿತಿಯ ಪ್ರಕಾರ, ಅವಶೇಷಗಳಡಿ ಕೆಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಹಾಗೂ ತುರ್ತು ವೈದ್ಯಕೀಯ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಸಾವು ನೋವುಗಳ ಕುರಿತು ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಸಂಸ್ಥೆ ಘಟನೆಯನ್ನು ದೃಢಪಡಿಸಿದ್ದು, ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ತನಿಖೆ ಪ್ರಾರಂಭಿಸಿದೆ. ಪ್ರಾಥಮಿಕ ತನಿಖೆಯಲ್ಲಿ ತಾಂತ್ರಿಕ ದೋಷ, ಪೈಲಟ್ ದೋಷ ಅಥವಾ ಹವಾಮಾನ ಪರಿಸ್ಥಿತಿಗಳ ಪಾತ್ರ ಇರುವ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ.
Water : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಾಸ್ತಿ ನೀರು ಕುಡಿದರೆ ಏನಾಗುತ್ತದೆ.?
ಈ ಘಟನೆಯು ಅಮೆರಿಕಾದಲ್ಲಿ ಇತ್ತೀಚೆಗೆ ನಡೆದ ಮತ್ತೊಂದು ಹೆಲಿಕಾಪ್ಟರ್ (helicopter) ದುರಂತವನ್ನು ನೆನಪಿಸುತ್ತದೆ. ಕಳೆದ ಏಪ್ರಿಲ್ನಲ್ಲಿ ನ್ಯೂಯಾರ್ಕ್ನ ಹಡ್ಸನ್ ನದಿಯ ಮೇಲೆ ನಡೆದ ಹೆಲಿಕಾಪ್ಟರ್ ಪತನದಲ್ಲಿ ಆರು ಜನರು ಪ್ರಾಣ ಕಳೆದುಕೊಂಡಿದ್ದರು. ಪಿಯರ್ 40 ಬಳಿ ಸಂಭವಿಸಿದ ಆ ಅಪಘಾತದ ಹೆಲಿಕಾಪ್ಟರ್ ಪ್ರವಾಸಿಗರಿಗೆ ನಗರ ವೀಕ್ಷಣೆಗಾಗಿ ಬಳಸಲ್ಪಟ್ಟ ಬೆಲ್ 206L-4 ಲಾಂಗ್ರೇಂಜರ್ IV ಮಾದರಿಯದ್ದಾಗಿತ್ತು.
ಪ್ರಸ್ತುತ ಸ್ಯಾಕ್ರಮೆಂಟೋ ಘಟನೆಯ ತೀವ್ರತೆ ಹಾಗೂ ನಿಖರ ಕಾರಣಗಳ ಬಗ್ಗೆ ಅಧಿಕಾರಿಗಳಿಂದ ಅಧಿಕೃತ ವರದಿ ನಿರೀಕ್ಷೆಯಲ್ಲಿದೆ.
ವಿಡಿಯೋ :
BREAKING NEWS 🚨🚨#Sacramento / #California
NEW Dramatic social media video shows a REACH Air Medial Helicopter crashing near downtown Sacramento this evening. The crash occurred just after 7pm this evening on the EB lanes of Hwy 50. The Helicopter had just lifted off from UC… pic.twitter.com/XeF0tlJJA1
— OC Scanner 🇺🇸 🇺🇸 (@OC_Scanner) October 7, 2025
ಇಲ್ಲಿದೇ ನೋಡಿ “Kantara : Chapter 1” ಚಿತ್ರದ ಶೂಟಿಂಗ್ ನಡೆದ ಅದ್ಭುತ ಸ್ಥಳ.!

ಜನಸ್ಪಂದನ ನ್ಯೂಸ್, ಸಿನಿಮಾ : ಉಡುಪಿ ಜಿಲ್ಲೆಯ ಕುಂದಾಪುರ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಕರ್ನಾಟಕದ ಕರಾವಳಿಯ ಈ ಭಾಗ ಇದೀಗ ಸಿನಿಮಾ ಪ್ರಿಯರ ಗಮನ ಸೆಳೆದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಮತ್ತು ಅಭಿನಯದ ʼಕಾಂತಾರ : ಚಾಪ್ಟರ್ 1 (Kantara : Chapter 1)ʼ ಸಿನಿಮಾದ ಬಹುಪಾಲು ಚಿತ್ರೀಕರಣ ಕುಂದಾಪುರ ಮತ್ತು ಅದರ ಸುತ್ತಮುತ್ತ ನಡೆದಿರುವುದು ಚಲನಚಿತ್ರ ಅಭಿಮಾನಿಗಳಿಗೆ ಹೊಸ ಕುತೂಹಲ ಹುಟ್ಟಿಸಿದೆ.
ಕುಂದಾಪುರದ ಕಾಡುಗಳಲ್ಲಿ ಕಾಂತಾರ (Kantara) ಮಾಯೆ :

ಕುಂದಾಪುರವು ದಟ್ಟ ಕಾಡುಗಳು ಮತ್ತು ಸಮುದ್ರದ ಸೌಂದರ್ಯದಿಂದ ಪ್ರಸಿದ್ಧವಾಗಿದೆ. ಇದೇ ಪ್ರದೇಶದಲ್ಲಿ ʼಕಾಂತಾರ (Kantara)ʼ ಚಿತ್ರದ ಪ್ರಮುಖ ಭಾಗಗಳನ್ನು ರಿಷಬ್ ಶೆಟ್ಟಿ ಚಿತ್ರೀಕರಿಸಿದ್ದರು. ಈಗ ‘ಚಾಪ್ಟರ್ 1’ಗೂ ಇದೇ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರತಂಡವು ಕೊಲ್ಲೂರು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಹಲವಾರು ದಿನಗಳ ಚಿತ್ರೀಕರಣ ನಡೆಸಿದೆ.
Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಇದೇ ವೇಳೆ, ಕುಂದಾಪುರದಲ್ಲಿರುವ ಯುವಾ ಮೆರಿಡಿಯನ್ ಬೇ ಸ್ಟುಡಿಯೋಯಲ್ಲಿ ಕಾಂತಾರ (Kantara)ʼ ಸಿನಿಮಾದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.
ಕೆರಾಡಿಯ ಮೂಡುಗಲ್ಲು — ರಿಷಬ್ ಶೆಟ್ಟಿಯ ತವರೂರು :

ರಿಷಬ್ ಶೆಟ್ಟಿ ಅವರ ತವರೂರು ಕೆರಾಡಿ ಗ್ರಾಮ, ಕುಂದಾಪುರ ತಾಲ್ಲೂಕಿನಲ್ಲಿ ಇದೆ. ಈ ಪ್ರದೇಶದಲ್ಲಿರುವ ಮೂಡುಗಲ್ಲು ಗುಹಾಂತರ ದೇವಾಲಯವು ಶಿವನ ಕೇಶವನಾಥೇಶ್ವರ ರೂಪದ ಆರಾಧನೆಗೆ ಪ್ರಸಿದ್ಧ. ಭಕ್ತರು ಮೊಣಕಾಲು ಮಟ್ಟದ ನೀರಿನಲ್ಲಿ ಸಾಗಿಯೇ ದೇವರ ದರ್ಶನ ಪಡೆಯಬೇಕಾದ ಈ ಸ್ಥಳದಲ್ಲಿ ಪ್ರಕೃತಿ ಮತ್ತು ಧಾರ್ಮಿಕತೆ ಅನನ್ಯವಾಗಿ ಬೆರೆತಿವೆ.
ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!
ಕಾಂತಾರ (Kantara) ಚಿತ್ರದ ಕೆಲವು ದೃಶ್ಯಗಳು ಇಲ್ಲಿಯೂ ಚಿತ್ರೀಕರಿಸಲ್ಪಟ್ಟಿವೆ. ಇದೇ ದೇವಾಲಯಕ್ಕೆ ಹಿಂದೊಮ್ಮೆ ರಿಷಬ್ ಶೆಟ್ಟಿ ಅವರು ಟಾಲಿವುಡ್ ನಟ ಜೂ. ಎನ್ಟಿಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಕರೆತಂದಿದ್ದರು ಎಂಬ ಮಾಹಿತಿ ಇದೆ.
ಮಾಣಿ ಜಲಾಶಯದ ಹಸಿರು ಹಿನ್ನೆಲೆ :

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಮೀಪದ ಮಾಣಿ ಜಲಾಶಯವೂ ‘ಕಾಂತಾರ: ಚಾಪ್ಟರ್ 1’ ಚಿತ್ರದ ಪ್ರಮುಖ ಶೂಟಿಂಗ್ ಸ್ಥಳವಾಗಿದೆ. ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಅಣೆಕಟ್ಟಿನ ಸುತ್ತಲಿನ ಕಾಡುಗಳು ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ್ದವೆ.
NWR : ವಾಯುವ್ಯ ರೈಲ್ವೆಯಲ್ಲಿ 2162 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಶೂಟಿಂಗ್ ವೇಳೆ ಇಲ್ಲಿ ದೋಣಿ ಮಗುಚಿ ಅಪಘಾತ ಸಂಭವಿಸಿದರೂ, ತಂಡದ ಎಲ್ಲ ಸದಸ್ಯರು ಸುರಕ್ಷಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಕಲೇಶಪುರದ ಮಂಜು ಮುಸುಕಿದ ಕಾಡುಗಳಲ್ಲಿ ಯುದ್ಧದ ದೃಶ್ಯಗಳು :

ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಸಕಲೇಶಪುರ ಪ್ರದೇಶವು ಹಸಿರು ಕಾಡುಗಳಿಂದ ಆವರಿತವಾಗಿದೆ. ಚಿತ್ರದಲ್ಲಿನ ಯುದ್ಧದ ದೃಶ್ಯಗಳು ಇಲ್ಲಿ ಚಿತ್ರೀಕರಿಸಲ್ಪಟ್ಟಿವೆ. ಹಸಿರು ಕಾಡು, ಮಂಜು, ಹಾಗೂ ಪರ್ವತಗಳ ಮಧ್ಯೆ ನಿರ್ಮಾಣವಾದ ವಾತಾವರಣ ಚಿತ್ರಕ್ಕೆ ವಿಭಿನ್ನ ಭಾವನೆ ನೀಡಿದೆ.
ಬುಡಕಟ್ಟು ಜನಾಂಗ ಮತ್ತು ರಾಜ ಮನೆತನದ ಸಂಘರ್ಷವೇ ಕಥಾ ಹೃದಯ :
ʼಕಾಂತಾರ : ಚಾಪ್ಟರ್ 1ʼ ಚಿತ್ರದ ಮೂಲ ಕಥೆ ಕಾಡಿನ ಬುಡಕಟ್ಟು ಜನಾಂಗ ಮತ್ತು ರಾಜ ಮನೆತನದ ನಡುವಿನ ಸಂಘರ್ಷದ ಸುತ್ತ ನಡೆಯುತ್ತದೆ. ಈ ಹಿನ್ನೆಲೆಯಿಂದಾಗಿ ಚಿತ್ರದ ಬಹುತೇಕ ಭಾಗ ಕಾಡು ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಸುಮಾರು 250 ದಿನಗಳ ಕಾಲ ಶೂಟಿಂಗ್ ನಡೆದಿದ್ದು, ತಂಡದ ಪರಿಶ್ರಮದಿಂದ ಚಿತ್ರಕ್ಕೆ ಭಾರೀ ನಿರೀಕ್ಷೆ ಮೂಡಿದೆ.
Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”
ಕಾಂತಾರ (Kantara) ಚಿತ್ರತಂಡದ ಉದ್ದೇಶ :
ಪ್ರಕೃತಿಯ ಮಧ್ಯದಲ್ಲಿ ಅಡಗಿರುವ ಕರ್ನಾಟಕದ ಸಂಸ್ಕೃತಿ, ನಂಬಿಕೆ, ಧಾರ್ಮಿಕತೆ ಮತ್ತು ಜನಾಂಗೀಯ ಬದುಕಿನ ತೀವ್ರತೆಯನ್ನು ಕಾಂತಾರ (Kantara) ಚಿತ್ರವು ತೋರಿಸಲು ಪ್ರಯತ್ನಿಸಿದೆ.

Courtesy : Vishwavani







