ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಖಾನಾಪುರ ಠಾಣೆಯ ಪೊಲೀಸ್ ಪೇದೆಯೊಬ್ಬರು ಬೈಕ್ ಅಪಘಾತದಲ್ಲಿ (bike accident) ಮೃತಪಟ್ಟಿದ್ದಾರೆ.
ಖಾನಾಪುರ (Khanapur) ಠಾಣೆಯ ಪೊಲೀಸ್ ಪೇದೆ ಪ್ರದೀಪ ಮಿಟಗಾರ ಎಂಬುವರು ಖಾನಾಪುರ ರಸ್ತೆಯ ದೇವಲತ್ತಿ ಕ್ರಾಸ್ ನಲ್ಲಿ ಹೊರಟಿದ್ದ ಬೈಕ್ ಅಪಘಾತವಾದ ಬಗ್ಗೆ ಬೆಳಿಗ್ಗೆ ಸ್ಥಳೀಯರಿಗೆ ಗೊತ್ತಾಗಿದೆ.
ನೀರಿನಿಂದ ಹೊರಬಂದು ಒದ್ದಾಡುತ್ತಿದ್ದ ಮೀನನ್ನು ರಕ್ಷಿಸಿದ ಕೊಕ್ಕರೆ ; ಅದ್ಹೇಂಗೆ? ಈ Video ನೋಡಿ.!
ಅಪಘಾತದ ದೃಶ್ಯ ಅನುಮಾನ ಮೂಡಿಸುವಂತಿದ್ದು, ಅಪಘಾತವೋ ಇಲ್ಲವೇ ಅಸಹಜ ಸಾವೋ ಎಂಬ ಸಂಶಯ ಮೂಡಿದೆ. ಬೈಕ್ ಒಂದು ಕಡೆ, ಪ್ರದೀಪ ಅವರು ಇನ್ನೊಂದು ಕಡೆ ಬಿದ್ದಿರುವುದು ಸಾಕಷ್ಟು ಅನುಮಾನ (doubtful) ಹುಟ್ಟಿಸಿದೆ.
ಮರಳು ಕಳ್ಳ ಸಾಗಾಣಿಕೆ ಮಾಡುತ್ತಿದ್ದವರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ಪೊಲೀಸ್ ನಿಗೂಢವಾಗಿ ಮೃತಪಟ್ಟಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿಯ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ವಾಪಾಸ್ (return) ಖಾನಾಪುರಕ್ಕೆ ತೆರಳುವಾಗ ಅವರ ಬೈಕ್ ಅಪಘಾತವಾದಂತೆ ಕಂಡು ಬಂದಿದ್ದು ಇದು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.