Saturday, July 27, 2024
spot_img
spot_img
spot_img
spot_img
spot_img
spot_img

ಅತಿಯಾದ s*x ಗೆ ಒತ್ತಾಯ ; ಬೇಸತ್ತ ಯುವಕ ಆಂಟಿಗೆ ಮಾಡಿದ್ದೇನು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಕೊಡಿಗೇಹಳ್ಳಿಯ ಭದ್ರಪ್ಪ ಲೇಔಟ್‌ನ ಗಣೇಶ ನಗರದಲ್ಲಿ ನಡೆದ ಒಂಟಿ ಮಹಿಳೆಯ ಬರ್ಬರ ಹತ್ಯೆಯ‌ ಕುರಿತು ಕೊಲೆಗಾರನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ (successful).

ಶೋಭಾ (48) ಎಂಬಾಕೆಯ ಮೃತದೇಹವು ಬೆಡ್‌ ರೂಮಿನಲ್ಲಿ ನಗ್ನ ಸ್ಥಿತಿಯಲ್ಲಿ ಬಿದ್ದಿತ್ತು. ಇದೀಗ ಕೊಲೆ ಪ್ರಕರಣವನ್ನು ಭೇದಿಸಿರುವ ಕೊಡಿಗೇಹಳ್ಳಿ ಪೊಲೀಸರು ಹೇರೋಹಳ್ಳಿ ಮೂಲದ ನವೀನ್ ಎಂಬಾತನನ್ನು ಬಂಧಿಸಿದ್ದಾರೆ (arrested).

ಇದನ್ನು ಓದಿ : ಗ್ರಾ. ಪಂ. ಗ್ರಂಥಾಲಯಗಳಿಗೆ ನೇಮಕಾತಿ : PUC ಪಾಸಾದ ಪುರುಷ ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು ; ನಾಳೆಯೇ (ದಿ.24) ಕೊನೆಯ ದಿನ.!

ತನಿಖೆ ವೇಳೆ ಮಹಿಳೆಯ ಕಾಮಕಥೆ ಕೇಳಿ ಪೊಲೀಸರೇ ಸುಸ್ತಾಗಿದ್ದಾರೆ.

ಘಟನೆಯ ಹಿನ್ನೆಲೆ :
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ನವೀನ್‌, ಕಾಲ್ ಗರ್ಲ್‌ಗಾಗಿ ಆ್ಯಪ್‌ಗಳನ್ನು ಬಳಸಿ ಅವರ ಜೊತೆ ಚಾಟ್ ಮಾಡುವುದು ಮಾಡುತ್ತಿದ್ದ. ಈ ವೇಳೆ ಶೋಭಾಳ ಪರಿಚಯವಾಗಿತ್ತು.

ಮೊದ ಮೊದಲು ಎಲ್ಲವೂ ಚೆನ್ನಾಗಿ ಇತ್ತು. ಆದರೆ ಬರಬರುತ್ತ ಆಕೆಯ ವಿಕೃತತೆ ಹೆಚ್ಚಾಗುತ್ತಲೇ ಹೋಗಿತ್ತು. ಪದೇಪದೆ ಲೈಂಗಿಕ ಕ್ರಿಯೆಗೆ (to sexual activity) ಒತ್ತಾಯಿಸುತ್ತಿದ್ದಳು. ಅಂತೆಯೇ ಏ.19ರಂದು ಇಬ್ಬರು ದೈಹಿಕ ಸಂರ್ಪಕವನ್ನು ಬೆಳೆಸಿದ್ದರು. ಬಳಿಕ ಶೋಭಾ ಮತ್ತೆ ನವೀನ್‌ಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಳು. ಅತಿಯಾಗಿ ಸೆಕ್ಸ್‌ಗೆ ಒತ್ತಾಯಿಸಿದ್ದಕ್ಕೆ ಸಿಟ್ಟಾದ ನವೀನ್‌ ಉಸಿರುಗಟ್ಟಿಸಿ ಕೊಂದು ಪರಾರಿ ಆಗಿದ್ದ.

48ರ ಶೋಭಾಳಿಗೆ ಯುವಕರೆಂದರೆ ದೊಡ್ಡ ಹುಚ್ಚು. ಇನ್ನೂ ಆ್ಯಪಲ್, ಆರೆಂಜ್, ಬನಾನ ಹೆಸರಿನಲ್ಲಿ ಹುಡುಗರ ಹೆಸರು ಸೇವ್ ಮಾಡಿಕೊಳ್ಳುತ್ತಿದ್ದಳು. ಕಾಲ್‌ ಗರ್ಲ್‌ ಆ್ಯಪ್‌ಗಳಲ್ಲಿಯೂ ಆ್ಯಕ್ಟಿವ್ ಆಗಿದ್ದ ಶೋಭಾ ಸುಮಾರು 20ಕ್ಕೂ ಹೆಚ್ಚು ಹುಡುಗರನ್ನು ಖೆಡ್ಡಾಗೆ ಬೀಳಿಸಿಕೊಂಡಿದ್ದಳು.

ಈಕೆ ಕರೆದಾಗ ಯುವಕರು ಏನಾದರೂ ಬಾರದೆ ಇದ್ದರೆ ಅವರ ಮನೆ ಬಳಿಯೇ ಹೋಗುತ್ತಿದ್ದಳು. ಅಲ್ಲಿ ಮನೆಯವರಿಗೆ ಖಾಸಗಿ ಫೋಟೊವನ್ನು (private photo) ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು. ಅಷ್ಟೆ ಅಲ್ಲದೆ ನೀ ಮದುವೆ ಆಗಬಾರದು, ನಾನು ಕರೆದಾಗ ಬರಬೇಕು ಎಂದು ಧಮ್ಕಿ ಹಾಕುತ್ತಿದ್ದಳು. ಹೀಗೆ ನಾಲ್ವರು ಯುವಕರ ಮದುವೆಯನ್ನು ನಿಲ್ಲಿಸಿದ್ದಾಳೆ.

ಇದನ್ನು ಓದಿ : Belagavi : ಮಹಿಳೆ ವಿವಸ್ತ್ರ ಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ; ಆರೋಪಿಗಳ ಬಿಡುಗಡೆ, ಪಟಾಕಿ ಸಿಡಿಸಿ ಸಿಹಿ ತಿನ್ನಿಸಿ ಸಂಭ್ರಮಾಚರಣೆ .!

ಅಲ್ಲದೇ ನವೀನ್‌ ಮನೆಗೆ ಕರೆದಾಗ
ಬಂದಿಲ್ಲ ಎಂದರೆ ಬೆದರಿಕೆ ಹಾಕುತ್ತಿದ್ದಳು ಎನ್ನಲಾಗಿದೆ. ಆಕೆಗೆ ಹೆದರಿ ನವೀನ್‌ ಬಂದು ಹೋಗುತ್ತಿದ್ದ. ಇನ್ನೂ ಕೊಲೆಯಾದ ದಿನವೂ ನವೀನ್‌ಗೆ ಬ್ಲ್ಯಾಕ್ ಮೇಲ್ ಮಾಡಿ ಕರೆಸಿಕೊಂಡಿದ್ದಳು. ಹೀಗೆ ಬಂದ ಆತನಿಗೆ ನನ್ನ ಜತೆ ಇರಬೇಕು. ಮದುವೆ ಆದರೆ ಅಲ್ಲೆ ಬಂದು ಗಲಾಟೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಇದರಿಂದ ಬೇಸತ್ತ ನವೀನ್‌, ಶೋಭಾಳ ಕತ್ತು ಹಿಸುಕಿ ಕೊಲೆ‌ ಮಾಡಿದ್ದಾಗಿ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾನೆ.

ಸದ್ಯ ಆರೋಪಿಯನ್ನು ಬಂಧಿಸಿರುವ ಕೊಡಿಗೇಹಳ್ಳಿ ಠಾಣೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ

spot_img
spot_img
- Advertisment -spot_img