Thursday, September 19, 2024
spot_img
spot_img
spot_img
spot_img
spot_img
spot_img
spot_img

Astrology : ಜೂನ್ 14ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ನಸ್ಪಂದನ ನ್ಯೂಸ್, ಜೋತಿಷ್ಯ : 2024 ಜೂನ್ 14ರ ಶುಕ್ರವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

** ಮೇಷ : ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಯೋಜನೆಗಳಿಗೆ ಅನುಮತಿ ದೊರೆಯುತ್ತದೆ. ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲಿದ್ದಾರೆ. ಹಣಕಾಸಿನ ವಿಚಾರದಲ್ಲಿ ಮೋಸ ಹೋಗಬಹುದು ಎಚ್ಚರಿಕೆಯಿಂದ ಇರಿ. ನಿಮ್ಮ ಮನಸ್ಸನ್ನು ಅರಿಯದವರು ನಿಮ್ಮನ್ನು ನಿಂದಿಸಬಹುದು. ಶುಚಿ ಇಲ್ಲದ ಆಹಾರ ಸೇವನೆಯಿಂದ ಅನಾರೋಗ್ಯ ಉಂಟಾಗುತ್ತದೆ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ.

** ವೃಷಭ : ನೀವು ತೆಗೆದುಕೊಳ್ಳುವ ತೀರ್ಮಾನಗಳು ಸರಿಯಾದ ಹಾದಿಯಲ್ಲಿ ಇರುತ್ತವೆ. ನಿರೀಕ್ಷಿದಂತೆ ಯಶಸ್ಸು ನಿಮ್ಮದಾಗುತ್ತದೆ. ನಿರ್ದಿಷ್ಟ ಕಾರಣದಿಂದ ಬಂಧು ಮಿತ್ರರಿಂದ ದೂರ ಉಳಿಯುವಿರಿ. ಯಾತ್ರಾ ಸ್ಥಳದ ಪ್ರವಾಸದಿಂದಾಗಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಅಳುಕಿನ ಸ್ವಭಾವವಿರುತ್ತದೆ. ಎಲ್ಲರ ವಿಶ್ವಾಸಕ್ಕೆ ಪಾತ್ರರಾಗುವಿರಿ. ಎಲ್ಲರೊಂದಿಗೆ ಉತ್ತಮ ಗೆಳೆತನ ಬೆಳೆಸುವಿರಿ. ಇರುವ ಮನೆಯನ್ನು ನವೀಕರಿಸಲು ತೀರ್ಮಾನಿಸುವಿರಿ.

ಇದನ್ನು ಓದಿ : ಭಾರತೀಯ ವಾಯು ಪಡೆಯಲ್ಲಿ ತಾಂತ್ರಿಕ & ತಾಂತ್ರಿಕೇತರ 304 ಹುದ್ದೆಗಳಿಗೆ ಅರ್ಜಿ ಆಹ್ವಾನ.!

** ಮಿಥುನ : ಮನೆಯ ಅಂದ ಹೆಚ್ಚಿಸಲು ಹೆಚ್ಚಿನ ಹಣ ವೆಚ್ಚವಾಗುತ್ತದೆ. ಅನಿವಾರ್ಯವಾಗಿ ವಾಸ ಸ್ಥಳವನ್ನು ಬದಲಿಸುವ ನಿರ್ಧಾರಕ್ಕೆ ಬರುವಿರಿ. ತಾಯಿಯ ಆರೋಗ್ಯದಲ್ಲಿ ಏರಿಳಿತವಿರುತ್ತದೆ. ಬಂಧು ಬಳಗದಿಂದ ದೂರ ಉಳಿಯುವಿರಿ. ಉತ್ತಮ ಆರೋಗ್ಯ ಗಳಿಸಲು ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಮುನ್ನಡೆಯುವಿರಿ. ಗಂಟಲಿಗೆ ಸಂಬಂಧಿಸಿದ ದೋಷವಿರುತ್ತದೆ.

** ಕಟಕ : ಆತ್ಮೀಯರಿಗೆ ಊಟ ತಿಂಡಿಯ ವ್ಯವಸ್ಥೆ ಮಾಡುವಲ್ಲಿ ಸಂತಸ ಕಾಣುವಿರಿ. ಕುಟುಂಬದಲ್ಲಿ ನಿಮಗೆ ವಿಶೇಷವಾದಂತಹ ಗೌರವ ಲಭಿಸುತ್ತದೆ. ರಾಜಕೀಯದಲ್ಲಿ ಇದ್ದಲ್ಲಿ ಉನ್ನತ ಮಟ್ಟಕ್ಕೆ ತಲುಪಿವಿರಿ. ನಿಮ್ಮ ಮಕ್ಕಳು ಯಶಸ್ಸಿನ ಪಥದಲ್ಲಿ ಸಾಗುತ್ತಾರೆ. ಉತ್ತಮ ವರಮಾನವಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳಿಗೆ ಹಣ ನೀಡುವ ಪ್ರಸಂಗ ಬರುತ್ತದೆ.

** ಸಿಂಹ : ನಿಮ್ಮೆದುರು ನಿಮ್ಮ ವಿರೋಧಿಗಳಿಗೆ ಸೋಲುಂಟಾಗುವುದು ಖಚಿತ. ಚರ್ಮದ ದೋಷದಿಂದ ಬಳಲುವಿರಿ. ಮತ್ತೊಬ್ಬರ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುತ್ತದೆ. ದುಡುಕದೆ ಸಹನೆಯಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶವೊಂದು ದೊರೆಯುತ್ತದೆ. ಹಣಕಾಸಿನ ಕೊರತೆ ಕಂಡು ಬರುತ್ತದೆ.

** ಕನ್ಯಾ : ನಿಮ್ಮ ಗೌರವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವಿರಿ. ಅನಾರೋಗ್ಯದಿಂದ ಬಳಲುವಿರಿ. ಬಲಹೀನತೆ ನಿಮ್ಮನ್ನು ಕಾಡುತ್ತದೆ. ವಿಶೇಷ ವ್ಯಕ್ತಿಯೊಬ್ಬರನ್ನು ಭೇಟಿ ಮಾಡುವಿರಿ. ಪ್ರಾಚೀನ ಶಾಸ್ತ್ರಗಳ ಅಧ್ಯಯನ ಮಾಡುವಿರಿ. ಸಮಯವನ್ನು ಗೌರವಿಸುವ ನೀವು ಯಾವುದಾದರೂ ಒಂದು ಕೆಲಸದಲ್ಲಿ ಸದಾ ತೊಡಗುವಿರಿ. ನಿಮ್ಮ ಮನದಲ್ಲಿರುವ ವಿಚಾರವನ್ನು ಯಾರಿಗೂ ತಿಳಿಸುವುದಿಲ್ಲ.

ಇದನ್ನು ಓದಿ : SBI : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 150 ಹುದ್ದೆಗಳಿಗೆ ಅರ್ಜಿ ಆಹ್ವಾನ.!

** ತುಲಾ : ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಮುಖ್ಯ ಪಾತ್ರ ವಹಿಸುವಿರಿ. ಯೋಗ ಪ್ರಾಣಾಯಾಮದಲ್ಲಿ ಆಸಕ್ತಿ ಮೂಡುತ್ತದೆ. ತಂದೆ ಅಥವಾ ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಜನೋಪಯೋಗಿ ಕೆಲಸಗಳನ್ನು ಮಾಡುವಿರಿ. ಸಮಾಜದಲ್ಲಿ ಪ್ರಮುಖ ಸ್ಥಾನ ಲಭಿಸುತ್ತದೆ. ಅನೇಕರಿಗೆ ಜೀವನ ನಡೆಸಲು ಸಹಾಯ ಮಾಡುವಿರಿ. ಸಾಮಾನ್ಯವಾಗಿ ಮೌನವಿರುವ ನೀವು ಮಾತನಾಡಲು ಆರಂಭಿಸಿದರೆ ಮುಕ್ತಾಯ ಇರುವುದಿಲ್ಲ.

** ವೃಶ್ಚಿಕ : ನಿಮ್ಮ ಬಗ್ಗೆ ಬಂದು ಬಳಗದವರಿಗೆ ಬಹಳ ಗೌರವ ಇರುತ್ತದೆ. ವಿಶೇಷವಾದ ಕೆಲಸ ಕಾರ್ಯಗಳನ್ನು ಮಾಡುವಿರಿ. ಕೆಲಸ ಕಾರ್ಯಗಳಲ್ಲಿ ಆರಂಭದಲ್ಲಿ ಅಡಚಣೆ ಉಂಟಾಗುತ್ತದೆ. ಅನಗತ್ಯವಾದ ವಿಚಾರಗಳಿಗೆ ಓಡಾಟ ಇರುತ್ತದೆ. ಸಣ್ಣಗಾಗಲು ಆತ್ಮೀಯರೊಬ್ಬರ ಸಲಹೆಯನ್ನು ಪಡೆಯುವಿರಿ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ದಂಪತಿ ನಡುವೆ ಅನಾವಶ್ಯಕ ವಾದ ವಿವಾದ ಇರಲಿದೆ.

** ಧನಸ್ಸು : ಸಾಕು ಪ್ರಾಣಿಗಳಲ್ಲಿ ಆಸಕ್ತಿ ಉಂಟಾಗುತ್ತದೆ. ಅನಿರೀಕ್ಷಿತವಾಗಿ ಜೀವನದಲ್ಲಿ ಶುಭಫಲಗಳು ದೊರೆಯುತ್ತವೆ. ಅನಿರೀಕ್ಷಿತ ಧನ ಲಾಭವಿರುತ್ತದೆ. ಬೇರೆಯವರಿಗೆ ಅರ್ಥವಾಗುವಂತೆ ಬುದ್ಧಿ ಹೇಳುವಿರಿ. ಕುಟುಂಬದ ಹೊರಗು ಒಳಗೂ ನಿಮ್ಮ ಗೌರವ ಹೆಚ್ಚುತ್ತದೆ. ಹೊಟ್ಟೆಗೆ ಸಂಬಂಧಪಟ್ಟ ದೋಷವಿರುತ್ತದೆ. ಇರುವ ಹಣವನ್ನೆಲ್ಲ ಖರ್ಚು ಮಾಡಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ವಿಶೇಷ ಜ್ಞಾನವಿರುತ್ತದೆ.

** ಮಕರ : ಸಮಯಕ್ಕೆ ತಕ್ಕಂತೆ ನಡೆದುಕೊಳ್ಳುವ ಬುದ್ಧಿ ನಿಮ್ಮಲ್ಲಿರುತ್ತದೆ. ಬೇರೆಯವರಿಗೆ ಬುದ್ಧಿವಾದ ಹೇಳುವುದರಲ್ಲಿ ನಿಸ್ಸೀಮರು. ಪಿತ್ತದ ದೋಷ ಉಂಟಾಗಲಿದೆ. ಗಣಿತಪಠ್ಯವನ್ನು ಬೋಧಿಸುವವರಿಗೆ ವಿಶೇಷ ಅವಕಾಶಗಳು ದೊರೆಯುತ್ತವೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಸಂಗಾತಿಯ ಬಗ್ಗೆ ವಿಶೇಷ ಪ್ರೀತಿ ಅಕ್ಕರೆ ಇರುತ್ತದೆ. ಹೊಸ ಒಡವೆ ವಸ್ತ್ರಗಳಿಗೆ ಹಣ ಖರ್ಚಾಗುತ್ತದೆ.

ಇದನ್ನು ಓದಿ : 10 ನೇ ತರಗತಿ ಪಾಸಾದವರಿಗೆ ಭಾರತೀಯ ಅಂಚೆ ಇಲಾಖೆ‌ಯಲ್ಲಿ ಉದ್ಯೋಗ ; ತಿಂಗಳಿಗೆ ರೂ. 63,000 ವೇತನ.!

** ಕುಂಭ : ಹೊಸ ವಾಹನ ಕೊಳ್ಳುವಿರಿ. ಕುಟುಂಬದಲ್ಲಿನ ಸ್ತ್ರೀಯರಿಗೆ ದೈಹಿಕ ದೌರ್ಬಲ್ಯವಿರುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಅನಾವಶ್ಯಕವಾಗಿ ಬದಲಿಸುವಿರಿ. ನೋಡಲು ಶಾಂತರಂತೆ ಕಂಡರು ಕೋಪಗೊಂಡಾಗ ಉದ್ವೇಗದಿಂದ ವರ್ತಿಸುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ನವ ವಿವಾಹಿತರು ಹೊಸ ಮನೆ ಕೊಳ್ಳಬಹುದು. ವ್ಯಾಪಾರ ವ್ಯವಹಾರಗಳಲ್ಲಿ

** ಮೀನ : ಮಧ್ಯವಯಸ್ಕರಿಗೆ ವಿವಾಹ ನಿಶ್ಚಯವಾಗುತ್ತದೆ. ಕುಟುಂಬದ ಹಿರಿಯರೊಬ್ಬರು ಉದ್ಯೋಗದ ಕಾರಣ ಕುಟುಂಬದಿಂದ ದೂರವಿರುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ವಿರುತ್ತದೆ. ಸೋದರಿಯು ದುಡುಕುತನದಿಂದ ಕೌಟುಂಬಿಕ ಜೀವನದಲ್ಲಿ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಸೋದರನಿಗೆ ಹಣದ ಸಹಾಯ ಮಾಡುವಿರಿ. ಪತ್ನಿಯ ಸಲುವಾಗಿ ಅನಾವಶ್ಯಕ ಖರ್ಚು ವೆಚ್ಚಗಳು ಇರುತ್ತವೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್’ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img