ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯೊಬ್ಬಳು, Pregnant ಆಗದ ತನ್ನ ಅತ್ತಿಗೆಯನ್ನು ಹೀಯಾಳಿಸುತ್ತಿದ್ದ ಕೇಸ್ ಗೆ ಸಂಬಂಧಿಸಿದಂತೆ ಮಹಿಳೆ ಮೇಲಿದ್ದ ಕೇಸ್ ನ್ನು ಆಂಧ್ರ ಪ್ರದೇಶ ಹೈಕೋರ್ಟ್ (Andhra Pradesh High Court) ತಿರಸ್ಕರಿಸಿದೆ.
ಕೇವಲ ಮಗುವನ್ನು ಹೆರಲು ಸಾಧ್ಯವಾಗದಿದ್ದಕ್ಕೆ (Because of the inability to bear a child) ಅತ್ತಿಗೆಯನ್ನು ನಿಂದಿಸಿದ ಆರೋಪದ ಹಿನ್ನೆಲೆ ಮಹಿಳೆಯ ಮೇಲೆ ಕೇಸ್ ದಾಖಲಾಗಿತ್ತು.
ಇದನ್ನು ಓದಿ : Video : ಲಾಹೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ.!
ನ್ಯಾಯಮೂರ್ತಿ ಹರಿನಾಥ್ ಎನ್. ಅವರ ಪೀಠವು ಈ ಬಗ್ಗೆ ವಿಚಾರಣೆ ನಡೆಸಿದ್ದು, ಅತ್ತಿಗೆಯ ವಿರುದ್ಧ ಆರೋಪ ಮಾಡಿದ ಇಬ್ಬರು ಮಹಿಳೆಯರ ವಿರುದ್ಧ ಸೆಕ್ಷನ್ 498A ಐಪಿಸಿ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಆರೋಪಗಳನ್ನು ಪೀಠವು ರದ್ದುಗೊಳಿಸಿತು.
ಗರ್ಭಿಣಿಯಾಗುತ್ತಿಲ್ಲ ಎಂಬ ಕಾರಣಕ್ಕೆ ನನ್ನನ್ನು ನಿಂದಿಸುತ್ತಿದ್ದಾರೆ ಎಂದು ಮಹಿಳೆ ಸಲ್ಲಿಸಿದ್ದ ಕೇಸ್ ವಿರುದ್ಧ IPC ಸೆಕ್ಷನ್ 498-A ಮತ್ತು DP ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ವಿಚಾರಣೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!
ಮಹಿಳೆ ಅತ್ತಿಗೆಯಂದಿರ ವಿರುದ್ಧ ಮಾಡಿದ ಏಕೈಕ ಆರೋಪವೆಂದರೆ ಅವರು ಭೇಟಿಗೆ ಬಂದಾಗಲೆಲ್ಲಾ ಮಗುವನ್ನು ಹೆರಲು ಸಾಧ್ಯವಾಗದಿದ್ದಕ್ಕಾಗಿ ನಿಂದಿಸುತ್ತಿದ್ದರು ಎಂಬುದು. ಈ ಆರೋಪಗಳು ಕ್ರಿಮಿನಲ್ ಪ್ರಕರಣವಾಗಲು ಸಾಧ್ಯವೇ ಇಲ್ಲ. ಹೀಗಾಗಿ, ಇದನ್ನು ಕೌಟುಂಬಿಕ ದೌರ್ಜನ್ಯ (Domestic violence) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ.
ಅಲ್ಲದೇ ದೂರು ನೀಡಿದ್ದ ಮಹಿಳೆ ತನ್ನ ಮದುವೆಯ ಬಳಿಕ ಗಂಡನ ಮನೆಯಿಂದ ದೂರ ಉಳಿದಿದ್ದರು ಎಂಬ ವಾದಗಳನ್ನು ನ್ಯಾಯಾಲಯವು ಗಮನಿಸಿತು. ಆ ಮಹಿಳೆ ತಮ್ಮ ಮದುವೆಯ ನಂತರ ಗಂಡನ ಮನೆಯಿಂದ ದೂರ ಉಳಿದಿದ್ದರು. ಆದ್ದರಿಂದ ಆಕೆಗೆ ಮಹಿಳೆಯರು ಕಿರುಕುಳ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಹಿಂದಿನ ಸುದ್ದಿ : Health : ನಿಮ್ಮ ಉಗುರಿನ ಮೇಲೆ ಬಿಳಿ ಚುಕ್ಕೆ ಕಾಣಿಸಿಕೊಳ್ಳುವುದೇಕೆ ಗೊತ್ತೇ.?
ಜನಸ್ಪಂದನ ನ್ಯೂಸ್, ಡೆಸ್ಕ್ : ವೈದ್ಯರ ಪ್ರಕಾರ, ಲ್ಯುಕೋನಿಚಿಯಾ ಎಂದೂ ಕರೆಯಲ್ಪಡುವ ಉಗುರುಗಳ ಮೇಲಿನ ಬಿಳಿ ಚುಕ್ಕೆಗಳ ಸಾಮಾನ್ಯ ಕಾರಣವೆಂದರೆ ಉಗುರುಗಳ ಗಾಯವಾಗಿದೆ. ನಿಮ್ಮ ಉಗುರು ಅಥವಾ ಬೆರಳಿನ ಮೇಲೆ ಆಕಸ್ಮಿಕವಾಗಿ ಗಾಯಗಳಾದ ಸಂದರ್ಭಗಳಲ್ಲಿ ಈ ರೀತಿಯ ಕಲೆಗಳು ಹುಟ್ಟಿಕೊಳ್ಳುತ್ತವೆ.
ಲ್ಯುಕೋನಿಚಿಯಾ (Leukonychia) ಎನ್ನುವುದು ಕಾಲ್ಬೆರಳ ಅಥವಾ ಬೆರಳಿನ ಉಗುರುಗಳ ಮೇಲೆ ಬಿಳಿ ಗೆರೆಗಳು ಅಥವಾ ಚುಕ್ಕೆಗಳು (White spots) ಕಾಣಿಸಿಕೊಳ್ಳುವುದಾಗಿದೆ. ಹೀಗಾದಾಗ ಕಾಲ್ಬೆರಳ ಉಗುರುಗಳು ಅಥವಾ ಬೆರಳಿನ ಉಗುರುಗಳು ತಿಳಿ ಗುಲಾಬಿ ಬಣ್ಣದಲ್ಲಿರುತ್ತವೆ.
ಇದನ್ನು ಓದಿ : Video : ಸರ್ಜಿಕಲ್ ಸೂಜಿ ಮತ್ತು ದಾರ ಬಳಸಿ ಚಪ್ಪಲಿ ಹೊಲಿದ ವೈದ್ಯ ವಿದ್ಯಾರ್ಥಿ.!
ಕೆಲವೊಮ್ಮೆ ಬಿಳಿ ಚುಕ್ಕೆಗಳು ಕೂಡ ಕಾಣಿಸಿಕೊಳ್ಳಬಹುದು. ಉಗುರುಗಳ ಮೇಲಿನ ಈ ಕಲೆಗಳು ಯಕೃತ್ತಿನ ಕಾಯಿಲೆ ಅಥವಾ ರಕ್ತಹೀನತೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದು.
ಉಗುರುಗಳ ಮೇಲೆ ಇಂತಹ ಅಸಾಮಾನ್ಯ ಕಲೆಗಳಿಗೆ ಕಾರಣವಾಗುವ ಇತರ ಕಾರಣಗಳು ಇಲ್ಲಿವೆ :
* ನಮ್ಮ ದೇಹಕ್ಕೆ ಸಮರ್ಪಕವಾಗಿ ಪೌಷ್ಟಿಕಾಂಶಗಳು ಎಲ್ಲಾ ರೀತಿಯಲ್ಲೂ ಸಿಗಬೇಕು. ಒಂದು ವೇಳೆ ಸಿಗದಿದ್ದರೆ ಅದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಎದುರಾಗುತ್ತವೆ. ವಿಶೇಷವಾಗಿ ಜಿಂಕ್, ಸೆಲಿನಿಯಂ, ವಿಟಮಿನ್ ಡಿ ಇತ್ಯಾದಿ ಅಂಶಗಳು.
ಇದನ್ನು ಓದಿ : Belagavi : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ.!
ಇವುಗಳ ಕೊರತೆಯಿಂದ ಉಗುರುಗಳ ಮೇಲೆ ಬಿಳಿ ಬಣ್ಣದ ಮಚ್ಚೆಗಳು ಕಾಣಿಸುತ್ತವೆ. ನಿಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು (Change in diet) ತಂದುಕೊಳ್ಳುವುದರಿಂದ ಇದರಿಂದ ಪಾರಾಗಬಹುದು.
* ನಿಮಗೆ ಉಗುರು ಸುತ್ತು ಗೊತ್ತಿರಬಹುದು. ಇದು ಒಂದು ರೀತಿಯ ಫಂಗಲ್ ಸೋಂಕು. ಇದರ ಕಾರಣದಿಂದ ಉಗುರುಗಳ ಮೇಲ್ಭಾಗದಲ್ಲಿ ಬಿಳಿ ಬಣ್ಣದ ಮಚ್ಚೆಗಳು (White spots) ಕಂಡು ಬರುತ್ತವೆಯಂತೆ.
ಇದನ್ನು ಓದಿ : Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಬಹುದು.?
ಸರಿಯಾದ ಚಿಕಿತ್ಸೆ ಮತ್ತು ಸ್ವಚ್ಛತೆ ಕಾಯ್ದುಕೊಳ್ಳುವುದು ಈ ಸಂದರ್ಭದಲ್ಲಿ ಅನಿವಾರ್ಯವಾಗುತ್ತದೆ. ಹೀಗೆ ಮಾಡಿದರೆ ಕ್ರಮೇಣವಾಗಿ ಉಗುರು ಸುತ್ತು ಮಾಯವಾಗುತ್ತದೆ ಮತ್ತು ಉಗುರುಗಳ ಮೇಲೆ ಕಂಡುಬಂದಿರುವ ಮಚ್ಚೆಗಳು ಸಹ ಹೊರಟು ಹೋಗುತ್ತವೆ.
* ಲಿವರ್ ಮಾನವನ ದೇಹದ ಬಹುತೇಕ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತದೆ. ಅದರಲ್ಲಿನ ತೊಂದರೆ ಉಗುರುಗಳ ಮೇಲೆ ಬಿಳಿ ಮಚ್ಚೆಗಳು ಕಂಡು ಬರುವ ಹಾಗೆ ಮಾಡುತ್ತದೆ.
ಇದನ್ನು ಓದಿ : Video : ವಾಷಿಂಗ್ ಮಷಿನ್ನೊಳಗೆ ಕಲ್ಲು ಹಾಕಿದ ಯುವಕ ; ಆಮೇಲೆನಾಯ್ತು ಗೊತ್ತಾ?
* ಸಕ್ಕರೆ ಕಾಯಿಲೆ ಇರುವವರಿಗೂ ಕೂಡ ಉಗುರುಗಳಲ್ಲಿ ಬಿಳಿ ಮಚ್ಚೆಗಳು ಕಾಣಿಸುತ್ತಿವೆ. ಬ್ಲಡ್ ಶುಗರ್ ಲೆವೆಲ್ ಜಾಸ್ತಿಯಾದ್ರೆ ಕೈ ಬೆರಳುಗಳ ಎಲ್ಲಾ ಉಗುರುಗಳಲ್ಲಿ ಅಥವಾ ಕೆಲವು ಬೆರಳುಗಳ ಉಗುರುಗಳಲ್ಲಿ ಸಣ್ಣ ಸಣ್ಣದಾಗಿ ಬಿಳಿ ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.
* ಯಾವುದೋ ಸಂದರ್ಭದಲ್ಲಿ ನಮಗೆ ಗೊತ್ತಿರದೆ ಮಾಡಿ ಕೊಂಡಂತಹ ಉಗುರುಗಳ ಪೆಟ್ಟು ಅವುಗಳ ಸೌಂದರ್ಯವನ್ನು ಹಾಳುಮಾಡುತ್ತದೆ (Destroy beauty). ಇದರಿಂದಾಗಿ ಉಗುರುಗಳ ಮೇಲೆ ಬಿಳಿ ಮಚ್ಚೆ ಕಾಣಿಸುತ್ತವೆ.
ಇದನ್ನು ಓದಿ : Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!
* ಕಿಡ್ನಿಯಲ್ಲಿ ಏನಾದರೂ ಸಮಸ್ಯೆಯಾದರೆ ಅಥವಾ ಸರಿಯಾಗಿ ಕಾರ್ಯ ನಿರ್ವಹಿಸಲು ಆಗದೆ ಇದ್ದರೆ, ಅಂತಹ ಸಂದರ್ಭದಲ್ಲಿ ಉಗುರುಗಳ ಮೇಲ್ಭಾಗದಲ್ಲಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.
* ನಮ್ಮ ರಕ್ತದಲ್ಲಿ ಕ್ಯಾಲ್ಸಿಯಂ ಕೊರತೆ ಕಂಡುಬಂದ್ರೆ ಅದರಿಂದ ಉಗುರುಗಳ ಆರೋಗ್ಯ ಕೆಡುತ್ತದೆ. ಇದರಿಂದ ಉಗುರುಗಳ ಮೇಲೆ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.