Tuesday, September 17, 2024
spot_img
spot_img
spot_img
spot_img
spot_img
spot_img
spot_img

ಪ್ರಿಯಕರನ ಜೊತೆ ಬೆಡ್‌ರೂಮ್‌ನಲ್ಲಿ ಪತ್ನಿಯ romances ವೇಳೆ ಬಂದ ಪತಿ ; ಮುಂದೆ..?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಕಾಲದಲ್ಲಿ ಅಕ್ರಮ ಸಂಬಂಧಗಳು ಹೆಚ್ಚಾಗಿವೆ. ವಿವಾಹಿತ ಸಂಗಾತಿಯು ತನ್ನ ಸಂಗಾತಿಯಲ್ಲದ ಇನ್ನೊಬ್ಬ ವ್ಯಕ್ತಿಯೊಂದಿಗೆ ಇಚ್ಛೆಯ ಮೇರೆಗೆ ಲೈಂಗಿಕ ಸಂಬಂಧನನ್ನು ಹೊಂದಿದ್ದರೆ ಅದನ್ನು ಅನೈತಿಕ ಸಂಬಂಧಗಳು ಎಂದು ಕರೆಯುತ್ತೇವೆ.

ಇಂಥ ಸಂಬಂಧಗಳು ಅನೇಕ ದಂಪತಿಗಳನ್ನು ದೂರ ಮಾಡಿವೆ, ಸಾಕಷ್ಟು ಅನ್ಯೋನ್ಯ ಸಂಸಾರಗಳನ್ನು ಒಡೆದು ಹಾಕುತ್ತವೆ. ಮದುವೆಯಾದ ಗಂಡಸು ಇನ್ನೊಬ್ಬ ಮಹಿಳೆ/ಯುವತಿಯ ಜೊತೆ ಅಥವಾ ಹೆಂಗಸು ಇನ್ನೊಬ್ಬ ಪುರುಷನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಸರ್ವೇಸಾಮಾನ್ಯ. ಇತ್ತೀಚೆಗಿನ ದಿನಗಳಲ್ಲಿ ವಿವಾಹೇತರ ಸಂಬಂಧಪಟ್ಟ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

ಇದನ್ನು ಓದಿ : Special news : ನೀವು ಮಲಗುವ ಭಂಗಿ ಹೇಳುತ್ತೆ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ.!

ಸದ್ಯ ಇಂತದ್ದೊಂದು ಘಟನೆಯು ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ಖತಿ ಬಾಬಾ ಕಾಲೋನಿಯಲ್ಲಿ ಶುಕ್ರವಾದ ಮಧ್ಯಾಹ್ನ 2-30ರಿಗೆ ನಡೆದಿದೆ. ಮೂರು ಮಕ್ಕಳ ತಾಯಿಯಾಗಿದ್ದ ಪತ್ನಿಯನ್ನು ಲವ್ವರ್ ಜೊತೆ ರೆಡ್ ಹ್ಯಾಂಡ್ ಆಗಿ ಹಿಡಿದ ಪತಿ ಇಬ್ಬರನ್ನು ಕೊಲೆ ಮಾಡಿದ್ದಾನೆ.

ಅಲ್ಲದೇ ಕೈಯಲ್ಲಿ ಕೊಡಲಿಯನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಂದಿರುವುದಾಗಿ ಆರೋಪಿ ರವಿ ಎಂಬಾತ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.

ಖಾತಿ ಬಾಬಾ ಕಾಲೋನಿ ನಿವಾಸಿಯು ರವಿ ವಂಶಕರ್ ವೃತ್ತಿಯಲ್ಲಿ ಚಾಲಕನಾಗಿದ್ದನು. ಪತ್ನಿ ಪೂಜಾಳ ನಡವಳಿಕೆಯ ಬಗ್ಗೆ ಸಂಶಯವಿದ್ದ ಕಾರಣ ಆಕೆಯ ಮೇಲೆ ಕಣ್ಣಿಟ್ಟಿದ್ದನು. ಹೀಗಿರುವಾಗ ಆತನ ಪತ್ನಿ ಸಂತೆಗೆ ಹೋಗಿ ತರಕಾರಿ ತರುವಂತೆ ಹೇಳಿದ್ದಾಳೆ. ಅತ್ತ ಗಂಡ ಮಾರ್ಕೆಟ್‌ಗೆ ಹೋಗ್ತಿದ್ದಂತೆ ಇತ್ತ ಮಾಯಾಂಗಿನಿ ಮಡದಿ ಪೂಜಾ ತನ್ನ ಪ್ರಿಯಕರನಿಗೆ ಕಾಲ್ ಮಾಡಿ ಮನೆಗೆ ಬರುವಂತೆ ಹೇಳಿದ್ದಾಳೆ.

ಇದನ್ನು ಓದಿ : ಮಕ್ಕಳಿದ್ದ ವೇಳೆ ಕುಸಿದ ಕ್ಲಾಸ್ ರೂಂ ಗೋಡೆ ; ಮುಂದೆನಾಯ್ತು? Video ನೋಡಿ.

ಆದರೆ ತರಕಾರಿ ತರಲು ಮಾರುಕಟ್ಟೆಗೆ ಹೋಗಿದ್ದ ಗಂಡನಿಗೆ ಪೂಜಾಳ ಮೇಲೆ ಅನುಮಾನವಿದ್ದ ಕಾರಣ ಅರ್ಧ ದಾರಿಯಿಂದಲೇ ಮನೆಗೆ ಮರಳಿದ್ದಾನೆ. ಈ ವೇಳೆ ಪೂಜಾ ಪ್ರಿಯಕರನ ಜೊತೆಗೆ ಕೋಣೆಯಲ್ಲಿರುವ ದೃಶ್ಯ ಕಂಡಿದ್ದಾನೆ. ಇದರಿಂದ ಕೋಪದಿಂದ ಪತ್ನಿಗೆ ಬಾಗಿಲು ತೆರೆಯುವಂತೆ ಹೇಳಿದ್ದಾನೆ. ಆದರೆ ಹೆಂಡತಿ ಬೇಗ ಬಾಗಿಲು ತೆರೆಯದ ಕಾರಣ ರವಿಯ ಕೋಪವು ನೆತ್ತಿಗೇರಿದೆ.

ಇದರಿಂದ ಸಿಟ್ಟಿಗೆದ್ದ ಆತ ಕೈಯಲ್ಲಿ ಕೊಡಲಿ ಹಿಡಿದು ಬಾಗಿಲು ತೆರೆಯುವಂತೆ ಕೂಗಾಡಿದ್ದಾನೆ. ಆ ಬಳಿಕ ಪೂಜಾಳ ಪ್ರಿಯಕರ ಬಾಗಿಲು ತೆರೆದಾಗ ರವಿ ಕೊಡಲಿಯಿಂದ ಆತನ ಮೇಲೆ ಹಲ್ಲೆ ನಡೆಸಿ ಮರ್ಡರ್ ಮಾಡಿದ್ದಾನೆ.

ಇದನ್ನು ಓದಿ : Health : ನೀವೂ ಚಹಾ ಪ್ರಿಯರೇ .? ಹಾಗಾದ್ರೆ ಈ ಸುದ್ದಿ ಓದಿ.

ಇತ್ತ ಪತಿಯ ಆಕ್ರೋಶವನ್ನು ಕಂಡು ಓಡಿಹೋಗಲು ಯತ್ನಿಸಿದ ಪತ್ನಿಯನ್ನು ರವಿ ಕೊಡಲಿಯಿಂದ ಕೊಚ್ಚಿ ಕೊಂದಿದ್ದು, ಪತ್ನಿ ಹಾಗೂ ಆಕೆಯ ಪ್ರಿಯಕರ ಮನೆಯ ಕಾಂಪೌಂಡ್​ನಲ್ಲೇ ಪ್ರಾಣ ಬಿಟ್ಟಿದ್ದಾರೆ.

ಬಳಿಕ ಆರೋಪಿ ಪತಿ ರವಿ ಹತ್ಯೆಗೆ ಬಳಸಿದ್ದ ಕೊಡಲಿ ಸಮೇತ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದು, ನಡೆದ ಘಟನೆ ಬಗ್ಗೆ ಹೇಳಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಚಾರ್ಜ್​ಶೀಟ್​ ಸಿದ್ದಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img