HomeInternational Newsಭಾರತಕ್ಕೆ ತೆರಳುತ್ತಿದ್ದ ಹಡಗುಗಳನ್ನು ವಶಕ್ಕೆ ಪಡೆದ ಮುಸುಕುದಾರಿಗಳು; ವಿಡಿಯೋ ಬಿಡುಗಡೆ.
spot_img
spot_img

ಭಾರತಕ್ಕೆ ತೆರಳುತ್ತಿದ್ದ ಹಡಗುಗಳನ್ನು ವಶಕ್ಕೆ ಪಡೆದ ಮುಸುಕುದಾರಿಗಳು; ವಿಡಿಯೋ ಬಿಡುಗಡೆ.

ಜನಸ್ಪಂದನ ನ್ಯೂಸ್‌, ದುಬೈ : ಪರ್ಷಿಯನ್ ಗಲ್ಪ್ ಪ್ರದೇಶದ ಪ್ರಮುಖ ಸಾಗಣ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮತ್ತೊಮ್ಮೆ ತೀವ್ರಗೊಂಡಿದೆ. ಭಾರತಕ್ಕೆ ತೆರಳುತ್ತಿದ್ದ ಎರಡು ವ್ಯಾಪಾರಿ ಹಡಗುಗಳನ್ನು ಇರಾನ್ ವಶಕ್ಕೆ ಪಡೆದಿರುವ ಘಟನೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಘಟನೆ ನಡೆದ ಒಂದು ದಿನದ ಬಳಿಕ ಇರಾನ್ ಸೇನೆ ತನ್ನ ಕಾರ್ಯಾಚರಣೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ದೃಶ್ಯಗಳಲ್ಲಿ ಮುಖವಾಡ ಧರಿಸಿದ ಕಮಾಂಡೋಗಳು ವೇಗದ ದೋಣಿಗಳ ಮೂಲಕ ಹಡಗುಗಳನ್ನು ಬೆನ್ನಟ್ಟಿ, ನಂತರ ಏಣಿಯ ಸಹಾಯದಿಂದ ಹಡಗುಗಳ ಮೇಲೆ ಹತ್ತುತ್ತಿರುವುದು ಕಾಣಿಸುತ್ತದೆ.

ಬಳಿಕ ಒಳಗೆ ಪ್ರವೇಶಿಸಿ ಭಾರತಕ್ಕೆ ತೆರಳುತ್ತಿದ್ದ ಹಡಗುಗಳನ್ನು ವಶಕ್ಕೆ ಪಡೆದ ಮುಸುಕುದಾರಿಗಳು (ಸಶಸ್ತ್ರ ಸೈನಿಕರು), ಸದ್ಯ ಹಡುಗುಗಳನ್ನು ವಶಪಡಿಸಿಕೊಂಡಿರುವ ದೃಶ್ಯಗಳನ್ನು ಸಹ ವಿಡಿಯೋದಲ್ಲಿ ತೋರಿಸಲಾಗಿದೆ.

ವರದಿಗಳ ಪ್ರಕಾರ, MSC Francesca ಮತ್ತು Epaminondas ಎಂಬ ಎರಡು ಹಡಗುಗಳು ದುಬೈನಿಂದ ಗುಜರಾತ್‌ನ ಮುಂದ್ರಾ ಬಂದರಿನತ್ತ ಸಾಗುತ್ತಿದ್ದವು. ಈ ಹಡಗುಗಳನ್ನು ಪನಾಮ ಮತ್ತು ಲೈಬೀರಿಯಾ ಧ್ವಜದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರಕು ಹಡಗುಗಳಾಗಿ ಗುರುತಿಸಲಾಗಿದೆ.

ಭಾರತಕ್ಕೆ ತೆರಳುತ್ತಿದ್ದ ಹಡಗುಗಳನ್ನು ವಶಕ್ಕೆ ಪಡೆದ ಮುಸುಕುದಾರಿಗಳು
ಭಾರತಕ್ಕೆ ತೆರಳುತ್ತಿದ್ದ ಹಡಗುಗಳನ್ನು ವಶಕ್ಕೆ ಪಡೆದ ಮುಸುಕುದಾರಿಗಳು

ಕಾರ್ಯಾಚರಣೆಯ ಸಂದರ್ಭದಲ್ಲಿ ಇರಾನ್ ನೌಕಾಪಡೆ ಸ್ಪೀಡ್‌ಬೋಟ್‌ಗಳಿಂದ ಗುಂಡಿನ ದಾಳಿ ನಡೆಸಿದ ಆರೋಪವೂ ಕೇಳಿಬಂದಿದೆ. ವಿಶೇಷವಾಗಿ, ಎಪಾಮಿನೊಂಡಾಸ್ ಹಡಗಿನ ಸೇತುವೆ ಭಾಗಕ್ಕೆ ಗುಂಡಿನ ದಾಳಿ ನಡೆದಿದ್ದು, ಹಡಗಿನ ಸಂವಹನ ವ್ಯವಸ್ಥೆಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ : ರಾತ್ರಿ ಊಟದ ನಂತರ ಜೀರಿಗೆ ನೀರು ಕುಡಿದರೆ ಮಧುಮೇಹ ಕಂಟ್ರೋಲ್; ಶುಗರ್ ಪೇಷಂಟ್ಸ್‌ಗೆ ಇದು ರಾಮಬಾಣ!

ಆದಾಗ್ಯೂ, ಹಡಗುಗಳಲ್ಲಿ ಇದ್ದ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಮತ್ತೊಂದು ಹಡಗು MSC ಫ್ರಾನ್ಸೆಸ್ಕಾವನ್ನೂ ಭಾರೀ ಗುಂಡಿನ ದಾಳಿಯ ನಂತರ ಇರಾನ್ ಕರಾವಳಿಗೆ ತಿರುಗಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ.

ಈ ಘಟನೆಗೆ ಮುನ್ನ, ಅಮೆರಿಕ ನೌಕಾಪಡೆ ಇರಾನಿನ ಸರಕು ಹಡಗು ವಶಪಡಿಸಿಕೊಂಡಿರುವ ಕಾರ್ಯಾಚರಣೆಯ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಇರಾನ್ ಈ ಕ್ರಮ ಕೈಗೊಂಡಿರಬಹುದೆಂಬ ಅಂದಾಜು ಅಂತಾರಾಷ್ಟ್ರೀಯ ವಲಯದಲ್ಲಿ ವ್ಯಕ್ತವಾಗಿದೆ.

ಈ ಮಧ್ಯೆ, ಕಳೆದ ಕೆಲವು ದಿನಗಳಲ್ಲಿ ಇದೇ ಮಾರ್ಗದಲ್ಲಿ ಭಾರತೀಯ ಹಡಗುಗಳಾದ ಜಗ್ ಅರ್ನವ್ ಮತ್ತು ಸನ್ಮಾರ್ ಹೆರಾಲ್ಡ್ ಮೇಲೆಯೂ ದಾಳಿ ನಡೆದಿರುವುದು ಆತಂಕವನ್ನು ಹೆಚ್ಚಿಸಿದೆ. ಆದರೆ “ಸ್ನೇಹಪರ ರಾಷ್ಟ್ರಗಳ ಹಡಗುಗಳನ್ನು ಗುರಿಯಾಗಿಸುವುದಿಲ್ಲ” ಎಂಬ ಹಿಂದಿನ ಭರವಸೆಯ ನಡುವೆಯೂ ಇಂತಹ ಘಟನೆಗಳು ನಡೆಯುತ್ತಿರುವುದು ಪ್ರಶ್ನೆಗಳನ್ನು ಎಬ್ಬಿಸಿದೆ.

ಹೆಚ್ಚಿನ ಬ್ರೇಕಿಂಗ್ ನ್ಯೂಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಈ ರೀತಿಯ ಘಟನೆಗಳು ಜಾಗತಿಕ ಸಾಗಣೆ ಹಾಗೂ ಇಂಧನ ಸರಬರಾಜು ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಎಚ್ಚರಿಕೆ ನೀಡುತ್ತಿದ್ದಾರೆ.

ಹಡಗುಗಳನ್ನು ವಶಕ್ಕೆ ಪಡೆದ ಮುಸುಕುದಾರಿಗಳು; ವಿಡಿಯೋ :

Courtesy : Social Media / Twitter


Disclaimer: ಈ ಸುದ್ದಿ‌ (ಭಾರತಕ್ಕೆ ತೆರಳುತ್ತಿದ್ದ ಹಡಗುಗಳನ್ನು ವಶಕ್ಕೆ ಪಡೆದ ಮುಸುಕುದಾರಿಗಳು) ವರದಿ ಸಾರ್ವಜನಿಕವಾಗಿ ಲಭ್ಯವಿರುವ ಮಾಧ್ಯಮ ವರದಿಗಳ ಆಧಾರದ ಮೇಲೆ ಪುನರ್‌ರಚಿಸಲಾಗಿದೆ. ಘಟನೆಯ ಕುರಿತು ಸಂಬಂಧಿತ ದೇಶಗಳ ಅಧಿಕೃತ ತನಿಖೆ ಅಥವಾ ದೃಢೀಕರಣ ಮುಂದುವರಿಯುತ್ತಿರುವುದರಿಂದ ವಿವರಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ಈ ಲೇಖನದ ಉದ್ದೇಶ ಮಾಹಿತಿ ನೀಡುವುದು ಮಾತ್ರವಾಗಿದ್ದು, ಯಾವುದೇ ವ್ಯಕ್ತಿ ಅಥವಾ ದೇಶದ ವಿರುದ್ಧ ತಪ್ಪು ಆರೋಪ ಮಾಡುವ ಉದ್ದೇಶ ಇಲ್ಲ.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments