ಜನಸ್ಪಂದನ ನ್ಯೂಸ್, ಕೋಲಾರ : ಬೆಂಗಳೂರಿನಿಂದ ತಿರುಪತಿಗೆ ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಬಸ್ಸೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಸದ್ಯ 9 ಮಂದಿ ಮೃತಪಟ್ಟಿದ್ದು, 15ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ.
ಈ ಘಟನೆ ಕೊಲಾರ ಬಳಿ ತಡರಾತ್ರಿ ಅಥವ ಬೆಳಗಿನ ಜಾವ ಸಂಭವಿಸಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಂಭವವಿದೆ ಎಂದು ತಿಳಿದು ಬಂದಿದೆ. ಸದ್ಯ ಅಪಘಾತದ ಕೆಲ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇದನ್ನು ಓದಿ : ಕೃಷಿ ಇಲಾಖೆಯಲ್ಲಿ ಖಾಲಿ ಇರುವ 979 ಹುದ್ದೆಗಳಿಗೆ ಶೀಘ್ರದಲ್ಲೇ ಭರ್ತಿ.!
ದುರ್ಘಟನಾ ಸ್ಥಳಕ್ಕೆ ಸದ್ಯ ಪೊಲೀಸ್ ತಂಡ ಸ್ಥಳಕ್ಕೆ ತಲುಪಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಅಪಘಾತದಲ್ಲಿ ಗಾಯಾಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸು ಕೆಲಸವನ್ನು ಪೊಲೀಸ್ ತಂಡ ಶ್ರಮಿಸುತ್ತಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತವು ಎಷ್ಟು ಭೀಕರವಾಗಿತ್ತು ಎಂದರೆ ಬಸ್ ಹಾರಿ ಬಿದ್ದು ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಅಪಘಾತಕ್ಕೆ ನಿಜವಾದ ಕಾರಣ ಲಾರಿ ಚಾಲಕನ ತಪ್ಪೇ ಅಥವಾ ಬಸ್ ಚಾಲಕನ ತಪ್ಪೇ ಎಂಬುದು ತಿಳಿದು ಬಂದಿಲ್ಲ.
ಇದನ್ನು ಓದಿ : ಈ ಗಿಡದಲ್ಲಿ ಸಂಗ್ರಹವಾದ ನೀರು Kidney stone ಗೆ ರಾಮಬಾಣ ; ಕುಡಿದ ತಕ್ಷಣ ಮೂತ್ರದ ಮೂಲಕ ಹೊರಬರುತ್ತೆ ಕಲ್ಲು.!
ಅಪಘಾತದ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.
Karnataka: A bus was hit by a tipper lorry near Kolar. Nine dead, over 15 injured while traveling from Bangalore to Tirupati. Police have arrived and shifted the injured to the hospital. More details are awaited pic.twitter.com/wd4WsdsB1z
— IANS (@ians_india) July 12, 2024