ಜನಸ್ಪಂದನ ನ್ಯೂಸ್, ಹೈದರಾಬಾದ್ : ತೆಲಂಗಾಣದಲ್ಲಿ ಸಂಭವಿಸಿದ ಭೀಕರ ರಸ್ತೆ (Lorry) ಅಪಘಾತದಲ್ಲಿ 8 ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಎಲ್ಲೆಡೆ ದುಃಖ ವ್ಯಕ್ತವಾಗುವಂತೆ ಮಾಡಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸ್ಥಳೀಯರಲ್ಲಿ ತೀವ್ರ ಆಕ್ರೋಶ ಉಂಟುಮಾಡಿದೆ.
ಮಾಹಿತಿಯ ಪ್ರಕಾರ, ಹೈದರಾಬಾದ್ನ ಮೈಲಾರದೇವಪಲ್ಲಿ ಪ್ರದೇಶದಲ್ಲಿ ಈ ದಾರುಣ ಘಟನೆ ನಡೆದಿದೆ. ಶಾಸ್ತ್ರಿಪುರಂ ನಿವಾಸಿಯಾದ ಬಾಲಕ ಸೈಯದ್ ರಿಯಾನುದ್ದೀನ್ (8) ತನ್ನ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಶಾರ್ಟ್ ಸ್ಕರ್ಟ್ ಧರಿಸಿದ್ದ ಮಹಿಳೆಗೆ ಅತ್ಯಾಚಾರ ಬೆದರಿಕೆ ಹಾಕಿದ Auto ಚಾಲಕ!
ಈ ವೇಳೆ ಮರಳು ಸಾಗಿಸುತ್ತಿದ್ದ ಲಾರಿ (Lorry) ಹಿಂದಿನಿಂದ ಬಂದು ಹಠಾತ್ ಯು-ಟರ್ನ್ ತೆಗೆದುಕೊಳ್ಳುವಾಗ ಬಾಲಕನ ಮೇಲೆ ಹರಿದು, ಆತ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಚಾಲಕ ವಾಹನ (Lorry) ವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಿದ್ದು, ಲಾರಿ (Lorry) ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಬಾಲಕನ ಸಾವು ನೋಡುವಂತಿಲ್ಲದಂತೆ ತೀವ್ರ ಮನಕಲಕುವ ದೃಶ್ಯಗಳು ಕಂಡುಬರುತ್ತಿವೆ. ಸ್ಥಳೀಯರು ಚಾಲಕನ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
Ants ಗಳ ಭಯದಿಂದ ಆತ್ಮಹತ್ಯೆಗೆ ಶರಣಾದ ಮಹಿಳೆ : ಬಯಲಾಯ್ತು ಪತ್ರದಲ್ಲಿ ಸಾವಿನ ರಹಸ್ಯ.
ಪೊಲೀಸರು ಆರೋಪಿ ಲಾರಿ (Lorry) ಚಾಲಕನನ್ನು ಬಂಧಿಸಲು ಪ್ರಯತ್ನ ನಡೆಸುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಈ ಘಟನೆ ರಸ್ತೆ ಸುರಕ್ಷತೆ ಕುರಿತಾಗಿ ಮತ್ತೊಮ್ಮೆ ಗಂಭೀರ ಚಿಂತನೆಗೆ ಕಾರಣವಾಗಿದೆ.
ಬಾಲಕನ ಮೇಲೆ ಲಾರಿ (Lorry) ಹರಿದ ವಿಡಿಯೋ :
https://twitter.com/i/status/1987859711849554019
Courtesy : Kannadaprabha
Ants ಗಳ ಭಯದಿಂದ ಆತ್ಮಹತ್ಯೆಗೆ ಶರಣಾದ ಮಹಿಳೆ : ಬಯಲಾಯ್ತು ಪತ್ರದಲ್ಲಿ ಸಾವಿನ ರಹಸ್ಯ.

ಜನಸ್ಪಂದನ ನ್ಯೂಸ್, ಸಂಗರೆಡ್ಡಿ (ತೆಲಂಗಾಣ) : ಇರುವೆಗಳ (Ants) ಭೀತಿಯಿಂದ ಬಳಲುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೃತ 25 ವರ್ಷದ ಮಹಿಳೆ ತಮ್ಮ ಪತಿ ಮತ್ತು ಮಗಳೊಂದಿಗೆ ಸಂಗರೆಡ್ಡಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. ಕೆಲ ದಿನದಿಂದ ಇರುವೆಗಳ (Ants) ಬಗ್ಗೆ ತೀವ್ರ ಭಯದಿಂದ ಅವರು ನರಳುತ್ತಿದ್ದರು.
ಇದನ್ನೂ ಓದಿ : “ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”
ಈ ಸಮಸ್ಯೆಗೆ ಕುಟುಂಬ ಸದಸ್ಯರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಕೌನ್ಸೆಲಿಂಗ್ ಸಹ ನೀಡಲಾಗಿತ್ತು. ಆದರೂ ಮಹಿಳೆಗೆ ಇರುವೆಗಳ ಭಯ ಕಡಿಮೆಯಾಗದೆ ದಿನೇ ದಿನೇ ತೀವ್ರಗೊಂಡಿತು.
ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮಹಿಳೆ ಮನದ ನೋವಿನಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Cancer ಅಪಾಯದಲ್ಲಿ ಬ್ಲಡ್ ಗ್ರೂಪ್ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.
ಇನ್ನು ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಪತಿ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದಾಗ ಪತ್ನಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಈ ದೃಶ್ಯ ನೋಡಿದ ಪತಿ ಕಣ್ಣೀರು ಹಾಕಿದ್ದಾರೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ತಲುಪಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಅಲ್ಲದೆ, ಸ್ಥಳದಲ್ಲಿದ್ದ ಆತ್ಮಹತ್ಯಾ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಆ ಪತ್ರದಲ್ಲಿ ಮೃತ ಮಹಿಳೆ ಬರೆದಿದ್ದು ಹೀಗೆ,
“ಶ್ರೀ… ಕ್ಷಮಿಸಿ, ನಾನು ಈ ಇರುವೆ (Ants) ಗಳೊಂದಿಗೆ ಬದುಕಲು ಬಯಸುವುದಿಲ್ಲ. ಅನ್ವಿಯನ್ನು ನೋಡಿಕೊಳ್ಳಿ. ದಯವಿಟ್ಟು ಅನ್ನಾವರಂ, ತಿರುಪತಿ ಮತ್ತು ಯೆಲ್ಲಮ್ಮನನ್ನು ನೋಡಿಕೊಳ್ಳಿ.”
ಈ ಪತ್ರ ಓದಿದ ಕುಟುಂಬ ಸದಸ್ಯರು ಕಣ್ಣೀರು ಹಾಕಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : “ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”
ಮೈರ್ಮೆಕೊಫೋಬಿಯಾ (Myrmecophobia) ಎಂದರೇನು?
ಮೈರ್ಮೆಕೊಫೋಬಿಯಾ ಎಂದರೆ ಇರುವೆ (Ants) ಗಳ ಬಗ್ಗೆ ಅತಿಯಾದ ಭಯ ಅಥವಾ ಅಸಹನೆ. ಇದು ಒಂದು ರೀತಿಯ ನಿರ್ದಿಷ್ಟ ಭಯ (Specific Phobia) ಆಗಿದ್ದು, ಈ ಸಮಸ್ಯೆ ಇದ್ದವರು ಇರುವೆಗಳನ್ನಷ್ಟೇ ಅಲ್ಲದೆ ಇತರ ಕೀಟಗಳು ಮತ್ತು ಜೇಡಗಳ ಬಗ್ಗೆ ಸಹ ತೀವ್ರ ಭಯ ಹೊಂದಿರುತ್ತಾರೆ.
ಕೆಲವರಿಗೆ ಇರುವೆಗಳು ಆಹಾರವನ್ನು ಹಾಳುಮಾಡುವ ಭಯವಿರಬಹುದು, ಇನ್ನು ಕೆಲವರಿಗೆ ಮನೆಯ ಮೇಲೆ ಇರುವೆಗಳ ದಾಳಿ ನಡೆಯುವ ಭಯವೂ ಉಂಟಾಗಬಹುದು.
ಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್; ವಿಡಿಯೋ ವೈರಲ್.!
ಲಕ್ಷಣಗಳು :
- ಆತಂಕ, ನಿದ್ರಾಹೀನತೆ.
- ಬೆವರುವುದು ಮತ್ತು ಹೃದಯ ಬಡಿತ ಹೆಚ್ಚಾಗುವುದು.
- ಉಸಿರಾಟದ ತೊಂದರೆ ಅಥವಾ ಗಾಬರಿ.
- ತಲೆತಿರುಗುವಿಕೆ, ವಾಕರಿಕೆ, ಒಣ ಬಾಯಿ.
- ತಲೆನೋವು ಮತ್ತು ಶಾರೀರಿಕ ಮರಗಟ್ಟುವಿಕೆ.
ಚಿಕಿತ್ಸೆ ಸಾಧ್ಯವೇ?
ಹೌದು, ವೈದ್ಯಕೀಯ ಮತ್ತು ಮಾನಸಿಕ ಚಿಕಿತ್ಸೆ ಮೂಲಕ ಮೈರ್ಮೆಕೊಫೋಬಿಯಾ ನಿವಾರಣೆ ಸಾಧ್ಯ.
ಸಾಮಾನ್ಯವಾಗಿ Exposure Therapy ಅಂದರೆ ಮೊದಲು ಇರುವೆ (Ants) ಗಳ ಚಿತ್ರಗಳು ಅಥವಾ ವಿಡಿಯೋಗಳನ್ನು ತೋರಿಸುವ ಮೂಲಕ ಪ್ರಾರಂಭಿಸಿ, ನಂತರ ಹಂತ ಹಂತವಾಗಿ ನಿಜ ಜೀವನದಲ್ಲಿ ಇರುವೆಗಳ ಹತ್ತಿರ ಇರಲು ಮನಸ್ಸು ತಯಾರಿಸುವ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೆ, ಕೌನ್ಸೆಲಿಂಗ್ ಮತ್ತು ಮನೋವೈದ್ಯಕೀಯ ಔಷಧೋಪಚಾರ ಸಹ ಸಹಾಯಕರಾಗಬಹುದು.
ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!
ಸಂಪಾದಕೀಯ :
ಮೃತ ಪ್ರಕರಣ ಪ್ರಕರಣ ಮಾನಸಿಕ ಆರೋಗ್ಯದ ಮಹತ್ವವನ್ನು ನೆನಪಿಸುತ್ತದೆ. ಭಯ, ಆತಂಕ ಅಥವಾ ಒತ್ತಡದಂತಹ ಸಮಸ್ಯೆಗಳನ್ನು ಅನುಭವಿಸಿದಾಗ ತಕ್ಷಣ ಸಹಾಯವನ್ನು ಪಡೆಯುವುದು ಅತ್ಯಗತ್ಯ. ಸಮಯಕ್ಕೆ ತಕ್ಕ ಸಲಹೆ ಮತ್ತು ಚಿಕಿತ್ಸೆ ಪಡೆದರೆ ಅನೇಕ ಜೀವಗಳನ್ನು ಉಳಿಸಬಹುದು.
👉 ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







