ಶುಕ್ರವಾರ, ನವೆಂಬರ್ 28, 2025

Janaspandhan News

HomeGeneral NewsSuperstition : ದೆವ್ವ ಓಡಿಸಲು ಪತ್ನಿಗೆ ಬೀಡಿ ಸೇದಿಸಿ ಮದ್ಯ ಕುಡಿಸಿದ ಪತಿ ಬಂಧನ.!
spot_img
spot_img
spot_img

Superstition : ದೆವ್ವ ಓಡಿಸಲು ಪತ್ನಿಗೆ ಬೀಡಿ ಸೇದಿಸಿ ಮದ್ಯ ಕುಡಿಸಿದ ಪತಿ ಬಂಧನ.!

- Advertisement -

ಜನಸ್ಪಂದನ ನ್ಯೂಸ್‌, ಕೊಟ್ಟಾಯಂ : ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ದೇಶವು ದಿನದಿಂದ ದಿನಕ್ಕೆ ಪ್ರಗತಿ ಹೊಂದುತ್ತಿದ್ದರೂ, ಮೂಢನಂಬಿಕೆ (Superstition) ಯ ಅಂಧಕಾರವು ಇನ್ನೂ ಹಲವು ಪ್ರಾಂತ್ಯಗಳಲ್ಲಿ ಕಣ್ಮರೆಯಾಗಿಲ್ಲ.

ಮೂಢನಂಬಿಕೆ (Superstition) ಗೆ ಕೇರಳದಲ್ಲಿ ನಡೆದ ಒಂದು ಭಯಾನಕ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ವಾಮಾಚಾರದ ಹೆಸರಿನಲ್ಲಿ ಮಹಿಳೆಯೊಬ್ಬಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.

Kiwi ಹಣ್ಣು ‌ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.

ಪೊಲೀಸರ ಮಾಹಿತಿ ಪ್ರಕಾರ, ಮಹಿಳೆಯ ಪತಿ ಅಖಿಲ್ ದಾಸ್ (26), ಪತಿಯ ತಂದೆ ದಾಸ್ (54) ಹಾಗೂ ಮಾಂತ್ರಿಕ ಶಿವದಾಸ್ (54) ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಅತ್ತೆ ಪ್ರಮುಖ ಆರೋಪಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ.

ಘಟನೆ ಹೇಗೆ ನಡೆಯಿತು :

ಮಾಹಿತಿಯ ಪ್ರಕಾರ, ಕಳೆದ ವಾರ ಮಹಿಳೆಯ ಅತ್ತೆ ಅವರು ತಮ್ಮ ಸೊಸೆಯ ಮೇಲೆ ಮೃತ ಸಂಬಂಧಿಕರ ದೆವ್ವ ಆವರಿಸಿಕೊಂಡಿದೆ ಎಂದು ನಂಬಿ, ಶಿವದಾಸ್ ಎಂಬ ಮಾಂತ್ರಿಕನನ್ನು ಕರೆತಂದಿದ್ದರು. ಬೆಳಗ್ಗೆ 11 ಗಂಟೆಗೆ ಪ್ರಾರಂಭವಾದ ವಾಮಾಚಾರದ ಆಚರಣೆ ರಾತ್ರಿ ತಡವರೆಗೂ ಮುಂದುವರಿದಿತು.

ಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌; ವಿಡಿಯೋ ವೈರಲ್.!

ಈ ವೇಳೆ ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಲಾಯಿತು, ಬೀಡಿ ಸೇದಿಸಲಾಯಿತು, ಮತ್ತು ಬೂದಿ ತಿನ್ನಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಮಹಿಳೆಯ ದೇಹದ ಮೇಲೆ ಸುಟ್ಟ ಗಾಯಗಳನ್ನೂ ಮಾಡಿದ್ದಾರೆ. ತೀವ್ರ ಹಿಂಸೆಯನ್ನು ತಾಳಲಾರದೆ ಆಕೆ ಪ್ರಜ್ಞೆ ಕಳೆದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಮಹಿಳೆಯ ಕುಟುಂಬದ ದೂರು :

ಘಟನೆಯ ನಂತರ ಮಹಿಳೆಯ ಆರೋಗ್ಯ ಹದಗೆಟ್ಟಿದ್ದು, ತಂದೆ ಈ ಕುರಿತು ಮಣರ್ಕಾಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆ ಪ್ರಾರಂಭಿಸಿ ಮೂವರನ್ನು ಬಂಧಿಸಿದ್ದಾರೆ.

ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!

ಕೊಟ್ಟಾಯಂ ಜಿಲ್ಲೆಯ ಪೊಲೀಸ್ ಮುಖ್ಯಸ್ಥ ಶಕುಲ್ ಹಮೀದ್ ಅವರ ಪ್ರಕಾರ, ಆ ಮಹಿಳೆ ಕಾನೂನುಬದ್ಧವಾಗಿ ಮದುವೆಯಾಗಿರಲಿಲ್ಲ. ಆಕೆ ಕುಟುಂಬವನ್ನು ತೊರೆದು ಅಖಿಲ್ ಜೊತೆ ವಾಸಿಸುತ್ತಿದ್ದರು.

ಇವರಿಬ್ಬರ ನಡುವೆ ಈಗಾಗಲೇ ಜಗಳ ಉಂಟಾಗಿದ್ದು, ಅದರ ಕುರಿತು ಮೊದಲು ಪೊಲೀಸರು ವಿಚಾರಣೆ ನಡೆಸಿದ್ದರು. ನಂತರ ಕುಟುಂಬದ ಮಧ್ಯಸ್ಥಿಕೆಯಿಂದ ಇಬ್ಬರೂ ಮತ್ತೆ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು ಎಂದು ಹೇಳಿದರು.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿಗಳು “ದೆವ್ವ ಬಿಡಿಸುವ” ಹೆಸರಿನಲ್ಲಿ ಮಹಿಳೆಗೆ ಕ್ರೂರ ಹಿಂಸೆ ನೀಡಿದ್ದು, ಇದು ಮೂಢನಂಬಿಕೆ (Superstition) ಯ ಹೆಸರಿನಲ್ಲಿ ನಡೆದ ಮಾನವ ಹಕ್ಕು ಉಲ್ಲಂಘನೆ ಎಂದು ಸ್ಪಷ್ಟವಾಗಿದೆ.

ಲೈಂಗಿಕ ಕಿರುಕುಳ ನೀಡಿದ Bike Taxi ಚಾಲಕ ; ವಿಡಿಯೋ ಶೇರ್ ಮಾಡಿದ ಯುವತಿ.!
ಮೂಢನಂಬಿಕೆ ಮತ್ತು ಸಮಾಜ :

ಈ ಘಟನೆ ಮತ್ತೆ ಒಂದು ಬಾರಿ ಮೂಢನಂಬಿಕೆ (Superstition) ಯ ವಿರುದ್ಧ ಜಾಗೃತಿಯ ಅಗತ್ಯವನ್ನು ನೆನಪಿಸಿದೆ. ತಂತ್ರಜ್ಞಾನ ಮತ್ತು ಶಿಕ್ಷಣದ ಬೆಳವಣಿಗೆಯ ನಡುವೆಯೂ ಇಂತಹ ನಂಬಿಕೆ (ಮೂಢನಂಬಿಕೆ – Superstition) ಗಳು ಜನರ ಮನಸ್ಸಿನಲ್ಲಿ ಬೇರೂರಿರುವುದು ಸಮಾಜದ ಚಿಂತೆಗೆ ಕಾರಣವಾಗಿದೆ.

ಬಂಧಿತ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಲಾಯನದಲ್ಲಿದ್ದ ಅತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ. ಪ್ರಕರಣದ ಕುರಿತು ತನಿಖೆ ತೀವ್ರಗೊಳಿಸಲಾಗಿದೆ.


ಲೈಂಗಿಕ ಕಿರುಕುಳ ನೀಡಿದ Bike Taxi ಚಾಲಕ ; ವಿಡಿಯೋ ಶೇರ್ ಮಾಡಿದ ಯುವತಿ.!

Bike

ಜನಸ್ಪಂದನ ನ್ಯೂಸ್‌, ಬೆಂಗಳೂರು : ನಗರದ ವಿಲ್ಸನ್ ಗಾರ್ಡನ್ ಪ್ರದೇಶದಲ್ಲಿ ರಾಪಿಡೋ ಬೈಕ್ (Bike) ಸವಾರನಿಂದ ಮಹಿಳಾ ಪ್ರಯಾಣಿಕೆಗೆ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಈಗ ಅದು ವೈರಲ್ ಆಗುತ್ತಿದೆ.

ಮಹಿಳೆಯ ಪ್ರಕಾರ, ನವೆಂಬರ್ 6 ರಂದು ಚರ್ಚ್ ಸ್ಟ್ರೀಟ್‌ನಿಂದ ತಮ್ಮ ಪೇಯಿಂಗ್ ಗೆಸ್ಟ್ ವಸತಿ ಗೃಹದ ಕಡೆಗೆ ಬೈಕ್ ಮೂಲಕ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಲೋಕೇಶ್ ಎಂಬ ಹೆಸರಿನ ಬೈಕ್ (Bike) ಚಾಲಕ ಮಹಿಳೆಯನ್ನು ಹತ್ತಿಸಿಕೊಂಡು, ಪ್ರಯಾಣದ ಮಧ್ಯದಲ್ಲಿ ಅವಳ ಕಾಲಿಗೆ ಅಶ್ಲೀಲವಾಗಿ ಸ್ಪರ್ಶಿಸಿದ್ದಾನೆ ಎಂದು ಆರೋಪಿಸಲಾಗಿದೆ.

School ಗೆ ಹೋಗಲ್ಲ ಎಂದ ಬಾಲಕನ ಹಠ ; ಮಂಚದ ಸಹಿತ ಶಾಲೆಗೆ ಕರೆತಂದ ಮನೆಯವರು ; ವಿಡಿಯೋ ವೈರಲ್.!

ಆರಂಭದಲ್ಲಿ ಇದನ್ನು ನಿರ್ಲಕ್ಷಿಸಿದ್ದ ಮಹಿಳೆ, ನಂತರ ಆತ ಪುನಃ ಅದೇ ಕೃತ್ಯವನ್ನು ಮುಂದುವರೆಸುತ್ತಿದ್ದಾನೆಂದು ಗಮನಿಸಿ, ತಮ್ಮ ಮೊಬೈಲ್‌ನಲ್ಲಿ ಈ ಘಟನೆಯ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. “ಭೈಯಾ ಹೀಗ್ ಮಾಡ್ಬೇಡಿ” ಎಂದು ಎಚ್ಚರಿಸಿದರೂ‌ ಕೂಡಾ ಆತ ತನ್ನ ವರ್ತನೆ ಮುಂದುವರಿಸಿದ್ದ ಎಂದು ಮಹಿಳೆ ತಿಳಿಸಿದ್ದಾರೆ.

ಪಿಜಿ ಹತ್ತಿರ ತಲುಪಿದ ಬಳಿಕ ಸ್ಥಳೀಯರು ಅಳುತ್ತಿದ್ದ ಮಹಿಳೆಯನ್ನು ಗಮನಿಸಿ ವಿಚಾರಿಸಿದಾಗ, ಮಹಿಳೆ ಎಲ್ಲವನ್ನೂ ವಿವರಿಸಿದ್ದಾರೆ. ಬಳಿಕ ಸ್ಥಳೀಯರು ಬೈಕ್ (Bike) ಚಾಲಕನನ್ನು ಪ್ರಶ್ನಿಸಿದಾಗ ಆತ “ಉದ್ದೇಶಪೂರ್ವಕವಾಗಿ ಮಾಡಿಲ್ಲ” ಎಂದು ಹೇಳಿಕೊಂಡು ಕ್ಷಮೆಯಾಚಿಸಿದ್ದಾನೆ.

ಆದರೆ ತೆರಳುವ ವೇಳೆ ಮಹಿಳೆಯ ಕಡೆ ಬೆರಳು ತೋರಿಸಿದ ಬೈಕ್ (Bike) ಚಾಲಕನ ವರ್ತನೆಯಿಂದ ಮಹಿಳೆಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ಮಹಿಳೆ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, “ಈ ಘಟನೆ ನನ್ನಿಗೆ ತೀವ್ರ ಆತಂಕ ತಂದಿದೆ. ಅಸುರಕ್ಷಿತ ಅನ್ನಿಸಿತು” ಎಂದು ಬರೆದಿದ್ದಾರೆ.

ಇದೀಗ ವಿಲ್ಸನ್ ಗಾರ್ಡನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರು ರಾಪಿಡೋ ಕಂಪನಿಯಿಂದ ಬೈಕ್ (Bike) ಚಾಲಕನ ವಿವರಗಳನ್ನು ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಡಿಯೋ :

 

View this post on Instagram

 

A post shared by @s4dhnaa

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments