ಜನಸ್ಪಂದನ ನ್ಯೂಸ್, ಡೆಸ್ಕ್ : ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಭೀಕರ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ. ಬುಕ್ಕರಾಯಸಮುದ್ರಂ ಮಂಡಲದ ಕೊರಪಾಡು ಗ್ರಾಮದ ಅಂಬೇಡ್ಕರ್ ಗುರುಕುಲ ಶಾಲೆ (School) ಯಲ್ಲಿ, ಕೇವಲ ಕೆಲವೇ ಕ್ಷಣಗಳಲ್ಲಿ ನಡೆದ ದುರಂತವೊಂದು ಪುಟ್ಟ ಮಗು ಪ್ರಾಣ ಕಳೆದುಕೊಳ್ಳುವಂತೆ ಮಾಡಿದೆ.
ಮೃತಳನ್ನು ಶಾಲೆಯ (School) ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣ ವೇಣಿ ಅವರ ಮಗಳು ಅಕ್ಷಿತಾ ಎಂದು ಗುರುತಿಸಲಾಗಿದೆ. ಘಟನೆ ಸೆಪ್ಟೆಂಬರ್ 20ರಂದು ಶಾಲೆಯ ಅಡುಗೆಮನೆಯಲ್ಲಿ ನಡೆದಿದೆ.
ಕತ್ತೆಕಿರುಬವ ತಪ್ಪಿಸಲು ಹೋಗಿ ಪಲ್ಟಿಯಾದ ಪೊಲೀಸ್ ಜೀಪ್ ; ASI ಸಾವು.!
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೃಷ್ಣ ವೇಣಿ ಕರ್ತವ್ಯಕ್ಕೆ ಬಂದಾಗ ತನ್ನ ಮಗುವನ್ನೂ ಕರೆದುಕೊಂಡು ಬಂದಿದ್ದರು. ಅಡುಗೆಮನೆಯಲ್ಲಿ ಬಿಸಿ ಹಾಲು ಸಂಗ್ರಹಿಸಲು ದೊಡ್ಡ ಪಾತ್ರೆ ಇಡಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಗು ಅಡುಗೆಮನೆಯಲ್ಲಿ ಪ್ರವೇಶಿಸಿ, ಬೆಕ್ಕನ್ನು ಹಿಂಬಾಲಿಸುತ್ತಿರುವುದು ಕಂಡುಬಂದಿದೆ.
ಬೆಕ್ಕಿನ ಹಿಂದೆ ಓಡುತ್ತಿದ್ದ ಅಕ್ಷಿತಾ ದುರದೃಷ್ಟವಶಾತ್ ಎಡವಿಬಿದ್ದು ನೇರವಾಗಿ ಬಿಸಿ ಹಾಲಿನ ಪಾತ್ರೆಗೆ ಬಿದ್ದಳು. ಘಟನೆಯ ಕೆಲವೇ ಕ್ಷಣಗಳಲ್ಲಿ ಮಗು ನೋವಿನಿಂದ ಕಿರುಚುತ್ತಾ ಹೊರಬರುವ ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ.
“Post Officeನ ಈ ಸ್ಕೀಮ್ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!
ತಕ್ಷಣವೇ ತಾಯಿ ಸ್ಥಳಕ್ಕೆ ಬಂದು ಮಗುವನ್ನು ಹೊರತೆಗೆದರು. ತೀವ್ರವಾದ ಸುಟ್ಟ ಗಾಯಗಳಿಂದ ಬಾಲಕಿ ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಶಾಲಾ (School) ಆವರಣದ ಭದ್ರತೆ ಮತ್ತು ಮಕ್ಕಳ ಸುರಕ್ಷತೆ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Student : ರಸ್ತೆ ಮಧ್ಯೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ದುಷ್ಕರ್ಮಿ ; ಸಿಸಿಟಿವಿ ದೃಶ್ಯ ವೈರಲ್.!
ಶಾಲೆ (School) ಯಲ್ಲಿ ಕುದಿಯುತ್ತಿರುವ ಹಾಲಿಗೆ ಬಿದ್ದ ಬಾಲಕಿ ವಿಡಿಯೋ :
వేడి పాలలో పడి చిన్నారి మృతి
అనంతపురం జిల్లాలో విషాదకర ఘటన.
కొర్రపాడు గురుకుల పాఠశాలలో పిల్లలకు సిద్ధం చేసిన వేడి పాలలో ప్రమాదవశాత్తు పడిపోయిన 16 నెలల అక్షిత మృతిచెందింది. కొర్రపాడు గురుకుల పాఠశాలలో ఈ ఘటన జరిగింది.#Anantapur #ChildDeath #HotMilkAccident #SchoolTragedy pic.twitter.com/MsFiilcGP5— Telangana Nestham (@TNestham) September 26, 2025
“Love Breakup” : ಗೆಳತಿಗೆ ಬೈಕ್ ಡಿಕ್ಕಿ ಹೊಡೆದ ಯುವಕ ; ಸಿಸಿಟಿವಿ ದೃಶ್ಯ ವೈರಲ್.!
ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ದಿನಗಳಲ್ಲಿ ಪ್ರೀತಿ, ಬ್ರೇಕ್ಅಪ್ (love breakup) ಮತ್ತು ಮದುವೆಯ ನಂತರ ಉಂಟಾಗುವ ಅನಿರೀಕ್ಷಿತ ಘಟನೆಗಳು ಹೆಚ್ಚಾಗುತ್ತಿವೆ. ಪರಸ್ಪರ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದರೆ ಕೋಪ, ಹಿಂಸೆ ಮತ್ತು ಅನೇಕ ದುರ್ಘಟನೆಗಳಿಗೆ ಕಾರಣವಾಗುತ್ತಿರುವುದು ಕಂಡುಬರುತ್ತಿದೆ. ಇಂತಹದ್ದೇ ಒಂದು ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಡೆದಿದೆ.
ಕಲ್ಪನಾ ನಗರ ಪ್ರದೇಶದಲ್ಲಿ, ಯುವಕನೊಬ್ಬ ತನ್ನ ಗೆಳತಿಯೊಂದಿಗೆ ನಡೆದ ಜಗಳದ ಬಳಿಕ (love breakup) ಬೈಕ್ನಿಂದ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿರುವುದು ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು Constable ಹುದ್ದೆಗಳಿಗೆ ನೇಮಕಾತಿ ; ಸಚಿವ ಡಾ.ಪರಮೇಶ್ವರ.!
ಮಾಹಿತಿ ಪ್ರಕಾರ, ಆರೋಪಿಯ ಹೆಸರು ರಾಜೇಂದ್ರ. ಆತ ಹಲವು ವರ್ಷಗಳಿಂದ ಆ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ಘಟನೆ ನಡೆದ ದಿನ ಇಬ್ಬರ ನಡುವೆ ಸಣ್ಣಪುಟ್ಟ ಜಗಳ ನಡೆದಿದ್ದು, ಯುವತಿ ಕೋಪದಲ್ಲಿ ಕಲ್ಲು ಎಸೆದಿದ್ದಳು.
ಇದರಿಂದ ಕೋಪಗೊಂಡ ರಾಜೇಂದ್ರ ಅತಿವೇಗದಲ್ಲಿ ಬೈಕ್ ಚಲಾಯಿಸಿಕೊಂಡು ಬಂದು ಯುವತಿಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ. ಘಟನೆಯ ನಂತರ ಯುವತಿ ರಸ್ತೆ ಮೇಲೆ ಬಿದ್ದು ತೀವ್ರ ಗಾಯಗೊಂಡಿದ್ದಾಳೆ. ತಕ್ಷಣ ಸ್ಥಳೀಯರು ಓಡಿಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
“Post Officeನ ಈ ಸ್ಕೀಮ್ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!
ಪ್ರಸ್ತುತ ಆಕೆ ಚಿಕಿತ್ಸೆ ಪಡೆಯುತ್ತಿದ್ದು, ತಲೆಗೆ ಗಂಭೀರ ಗಾಯಗಳಾಗಿರುವುದು ವೈದ್ಯಕೀಯ ಮೂಲಗಳಿಂದ ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಈಗಾಗಲೇ ವೈರಲ್ ಆಗಿದ್ದು, ಯುವಕನ ಉದ್ದೇಶಪೂರ್ವಕ ಕೃತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
👉 ಈ ಘಟನೆ, ಪ್ರೇಮ ಸಂಬಂಧಗಳ (love breakup) ಅಸಮಜ್ಜಿ ಹಾಗೂ ಬ್ರೇಕಪ್ (breakup) ನಂತರ ಉಂಟಾಗುವ ಹಿಂಸೆ ಹೇಗೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ.
ಕತ್ತೆಕಿರುಬವ ತಪ್ಪಿಸಲು ಹೋಗಿ ಪಲ್ಟಿಯಾದ ಪೊಲೀಸ್ ಜೀಪ್ ; ASI ಸಾವು.!
ಲವ್ ಬೇಕಫ್ (love breakup) ಹಿನ್ನಲೆ ಬೈಕ್ ಗುದ್ದಿಸಿದ ಯುವಕನ ವಿಡಿಯೋ :
మధ్యప్రదేశ్ లోని ఇండోర్ లో తనకు బ్రేక్ అప్ చెప్పిందని యువతిని బైక్ తో ఢీకొట్టి పరారైన యువకుడు pic.twitter.com/MuInnBNpEt
— BIG TV Breaking News (@bigtvtelugu) September 26, 2025