Tuesday, September 16, 2025

Janaspandhan News

HomeGeneral Newsಮದ್ದೂರಿಗೆ ಭೇಟಿ ಮುನ್ನ ಗಲಭೆಕೋರರನ್ನು ಬಂಧಿಸಬೇಕು : ಸರ್ಕಾರಕ್ಕೆ ಶಾಸಕ Yathnal ಎಚ್ಚರಿಕೆ.!
spot_img
spot_img
spot_img

ಮದ್ದೂರಿಗೆ ಭೇಟಿ ಮುನ್ನ ಗಲಭೆಕೋರರನ್ನು ಬಂಧಿಸಬೇಕು : ಸರ್ಕಾರಕ್ಕೆ ಶಾಸಕ Yathnal ಎಚ್ಚರಿಕೆ.!

- Advertisement -

ಜನಸ್ಪಂದನ ನ್ಯೂಸ್‌, ಬೆಂಗಳೂರು : ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಯಿಂದ ಮದ್ದೂರಿನಲ್ಲಿ (Maddur) ತೀವ್ರ ಉದ್ವಿಗ್ನತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರತಾಪ್‌ ಸಿಂಹ ನೇತೃತ್ವದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಹಿಂದೂ ಕಾರ್ಯಕರ್ತರು ಶಾಸಕ ಬಸವನಗೌಡ ಆರ್‌. ಪಾಟೀಲ್‌ ಯತ್ನಾಳ್‌ (Yathnal) ಅವರನ್ನು ಮದ್ದೂರಿಗೆ ಆಹ್ವಾನಿಸುವಂತೆ ಆಗ್ರಹಿಸಿದರು.

ಈ ಬಗ್ಗೆ ವಿಜಯಪೂರ ಶಾಸಕ ಯತ್ನಾಳ್‌ (MLA Yathnal) ತಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಮದ್ದೂರಿಗೆ ಶೀಘ್ರದಲ್ಲೇ ಭೇಟಿ ನೀಡುವ ಸೂಚನೆ ನೀಡಿದ್ದಾರೆ.

Belagavi : “ಬುದ್ಧಿ ಹೇಳಿದ ವ್ಯಕ್ತಿಗೆ ಚಾಕು ಇರಿದ ಯುವಕ ; ಟ್ರಾಕ್ಟರ್ ಗಾಲಿಗೆ ಸಿಲುಕಿ ಬಾಲಕನ ಸಾವು.!
ಕಾರ್ಯಕರ್ತರ ಬೆಂಬಲ :

ಮದ್ದೂರಿನಲ್ಲಿ ನಡೆದ ಸಭೆಯಲ್ಲಿ ಪ್ರತಾಪ್‌ ಸಿಂಹ ಮಾತನಾಡುತ್ತಿರುವ ವೇಳೆ, ಕಾರ್ಯಕರ್ತರು ಯತ್ನಾಳ್‌ ಪರ ಘೋಷಣೆಗಳನ್ನು ಕೂಗಿದರು. ಪ್ರತಾಪ್‌ ಸಿಂಹ ಸಹ, “ಶೀಘ್ರದಲ್ಲೇ ಯತ್ನಾಳ್‌ (Yathnal) ಮದ್ದೂರಿಗೆ ಬರುತ್ತಾರೆ, ಬಂಧಿತರಾದ ಯುವಕರ ಬಿಡುಗಡೆ ಆಗಬೇಕು” ಎಂದು ಹೇಳಿದ್ದಾರೆ.

ಶಾಸಕರ ಪ್ರತಿಕ್ರಿಯೆ :

ಯತ್ನಾಳ್‌ (Yathnal) ತಮ್ಮ ಎಕ್ಸ್‌ ಖಾತೆಯಲ್ಲಿ, “ಮದ್ದೂರಿಗೆ ಶೀಘ್ರದಲ್ಲೇ ಭೇಟಿ ನೀಡುತ್ತೇನೆ. ಮದ್ದೂರಿನ ಜನರು ಧೈರ್ಯ ಕಳೆದುಕೊಳ್ಳಬಾರದು. ಸರ್ಕಾರವು ಶಾಂತಿ ಕಾಪಾಡುವಲ್ಲಿ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ ಪಡೆಯುತ್ತದೆ” ಎಂದು ಸರ್ಕಾರಕ್ಕೆ ಶಾಸಕ ಯತ್ನಾಳ್‌ (Yathnal) ಎಚ್ಚರಿಕೆ ನೀಡಿದ್ದಾರೆ.”

ಪ್ರಸ್ತುತ ಪರಿಸ್ಥಿತಿ :
14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!

ಗಲಭೆ ಹಿನ್ನೆಲೆ ಪಟ್ಟಣದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.


KSP : ರಾಜ್ಯದಲ್ಲಿ 4656 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ.!

ಜನಸ್ಪಂದನ ನ್ಯೂಸ್‌, ನೌಕರಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) 2025ರಲ್ಲಿ ದೊಡ್ಡ ಮಟ್ಟದ ನೇಮಕಾತಿ ಆರಂಭಿಸಲು ಸಿದ್ಧವಾಗಿದೆ. ಈ ಮೂಲಕ ಒಟ್ಟು 4656 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ KSP ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

Tantrik : ತಂತ್ರ-ಮಂತ್ರದಲ್ಲಿ ಪರಿಣಿತ ಎಂದು ಹೇಳಿಕೊಂಡ ವ್ಯಕ್ತಿಯಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ.!

ಅಧಿಕೃತ ಅಧಿಸೂಚನೆ ಪ್ರಕಾರ, ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ksp recruitment.in ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ :
  • ಇಲಾಖೆ ಹೆಸರು : ಕರ್ನಾಟಕ ರಾಜ್ಯ ಪೊಲೀಸ್ (KSP).
  • ಒಟ್ಟು ಹುದ್ದೆಗಳು : 4656.
  • ಹುದ್ದೆಗಳ ಹೆಸರು : ಪೊಲೀಸ್ ಕಾನ್ಸ್‌ಟೇಬಲ್.
  • ಉದ್ಯೋಗ ಸ್ಥಳ : ಕರ್ನಾಟಕ.
  • ಅರ್ಜಿಯ ವಿಧಾನ : ಆನ್‌ಲೈನ್.
14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!
ಆಯ್ಕೆ ಪ್ರಕ್ರಿಯೆ :

ಅಭ್ಯರ್ಥಿಗಳ ಆಯ್ಕೆ ಹಂತಗಳು ಹೀಗಿವೆ,

  • ಲಿಖಿತ ಪರೀಕ್ಷೆ.
  • ಸಹಿಷ್ಣುತೆ ಪರೀಕ್ಷೆ (Endurance Test).
  • ದೈಹಿಕ ಗುಣಮಟ್ಟ ಪರೀಕ್ಷೆ (Physical Standard Test).
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನೇಮಕಾತಿ ಅಧಿಸೂಚನೆ ಡೌನ್‌ಲೋಡ್ ಮಾಡಿ.
  2. ಸೂಚನೆಯನ್ನು ಸಂಪೂರ್ಣವಾಗಿ ಓದಿದ ನಂತರ ಆನ್‌ಲೈನ್ ಲಿಂಕ್ ಕ್ಲಿಕ್ ಮಾಡಿ.
  3. ಅರ್ಜಿ ಫಾರ್ಮ್‌ ಅನ್ನು ಸರಿಯಾಗಿ ಭರ್ತಿ ಮಾಡಿ.
  4. ಅಗತ್ಯವಿದ್ದಲ್ಲಿ ಶುಲ್ಕವನ್ನು ಪಾವತಿಸಿ.
  5. ಫೋಟೋ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡಿ.
  6. ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸಲ್ಲಿಸಿ.
  7. ಅಂತಿಮವಾಗಿ ಪ್ರಿಂಟ್ ತೆಗೆದುಕೊಳ್ಳಿ.
“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  ಶೀಘ್ರದಲ್ಲೇ.
ಪ್ರಮುಖ ಲಿಂಕ್‌ಗಳು :
  • ಕಿರು ಅಧಿಸೂಚನೆ (Notification) : ಶೀಘ್ರದಲ್ಲಿ ಲಭ್ಯ.
  • ಅರ್ಜಿಗೆ ಲಿಂಕ್ (Apply Online) : ಶೀಘ್ರದಲ್ಲಿ ಸಕ್ರಿಯ.
  • ಅಧಿಕೃತ ವೆಬ್‌ಸೈಟ್ : ksp-recruitment.in

Disclaimer : This article is based on reports and information available on the internet. Janaspandhan News is not affiliated with it and is not responsible for it.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments