Wednesday, September 17, 2025

Janaspandhan News

HomeGeneral Newssex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!
spot_img
spot_img
spot_img

sex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!

- Advertisement -

ಜನಸ್ಪಂದನ ನ್ಯೂಸ್‌, ಬೆಂಗಳೂರು : ಬೆಂಗಳೂರು ನಗರದ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದರಲ್ಲಿ, ಬಾಂಗ್ಲಾದೇಶ ಮೂಲದ 30 ವರ್ಷದ ಮಹಿಳೆಯನ್ನು ವೇಶ್ಯಾವಾಟಿಕೆ (sex-racket) ಜಾಲದಿಂದ ರಕ್ಷಿಸಲಾಗಿದೆ.

ಆರ್ಥಿಕ ಸಂಕಷ್ಟದಲ್ಲಿದ್ದ ಮಹಿಳೆ, ಉತ್ತಮ ಉದ್ಯೋಗದ ನೆಪದಲ್ಲಿ ಬೆಂಗಳೂರಿಗೆ ಕರೆತರಲ್ಪಟ್ಟಿದ್ದು, ಬಳಿಕ ಆಕೆಯನ್ನು ಅಕ್ರಮ ಚಟುವಟಿಕೆ (sex-racket) ಗೆ ದೂಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಹೇಗೆ ನಡೆದಿದೆ ಘಟನೆ?

2025ರ ಸೆಪ್ಟೆಂಬರ್ 7ರಂದು ಸಂಚಾರಿ ಪೊಲೀಸರು ಗಸ್ತು ಹೊಡೆಯುತ್ತಿದ್ದ ವೇಳೆ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆ ಒಬ್ಬರು ಸಹಾಯಕ್ಕಾಗಿ ಅವರ ಬಳಿ ಬಂದಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ, ತಮಗೆ ದಕ್ಷಿಣ ಭಾರತದಲ್ಲಿ ಬ್ಯೂಟಿ ಪಾರ್ಲರ್ ಉದ್ಯೋಗ ಕೊಡಿಸುವುದಾಗಿ ಹೇಳಿ ದಲ್ಲಾಳಿಗಳ ಗುಂಪೊಂದು ಬಾಂಗ್ಲಾದೇಶದಿಂದ ಕರೆತಂದು, ಬಲವಂತವಾಗಿ ವೇಶ್ಯಾವಾಟಿಕೆ (sex-racket) ಗೆ ತಳ್ಳಲಾಗಿದೆ ಎಂದು ಮಹಿಳೆ ತಿಳಿಸಿದ್ದಾರೆ.

ಮಹಿಳೆಯ ಹೇಳಿಕೆಯ ಪ್ರಕಾರ, ಬೆಂಗಳೂರಿಗೆ ಬಂದ ಕೂಡಲೇ ಆಕೆಯನ್ನು ಎಚ್‌ಎಸ್‌ಆರ್ ಲೇಔಟ್‌ನ ಮನೆಯಲ್ಲಿ ಇರಿಸಲಾಯಿತು. ಅಲ್ಲಿ ಜ್ಯೂಸ್ ಕುಡಿಸುವ ನೆಪದಲ್ಲಿ ಮದ್ದುಗುಳಿಸಿದ ನಂತರ, ಆಕೆಯನ್ನು ಇಬ್ಬರು ಪುರುಷರೊಂದಿಗೆ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದರು.

14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!

ಆದರೆ ಅಲ್ಲಿ ಆರೋಪಿಗಳು ಕುಡಿಯುತ್ತಾ ಕುಳಿತಿದ್ದ ವೇಳೆ ಆಕೆ ಎಚ್ಚರಗೊಂಡ ತಕ್ಷಣ ಅಲ್ಲಿಂದ ತಪ್ಪಿಸಿಕೊಂಡು ಜನನಿಬಿಡ ರಸ್ತೆಗೆ ಬಂದಿದ್ದು, ಪೊಲೀಸರೊಬ್ಬರನ್ನು ಕಂಡು ಅವರ ಬಳಿ ಸಹಾಯ ಕೇಳಿದ್ದಾಳೆ.

ಸಂತ್ರಸ್ತೆಯ ಮನವಿ :

ಆಕೆ ಮದುವೆಯಾಗಿದ್ದು, ಇಬ್ಬರು ಮಕ್ಕಳ ತಾಯಿ. “ತನ್ನನ್ನು ಬಲವಂತವಾಗಿ ವೇಶ್ಯಾವಾಟಿಕೆ (sex-racket) ಗೆ ದೂಡಲಾಗಿದೆ. ದಯವಿಟ್ಟು ನನ್ನನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿ” ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

Murder : ಪತಿಯ ಕೊಲೆಗೆ ಪ್ರಿಯಕರನ ಜೊತೆ ಸ್ಕೆಚ್ ಹಾಕಿದ ಪತ್ನಿ.!
ವೇಶ್ಯಾವಾಟಿಕೆ (sex-racket) ಜಾಲದಿಂದ ರಕ್ಷಿಸಿದ ನಂತರ ಪೊಲೀಸರ ಕ್ರಮ :

ಸದ್ಯ ಹುಳಿಮಾವು ಪೊಲೀಸರು ಆಕೆಯನ್ನು ಬೆಂಗಳೂರಿನ ಎನ್‌ಜಿಒ ಒಬ್ಬರ ಹಸ್ತಾಂತರಿಸಿದ್ದು, ಕೌನ್ಸೆಲಿಂಗ್ ವ್ಯವಸ್ಥೆ ಮಾಡಲಾಗಿದೆ. ನಂತರ ಆಕೆಯನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.

ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದು, ಬಾಂಗ್ಲಾದೇಶದಿಂದ ಯುವತಿಯರನ್ನು ಕರೆದು ಮೋಸ ಮಾಡುವ ದಲ್ಲಾಳಿಗಳ ಜಾಲವನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ.


Belagavi : “ಬುದ್ಧಿ ಹೇಳಿದ ವ್ಯಕ್ತಿಗೆ ಚಾಕು ಇರಿದ ಯುವಕ ; ಟ್ರಾಕ್ಟರ್ ಗಾಲಿಗೆ ಸಿಲುಕಿ ಬಾಲಕನ ಸಾವು.!

Belagavi

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ (Belagavi) ಜಿಲ್ಲೆಯಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಘಟನೆಗಳು ನಡೆದಿದ್ದು, ಒಂದು ಕಡೆ ಯುವಕನ ಚಾಕು ಇರಿತದಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರೆ, ಮತ್ತೊಂದು ಕಡೆ ಗಣೇಶ ವಿಸರ್ಜನೆ ಬಳಿಕ ಬಾಲಕ ದುರಂತವಾಗಿ ಸಾವನ್ನಪ್ಪಿದ್ದಾನೆ.

ಕಿತ್ತೂರಿನಲ್ಲಿ ಯುವಕನ ದಾಳಿ :

ಮಾಹಿತಿಯ ಪ್ರಕಾರ, ಬೆಳಗಾವಿ (Belagavi) ಯ ಕಿತ್ತೂರು ಬಸ್ ನಿಲ್ದಾಣದಲ್ಲಿ ನಡೆದ ಘಟನೆಯಲ್ಲಿ ದರ್ಶನ್ ಎಂಬ ಯುವಕನ ಮೇಲೆ ಆರೋಪ ಹೊರಿಸಲಾಗಿದೆ. ಆತ ಯುವತಿಯೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ, ಮಡಿವಾಳಪ್ಪ ಎಂಬವರು ಕುಟುಂಬದವರ ಸಮ್ಮುಖದಲ್ಲಿ ತಿದ್ದಿಕೊಂಡು ನಡೆಯುವಂತೆ ಎಚ್ಚರಿಕೆ ನೀಡಿದ್ದರು.

“Minor ನೊಂದಿಗೆ ಏಕಾಂತದಲ್ಲಿದ್ದ ತಾಯಿಯನ್ನು ನೋಡಿದ 6 ವರ್ಷದ ಮಗಳು” ; ಮುಂದೆನಾಯ್ತು.

ಪ್ರೀತಿ-ಪ್ರೇಮದ ಹೆಸರಲ್ಲಿ ಹೀಗೆ ಸುತ್ತಾಡುವುದು ಸರಿಯಲ್ಲವೆಂದು ಸಲಹೆ ನೀಡಿದ ಮಡಿವಾಳಪ್ಪನ ಮಾತು ದರ್ಶನ್‌ಗೆ ಕೋಪ ತಂದುಕೊಟ್ಟಿತ್ತು. ಆಕ್ರೋಶಗೊಂಡ ದರ್ಶನ್, ಮಡಿವಾಳಪ್ಪ ಅವರ ಕಣ್ಣಿಗೆ ಖಾರದಪುಡಿ ಎರಚಿ ಚಾಕುವಿನಿಂದ ಇರಿತ ನಡೆಸಿದ್ದಾನೆ.

ಈ ದಾಳಿಯಲ್ಲಿ ಮಡಿವಾಳಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಿತ್ತೂರು (Belagavi) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

“ಬೆಳಗ್ಗೆ ಎದ್ದಾಗ ಈ 3 ಲಕ್ಷಣಗಳು ಕಂಡು ಬಂದರೆ, ಅದು Kidney ಹಾನಿಯಾಗಿರುವ ಸಂಕೇತವಾಗಿರಬಹುದು”.
ಹುಕ್ಕೇರಿಯಲ್ಲಿ ದುರಂತ :

ಇನ್ನೊಂದು ದುರ್ಘಟನೆ ಬೆಳಗಾವಿ (Belagavi) ಯ  ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ನಡೆದಿದೆ. ಗಣೇಶ ಮೂರ್ತಿ ವಿಸರ್ಜನೆ ಮುಗಿಸಿ ವಾಪಸ್ ಮನೆಗೆ ಬರುವಾಗ, ಪ್ರಜ್ವಲ್ ಅಮ್ಮಣಗಿ (11) ಎಂಬ ಬಾಲಕ ಅದೇ ಟ್ರಾಕ್ಟರ್ ಗಾಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಮೃತ ಪ್ರಜ್ವಲ್, ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ಭಿಮಗೌಡ ಅಮ್ಮಣಗಿ ಅವರ ಪುತ್ರನಾಗಿದ್ದಾನೆ.

ಘಟನೆ ಸೋಮವಾರ ರಾತ್ರಿ ಬಸ್ ನಿಲ್ದಾಣದ ಬಳಿ ನಡೆದಿದ್ದು, ಪ್ರಜ್ವಲ್ ಸ್ಥಳದಲ್ಲೇ ಗಾಲಿಗೆ ಸಿಲುಕಿ ಮರಣ ಹೊಂದಿದ್ದಾನೆ. ಕುಟುಂಬ ಹಾಗೂ ಗ್ರಾಮದವರ ದುಃಖದ ನಡುವೆ ಪ್ರಜ್ವಲ್ ಅಂತ್ಯಕ್ರಿಯೆಯನ್ನು ಗುಡಸ ಗ್ರಾಮದ ಕೋಟಬಾಗಿ (Belagavi) ತೋಟದ ಜಮೀನಿನಲ್ಲಿ ನೆರವೇರಿಸಲಾಯಿತು. ಈ ಪ್ರಕರಣ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್‌ ಕಾರು ; 2 ಸಾವು, ಒಬ್ಬರು ನಾಪತ್ತೆ.!
ಸಮಾಜಕ್ಕೆ ಸಂದೇಶ :

ಈ ಎರಡು ಘಟನೆಗಳು ಸಮಾಜಕ್ಕೆ ಮಹತ್ವದ ಸಂದೇಶ ನೀಡುತ್ತವೆ. ಪ್ರೀತಿ ಅಥವಾ ವೈಯಕ್ತಿಕ ವಿಚಾರಗಳ ಬಗ್ಗೆ ತಾಳ್ಮೆ ಕಳೆದುಕೊಂಡು ಹಿಂಸಾಚಾರಕ್ಕೆ ಹೋಗುವುದು ಜೀವಗಳಿಗೆ ಅಪಾಯ ತರಬಹುದು. ಅದೇ ವೇಳೆ, ಹಬ್ಬ-ಹರಿದಿನಗಳ ಸಂದರ್ಭಗಳಲ್ಲಿ ವಾಹನ ಸಂಚಾರ ಮತ್ತು ಸುರಕ್ಷತೆ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ.

ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದ ಈ ಘಟನೆಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಪ್ರಕರಣಗಳ ತನಿಖೆ ಕೈಗೊಂಡಿದ್ದಾರೆ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments