Wednesday, February 5, 2025
HomeNewsಠಾಣೆಯಲ್ಲೇ Police ಮೇಲೆ ಹಲ್ಲೆ ಮಾಡಿದ ಭೂಪ.!
spot_img
spot_img
spot_img
spot_img

ಠಾಣೆಯಲ್ಲೇ Police ಮೇಲೆ ಹಲ್ಲೆ ಮಾಡಿದ ಭೂಪ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಮಂಡ್ಯ : ಠಾಣೆಯ ಮುಂದೆ ವ್ಯಕ್ತಿಯೋರ್ವ ಪೊಲೀಸರ ಮೇಲೆಯೇ ಹಲ್ಲೆ (assault) ನಡೆಸಿದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ (Pandavapur in Mandya district) ನಗರದಲ್ಲಿ ನಡೆದಿದೆ.

ಮಾಜಿ ಪುರಸಭೆ ಅಧ್ಯಕ್ಷನ (Former Municipal Chairman) ಮಗ ಸಾಗರ್​ ಎಂಬಾತ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಇದೀಗ ಪೊಲೀಸರು ಹಲ್ಲೆ ನಡೆಸಿದ ಆರೋಪಿಯನ್ನು ವಶಕ್ಕೆ (custody) ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ವೇಗವಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್; ಮುಂದೆನಾಯ್ತು? Video ನೋಡಿ.!

ಆರೋಪಿ ಸಾಗರ್​ ವಿರುದ್ದ ಜಮೀನು ವಿಚಾರವಾಗಿ ದೂರು ಬಂದ ಹಿನ್ನಲೆ ಪೊಲೀಸರು ಆತನನ್ನು ಠಾಣೆಗೆ ಕರೆಸಿದ್ದರು ಎನ್ನಲಾಗಿದೆ. ಇಂದು ಸಾಗರ್ ವಿಚಾರಣೆಗೆ ಹಾಜರಾಗಿದ್ದ.

ಈ ವೇಳೆ ಠಾಣೆಯಲ್ಲಿ ಸಾಗರ್ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು ಎಂದು ತಿಳಿದು ಬಂದಿದೆ.

ಹಿಂದಿನ ಸುದ್ದಿ : Special News : ಗುಡ್ಡದಂತ ಸಮಸ್ಯೆ ಬಂದರೂ ಎಳ್ಳಷ್ಟು ಹೆದರಿಕೊಳ್ಳದವರಿಗೆ ಧೈರ್ಯ, ವಿಶ್ವಾಸ ಬರೋದೆಲ್ಲಿಂದ.?

ಜನಸ್ಪಂದನ ನ್ಯೂಸ್, ಡೆಸ್ಕ್ : ಜೀವನದಲ್ಲಿ ಎಷ್ಟೇ ಕಷ್ಟಗಳು (Problems) ಬಂದರೂ ಅದನ್ನು ಎದುರಿಸಿ ಮುಂದೆ ಬರುವ ಕೆಲವು ಜನರು ಎಲ್ಲರಿಗೂ ಸ್ಪೂರ್ತಿ ಇದ್ದಂತೆ. ಯಾವುದೇ ಸಮಸ್ಯೆ ಇರಲಿ ಎಲ್ಲಿಲ್ಲದ ಆತ್ಮವಿಶ್ವಾಸ (Confidence) ಮತ್ತು ಮುಖದಲ್ಲಿ ಮಂದಹಾಸ ಇದ್ದೇ ಇರುತ್ತದೆ. ಅವರು ಮಾನಸಿಕವಾಗಿ ಧೈರ್ಯವಂತರಾಗಿದ್ದರೆ (mentally brave) ಯಾವುದೇ ಸಮಸ್ಯೆಗಳನ್ನು ತುಂಬಾ ಸರಳವಾಗಿ ನಿಭಾಯಿಸುವ ಶಕ್ತಿ ಅವರಲ್ಲಿರುತ್ತದೆ.

ಇದನ್ನು ಓದಿ : ಸಂಚಲನ ಸೃಷ್ಟಿಸಿದ ಒಂದೇ ಕೆರೆಯಲ್ಲಿ PSI, ಲೇಡಿ ಕಾನ್ಸ್‌ಟೇಬಲ್ ಮತ್ತು ಓರ್ವ ಯುವಕನ ಶವ ಪತ್ತೆ ಪ್ರಕರಣ.!

* ಹೆಚ್ಚಿನ ಆಂತರಿಕ ಶಕ್ತಿ ಹೊಂದಿರುವ ಜನರು (People with high inner strength) ದುರ್ಬಲರಾಗಿರುವುದು ಎಂದರೆ ಹೇಡಿತನದ ಲಕ್ಷಣವಲ್ಲ ಎಂಬುದನ್ನು ಅರಿತುಕೊಂಡಿರುತ್ತಾರೆ. ಇವರು ತಮ್ಮ ದುರ್ಬಲತೆಯನ್ನು (weak) ಸ್ವೀಕರಿಸುತ್ತಾರೆ. ಇದು ಧೈರ್ಯ ಮತ್ತು ವಿಶ್ವಾಸಾರ್ಹತೆಗೆ ಸಾಕ್ಷಿ ಎನ್ನಬಹುದು.

* ಸಂಪರ್ಕಗಳನ್ನು ಬೆಳೆಸಿಕೊಳ್ಳುವುದು ಈ ಜನರ ಉತ್ತಮ ಅಭ್ಯಾಸವಾಗಿದೆ.ಇವರು ಸಂಪರ್ಕಗಳನ್ನು ಬೆಳೆಸಿಕೊಂಡು, ತಮ್ಮ ಸಂಬಂಧಗಳನ್ನು ಗೌರವಿಸುತ್ತಾರೆ. ಅಲ್ಲದೇ ಅದನ್ನು ಉಳಿಸಿಕೊಳ್ಳಲು ಸಮಯ ಹಾಗೂ ಶಕ್ತಿಯನ್ನು ವಿನಿಯೋಗಿಸುತ್ತಾರೆ (expends energy). ಕುಟುಂಬ ಹಾಗೂ ಸ್ನೇಹಿತರ ಬಾಂಧವ್ಯ ಬೆಳೆಸಿಕೊಳ್ಳುವುದರಿಂದ ಅವರಲ್ಲಿ ಜೀವನದ ಸವಾಲುಗಳನ್ನು ಎದುರಿಸುವ ಶಕ್ತಿಯು‌ ಹೆಚ್ಚುತ್ತದೆ.

* ಆಂತರಿಕ ಶಕ್ತಿಯನ್ನು ಹೊಂದಿರುವ ವ್ಯಕ್ತಿಗಳು ಅನಾನುಕೂಲತೆಯ ಬಗ್ಗೆ ತಲೆನೆ ಕೆಡಿಸಿಕೊಳ್ಳುವುದಿಲ್ಲ. ಎಂತಹ ಪರಿಸರಗಳಲ್ಲಿಯೂ ಅವರು ಹೊಂದಿಕೊಂಡು ತಮಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾರೆ. ಕಷ್ಟವೆಂದು ಹೇಳುತ್ತಾ ಕುಳಿತುಕೊಳ್ಳದೇ ಅದನ್ನು ಹಿಮ್ಮೆಟ್ಟಿಸುವುದು (reversing) ಹೇಗೆಂದು ಯೋಚಿಸಿ, ಪರಿಹಾರ ಕಂಡುಕೊಳ್ಳುತ್ತಾರೆ.

* ಹೆಚ್ಚಿನ ಆಂತರಿಕ ಶಕ್ತಿಯನ್ನು ಹೊಂದಿರುವವರು ಸಾವಧಾನವಾಗಿರುತ್ತಾರೆ. ತಮ್ಮ ಭಾವನೆಗಳು, ಆಲೋಚನೆಗಳು ಮತ್ತು ಕ್ರಿಯೆಗಳ (feelings, thoughts and actions) ಬಗ್ಗೆ ತಿಳಿದುಕೊಂಡಿರುತ್ತಾರೆ.‌ ಅಂತಹವರು ತಮ್ಮೊಳಗೆ ಶಾಂತ ಮನೋಭಾವ ಬೆಳೆಸಿಕೊಂಡಿರುತ್ತಾರೆ.

ಇದನ್ನು ಓದಿ : Special news : ಗುಡ್ಡದಂತ ಸಮಸ್ಯೆ ಬಂದರೂ ಎಳ್ಳಷ್ಟು ಹೆದರಿಕೊಳ್ಳದವರಿಗೆ ಧೈರ್ಯ, ವಿಶ್ವಾಸ ಬರೋದೆಲ್ಲಿಂದ.?

* ಈ ಜನರು ಕೃತಜ್ಞತೆಯ ಭಾವವನ್ನು (A sense of gratitude) ಹೊಂದಿರುತ್ತಾರೆ. ಕೃತಜ್ಞತೆಯು ನಿಮಗೆ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಲು ಸಹಾಯ ಮಾಡುತ್ತದೆ. ಜೀವನದಲ್ಲಿ ಸರಳ ಸಂತೋಷಗಳನ್ನು ಹುಡುಕುತ್ತಾರೆ. ತಮ್ಮಲ್ಲಿಲ್ಲ ಎಂದು ತಲೆಕೆಡಿಕೊಳ್ಳುವುದರ ಬದಲಿಗೆ ತಮ್ಮಲ್ಲಿ ಏನಿದೆಯೋ ಅದರಲ್ಲಿ ಸಂತೋಷವನ್ನು ಕಾಣುತ್ತಾರೆ.

* ಆಂತರಿಕವಾಗಿ ಗಟ್ಟಿಯಾಗಿರುವುದು ಇವರ ಇನ್ನೊಂದು ಗುಣ. ತಮ್ಮ ಮಾನಸಿಕ ಗಟ್ಟಿತನವನ್ನು ನಿರ್ಮಿಸುವ ಕೆಲಸ ಮಾಡುತ್ತಾರೆ. ಇದು ತೊಂದರೆಗಳನ್ನು ಹಿಮ್ಮೆಟ್ಟಿಸಲು ಧೈರ್ಯ ನೀಡುತ್ತದೆ.

* ಆಂತರಿಕ ಶಕ್ತಿಯನ್ನು ಹೊಂದಿರುವ ಜನರು ಆಳವಾದ ಆಂತರಿಕ ಶಕ್ತಿಯನ್ನು (Deep inner strength) ಹೊಂದಿರುತ್ತಾರೆ. ಈ ಜನರು ತಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಕುರಿತು ಕಾಳಜಿ ವಹಿಸುತ್ತಾರೆ. ಜೀವನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅವರು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಗಟ್ಟಿಯಾಗಿರುತ್ತಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!