Saturday, January 18, 2025
HomeViral Videoವೇಗವಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್; ಮುಂದೆನಾಯ್ತು? Video ನೋಡಿ.!
spot_img

ವೇಗವಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್; ಮುಂದೆನಾಯ್ತು? Video ನೋಡಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬೈಕ್ ಒಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ (As a result of the bike hitting a divider) ಇಬ್ಬರು ಸಾವಿಗೀಡಾದ ಘಟನೆ ಹೈದರಾಬಾದ್‌ನ ಮಾದಾಪುರ ಜಿಲ್ಲೆಯಲ್ಲಿ (Madapur District, Hyderabad) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಶುಕ್ರವಾರ ರಾತ್ರಿ ಅಯ್ಯಪ್ಪ ಸೊಸೈಟಿ ಸಮೀಪ ಕುಡಿದ ಮತ್ತಿನಲ್ಲಿ ಬೈಕ್ ಓಡಿಸುತ್ತಿದ್ದ ವೇಳೆ ಈ‌ ಅವಘಡ ಸಂಭವಿಸಿದೆ.

ಸಾಫ್ಟ್‌ವೇರ್ ಇಂಜಿನಿಯರ್‌ಗಳಾದ ರಘು ಬಾಬು ಮತ್ತು ಆಕಾಂಶ್ ಅಪಘಾತದಲ್ಲಿ ಮೃತಪಟ್ಟಿದ್ದು, ಇವರು ಬೋರಬಂಡಾ ಜಿಲ್ಲೆಯವರು ಎಂದು ವರದಿಯಿಂದ ತಿಳಿದು ಬಂದಿದೆ.

ಇನ್ನೂ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನು ಓದಿ : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ ಹಿನ್ನಲೆ : ನಾಳೆ (ಡಿ. 27) ಶಾಲಾ ಕಾಲೇಜುಗಳಿಗೆ ರಜೆ.!

ವೇಗವಾಗಿ ಬಂದ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದ ತಕ್ಷಣ ಬೆಂಕಿಗೆ ಆಹುತಿಯಾಗಿರುವುದನ್ನು (caught fire) ವಿಡಿಯೋದಲ್ಲಿ ಕಾಣಬಹುದು.

ಅಪಘಾತದ ವೇಳೆ ಬೈಕ್‌ ಡಿವೈಡರ್‌ಗೆ ಗುದ್ದಿದ ರಭಸಕ್ಕೆ ಬೈಕ್‌ನಿಂದ ಹಾರಿ ಸವಾರರಿಬ್ಬರು ಬಿದ್ದಿದ್ದಾರೆ. ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದರು ಎಂದು ವರದಿ ತಿಳಿಸಿದೆ.

ಹಿಂದಿನ ಸುದ್ದಿ : Special News : ಗುಡ್ಡದಂತ ಸಮಸ್ಯೆ ಬಂದರೂ ಎಳ್ಳಷ್ಟು ಹೆದರಿಕೊಳ್ಳದವರಿಗೆ ಧೈರ್ಯ, ವಿಶ್ವಾಸ ಬರೋದೆಲ್ಲಿಂದ.?

ಜನಸ್ಪಂದನ ನ್ಯೂಸ್, ಡೆಸ್ಕ್ : ಜೀವನದಲ್ಲಿ ಎಷ್ಟೇ ಕಷ್ಟಗಳು (Problems) ಬಂದರೂ ಅದನ್ನು ಎದುರಿಸಿ ಮುಂದೆ ಬರುವ ಕೆಲವು ಜನರು ಎಲ್ಲರಿಗೂ ಸ್ಪೂರ್ತಿ ಇದ್ದಂತೆ. ಯಾವುದೇ ಸಮಸ್ಯೆ ಇರಲಿ ಎಲ್ಲಿಲ್ಲದ ಆತ್ಮವಿಶ್ವಾಸ (Confidence) ಮತ್ತು ಮುಖದಲ್ಲಿ ಮಂದಹಾಸ ಇದ್ದೇ ಇರುತ್ತದೆ. ಅವರು ಮಾನಸಿಕವಾಗಿ ಧೈರ್ಯವಂತರಾಗಿದ್ದರೆ (mentally brave) ಯಾವುದೇ ಸಮಸ್ಯೆಗಳನ್ನು ತುಂಬಾ ಸರಳವಾಗಿ ನಿಭಾಯಿಸುವ ಶಕ್ತಿ ಅವರಲ್ಲಿರುತ್ತದೆ.

ಇದನ್ನು ಓದಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 9,871 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ Green signal.!

* ಹೆಚ್ಚಿನ ಆಂತರಿಕ ಶಕ್ತಿ ಹೊಂದಿರುವ ಜನರು (People with high inner strength) ದುರ್ಬಲರಾಗಿರುವುದು ಎಂದರೆ ಹೇಡಿತನದ ಲಕ್ಷಣವಲ್ಲ ಎಂಬುದನ್ನು ಅರಿತುಕೊಂಡಿರುತ್ತಾರೆ. ಇವರು ತಮ್ಮ ದುರ್ಬಲತೆಯನ್ನು (weak) ಸ್ವೀಕರಿಸುತ್ತಾರೆ. ಇದು ಧೈರ್ಯ ಮತ್ತು ವಿಶ್ವಾಸಾರ್ಹತೆಗೆ ಸಾಕ್ಷಿ ಎನ್ನಬಹುದು.

* ಸಂಪರ್ಕಗಳನ್ನು ಬೆಳೆಸಿಕೊಳ್ಳುವುದು ಈ ಜನರ ಉತ್ತಮ ಅಭ್ಯಾಸವಾಗಿದೆ.ಇವರು ಸಂಪರ್ಕಗಳನ್ನು ಬೆಳೆಸಿಕೊಂಡು, ತಮ್ಮ ಸಂಬಂಧಗಳನ್ನು ಗೌರವಿಸುತ್ತಾರೆ. ಅಲ್ಲದೇ ಅದನ್ನು ಉಳಿಸಿಕೊಳ್ಳಲು ಸಮಯ ಹಾಗೂ ಶಕ್ತಿಯನ್ನು ವಿನಿಯೋಗಿಸುತ್ತಾರೆ (expends energy). ಕುಟುಂಬ ಹಾಗೂ ಸ್ನೇಹಿತರ ಬಾಂಧವ್ಯ ಬೆಳೆಸಿಕೊಳ್ಳುವುದರಿಂದ ಅವರಲ್ಲಿ ಜೀವನದ ಸವಾಲುಗಳನ್ನು ಎದುರಿಸುವ ಶಕ್ತಿಯು‌ ಹೆಚ್ಚುತ್ತದೆ.

* ಆಂತರಿಕ ಶಕ್ತಿಯನ್ನು ಹೊಂದಿರುವ ವ್ಯಕ್ತಿಗಳು ಅನಾನುಕೂಲತೆಯ ಬಗ್ಗೆ ತಲೆನೆ ಕೆಡಿಸಿಕೊಳ್ಳುವುದಿಲ್ಲ. ಎಂತಹ ಪರಿಸರಗಳಲ್ಲಿಯೂ ಅವರು ಹೊಂದಿಕೊಂಡು ತಮಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾರೆ. ಕಷ್ಟವೆಂದು ಹೇಳುತ್ತಾ ಕುಳಿತುಕೊಳ್ಳದೇ ಅದನ್ನು ಹಿಮ್ಮೆಟ್ಟಿಸುವುದು (reversing) ಹೇಗೆಂದು ಯೋಚಿಸಿ, ಪರಿಹಾರ ಕಂಡುಕೊಳ್ಳುತ್ತಾರೆ.

* ಹೆಚ್ಚಿನ ಆಂತರಿಕ ಶಕ್ತಿಯನ್ನು ಹೊಂದಿರುವವರು ಸಾವಧಾನವಾಗಿರುತ್ತಾರೆ. ತಮ್ಮ ಭಾವನೆಗಳು, ಆಲೋಚನೆಗಳು ಮತ್ತು ಕ್ರಿಯೆಗಳ (feelings, thoughts and actions) ಬಗ್ಗೆ ತಿಳಿದುಕೊಂಡಿರುತ್ತಾರೆ.‌ ಅಂತಹವರು ತಮ್ಮೊಳಗೆ ಶಾಂತ ಮನೋಭಾವ ಬೆಳೆಸಿಕೊಂಡಿರುತ್ತಾರೆ.

ಇದನ್ನು ಓದಿ : 150 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ ; Chikkodi ಮೂಲದ ಯೋಧ ಸೇರಿ ಐವರು ಹುತಾತ್ಮ.!

* ಈ ಜನರು ಕೃತಜ್ಞತೆಯ ಭಾವವನ್ನು (A sense of gratitude) ಹೊಂದಿರುತ್ತಾರೆ. ಕೃತಜ್ಞತೆಯು ನಿಮಗೆ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಲು ಸಹಾಯ ಮಾಡುತ್ತದೆ. ಜೀವನದಲ್ಲಿ ಸರಳ ಸಂತೋಷಗಳನ್ನು ಹುಡುಕುತ್ತಾರೆ. ತಮ್ಮಲ್ಲಿಲ್ಲ ಎಂದು ತಲೆಕೆಡಿಕೊಳ್ಳುವುದರ ಬದಲಿಗೆ ತಮ್ಮಲ್ಲಿ ಏನಿದೆಯೋ ಅದರಲ್ಲಿ ಸಂತೋಷವನ್ನು ಕಾಣುತ್ತಾರೆ.

* ಆಂತರಿಕವಾಗಿ ಗಟ್ಟಿಯಾಗಿರುವುದು ಇವರ ಇನ್ನೊಂದು ಗುಣ. ತಮ್ಮ ಮಾನಸಿಕ ಗಟ್ಟಿತನವನ್ನು ನಿರ್ಮಿಸುವ ಕೆಲಸ ಮಾಡುತ್ತಾರೆ. ಇದು ತೊಂದರೆಗಳನ್ನು ಹಿಮ್ಮೆಟ್ಟಿಸಲು ಧೈರ್ಯ ನೀಡುತ್ತದೆ.

* ಆಂತರಿಕ ಶಕ್ತಿಯನ್ನು ಹೊಂದಿರುವ ಜನರು ಆಳವಾದ ಆಂತರಿಕ ಶಕ್ತಿಯನ್ನು (Deep inner strength) ಹೊಂದಿರುತ್ತಾರೆ. ಈ ಜನರು ತಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಕುರಿತು ಕಾಳಜಿ ವಹಿಸುತ್ತಾರೆ. ಜೀವನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅವರು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಗಟ್ಟಿಯಾಗಿರುತ್ತಾರೆ.

 

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!