ಜನಸ್ಪಂದನ ನ್ಯೂಸ್, ನವದೆಹಲಿ : ದೆಹಲಿಯ ಪ್ರೇಮ್ ನಗರದಲ್ಲಿ ಆರು ವರ್ಷದ ಬಾಲಕನ ಮೇಲೆ ಪಿಟ್ಬುಲ್ (Pitbull) ನಾಯಿ ದಾಳಿ ಮಾಡಿ ತೀವ್ರ ಗಾಯ ಮಾಡಿದೆ. ಈ ಘಟನೆ ಭಾನುವಾರ ಸಂಜೆ ಬಾಲಕ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಸಂಭವಿಸಿದೆ.
ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋದಲ್ಲಿ ಕಾಣಿಸಿರುವಂತೆ ಪಿಟ್ಬುಲ್ (Pitbull) ನಾಯಿ ಬಾಲಕನ ಕಡೆಗೆ ಮತ್ತೇ ಮತ್ತೇ ನುಗ್ಗಿ ಅವನನ್ನು ಬೆನ್ನಟ್ಟಿ ಕಚ್ಚುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಇದನ್ನು ಓದಿ : Free ಟಿಕೆಟ್ ಪಡೆದು ಮಾರ್ಗ ಮಧ್ಯೆ ಇಳಿದ ಮಹಿಳೆ ; ಪ್ರಶ್ನಿಸಿದ ಕಂಡಕ್ಟರ್ ಮೇಲೆ ಹಲ್ಲೆ ; ವಿಡಿಯೋ ವೈರಲ್.
ಮಗು ಓಡಲು ಪ್ರಯತ್ನಿಸಿದರೂ, ಪಿಟ್ಬುಲ್ (Pitbull) ನಾಯಿ ಮಾತ್ರ ಅವನನ್ನು ಹಿಡಿದು ಎಳೆದುಕೊಂಡು ಹೋಗಲು ಯತ್ನಿಸಿದೆ. ಸ್ಥಳದಲ್ಲಿದ್ದ ಮಹಿಳೆಯರು ನಾಯಿ ನಿಯಂತ್ರಿಸಲು ಮುಂದಾದರೂ ಸಹ ಯಾವುದೇ ಪ್ರತಿಫಲ ದೊರೆಯಲಿಲ್ಲ. ಕೊನೆಗೆ ಪುರುಷರು ಕೂಡ ಸಹಾಯಕ್ಕೆ ಬಂದು ಬಾಲಕನನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಾರೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಂತೆ, ಪಿಟ್ಬುಲ್ (Pitbull) ನಾಯಿ ರಾಜೇಶ್ ಪಾಲ್ (50) ಎಂಬುವವರಿಗೆ ಸೇರಿದಾಗಿದ್ದು, ಆಕಸ್ಮಿಕವಾಗಿ ಮನೆಯ ಹೊರಗೆ ಬಂದು ಬಾಲಕನ ಮೇಲೆ ದಾಳಿ ಮಾಡಿದೆ. ಪೊಲೀಸರು ರಾಜೇಶ್ ಪಾಲ್ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನು ಓದಿ : IAS ಮಹಾಂತೇಶ್ ಬೀಳಗಿ ಕಾರು ಅಪಘಾತದಲ್ಲಿ ದುರ್ಮರಣ.
ಸ್ಥಳೀಯರು ಮತ್ತು ನೆರೆಹೊರೆಯವರು ಬಾಲಕನ ಗುಣಮುಖತೆಗೆ ವಿನಂತಿ ಮಾಡುತ್ತಿದ್ದು, ಈ ಘಟನೆ ಪಿಟ್ಬುಲ್ ನಾಯಿ ಮತ್ತು ಇತರ ಭಾನುವಾರ ಸಂಜೆ ಆಟವಾಡುವ ಮಕ್ಕಳ ಬಗ್ಗೆ ಎಚ್ಚರಿಕೆಯ ಸಂಕೇತವಾಗಿದೆ.
ಪಿಟ್ಬುಲ್ (Pitbull) ನಾಯಿಯ ದಾಳಿಯ ವಿಡಿಯೋ :
https://twitter.com/i/status/1992946188971385017
Disclaimer : ಈ ಸುದ್ದಿ ಅಧಿಕೃತ ಸ್ಥಳೀಯ ವರದಿ ಮತ್ತು ಪೊಲೀಸರ ಪ್ರಾಥಮಿಕ ಹೇಳಿಕೆ ಆಧಾರಿತವಾಗಿದೆ. ಯಾವುದೇ ವರದಿಗಳಲ್ಲಿ ಬದಲಾವಣೆ ಅಥವಾ ತಿದ್ದುಪಡಿ ಸಾಧ್ಯ.
IAS ಮಹಾಂತೇಶ್ ಬೀಳಗಿ ಕಾರು ಅಪಘಾತದಲ್ಲಿ ದುರ್ಮರಣ.

ಜನಸ್ಪಂದನ ನ್ಯೂಸ್, ಕಲಬುರಗಿ : ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (IAS Mahantesh Bilagi) ರಸ್ತೆ ಅಪಘಾತದಲ್ಲಿ ದುರಂತವಾಗಿ ಸಾವನ್ನಪ್ಪಿದ್ದಾರೆ.
ಈ ದುರ್ಘಟನೆಯಲ್ಲಿ ಅವರ ಸಹೋದರರಾದ ಶಂಕರ ಬೀಳಗಿ ಮತ್ತು ಈರಣ್ಣ ಶಿರಸಂಗಿ ಸ್ಥಳದಲ್ಲೇ ಮರಣ ಹೊಂದಿದ್ದಾರೆ.
ಇದನ್ನು ಓದಿ : “ಶಾಲಾ ಕಟ್ಟಡದಿಂದ ಹಾರಿ 8ನೇ ತರಗತಿ Student ಆತ್ಮಹತ್ಯೆ ; ಪೊಲೀಸರಿಂದ ತನಿಖೆ”.
ಎಲ್ಲಿ ಮತ್ತು ಹೇಗೆ ಅಪಘಾತ ಸಂಭವಿಸಿತು?
ವಿಜಯಪುರದಿಂದ ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕಾಗಿ ಕಲಬುರಗಿಗೆ ತೆರಳುತ್ತಿದ್ದ ವೇಳೆ, ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಕಾರು ಪಲ್ಟಿಯಾಗಿ ಘಟನೆ ನಡೆದಿರುವ ಮಾಹಿತಿ ದೊರೆತಿದೆ.
ಹಠಾತ್ ರಸ್ತೆ ಮೇಲೆ ಅಡ್ಡ ಬಂದ ಶ್ವಾನವನ್ನು ತಪ್ಪಿಸಲು ಪ್ರಯತ್ನಿಸಿದಾಗ, KA 04 NC 7982 ನಂಬರಿನ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಚಿಕಿತ್ಸೆಯ ವೇಳೆ ಪ್ರಾಣ ಕಳೆದುಕೊಂಡ IAS ಅಧಿಕಾರಿ :
ಅಪಘಾತದ ನಂತರ IAS ಮಹಾಂತೇಶ್ ಬೀಳಗಿಯನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.
ಇದನ್ನು ಓದಿ : ಬ್ರೇಕಿಂಗ್ : ವಂದೇ ಭಾರತ್ ರೈಲು ದುರಂತ ; Lover ಆತ್ಮಹತ್ಯೆ ಶಂಕೆ.
ಮಹಾಂತೇಶ್ ಬೀಳಗಿ ಯಾರು?
- ಜನನ: 27 ಮಾರ್ಚ್ 1974
- ಕೇಡರ್ : 2012ರ ಕರ್ನಾಟಕ IAS ಕೇಡರ್
- ಪದವಿ : ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ
- ಹಿಂದಿನಿಂದ ಬೆಸ್ಕಾಂ (BESCOM) MD ಆಗಿ ಕಾರ್ಯನಿರ್ವಹಿಸಿದ್ದರು.
- ದಾವಣಗೆರೆ, ಉಡುಪಿ ಸೇರಿದಂತೆ ರಾಜ್ಯದ ಹಲವೆಡೆ ಸೇವೆ ಸಲ್ಲಿಸಿದ್ದರು.
Disclaimer : ಈ ಮಾಹಿತಿ ಅಧಿಕೃತ ಮೂಲಗಳು ಮತ್ತು ಸ್ಥಳೀಯ ವರದಿಗಳ ಆಧಾರದ ಮೇಲೆ ಸಂಗ್ರಹಿಸಲಾಗಿದೆ. ತನಿಖಾ ವಿವರಗಳು ಅಧಿಕೃತ ದೃಢೀಕರಣಕ್ಕೆ ಒಳಪಟ್ಟಿವೆ. ಯಾವುದೇ ಸಂಶೋಧನಾ ಫಲಿತಾಂಶ ಅಥವಾ ಅಧಿಕೃತ ಪ್ರಕಟಣೆ ಹೊರಬಂದಲ್ಲಿ ಮಾಹಿತಿಯಲ್ಲಿ ಬದಲಾವಣೆ ಸಂಭವಿಸಬಹುದು.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ





