ಶುಕ್ರವಾರ, ನವೆಂಬರ್ 28, 2025

Janaspandhan News

HomeViral Videoಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!
spot_img
spot_img
spot_img

ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!

- Advertisement -

ಜನಸ್ಪಂದನ ನ್ಯೂಸ್‌, ಅಹಮದಾಬಾದ್‌ : ಸಾಮಾನ್ಯವಾಗಿ ಜ್ಯುವೆಲ್ಲರಿ ಅಂಗಡಿಗಳಲ್ಲಿ ಚಿನ್ನಾಭರಣ ಕಳ್ಳತನದ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ಬಾರಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಚಿನ್ನಾಭರಣ ಕಳ್ಳತನದ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಖಾರದ (Chilli) ಪುಡಿ ಹಿಡಿದು ಬಂದ ಮಹಿಳೆಯೋರ್ವಳು ಜ್ಯುವೆಲ್ಲರಿ ಅಂಗಡಿಯನ್ನು ದರೋಡೆ ಮಾಡಲು ಯತ್ನಿಸಿ, ಮಾಲೀಕನ ಕೈಗೆ ಸಿಕ್ಕಿ ಬಿದ್ದು ಸರಿಯಾಗಿ ಬಾರಿಸಿಕೊಂಡಿದ್ದಾಳೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

MES ಮುಖಂಡನ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಸಿಪಿಐಗೆ ವರ್ಗಾವಣೆಯ ಶಿಕ್ಷೆ.

ಮಹಿಳೆಯೊಬ್ಬಳು ನವೆಂಬರ್ 3ರಂದು ಮಧ್ಯಾಹ್ನ ಸುಮಾರು 12.30ರ ಸುಮಾರಿಗೆ ಅಹಮದಾಬಾದ್‌ನ ರಾಣಿಪ್ ಪ್ರದೇಶದ ಜ್ಯುವೆಲ್ಲರಿ ಅಂಗಡಿಗೆ ಪ್ರವೇಶಿಸಿದ್ದಾಳೆ. ಗಾಜಿನ ಬಾಗಿಲು ತೆರೆದು ಒಳಗೆ ಬಂದ ಕೂಡಲೇ ಆಕೆ ಕೈಯಲ್ಲಿದ್ದ ಖಾರದ (Chilli) ಪುಡಿಯನ್ನು ಮಾಲೀಕರ ಮುಖದ ಮೇಲೆ ಎರಚಲು ಪ್ರಯತ್ನಿಸಿದ್ದಾಳೆ.

ಆದರೆ ಆಕೆಯ ಪ್ರಯತ್ನ ವಿಫಲವಾಗಿ ಮಾಲೀಕರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಅಷ್ಟೆ ಅಲ್ಲದೇ ಮಾಲೀಕ ಖಾರದ (Chilli) ಪುಡಿ ಎರಚಿದ ಮಹಿಳೆಯ ಕೈ ಹಿಡಿದು ಸರಿಯಾಗಿ ಸುಮಾರು 20 ಬಾರಿ ಬಾರಿಸಿದ್ದಾನೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ಘಟನೆಯ ಸಂಪೂರ್ಣ ದೃಶ್ಯವು ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದೆ. ಕೇವಲ 25 ಸೆಕೆಂಡುಗಳ ವೀಡಿಯೋದಲ್ಲಿ ಮಾಲೀಕನ ಧೈರ್ಯ ಮತ್ತು ತುರ್ತು ಪ್ರತಿಕ್ರಿಯೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಖಾರದ (Chilli) ಪುಡಿ ಎರಚಿದ ಘಟನೆಯ ಬಳಿಕ ಅಂಗಡಿ ಮಾಲೀಕರು ಯಾವುದೇ ಅಧಿಕೃತ ದೂರು ದಾಖಲಿಸಲು ನಿರಾಕರಿಸಿದ್ದರೂ, ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Kiwi ಹಣ್ಣು ‌ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.

ರಾಣಿಪ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೇತನ್ ವ್ಯಾಸ್, “ಮಾಲೀಕರಿಂದ ದೂರು ಪಡೆಯಲು ಎರಡು ಬಾರಿ ಭೇಟಿಯಾಗಿದ್ದೇವೆ. ಆದರೂ ಅವರು ದೂರು ನೀಡಲು ನಿರಾಕರಿಸಿದ್ದಾರೆ. ಈಗ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮಹಿಳೆಯ ಗುರುತು ಪತ್ತೆ ಮಾಡಲು ಕ್ರಮ ಕೈಗೊಂಡಿದ್ದೇವೆ,” ಎಂದು ಹೇಳಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವರು ಮಾಲೀಕರ ಧೈರ್ಯಕ್ಕೆ ಶ್ಲಾಘನೆ ಸಲ್ಲಿಸುತ್ತಿದ್ದು, ಕೆಲವರು “ ಖಾರದ (Chilli) ಪುಡಿ ಎರಚುವ ದರೋಡೆಗಾರರಿಗೆ ಕಠಿಣ ಶಿಕ್ಷೆ ಅಗತ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌; ವಿಡಿಯೋ ವೈರಲ್.!

ಇದಾದ ಬಳಿಕ ಪೊಲೀಸರು ಮಹಿಳೆಯ ಗುರುತು ಪತ್ತೆ ಮಾಡಲು ತನಿಖೆ ಮುಂದುವರೆಸಿದ್ದಾರೆ. ಮತ್ತೊಂದೆಡೆ, ಜನರು ಇಂತಹ ಘಟನೆಗಳ ವಿರುದ್ಧ ಎಚ್ಚರದಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಖಾರದ (Chilli) ಪುಡಿ ಹಿಡಿದು ಬಂದ ಮಹಿಳೆಯ ವಿಡಿಯೋ :


Kiwi ಹಣ್ಣು ‌ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.

ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!

ಜನಸ್ಪಂದನ ನ್ಯೂಸ್‌, ಆರೋಗ್ಯ : ಆರೋಗ್ಯ ಪ್ರಿಯರಿಗೆ ಕಿವಿ ಹಣ್ಣು ಹೊಸದಾಗಿ ಪರಿಚಯವಾದರೂ, ಇದರ ಪೌಷ್ಟಿಕತೆ ಅಚ್ಚರಿ ಮೂಡಿಸುತ್ತದೆ. ಕಿವಿ ಹಣ್ಣು (Kiwi fruites) ವಿಟಮಿನ್‌ಗಳು, ಖನಿಜಗಳು ಮತ್ತು ಆಂಟಿ-ಆಕ್ಸಿಡೆಂಟ್ಸ್‌ನಿಂದ ತುಂಬಿದ ಹಣ್ಣಾಗಿದ್ದು, ದೇಹದ ಒಟ್ಟು ಆರೋಗ್ಯದ ಜೊತೆಗೆ ಕಣ್ಣುಗಳ ಆರೋಗ್ಯಕ್ಕೂ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ.

ಪ್ರತಿದಿನ ಒಂದು ಕಿವಿ ಹಣ್ಣು (Kiwi fruites) ಸೇವಿಸುವುದರಿಂದ ಕಣ್ಣಿನ ದೃಷ್ಟಿ ಹೀನತೆ, ಕಣ್ಣಿನ ಪೊರೆ ಹಾಗೂ ಅನೇಕ ದೃಷ್ಟಿ ಸಂಬಂಧಿತ ಸಮಸ್ಯೆಗಳನ್ನು ತಡೆಯಬಹುದು. ಕಿವಿಯಲ್ಲಿರುವ ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಕಣ್ಣುಗಳ ರಕ್ತ ಪರಿಚಲನೆಯನ್ನು ಉತ್ತಮಗೊಳಿಸಿ ನರಮಂಡಲವನ್ನು ಬಲಪಡಿಸುತ್ತವೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ವಯಸ್ಸಾದಂತೆ ದೃಷ್ಟಿ ಕಡಿಮೆಯಾಗುವುದು ಸಹಜ, ಆದರೆ ಆಹಾರದಲ್ಲಿ ಕಿವಿ ಸೇರಿಸಿಕೊಂಡರೆ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಪೋಷಕಾಂಶಗಳು ಕಣ್ಣುಗಳ ರೆಟಿನಾವನ್ನು ರಕ್ಷಿಸುತ್ತವೆ. ಈ ಪೋಷಕಾಂಶಗಳು ದೃಷ್ಟಿ ಶಕ್ತಿಯನ್ನು ಕಾಪಾಡಿ, ಕಣ್ಣುಗಳನ್ನು ತೇಜಸ್ಸಿನಿಂದ ಕಂಗೊಳಿಸುವಂತೆ ಇಡುತ್ತವೆ.

ಕಿವಿ ಹಣ್ಣಿನ (Kiwi fruites) ರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಕಣ್ಣಿನ ಉರಿಯೂತ, ಕಿರಿಕಿರಿ ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡುತ್ತವೆ. ಹಣ್ಣುಗಳಲ್ಲಿ ಕಿತ್ತಳಿಗಿಂತ ಎರಡು ಪಟ್ಟು ಹೆಚ್ಚು ಪ್ರಮಾಣದ ವಿಟಮಿನ್ ಸಿ ಇರುವುದರಿಂದ, ಕಿವಿ ಹಣ್ಣು ಕಣ್ಣಿನ ನೈಸರ್ಗಿಕ ರಕ್ಷಣಾ ಕವಚದಂತಿದೆ.

“ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”

ಇದಲ್ಲದೆ, ಕಿವಿ ಹಣ್ಣಿನಲ್ಲಿರುವ (Kiwi fruites) ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಿ, ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಪೊಟ್ಯಾಸಿಯಮ್ ಪ್ರಮಾಣ ಹೆಚ್ಚು ಮತ್ತು ಕ್ಯಾಲೋರಿ ಕಡಿಮೆ ಇರುವುದರಿಂದ ತೂಕ ಇಳಿಸಿಕೊಳ್ಳುವವರಿಗೂ ಇದು ಉತ್ತಮ ಆಯ್ಕೆ.

ತಾಮ್ರ ಅಂಶ ಹೆಚ್ಚಿರುವುದರಿಂದ ಕಿವಿ ಹಣ್ಣು (Kiwi fruites) ಕಣ್ಣುಗಳ ನರಮಂಡಲಕ್ಕೆ ಶಕ್ತಿ ನೀಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕಣ್ಣುಗಳ ಊತ ಮತ್ತು ಅಸಹನೆಯನ್ನು ಕಡಿಮೆ ಮಾಡುತ್ತವೆ. ನಿಯಮಿತವಾಗಿ ಕಿವಿ ಸೇವನೆಯಿಂದ ಮಧುಮೇಹ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳನ್ನೂ ತಡೆಹಿಡಿಯಬಹುದು, ಏಕೆಂದರೆ ಇವುಗಳೆರಡೂ ಕಣ್ಣಿನ ಆರೋಗ್ಯಕ್ಕೆ ನೇರ ಸಂಬಂಧ ಹೊಂದಿವೆ.

ಬೆಳಗಾವಿ : ತೀವ್ರಗೊಂಡ ಕಬ್ಬು ಬೆಳೆಗಾರರ ಪ್ರತಿಭಟನೆ, lathicharge ; ಕಲ್ಲು ತೂರಾಟ.!

ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಕಿವಿ ಹಣ್ಣನ್ನು ಆಹಾರದಲ್ಲಿ ಸೇರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯುವುದು ಒಳಿತು.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments