Sunday, July 20, 2025

Janaspandhan News

HomeCrime Newsಭಾವನ ಜೊತೆಗಿನ illicit-affair : ಪತಿಯನ್ನೇ ಕೊಲೆ ಮಾಡಿದ ಪತ್ನಿ.!
spot_img
spot_img

ಭಾವನ ಜೊತೆಗಿನ illicit-affair : ಪತಿಯನ್ನೇ ಕೊಲೆ ಮಾಡಿದ ಪತ್ನಿ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಭಾವ (ಹತ್ತಿರದ ಸಂಬಂಧಿ) ನ ಜೊತೆಗೆ ಅಕ್ರಮ ಸಂಬಂಧ (illicit-affair) ಹೊಂದಿರುವ ಪತ್ನಿಯೋರ್ವಳು ತನ್ನ ಕೈ ಹಿಡಿದ ಪತಿಯನ್ನೇ ಕೊಲೆ ಮಾಡಿರುವ ಘಟನೆಯೊಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಸದ್ಯ ಘಟನೆಯು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿದೆ.

ಅಕ್ರಮ ಸಂಬಂಧದ ಹಿನ್ನಲೆಯಲ್ಲಿ (illicit-affair) ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ನೈಋತ್ಯ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನಡೆದಿದ್ದು, ಕೊಲೆಯಾದ ದುರ್ದೈವಿ ಪತಿಯನ್ನು ಕರಣ್ ದೇವ್ (35) ಎನ್ನಲಾಗುತ್ತಿದೆ.

ಇದನ್ನು ಓದಿ : ಕೋರ್ಟ್ ಆವರಣದಲ್ಲೇ ಪರಸ್ಪರ ಜುಟ್ಟು ಹಿಡಿದು ಎಳೆದಾಡಿಕೊಂಡ ಮಹಿಳಾ Lawyers ; ವಿಡಿಯೋ.!
ವಿದ್ಯುತ್ ಶಾಕ್ ಮೂಲಕ ಸಂಚು ರೂಪಿಸಿದ ಪತ್ನಿ ಮತ್ತು ಪ್ರಿಯಕರ :

ಮೂಲಗಳ ಪ್ರಕಾರ, ಮೃತ ಕರಣ್ ದೇವ್ ಅವರ ಪತ್ನಿ ಸುಶ್ಮಿತಾ ಮತ್ತು ಆಕೆಯ ಭಾವ ರಾಹುಲ್ (24) ನಡುವೆ ಕಳೆದ ಎರಡು ವರ್ಷಗಳಿಂದ ಅಕ್ರಮ ಸಂಬಂಧ (illicit-affair) ಇತ್ತು. ಈ ಸಂಬಂಧ (illicit-affair) ದ ಫಲವಾಗಿ ಪತಿಯ ಹತ್ಯೆಗೆ ಸಂಚು ರೂಪಿಸಿರುವುದು ವಾಟ್ಸಾಪ್ ಚಾಟ್‌ಗಳಿಂದ ಹಾಗೂ ತನಿಖೆಯಿಂದ ಬಹಿರಂಗವಾಗಿದೆ.

ಪತ್ನಿ ರಚಿಸಿದ ಯೋಜನೆಯಂತೆ, ಕರಣ್ ದೇವ್‌ ಅವರಿಗೆ 10-15 ನಿದ್ರೆ ಮಾತ್ರೆ ಬೆರೆಸಿದ ಆಹಾರ ನೀಡಲಾಗಿತ್ತು. ಬಳಿಕ ಅವರ ಪ್ರಜ್ಞೆ ಹೋಗುತ್ತಿದ್ದಂತೆ ವಿದ್ಯುತ್ ಶಾಕ್ ಕೊಡುವ ಮೂಲಕ ಕೊಲೆ ಮಾಡಲಾಗಿದೆ. ನಂತರ ಕುಟುಂಬಸ್ಥರಿಗೆ ವಿದ್ಯುತ್ ಶಾಕ್‌ನಿಂದ ಪತಿ ಸಾವನ್ನಪ್ಪಿರುವಾಗುದಾಗಿ ಹೇಳುವ ಮೂಲಕ ಇದೊಂದು ಆಕಸ್ಮಿಕ ಸಾವು ಎಂದು ಬಿಂಬಿಸಲಾಯಿತು.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 20 ರ ದ್ವಾದಶ ರಾಶಿಗಳ ಫಲಾಫಲ.!

ಕೂಡಲೇ ಸ್ಥಳಕ್ಕಾಗಮಿಸಿದ ಕುಟುಂಬಸ್ಥರು ಕರಣ್ ದೇವ್‌ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ಆತ ಆಗಲೇ ಸತ್ತಿರುವುದಾಗಿ ತಿಳಿಸಿದ್ದಾರೆ. ಆಕಸ್ಮಿಕ ಸಾವು ಆಗಿರುವುದರಿಂದ ಮರಣೋತ್ತರ ಪರೀಕ್ಷೆ ನಡೆಸಲು ಸುಶ್ಮಿತಾ ಮತ್ತು ಆಕೆಯ ಪ್ರಿಯಕರ ರಾಹುಲ್ ನಿರಾಕರಿಸಿದ್ದರು.

ಅಕ್ರಮ ಸಂಬಂಧ (illicit-affair), ಮರಣೋತ್ತರ ಪರೀಕ್ಷೆ ; ಸತ್ಯ ಬಯಲು :

ಮರಣೋತ್ತರ ಪರೀಕ್ಷೆ ನಡೆಸಲು ಪತ್ನಿ ಸುಶ್ಮಿತಾ ಮತ್ತು ಆಕೆಯ ಪ್ರಿಯಕರ ರಾಹುಲ್ ಇಬ್ಬರೂ ವಿರೋಧ ವ್ಯಕ್ತಪಡಿಸಿದ್ದರಿಂದ ಅನುಮಾನಗೊಂಡ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಿದ್ದರು. ಇದೇ ವೇಳೆ ಕರಣ್ ದೇವ್‌ ಅವರ ತಂಗಿ ಮತ್ತು ಕಿರಿಯ ಸಹೋದರ ಕುನಾಲ್, ಈ ಸಾವಿನ ಹಿಂದೆ ಸಂಚು (illicit-affair) ಇರುವ ಸಾಧ್ಯತೆ ಇದೆ ಎಂಬ ಮಾಹಿತಿ ನೀಡಿದ ನಂತರ ತನಿಖೆ ಗಂಭೀರವಾಯಿತು.

ಇದನ್ನು ಓದಿ : “ಈ ಲಕ್ಷಣಗಳು ಕಂಡುಬಂದರೆ ನಿಮ್ಮ Kidney ಅಪಾಯದಲ್ಲಿದೆ ಎಂದೇ ಅರ್ಥ.!”

ಪೊಲೀಸರು ವಾಟ್ಸಾಪ್ ಸಂದೇಶಗಳನ್ನ ಪರಿಶೀಲಿಸಿದಾಗ, ನಿದ್ರೆ ಮಾತ್ರೆಗಳನ್ನ ಊಟದಲ್ಲಿ ಬೆರೆಸಿ ಕರಣ್ ಪ್ರಜ್ಞೆ ತಪ್ಪುವ ಹಾಗೆ ಮಾಡಿ, ಬಳಿಕ ಆಕಸ್ಮಿಕ ಸಾವು ಎಂದು ಬಿಂಬಿಸಲು ಇಬ್ಬರು ಸೇರಿ ಕರಣ್‌ಗೆ ವಿದ್ಯುತ್ ಶಾಕ್ ನೀಡಿ ಪತಿಯ ಕೊಲೆ ಮಾಡಬೇಕು ಅನ್ನೋದನ್ನ ಪ್ರಿಯಕರ ರಾಹುಲ್, ಸುಶ್ಮಿತಾಗೆ ಸಲಹೆ ನೀಡಿದ್ದಾನೆ ಎನ್ನುವುದು ಬಯಲಾಗಿದೆ.

ಸುಶ್ಮಿತಾ ಮತ್ತು ರಾಹುಲ್‌ (illicit-affair ಹೊಂದಿದ್ದ) ನಡುವೆ ಪತಿಯ ಹತ್ಯೆ ಕುರಿತು ವಾಟ್ಸಾಪ್ ಸಂದೇಶಗಳು ಸಿಕ್ಕಿಬಿದ್ದ ಹಿನ್ನಲೆಯಲ್ಲಿ ಅವರಿಬ್ಬರನ್ನು ಬಂಧಿತರಾಗಿದ್ದು, ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.


Schoolgirl : ಚುಡಾಯಿಸಿದಾತನಿಗೆ ನಡು ರಸ್ತೆಯಲ್ಲಿ ಧರ್ಮದೇಟು ಕೊಟ್ಟ ಶಾಲಾ ವಿದ್ಯಾರ್ಥಿನಿ.!

Schoolgirl

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಚುಡಾಯಿಸಿದಾತನಿಗೆ ನಡು ರಸ್ತೆಯಲ್ಲಿಯೇ ಶಾಲಾ ವಿದ್ಯಾರ್ಥಿನಿ (Schoolgirl) ಯೋರ್ವಳು ಧರ್ಮದೇಟು ಕೊಟ್ಟ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದ್ದು, ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ರಸ್ತೆಗಳಲ್ಲಿ ಮಹಿಳೆಯರು ನಿರ್ಭೀತಿಯಿಂದ ಓಡಾಡುವಂತ ಪರಿಸ್ಥಿತಿ ಸದ್ಯಕಂತು ತುಂಬಾ ಕಷ್ಟಕರವಾಗಿದೆ.‌ ಏಕೆಂದರೆ, ಕೆಲವರು ಚಿನ್ನದ ಸರಗಳ್ಳತನ, ಕಳ್ಳತನದಲ್ಲಿ ತೊಡಗಿದ್ದರೆ, ಇನ್ನೂ ಕಾಮುಕರು ರಸ್ತೆಯಲ್ಲಿ ಓಡಾಡುವ ವಿದ್ಯಾರ್ಥಿನಿ (Schoolgirl) ಯರನ್ನೋ ಅಥವಾ ಯುವತಿಯರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ.

ಇದನ್ನು ಓದಿ : IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಆದರೆ ಈ ನಡುವೆ ಒಂದು ಶಾಕಿಂಗ್‌ ಎಂಬಂತೆ ಹೈ ಸ್ಕೂಲ್‌ ವಿದ್ಯಾರ್ಥಿನಿ (Schoolgirl) ಯೋರ್ವಳು ಧೈರ್ಯವಂತೆ ನಿಂತು ತಮಗೆ ಕಿರುಕುಳ ನೀಡಿದನಿಗೆ ರಸ್ತೆಯಲ್ಲಿಯೇ ಚಪ್ಪಲಿ ಏಟು ಕೊಟ್ಟು ಬುದ್ಧಿ ಕಲಿಸಿದ್ದಾಳೆ. ಹೀಗೆ ಹೈ ಸ್ಕೂಲ್‌ ವಿದ್ಯಾರ್ಥಿನಿಯಿಂದ ಧರ್ಮದೇಟು ತಿನ್ನುತ್ತಿರುವ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ವಿದ್ಯಾರ್ಥಿನಿ (Schoolgirl) ಯಿಂದ ಧರ್ಮದೇಟು ತಿನ್ನುತ್ತಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿರುವ ಘಟನೆ ನಡೆದಿದೆ. ಶಾಲೆಗೆ ತೆರಳುತ್ತಿದ್ದ ಹೈ ಸ್ಕೂಲ್ ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೋಬ್ಬ ಮಾರ್ಗಮಧ್ಯದಲ್ಲಿ ಕಿರುಕುಳ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಆತನಿಗೆ ತಕ್ಕ ಶಿಕ್ಷೆ ನೀಡಿ ಹೆಣ್ಣುಮಕ್ಕಳೂ ಪ್ರತಿರೋಧ ತೋರಿದರೆ ಏನಾಗುತ್ತದೆ ಎಂಬ ಸಂದೇಶವನ್ನು ಕೊಟ್ಟಿದ್ದಾಳೆ.

ಇದನ್ನು ಓದಿ : ಕೋರ್ಟ್ ಆವರಣದಲ್ಲೇ ಪರಸ್ಪರ ಜುಟ್ಟು ಹಿಡಿದು ಎಳೆದಾಡಿಕೊಂಡ ಮಹಿಳಾ Lawyers ; ವಿಡಿಯೋ.!
ಕಾಲರ್ ಹಿಡಿದು ಚಪ್ಪಲಿ ಏಟು – ಧೈರ್ಯಶಾಲಿ ಪ್ರತಿಭಟನೆ :

ಮೂಲಗಳ ಪ್ರಕಾರ, ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ (Schoolgirl) ಗೆ ವ್ಯಕ್ತಿಯೊಬ್ಬ ಚುಡಾಯಿಸಲು ಪ್ರಯತ್ನ ಮಾಡಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗೆ ಮುಂದಾದ ವಿದ್ಯಾರ್ಥಿನಿ, ಚುಡಾಯಿಸಿದಾತನಿಗೆ ನಡು ರಸ್ತೆಯಲ್ಲಿ ನಿಲ್ಲಿಸಿ ಕಾಲರ್ ಹಿಡಿದು ಪ್ರಶ್ನಿಸಿದ್ದಾಳೆ. ಅಷ್ಟೆ ಅಲ್ಲಾ, ಬಳಿಕ ಎಲ್ಲರ ಮುಂಭಾಗದಲ್ಲೇ Schoolgirl ತನ್ನ ಚಪ್ಪಲಿಯಿಂದ ಏಟು ಕೊಟ್ಟು ಆತನಿಗೆ ಎಚ್ಚರಿಕೆ ನೀಡಿದ್ದಾಳೆ.

ಈ ಘಟನೆಯ ವಿಡಿಯೋವನ್ನು ಜುಲೈ 20 ರಂದು Ghar Ke Kalesh ಎಂಬ “X” (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಹಂಚಲಾಗಿದ್ದು, “ಶಾಲೆಗೆ ಹೋಗುತ್ತಿದ್ದ ವೇಳೆ ಕಿರುಕುಳ ನೀಡಿದ ವ್ಯಕ್ತಿಗೆ ಚಪ್ಪಲಿಯಿಂದ ಪಾಠ ಕಲಿಸಿದ ವಿದ್ಯಾರ್ಥಿನಿ” ಎಂಬ ಶೀರ್ಷಿಕೆ ನೀಡಲಾಗಿದೆ. ವಿಡಿಯೋ ಇದೀಗ ವೈರಲ್ ಆಗಿದ್ದು, ಇಲ್ಲಿಯವರೆಗೆ 72K ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 20 ರ ದ್ವಾದಶ ರಾಶಿಗಳ ಫಲಾಫಲ.!
ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗಳ ಮಹಾಪೂರ :

ಈ ವಿಡಿಯೋ ನೋಡಿದ ನೆಟ್ಟಿಗರಿಂದ ಮೆಚ್ಚುಗೆ ಸಿಕ್ಕಿದ್ದು, ಅದರಲ್ಲಿ ಒಬ್ಬ ಬಳಕೆದಾರರು, “ಅಲ್ಲಿ ನಿಂತವರು ಯಾರಾದರೂ ಸಹಾಯಕ್ಕೆ ಬಂದರಾ? ನಾಚಿಕೆ ಆಗಬೇಕು.! ಆದರೆ ಹುಡುಗಿಯ ಧೈರ್ಯ ಅದ್ಭುತ.!” ಎಂದಿದ್ದಾರೆ. ಮತ್ತೋಬ್ಬ ನೆಟ್ಟಿಗ, “ಈ ವಿದ್ಯಾರ್ಥಿನಿಗೆ ಬಹುಮಾನ ನೀಡಬೇಕು.!” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅನೇಕರು ಈ ಧೈರ್ಯಶಾಲಿ ಹೆಣ್ಣಿಗೆ ಶಭಾಷ್ ಹೇಳಿದ್ದಾರೆ.

ಧರ್ಮದೇಟು ಕೊಡುತ್ತಿರುವ ಶಾಲಾ ಬಾಲಕಿ (Schoolgirl) ಯ ವಿಡಿಯೋ :

Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments