Saturday, July 27, 2024
spot_img
spot_img
spot_img
spot_img
spot_img
spot_img

ದೇವಸ್ಥಾನದ ಶಿವಲಿಂಗದ ಮೇಲೆ ಬಳಪದಿಂದ ಗೀಚಿ ದುಷ್ಕರ್ಮಿಗಳಿಂದ ವಿಕೃತಿ.!

spot_img

ಜನಸ್ಪಂದನ ನ್ಯೂಸ್, ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯ ಶಿರಸಿ (Sirsi) ತಾಲೂಕಿನ ನರೆಬೈಲಿನಲ್ಲಿರುವ ಶ್ರೀ ಸೋಮೇಶ್ವರ ದೇವಸ್ಥಾನದ ಶಿವಲಿಂಗ ಮೂರ್ತಿಗೆ ಕಿಡಿಗೇಡಿಗಳು ಚಾಕ್ ಪೀಸ್ (Choke peace) ನಲ್ಲಿ ಬರೆದು ಅಪಮಾನ ಮಾಡಿದ ಘಟನೆ ಭಾನುವಾರ ನಡೆದಿದೆ.

ರವಿವಾರ ಬೆಳಿಗ್ಗೆ 9:15ರ ವೇಳೆಗೆ ಪೂಜೆಗೆಂದು ಪುರೋಹಿತರು ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಇಂಗ್ಲೀಷ್ ಅಕ್ಷರದಲ್ಲಿ ದೇವಾಲಯದಲ್ಲಿರುವ (temple) ಶಿವಲಿಂಗದ ಮೇಲೆ ಚಾಕ್ ಪೀಸ್ ನಿಂದ ಬರೆದು ಅಶುದ್ಧತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಗರ್ಭಗುಡಿಯ ಬಾಗಿಲು (door) ತಳ್ಳಿ ಚಾಕ್ ಪೀಸ್ ನಿಂದ ಜೆಇಇ 2024, ಜೆಇಇ2026 ಅಂತ ಬರೆದದ್ದು ಗಮನಕೆ ಬಂದಿದೆ. ಇನ್ನೂ ಘಟನೆಯನ್ನು ಖಂಡಿಸಿ ದೇವಸ್ಥಾನದ ಮುಂದೆ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

spot_img
spot_img
- Advertisment -spot_img