ಜನಸ್ಪಂದನ ನ್ಯೂಸ್, ಮಂಡ್ಯ : ಮಂಡ್ಯದ ಪೂರ್ವ ಠಾಣಾ ಪೊಲೀಸರ ವಿರುದ್ಧ ಹಲ್ಲೆ ಆರೋಪ (Accusation) ಕೇಳಿಬಂದಿದ್ದು, ವಿಚಾರಣೆ ನೆಪದಲ್ಲಿ ಮಹಿಳೆಯನ್ನು ಠಾಣೆಗೆ ಕರೆತಂದು ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಮಹಿಳೆ ಮಂಡ್ಯ ನಗರದ ರೂಪಾದೇವಿ ಎಂದು ತಿಳಿದು ಬಂದಿದೆ.
ಇದನ್ನು ಓದಿ : Belagavi : ವಕೀಲನ ಮೇಲೆ ಮಾರಣಾಂತಿಕ ಹಲ್ಲೆ ; ಇಬ್ಬರು ಪೊಲೀಸ್ ವಶಕ್ಕೆ.!
ರೂಪಾಗೆ ಸೇರಿದ ಹಸು ಮಹಿಳಾ ಪೇದೆ ಸ್ಕೂಟರ್ಗೆ ಅಡ್ಡ ಬಂದ ಹಿನ್ನಲೆಯಲ್ಲಿ ಲೇಡಿ ಕಾನ್ಸ್ ಟೇಬಲ್ (lady constable) ವನಜಾಕ್ಷಿ ಬಿದ್ದು ಗಾಯಗೊಂಡಿದ್ದರು ಎನ್ನಲಾಗಿದೆ.
ಆಗ ಮಹಿಳಾ ಪೇದೆ ಪರಿಹಾರ ನೀಡುವಂತೆ ರೂಪಾದೇವಿಗೆ ಒತ್ತಡ ಹಾಕುತ್ತಿದ್ದರು. ಹಣ ನೀಡದಿದ್ದಕ್ಕೆ ರೂಪಾಗೆ ವಿಚಾರಣೆ ನೆಪದಲ್ಲಿ ಠಾಣೆಗೆ ಕರೆಸಿ ಥಳಿಸಿದ್ದು, ಪೊಲೀಸರ ಥಳಿತದಿಂದ ಮಹಿಳೆಗೆ ಗಂಭೀರ ಗಾಯಗಳಾಗಿವೆ.
ಮಹಿಳೆಯ ಕೈ ಕಾಲಿಗೆ ಹಿಗ್ಗಾಮುಗ್ಗಾ ಥಳಿಸಿರುವ ಆರೋಪ ಕೇಳಿಬಂದಿದ್ದು, ಮಹಿಳಾ ಪೇದೆ ಅಧಿಕಾರ ದುರುಪಯೋಗ (misusage) ಮಾಡಿಕೊಂಡು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ.
ಇದನ್ನು ಓದಿ : 3 ಮದುವೆ ; ನಾಲ್ವರು ಬಾಲಿವುಡ್ ನಟಿಯರ ಜೊತೆ Affair ಹೊಂದಿದ್ದರು ಈ ಮಾಜಿ ಪ್ರಧಾನಿ.!
ಸದ್ಯ ಹಲ್ಲೆಗೊಳಗಾದ ಮಹಿಳೆಯ ನೆರವಿಗೆ ಹೋರಾಟಗಾರರು ಧಾವಿಸಿದ್ದಾರೆ. ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.