ಜನಸ್ಪಂದನ ನ್ಯೂಸ್, ಬೆಂಗಳೂರು : ಪಿಎಸ್ಐ ಓರ್ವರು, ಬಿಗ್ ಬಾಸ್ ಸೀಸನ್ 10ರ ನಾಲ್ಕನೇ ರನ್ನರ್ ಅಪ್ (runner up) ವರ್ತೂರ್ ಸಂತೋಷ್ ಅವರಿಗೆ ಸನ್ಮಾನ ಮಾಡಿದ್ದರು.
ಹೀಗಾಗಿ ಪಿಎಸ್ಐ ತಿಮ್ಮರಾಯಪ್ಪ ಅವರನ್ನು ಬೆಂಗಳೂರು ನಗರ ಪೊಲೀಸ್ ಕಮೀಷನರ್ ದಯಾನಂದ್ ರಾತ್ರೋರಾತ್ರಿ ವರ್ಗಾವಣೆ (transfer) ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನು ಓದಿ : 3 ಮದುವೆ ; ನಾಲ್ವರು ಬಾಲಿವುಡ್ ನಟಿಯರ ಜೊತೆ Affair ಹೊಂದಿದ್ದರು ಈ ಮಾಜಿ ಪ್ರಧಾನಿ.!
ವೃತ್ತಿ ಸಮಯದಲ್ಲಿ ಮನರಂಜನೆ (entertainment) ನೀಡುವವರಿಗೆ ಅಭಿಮಾನವನ್ನು ತೋರಿಸುವುದಕ್ಕೆ ಅವಕಾಶವಿಲ್ಲ. ಹೀಗಾಗಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಹುಲಿಯ ಉಗುರು (Tiger Nail) ಪ್ರಕರಣಕ್ಕೆ ಸಂಬಂಧಿಸಿ ದೊಡ್ಮನೆಯಿಂದಲೇ ಬಂಧಿತರಾಗಿದ್ದ ಕೃಷಿಕ ವರ್ತೂರು ಸಂತೋಷ್ (Varthur Santhosh) ಬಿಗ್ ಬಾಸ್ ಸೀಸನ್ 10ಗೆ ಮರಳಿ ಮತ್ತೆ ಆಟ ಪ್ರಾರಂಭಿಸಿದ್ದರು.
ಇದನ್ನು ಓದಿ : ಕರ್ನಾಟಕದ ಹಿರಿಯ IPS ಅಧಿಕಾರಿ ಪ್ರತಾಪ್ ರೆಡ್ಡಿ ರಾಜೀನಾಮೆ.!
ಪೊಲೀಸ್ ಸಮವಸ್ತ್ರದಲ್ಲಿ (police uniform) ಸನ್ಮಾನಿಸಿದ್ದಕ್ಕೆ ಪಿಎಸ್ಐ ತಿಮ್ಮರಾಯಪ್ಪ ಅವರನ್ನು ವರ್ತೂರು ಪೊಲೀಸ್ ಠಾಣೆಯಿಂದ ಆಡುಗೋಡಿ ಠಾಣೆಗೆ ವರ್ಗಾವಣೆ ಮಾಡಿ ಆದೇಶ (order) ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.