ಜನಸ್ಪಂದನ ನ್ಯೂಸ್, ಹುಕ್ಕೇರಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಜಿನರಾಳ ಗ್ರಾಮದಲ್ಲಿ ಮದುವೆಯಾಗಿ 2 ಮಕ್ಕಳಿರುವ ತಾಯಿಯೋರ್ವಳು ಪ್ರಿಯಕರನೊಂದಿಗೆ ಓಡಿಹೋಗಿದ್ದು (escape), ಆಕ್ರೋಶಗೊಂಡ ಪತಿ, ಹೆಂಡತಿಯ ಪ್ರಿಯಕರನ ಮನೆಯನ್ನೇ ಧ್ವಂಸ ಮಾಡಿದ ಘಟನೆ ನಡೆದಿದೆ.
ಜಿನರಾಳ ಗ್ರಾಮದ ರೇಣುಕಾ ವಾಲಿಕಾರ ಮತ್ತು ಲಗಮಣ್ಣ ವಾಲಿಕಾರ (34) ಎಂಬವರು ಓಡಿಹೋದ ಪ್ರೇಮಿಗಳಾಗಿದ್ದಾರೆ.
ಮನೆಯನ್ನು ಧ್ವಂಸ ಮಾಡಿದ ಆರೋಪದ ಮೇಲೆ ಮಹಿಳೆಯ ಮಾವ ಸಾಮಯ್ಯ ವಾಲಿಕಾರ, ಕೆಂಪಣ್ಣ ವಾಲಿಕಾರ, ರೇಣುಕಾ ಗಂಡ ದುಂಡಪ್ಪ ಫಕ್ಕೀರಪ್ಪ ವಾಲಿಕಾರ, ಭಾಮೈದ ನಿಂಗಪ್ಪ ವಾಲಿಕಾರ, ಭರಮಾ ವಾಲಿಕಾರ, ಹನುಮಂತ ಲಗಮಾ ವಾಲಿಕಾರ, ನಿಂಗಪ್ಪ ಲಗಮಾ ವಾಲಿಕಾರ, ಲಗಮಾ ಯಲಗುಂಡ ವಾಲಿಕಾರ ಸೇರಿ ಹಲವರ ವಿರುದ್ಧ ದೂರು ನೀಡಲಾಗಿದೆ.
ಇದನ್ನು ಓದಿ : ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದಾದ ಅನ್ಯಾಯದ ವಿರುದ್ಧ ಹೋರಾಟ, ರಾಜಕೀಯ ಚಳವಳಿ ಅಲ್ಲ : ಸಿಎಂ ಸಿದ್ದರಾಮಯ್ಯ.!
ಘಟನೆಯ ಹಿನ್ನೆಲೆ :
ರೇಣುಕಾ ಮತ್ತು ಲಗಮಣ್ಣ ನಡುವೆ ಕಳೆದ ಕೆಲವು ವರ್ಷಗಳಿಂದ ಪ್ರೀತಿ-ಪ್ರಣಯ ಅಂತ ಹರಡಿತ್ತು. ರೇಣುಕಾಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ. ಲಗಮಣ್ಣನಿಗೆ ಕೂಡ ಮದುವೆಯಾಗಿದೆ (marriage).
ಆದರೆ ಅವರಿಬ್ಬರೂ ಪರಸ್ಪರ ಮಾತನಾಡಿಕೊಂಡು ಊರಿಂದಲೇ ಪರಾರಿಯಾಗಿದ್ದಾರೆ. ಇದರಿಂದ ಕೆರಳಿದ ಗಂಡನ ಮನೆಯವರು ರೇಣುಕಾಳ ಪ್ರೇಮಿಯ ಮನೆ ಮೇಲೆ ದಾಳಿ (attack) ಮಾಡಿದ್ದಾರೆ.
30ಕ್ಕೂ ಅಧಿಕ ಜನರು ಇರುವ ತಂಡ ಮನೆಯ ಮೇಲೆ ದಾಳಿ ಮಾಡಿದೆ. ದುಷ್ಕರ್ಮಿಗಳು ಕೈಯಲ್ಲಿ ಕುಡುಗೋಲು, ಕೊಡ್ಲಿ, ಕಟ್ಟಿಗೆ ಹಿಡಿದುಕೊಂಡು ದಾಳಿ ಮಾಡಿದ್ದಾರೆ.
ಮನೆಯಲ್ಲಿ ಲಗಮಣ್ಣನ ತಾಯಿ, ಅಜ್ಜಿ ಮತ್ತು ಹೆಂಡತಿ ಹಾಗೂ ಮಗ ಇದ್ದರು. ಅವರು ಹತ್ತಾರು ಮಂದಿ ಮನೆಯತ್ತ ಧಾವಿಸಿ ಬರುತ್ತಿರುವ ಸುದ್ದಿ ಕೇಳಿ ಪಕ್ಕದ ಮನೆಯಲ್ಲಿ ಅಡಗಿ ಕುಳಿತಿದ್ದರು. ಹೀಗಾಗಿ ಅವರ ಪ್ರಾಣಕ್ಕೆ ಏನೂ ಅಪಾಯ ಉಂಟಾಗಿಲ್ಲ.
ಇದನ್ನು ಓದಿ : ಮಿಲನಕ್ಕೆ ಒಪ್ಪದ ಪತ್ನಿ ; ವೈದ್ಯರ ಬಳಿ ಹೋದ ಪತಿಗೆ ಕಾದಿತ್ತು ಶಾಕ್.!
ಮನೆಯ ಮೇಲೆ ಕಲ್ಲು ತೂರಿ, ಪೀಠೋಪಕರಣ, ಅಡುಗೆ ಸಾಮಗ್ರಿ ಸೇರಿದಂತೆ ಎಲ್ಲ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.
ಮಗ ಮಾಡಿದ ತಪ್ಪಿಗೆ ತಾಯಿಯ ಮನೆಯನ್ನ ನಾಶ ಮಾಡಿದ ದುಷ್ಕರ್ಮಿಗಳು ಮನೆಯನ್ನು ಬಹುತೇಕ ಧ್ವಂಸಗೊಳಿಸಿದ್ದಾರೆ. ಇದರ ಜತೆಗೆ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.