ಜನಸ್ಪಂದನ ನ್ಯೂಸ್, ಬಳ್ಳಾರಿ : ಸುಪ್ರೀಂಕೋರ್ಟ್ (supreme court) ಸೂಚಿಸಿದ ಜಾಗದಲ್ಲಿ ಮಂದಿರ ಕಟ್ಟಿಲ್ಲ ಎಂದು ಸಚಿವ ಸಂತೋಷ್ ಲಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸದ್ಯ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬಳ್ಳಾರಿ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕಳೆದ 9 ವರ್ಷಗಳ ಕಾಲ ಶ್ರೀರಾಮ ಮಂದಿರ (Temple) ನಿರ್ಮಾಣದ ಬಗ್ಗೆ ಮಾತನಾಡದೇ ಈಗ ನಾವೇ ಮಾಡಿದ್ದು, ನಮ್ಮಿಂದಲೇ ಎಂದು ಬಿಂಬಿಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಜೈಲಿಂದಲೇ ಮಹಿಳೆಯ ನಗ್ನ ಪೋಟೋ ಕಳುಹಿಸಿ ಬ್ಲ್ಯಾಕ್ ಮೇಲ್ ; ಮೂವರು Arrest.!
ರಾಮಮಂದಿರ ನಿರ್ಮಾಣದಲ್ಲೂ ಹಗರಣ ನಡೆದಿದೆ ಎಂದು ಹೇಳಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಇದೀಗ ವಾಸ್ತವವಾಗಿ (actually) ಸುಪ್ರೀಂ ಕೋಟ್೯ ಸೂಚಿಸಿದ ಜಾಗದಲ್ಲಿ ರಾಮ ಮಂದಿರ ಕಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಯಾವುದೇ ಬಿಜೆಪಿ ಮುಖಂಡರು ಕೇವಲ ಹಿಂದು ಮುಸ್ಲಿಂ ಬಗ್ಗೆ ಬಿಟ್ಟರೆ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ.
ಇದನ್ನು ಓದಿ : Lokasabha : ಲೋಕಸಭೆ ಚುನಾವಣೆಯ ಕುರಿತು ಕೇಂದ್ರ ಚುನಾವಣಾ ಆಯುಕ್ತ ಹೇಳಿದ್ದೇನು ಗೊತ್ತೇ.?
ಈ ಹಿಂದೆ ಪ್ರಧಾನಿ ಮೋದಿ ಅವರು ಬುಲೆಟ್ ಟ್ರೈನ್ ಬಿಡುವುದಾಗಿ ಹೇಳುತ್ತಿದ್ದಂತೆ ನಾವು ಟಿಕೆಟ್ ತೆಗೆದುಕೊಂಡು ಕಾಯುತ್ತಿದ್ದೇವೆ. ಆದರೆ, ಈವರೆಗೂ ಬುಲೆಟ್ ಟ್ರೈನ್ (bullet train) ಇಲ್ಲ ಎಂದು ಟೀಕಿಸಿದರು.