ಗುರುವಾರ, ನವೆಂಬರ್ 27, 2025

Janaspandhan News

HomeCrime Newsಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ‘ದೃಶ್ಯ’ ಸಿನಿಮಾ ಸ್ಟೈಲ್‌ನಲ್ಲಿ Engineer ಹತ್ಯೆ.
spot_img
spot_img
spot_img

ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ‘ದೃಶ್ಯ’ ಸಿನಿಮಾ ಸ್ಟೈಲ್‌ನಲ್ಲಿ Engineer ಹತ್ಯೆ.

- Advertisement -

ಜನಸ್ಪಂದನ ನ್ಯೂಸ್‌, ಬೆಂಗಳೂರು : ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ವಿವಿಧ ಭಾಷೆಗಳಲ್ಲಿ ಜನಪ್ರಿಯವಾಗಿದ್ದ ‘ದೃಶ್ಯ’ ಸಿನಿಮಾ ಮಾದರಿಯಲ್ಲಿಯೇ ಇಂಜಿನಿಯರ್ (Engineer) ಓರ್ವರ ಹತ್ಯೆ ನಡೆದಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಇಂಜಿನಿಯರ್ (Engineer) ಓರ್ವರ ಭೀಕರ ಕೊಲೆಯ ಘಟನೆಯು ಜಿಲ್ಲೆಯ ಜನರಲ್ಲಿ ಭಯ ನಿರ್ಮಿಸಿದೆ.

ಕೊಟ್ಟ ಹಣ ವಾಪಸ್ ನೀಡುವ ವಿವಾದಕ್ಕೆ ಸಂಬಂಧಿಸಿ, ಓರ್ವ ಇಂಜಿನಿಯರ್ (Engineer) ಕೊಲೆ ಮಾಡಲಾಗಿದೆ. ಅಷ್ಟೆ ಅಲ್ಲಾ ಕೊಲೆ ಬಳಿಕ ಮೃತ ದೇಹವನ್ನು ಮನೆಯಲ್ಲಿಯೇ ಹಂತಕ ಹೂತು ಹಾಕಿರುವ ಘಟನೆ ಅತ್ತಿಬೆಲೆ ಪೊಲೀಸರು ದಾಖಲಿಸಿದ್ದಾರೆ.

ಕೊಲೆಯಾದ ಇಂಜಿನಿಯರ್ (Engineer), ಆಂಧ್ರಪ್ರದೇಶದ ಕುಪ್ಪಂ ಮೂಲದ ಶ್ರೀನಾಥ್, ಅತ್ತಿಬೆಲೆ ನೆರಳೂರಿನಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ವಾಸವಾಗಿದ್ದರು. ಪ್ರಭಾಕರ್ ಎನ್ನುವ ಆರೋಪಿ ಶ್ರೀನಾಥಗೆ ಹಣ ಡಬಲ್ ಮಾಡಿ ಕೊಡುವುದಾಗಿ ಹೇಳಿ ನಂತರ ವಾಪಸ್ ಪಡೆಯಲು ಕೇಳಿದಾಗ ಘಟನೆ ನಡೆದಿದೆ.

ಇದನ್ನು ಓದಿ : ಮಹಿಳೆಗೆ ಬಲವಂತವಾಗಿ Drinks ಕುಡಿಸಿ ಸಾಮೂಹಿಕ ಅತ್ಯಾಚಾರ ; 4 ಜನರ ಬಂಧನ.

ಇಂಜಿನಿಯರ್ (Engineer) ಶ್ರೀನಾಥ್ ಹಣ ವಾಪಸ್ ಕೇಳಿದ ಹಿನ್ನೆಲೆಯಲ್ಲಿ, ಪ್ರಭಾಕರ್ ಮತ್ತು ಸಹಾಯಕ ಜಗದೀಶ್ ಸೇರಿ ಕೊಲೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾನೆ. ನಂತರ ಹಣ ಕೊಡುವುದಾಗಿ ಹೇಳಿ ಕುಪ್ಪಂಗೆ ಬರುವಂತೆ ಇಂಜಿನಿಯರ್ (Engineer) ಶ್ರೀನಾಥಗೆ ತಿಳಿಸಿದ್ದಾರೆ.

ಅದರಂತೆ ಪತ್ನಿಗೆ ತಾನು ಕುಪ್ಪಂಗೆ ಹೋಗಿ ಹಣ ಪಡೆದು ಮನೆಗೆ ಮರಳುವುದಾಗಿ ಹೇಳಿ ಶ್ರೀನಾಥ ತೆರಳಿದ್ದಾರೆ. ಹಣ ಕೇಳಲು ಬಂದ ಇಂಜಿನಿಯರ್ (Engineer) ಶ್ರೀನಾಥಗೆ ತಲೆಯ ಮೇಲೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ, ಮೃತ ದೇಹವನ್ನು ಮನೆಯಲ್ಲಿಯೇ ಹಂತಕರು ಹೂತು ಹಾಕಿದ್ದಾರೆ.

ಇತ್ತ ಪತ್ನಿ ಎರಡು ದಿನ ಕಳೆದರೂ ಪತಿ ಮನೆಗೆ ಬಾರದ ಕಾರಣ ಪ್ರಭಾಕರನನ್ನು ವಿಚಾರಿಸಿದ್ದಾರೆ. ಆದರೆ ಪ್ರಭಾಕರ ತನಗೇನು ತಿಳಿದಿಲ್ಲವೆಂದು ಉತ್ತರಿಸಿದ ಹಿನ್ನಲೆಯಲ್ಲಿ ಪತ್ನಿ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಚಾರಣೆಯಲ್ಲಿ, ಕೊಲೆ ಹಾಗೂ ಹೆಣ ಹೂತು ಹಾಕಿರುವ ವಿಷಯದ ಸಂಪೂರ್ಣ ರಹಸ್ಯ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಪಡೆದ ಪೊಲೀಸರು ತಕ್ಷಣ ಪ್ರಭಾಕರ್ ಮತ್ತು ಜಗದೀಶ್ ಅವರನ್ನು ಬಂಧಿಸಿದ್ದಾರೆ.

ಇದನ್ನು ಓದಿ : ಗುಪ್ತಾಂಗ ತೋರಿಸಿದ ಯುವಕ ; ದೌರ್ಜನ್ಯ ಘಟನೆಯ ವೈರಲ್ ಮಾಡಿದ Foreign ಮಹಿಳೆ.

ಸುರಕ್ಷತಾ ಸೂಚನೆ : ಈ ಘಟನೆ ರಾಜ್ಯದಲ್ಲಿ ಹಣಕಾಸಿನ ವಿವಾದಗಳು ಅಪಾಯಕಾರಿ ತಿರುವುಗಳನ್ನು ನೀಡಬಹುದು ಎಂಬ ಎಚ್ಚರಿಕೆಯನ್ನು ಉಂಟುಮಾಡಿದ್ದು, ಸಾರ್ವಜನಿಕರು ಯಾವುದೇ ಹಣ ವಾಪಸ್ ಅಥವಾ ವ್ಯವಹಾರ ಸಂಬಂಧಿತ ತರ್ಕಗಳಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ.


ರಾಜ್ಯದಲ್ಲಿ ಚಳಿ ಜೊತೆ ಮತ್ತೆ ಮಳೆ – ಮುಂದಿನ 5 ದಿನಗಳ Weather ಮುನ್ಸೂಚನೆ ಬಿಡುಗಡೆ.

karnataka-weather-5-day-forecast-rain-cold-updates

ಜನಸ್ಪಂದನ ನ್ಯೂಸ್‌, ಬೆಂಗಳೂರು : ಕರ್ನಾಟಕದಲ್ಲಿ ಈಗಾಗಲೇ ತಂಪಿನ ವಾತಾವರಣ ಹೆಚ್ಚುತ್ತಿರುವ ಸಂದರ್ಭದಲ್ಲಿ, ಮುಂದಿನ ಐದು ದಿನಗಳು ರಾಜ್ಯದ ಹಲವೆಡೆಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ (Weather) ಇಲಾಖೆ ಹೊಸ ಮುನ್ಸೂಚನೆ ನೀಡಿದೆ.

ಶೀತಗಾಳಿ ಮತ್ತು ಮೋಡ ಕವಿದ ಆಕಾಶದ ಪರಿಣಾಮವಾಗಿ ದಕ್ಷಿಣ ಹಾಗೂ ಕರಾವಳಿ ಭಾಗಗಳಲ್ಲಿ ಲಘುದಿಂದ ಮಧ್ಯಮ ಮಟ್ಟದ ಮಳೆ ಬೀಳುವ ನಿರೀಕ್ಷೆಯಿದೆ.

ಬೆಂಗಳೂರಿನೊಂದಿಗೆ ಹಲವಾರು ಜಿಲ್ಲೆಗಳಿಗೆ ಮಳೆಯ ಎಚ್ಚರಿಕೆ :

ಹವಾಮಾನ (Weather) ಇಲಾಖೆಯ ಅಂಕಿಗಳು ಪ್ರಕಾರ, ಬೆಂಗಳೂರು ನಗರ–ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಚಾಮರಾಜನಗರ, ಮಂಡ್ಯ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ.

ಕೆಲವು ಪ್ರದೇಶಗಳಲ್ಲಿ ಲಘು ಮಳೆ ಮಾತ್ರ ಕಂಡುಬರುವ ಸಾಧ್ಯತೆಯಿದ್ದರೂ, ಕೆಲವು ಕಡೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನು ಓದಿ : ನಿಮ್ಮ ಮಕ್ಕಳಿಗೆ ಮೊಬೈಲ್ ಗೀಳಿದೆಯೇ : ಈ ತಾಯಿಯ Technique ನೋಡಿ.!
ಜನರಿಗೆ ಹವಾಮಾನ (Weather) ಮುನ್ನೆಚ್ಚರಿಕೆ :

ಅನಿರೀಕ್ಷಿತ ಮಳೆಯ ಪರಿಣಾಮವಾಗಿ ಹೊರಾಂಗಣ ಚಟುವಟಿಕೆಗಳನ್ನು ಸಾಧ್ಯವಾದಷ್ಟು ತಪ್ಪಿಸಲು ಹವಾಮಾನ (Weather) ತಜ್ಞರು ಜನರಿಗೆ ಸಲಹೆ ನೀಡಿದ್ದಾರೆ. ತೇವವಾತಾವರಣದ ಜೊತೆಗೆ ತಂಪು ಹೆಚ್ಚಾಗುವ ಹಿನ್ನೆಲೆಯಲ್ಲಿ ದೈನಂದಿನ ಪ್ರಯಾಣ ಮತ್ತು ಬೆಳಗಿನ ವೇಳೆಯ ಚಲನವಲನಕ್ಕೆ ಆಗಾಗ್ಗೆ ಅಸೌಕರ್ಯ ಉಂಟಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಶೀತಗಾಳಿ ತೀವ್ರಗೊಂಡು ಕನಿಷ್ಠ ತಾಪಮಾನ ಕುಸಿತ :

ಬೆಳಗಿನ ಹೊತ್ತಿನಲ್ಲಿ ಈಗಾಗಲೇ ತಾಪಮಾನ ಕುಸಿತ ಕಂಡುಬರುತ್ತಿದೆ. ಉತ್ತರ ಒಳನಾಡು ಸೇರಿ ಹಲವಾರು ಜಿಲ್ಲೆಗಳಲ್ಲಿ ಶೀತಗಾಳಿ ಗಟ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಚಳಿ ಹೆಚ್ಚುವ ಸಾಧ್ಯತೆ ಇರುವುದಾಗಿ ಹವಾಮಾನ (Weather) ಇಲಾಖೆ ಎಚ್ಚರಿಸಿದೆ.

ಯಾವ ಜಿಲ್ಲೆಗಳಲ್ಲಿ ಮಳೆ ಬೀಳಬಹುದು?

ಕರಾವಳಿ ಪ್ರದೇಶಗಳು :

  • ಉಡುಪಿ
  • ದಕ್ಷಿಣ ಕನ್ನಡ

ಇಲ್ಲಿ ಸಾಧಾರಣ ಮಳೆಯ ಸಾಧ್ಯತೆ ಇದೆ.

ದಕ್ಷಿಣ ಒಳನಾಡು :

  • ಕೊಡಗು
  • ಮೈಸೂರು
  • ಚಾಮರಾಜನಗರ
  • ಮಂಡ್ಯ
  • ರಾಮನಗರ

ಈ ಜಿಲ್ಲೆಗಳ ಕೆಲವೇ ಭಾಗಗಳಲ್ಲಿ ಲಘು ಮಳೆಯ ನಿರೀಕ್ಷೆ ಇದೆ.

ಇದನ್ನು ಓದಿ : Heart : ನೀವು ಮಹಿಳೆಯರ ಮನಸ್ಸು ಗೆಲ್ಲಬೇಕೆ? ಈ ಗುಣಗಳಿದ್ದರೆ ಸಾಕು.
ಯಾವ ಜಿಲ್ಲೆಗಳಲ್ಲಿ ಒಣಹವೆ?

ಉತ್ತರ ಮತ್ತು ದಕ್ಷಿಣ ಒಳನಾಡಿನ ಹೆಚ್ಚಿನ ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣ ಮುಂದುವರಿಯಲಿದೆ.

ಉತ್ತರ ಕರ್ನಾಟಕ :

ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯನಗರ.

ದಕ್ಷಿಣ ಒಳನಾಡು :

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು.

ಕಲ್ಯಾಣ ಕರ್ನಾಟಕದಲ್ಲಿ ತೀವ್ರ ಚಳಿ :

ಕಲಬುರಗಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಈಗಾಗಲೇ 14°C ತಾಪಮಾನ ದಾಖಲಾಗಿದೆ. ನವೆಂಬರ್ 18ರಿಂದ 21ರವರೆಗೆ ಈ ಪ್ರದೇಶಗಳಲ್ಲಿ 4 ರಿಂದ 6°C ಹೆಚ್ಚುವರಿ ಕುಸಿತವಾಗುವ ಸಾಧ್ಯತೆ ಇದೆ.
ಹೀಗಾಗಿ ಜನರು ಅನಗತ್ಯವಾಗಿ ಹೊರಕ್ಕೆ ಹೋಗುವುದನ್ನು ತಪ್ಪಿಸುವಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ನವೆಂಬರ್ 21 ನಂತರ ತಾಪಮಾನ ಸಾಮಾನ್ಯವಾಗಬಹುದು.

ಬೆಂಗಳೂರು ಹವಾಮಾನ :

ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು,

  • ಗರಿಷ್ಠ ತಾಪಮಾನ : 27°C
  • ಕನಿಷ್ಠ ತಾಪಮಾನ : 17°C

ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ (Weather) ಇಲಾಖೆ ತಿಳಿಸಿದೆ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments