ಜನಸ್ಪಂದನ ನ್ಯೂಸ್, ಆರೋಗ್ಯ : ಬೇಸಿಗೆಯ ಸಮಯದಲ್ಲಿ ಮಾರುಕಟ್ಟೆಗಳಲ್ಲಿ ಹಲವು ಬಗೆಯ ತರಕಾರಿಗಳು ಲಭ್ಯವಾಗುತ್ತವೆ. ಅವುಗಳಲ್ಲಿ ನುಗ್ಗೆಕಾಯಿ (Drumstick) ಒಂದು ಪ್ರಮುಖ ತರಕಾರಿ. ಇದರಲ್ಲಿರುವ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಬಹಳ ಉಪಕಾರಿಯಾಗುತ್ತವೆ.
ನುಗ್ಗೆಕಾಯಿ (Drumstick) ಯನ್ನು “ಪ್ರೋಟೀನ್ನ ಭಂಡಾರ” ಎಂದು ಕರೆಯಲಾಗುತ್ತದೆ. ಇದು ರಕ್ತ ಶುದ್ಧೀಕರಣ, ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಶರೀರದ ಉರ್ಜೆಯನ್ನು ಉಳಿಸಿಕೊಳ್ಳಲು ಸಹಕಾರಿಯಾಗಿದೆ. ಆದರೆ ಎಲ್ಲರಿಗೂ ಇದು ಸೂಕ್ತ ತರಕಾರಿ ಅಲ್ಲ. ಕೆಲವರಿಗೆ ಇದರ ಸೇವನೆಯು ಹಾನಿಕಾರಕವಾಗಬಹುದು ಎಂಬುದು ವೈದ್ಯಕೀಯ ತಜ್ಞರ ಅಭಿಪ್ರಾಯ.
ಭೀಕರ Train ಅಪಘಾತ ; ಪ್ರಯಾಣಿಕರ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ; 5 ಸಾವು, ಹಲವರು ಗಾಯ.
ಇದೀಗ ನೋಡೋಣ ಬನ್ನಿ ಯಾರ್ಯಾರು ನುಗ್ಗೆಕಾಯಿ (Drumstick) ಸೇವಿಸಬಾರದು ಮತ್ತು ಏಕೆ ಅಂತ ತಿಳಿಯೋಣ.!
1️⃣ ಗರ್ಭಿಣಿಯರು :
ಗರ್ಭಾವಸ್ಥೆಯ ಸಮಯದಲ್ಲಿ ನುಗ್ಗೆಕಾಯಿಯನ್ನು ಸೇವಿಸುವುದು ತಪ್ಪು. ಇದು ಉಷ್ಣಸ್ವಭಾವದ ತರಕಾರಿ ಆಗಿರುವುದರಿಂದ, ಗರ್ಭಿಣಿಯರ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದ ಗರ್ಭಪಾತ ಅಥವಾ ಇತರ ತೊಂದರೆಗಳ ಅಪಾಯ ಹೆಚ್ಚುತ್ತದೆ. ಆದ್ದರಿಂದ ವೈದ್ಯರ ಸಲಹೆಯಿಲ್ಲದೆ ನುಗ್ಗೆಕಾಯಿ ಸೇವಿಸಬಾರದು.
2️⃣ ಅಧಿಕ ರಕ್ತಸ್ರಾವದ ಸಮಸ್ಯೆ ಇರುವ ಮಹಿಳೆಯರು :
ಹೆಚ್ಚಿನ ರಕ್ತಸ್ರಾವ (Heavy Bleeding) ಅಥವಾ ಹಾರ್ಮೋನ್ ಅಸಮತೋಲನದಿಂದ ಬಳಲುತ್ತಿರುವ ಮಹಿಳೆಯರು ನುಗ್ಗೆಕಾಯಿ ಸೇವನೆ ತಪ್ಪಿಸಬೇಕು. ಇದರ ಉಷ್ಣ ಗುಣದಿಂದಾಗಿ ರಕ್ತಸ್ರಾವದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.
ಬೆಳಗಾವಿ : ಅಪ್ರಾಪ್ತೆಗೆ Harassment ನೀಡಿದ ಯುವಕನಿಗೆ 5 ವರ್ಷ ಶಿಕ್ಷೆ ಹಾಗೂ ದಂಡ.!
3️⃣ ಕಡಿಮೆ ರಕ್ತದೊತ್ತಡ (Low BP) ಇರುವವರು :
ನುಗ್ಗೆಕಾಯಿ (Drumstick) ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಇದು ಅಧಿಕ ರಕ್ತದೊತ್ತಡ (High BP) ಹೊಂದಿರುವವರಿಗೆ ಒಳ್ಳೆಯದಾದರೂ, ಕಡಿಮೆ ರಕ್ತದೊತ್ತಡ ಇರುವವರಿಗೆ ಅಪಾಯಕಾರಿ. ಇದರಿಂದ ತಲೆ ಸುತ್ತು, ದೌರ್ಬಲ್ಯ, ಅಥವಾ ಉಸಿರಾಟದ ತೊಂದರೆ ಉಂಟಾಗಬಹುದು.
4️⃣ ಗ್ಯಾಸ್ಟ್ರಿಕ್ ಅಥವಾ ಅಲ್ಸರ್ ಇರುವವರು :
ಗ್ಯಾಸ್ಟ್ರಿಕ್ ಅಥವಾ ಅಲ್ಸರ್ (ulcer) ಸಮಸ್ಯೆಯಿಂದ ಬಳಲುವವರು ನುಗ್ಗೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಇದರಲ್ಲಿರುವ ಕೆಲವು ರಾಸಾಯನಿಕ ಅಂಶಗಳು ಹೊಟ್ಟೆಯ ಆಸಿಡ್ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.
5️⃣ ಸ್ತನ್ಯಪಾನ ಮಾಡುವ ಮಹಿಳೆಯರು :
ಮಗುವಿಗೆ ಎದೆಹಾಲುಣಿಸುತ್ತಿರುವ ಮಹಿಳೆಯರು ಕೂಡ ನುಗ್ಗೆಕಾಯಿ (Drumstick) ಸೇವನೆ ತಪ್ಪಿಸಬೇಕು. ಇದು ಹಾಲಿನ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಹಾಗೂ ಶಿಶುವಿಗೆ ಅಸಹನೆ ಉಂಟುಮಾಡಬಹುದು.
ಭಾರತೀಯ Railway ಯಲ್ಲಿ 3058 ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಸಂಪಾದಕೀಯ:
ನುಗ್ಗೆಕಾಯಿ ಪೋಷಕಾಂಶಗಳಿಂದ ಸಮೃದ್ಧವಾದ ತರಕಾರಿ. ಇದು ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಗರ್ಭಿಣಿಯರು, ಕಡಿಮೆ ರಕ್ತದೊತ್ತಡದವರು, ಗ್ಯಾಸ್ಟ್ರಿಕ್ ಅಥವಾ ಅಲ್ಸರ್ನಿಂದ ಬಳಲುವವರು ಹಾಗೂ ಸ್ತನ್ಯಪಾನ ಮಾಡುವ ತಾಯಂದಿರವರು ನುಗ್ಗೆಕಾಯಿ (Drumstick) ಸೇವನೆ ತಪ್ಪಿಸುವುದು ಉತ್ತಮ. ವೈದ್ಯರ ಸಲಹೆ ಪಡೆದು ಮಾತ್ರ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
Disclaimer : This article is based on reports and information available on the internet. Janaspandhan News is not affiliated with it and is not responsible for it.
ಭೀಕರ Train ಅಪಘಾತ ; ಪ್ರಯಾಣಿಕರ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ; 5 ಸಾವು, ಹಲವರು ಗಾಯ.

ಜನಸ್ಪಂದನ ನ್ಯೂಸ್, ಬಿಲಾಸಪುರ : ಇತ್ತೀಚಿನ ದಿನಗಳಲ್ಲಿ ರಸ್ತೆ ಹಾಗೂ ರೈಲು (Train) ಅಪಘಾತಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಬಂದಿದೆ. ಅನೇಕರು ಜೀವ ಕಳೆದುಕೊಂಡು, ಹಲವರು ಗಾಯಗೊಂಡಿರುವ ಘಟನೆಗಳು ದೇಶದಾದ್ಯಂತ ಆತಂಕ ಮೂಡಿಸಿವೆ.
ಇದೀಗ ನಡೆದ ಮತ್ತೊಂದು ಭೀಕರ ಅಪಘಾತದಲ್ಲಿ ಭಾರತೀಯ ರೈಲ್ವೇಯ (68733) ಪ್ರಯಾಣಿಕರ ರೈಲು ಬಿಲಾಸಪುರ ಸಮೀಪ ಗೂಡ್ಸ್ ರೈಲಿಗೆ ಡಿಕ್ಕಿಯಾಗಿ ಐವರು ಸಾವನ್ನಪ್ಪಿದ ಘಟನೆ ನಡೆದಿದೆ.
ಬಿಲಾಸಪುರದಲ್ಲಿ ಭೀಕರ ರೈಲು ಅಪಘಾತ :
ಚತ್ತೀಸಗಢದ ಬಿಲಾಸಪುರ ಜಿಲ್ಲೆಯ ಲಾಲ್ಖಡನಾ ಪ್ರದೇಶದ ಬಳಿ ನಡೆದ ಈ ದುರಂತದಲ್ಲಿ ಪ್ರಯಾಣಿಕರ ರೈಲು (Train) ವೇಗವಾಗಿ ಸಂಚರಿಸುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಗೂಡ್ಸ್ ರೈಲಿ (Train) ಗೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಯಿಂದ ರೈಲಿನ ಮುಂಭಾಗದ ಬೋಗಿಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.
ಸ್ಥಳಕ್ಕೆ ಧಾವಿಸಿದ ಬಿಲಾಸಪುರ ಎಸ್ಪಿ ರಜನೀಶ್ ಸಿಂಗ್ ಅವರು, “ಇದುವರೆಗೆ ಐವರು ಮೃತಪಟ್ಟಿರುವುದು ದೃಢಪಟ್ಟಿದೆ. ಹಲವಾರು ಮಂದಿ ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.
Accident : “ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ; 20 ಮಂದಿ ದುರ್ಮರಣ.!”
ಸ್ಥಳದಲ್ಲಿ ಭೀಕರ ದೃಶ್ಯ :
ರೈಲು (Train) ಅಪಘಾತದ ನಂತರ ಸ್ಥಳದಲ್ಲಿ ಶೋಕ ವಾತಾವರಣದ ಸ್ಥಿತಿ ನಿರ್ಮಾಣವಾಗಿದೆ. ಹಲವಾರು ಪ್ರಯಾಣಿಕರು ಬೋಗಿಗಳೊಳಗೆ ಸಿಲುಕಿಕೊಂಡಿದ್ದರು. ಎನ್ಡಿಆರ್ಎಫ್ ಹಾಗೂ ಸ್ಥಳೀಯ ರಕ್ಷಣಾ ಪಡೆಗಳು ಸ್ಥಳದಲ್ಲಿ ಶ್ರಮಪಟ್ಟು ಕಾರ್ಯಾಚರಣೆ ನಡೆಸುತ್ತಿವೆ.
ಆಯಂಬುಲೆನ್ಸ್ ಹಾಗೂ ವೈದ್ಯರ ತಂಡ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಒಂದು ಮಗುವನ್ನು ಬೋಗಿಯ ಅಡಿಯಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂಬ ವರದಿಯೂ ಬಂದಿದೆ.
ಅಪಘಾತದ ಸಾಧ್ಯ ಕಾರಣ :
ಪ್ರಾಥಮಿಕ ವರದಿಗಳ ಪ್ರಕಾರ, ಎಲೆಕ್ಟ್ರಿಕ್ ವೈಯರಿಂಗ್ ಹಾಗೂ ಸಿಗ್ನಲ್ ಸಿಸ್ಟಮ್ ವೈಫಲ್ಯ ಈ ಅಪಘಾತಕ್ಕೆ ಕಾರಣವಾಗಿರುವ ಸಾಧ್ಯತೆ ವ್ಯಕ್ತವಾಗಿದೆ. ರೈಲ್ವೇ ಅಧಿಕಾರಿಗಳು ಈಗಾಗಲೇ ಘಟನೆಯ ತನಿಖೆ ಆರಂಭಿಸಿದ್ದು, ವಿಶೇಷ ತನಿಖಾ ತಂಡ ಸ್ಥಳಕ್ಕೆ ಧಾವಿಸಿದೆ.
ರೈಲು (Train) ಸಂಚಾರದಲ್ಲಿ ಅಡಚಣೆ :
ಈ ಅಪಘಾತದ ಪರಿಣಾಮವಾಗಿ ಬಿಲಾಸಪುರ–ಕತ್ನಿ ರೈಲು ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅನೇಕ ರೈಲು (Train) ಗಳು ರದ್ದಾಗಿದ್ದು, ಕೆಲವಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. ತಾಂತ್ರಿಕ ಸಿಬ್ಬಂದಿಗಳು ಹಳಿಯನ್ನು ಶೀಘ್ರ ದುರಸ್ತಿ ಮಾಡಲು ತೊಡಗಿದ್ದಾರೆ.
ಸಹಾಯವಾಣಿ ತೆರೆದ ರೈಲ್ವೇ :
ಅಪಘಾತದ ಬೆನ್ನಲ್ಲೇ ಭಾರತೀಯ ರೈಲ್ವೇ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕರು ಮತ್ತು ಅವರ ಕುಟುಂಬಗಳು ಈ ಸಂಖ್ಯೆಗಳ ಮೂಲಕ ಮಾಹಿತಿ ಪಡೆಯಬಹುದು:
- ಬಿಲಾಸಪುರ: 9752485499, 8602007202
- ಚಂಪಾ ಜಂಕ್ಷನ್: 808595652
- ರಾಯಿಘಡ: 975248560
- ಪಂದ್ರ ರಸ್ತೆ: 8294730162
ಅಪಘಾತದ ನಂತರ ರಕ್ಷಣಾ ಕಾರ್ಯಾಚರಣೆಗಳು ವೇಗವಾಗಿ ಮುಂದುವರಿದಿದ್ದು, ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ರೈಲ್ವೇ ಇಲಾಖೆ ಈ ಘಟನೆಗೆ ಆಳವಾದ ವಿಷಾದ ವ್ಯಕ್ತಪಡಿಸಿದ್ದು, ಬಾಧಿತ ಕುಟುಂಬಗಳಿಗೆ ಪರಿಹಾರ ಘೋಷಿಸುವ ಸಾಧ್ಯತೆಗಳೂ ಇವೆ.







