ಜನಸ್ಪಂದನ ನ್ಯೂಸ್, ಬೀದರ್ : ಬೀದರ್ ನಗರದ ಪ್ರೌಢ ಶಾಲೆಯ (Highschool) ಮುಖ್ಯ ಶಿಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕ ತುಕಾರಾಂ ಕಾಂಬ್ಳೆ (58) ಲೋಕಾಯುಕ್ತ ಬಲೆಗೆ (trap) ಬಿದ್ದವರು.
ಇದನ್ನು ಓದಿ : Lokayukta trap : ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್ಪೆಕ್ಟರ್.!
ವಿಜ್ಞಾನ ವಿಷಯದ ಸಹಾಯಕ ಶಿಕ್ಷಕಿಯಾಗಿದ್ದ ಶಶಿಕಲಾ ಅವರು ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದ್ದರು.ಈ ಸಂಬಂಧ ನಿವೃತ್ತಿ ಸೌಲಭ್ಯ (Retirement facility) ಪಡೆಯುವ ಕಡತಕ್ಕೆ ಸಹಿ ಹಾಕಲು 3 ಲಕ್ಷ ಲಂಚ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಬಗ್ಗೆ ಶಶಿಕಲಾ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು.
ಅದರಂತೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಇನ್ಸ್ಪೆಕ್ಟರ್ ಬಾಬು ಸಾಹೇಬ್ ಪಾಟೀಲ್ ಮತ್ತವರ ತಂಡ ಮುಖ್ಯ ಶಿಕ್ಷಕ ತುಕಾರಾಂ ಕಾಂಬ್ಳೆ 50 ಸಾವಿರ ನಗದು ಹಣ,1 ಲಕ್ಷರೂನ ಚೆಕ್ ಪಡೆಯುವಾಗ ರೆಡ್ಹ್ಯಾಂಡ್ಆಗಿ ಸಿಕ್ಕಿಬಿದ್ದಿದ್ದಾರೆ.
ಇದನ್ನು ಓದಿ : ಬೋಲ್ಡ್ ಅವತಾರದಲ್ಲಿ ಮಿಂಚಿದ ನಟಿ ; ಲಿಪ್ ಲಾಕ್ ಮಾಡಿದ Photo ವೈರಲ್.!
ಆರೋಪಿ ಶಿಕ್ಷಕನನ್ನು ಬಂಧಿಸಿ (arrested) ಮುಂದಿನ ತನಿಖೆ ಕೈಗೊಂಡಿದ್ದಾರೆ.