ಮಂಗಳವಾರ, ಜನವರಿ 13, 2026

Janaspandhan News

HomeBelagavi NewsBelagavi ಯಲ್ಲಿ ರಾಜ್ಯೋತ್ಸವದ ಮೆರವಣಿಗೆ ವೇಳೆ 6 ಮಂದಿಗೆ ಚಾಕು ಇರಿತ : ಆಸ್ಪತ್ರೆಗೆ ದಾಖಲು.!
spot_img
spot_img

Belagavi ಯಲ್ಲಿ ರಾಜ್ಯೋತ್ಸವದ ಮೆರವಣಿಗೆ ವೇಳೆ 6 ಮಂದಿಗೆ ಚಾಕು ಇರಿತ : ಆಸ್ಪತ್ರೆಗೆ ದಾಖಲು.!

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ (Belagavi) ಯ ಸದಾಶಿವ ನಗರದಲ್ಲಿ ರಾಜ್ಯೋತ್ಸವ ಮೆರವಣಿಗೆಯ ವೇಳೆ ಚಾಕು ಇರಿತದ ಘಟನೆ ಸಂಭವಿಸಿ ಐದು ಮಂದಿ ಯುವಕರು ಗಾಯಗೊಂಡಿದ್ದಾರೆ.

ಈ ಘಟನೆ ಶನಿವಾರ ರಾತ್ರಿ ಸದಾಶಿವನಗರದ ವೈ-ಜಂಕ್ಷನ್ ಬಳಿ ನಡೆದಿದೆ.

ರೆಸ್ಟೋರೆಂಟ್‌ನಲ್ಲಿ ಅಣ್ಣ-ತಂಗಿಯ ಮೇಲೆ Police ದರ್ಪ ; ಸಿಸಿಟಿವಿ ವಿಡಿಯೋ ವೈರಲ್.!

ಗಾಯಗೊಂಡವರು ಬೆಳಗಾವಿ (Belagavi) ನೆಹರು ನಗರದ ಗುರುನಾಥ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ್ ಸುಂಕದ, ವಿನಾಯಕ ನರಟ್ಟಿ ಮತ್ತು ನಜೀರ್ ಪಠಾಣ ಎಂದು ತಿಳಿದುಬಂದಿದೆ.

 


“ಯುವತಿಯನ್ನು ಕೂರಿಸಿಕೊಂಡು ಅಪಾಯಕಾರಿ Bike ವ್ಹೀಲಿಂಗ್ ; ಮುಂದೆನಾಯ್ತು? ವಿಡಿಯೋ ನೋಡಿ.!”

Belagavi ಯಲ್ಲಿ ರಾಜ್ಯೋತ್ಸವದ ಮೆರವಣಿಗೆ ವೇಳೆ 6 ಮಂದಿಗೆ ಚಾಕು ಇರಿತ : ಆಸ್ಪತ್ರೆಗೆ ದಾಖಲು.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಯಾಗುವ ಹುಚ್ಚು ಕೆಲವರನ್ನು ಅಪಾಯಕಾರಿ ಮಟ್ಟದ ಕ್ರಮಗಳತ್ತ ಎಳೆದುಕೊಂಡು ಹೋಗುತ್ತಿದೆ. ಕೆಲವು ಸೆಕೆಂಡ್‌ಗಳ “ವೈರಲ್ ವಿಡಿಯೋ”ಗಾಗಿ ಜೀವವನ್ನೇ ಪಣಕ್ಕಿಡುವ ಘಟನೆಗಳು ಹೆಚ್ಚಾಗುತ್ತಿವೆ.

ಇತ್ತೀಚಿನ ಘಟನೆಯಲ್ಲಿ ಯುವಕನೊಬ್ಬ ತನ್ನ ಸ್ನೇಹಿತೆಯೊಂದಿಗೆ ಅಪಾಯಕಾರಿ ರೀತಿಯಲ್ಲಿ “ಬೈಕ್‌ ವ್ಹೀಲಿಂಗ್ (Bike Wheeling)” ಮಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ, ಬೈಕ್ (Bike) ಸವಾರನೊಬ್ಬ ರಸ್ತೆಯ ಮಧ್ಯೆ ತನ್ನ ವಾಹನವನ್ನು ವೇಗವಾಗಿ ಚಲಾಯಿಸುತ್ತಿದ್ದಾನೆ. ಆತನ ಹಿಂದೆ ಯುವತಿಯೊಬ್ಬಳು ಕುಳಿತಿದ್ದಾಳೆ. ಕೆಲ ಕ್ಷಣಗಳ ಬಳಿಕ ಸವಾರನು ಸ್ಟಂಟ್ ಮಾಡಲು ಯತ್ನಿಸುತ್ತಾನೆ.

ಬೈಕ್‌ನ ಮುಂಭಾಗದ ಚಕ್ರವನ್ನು ನೆಲದಿಂದ ಎತ್ತಿ, ಕೇವಲ ಹಿಂಬದಿ ಚಕ್ರದ ಮೇಲೆ ಚಲಾಯಿಸಲು ಆರಂಭಿಸುತ್ತಾನೆ. ಯುವತಿಯು ಸಹ ಖುಷಿಯಿಂದ ಆತನ ಕೃತ್ಯಕ್ಕೆ ಸಹಕರಿಸುತ್ತಾ ಕೈಯನ್ನು ಮೇಲಕ್ಕೆತ್ತುತ್ತಾಳೆ, ಆದರೆ ಕ್ಷಣಾರ್ಧದಲ್ಲೇ ಪರಿಸ್ಥಿತಿ ಬದಲಾಗುತ್ತದೆ.

ಸಮತೋಲನ ಕಳೆದುಕೊಂಡ ಬೈಕ್ (Bike) ಇಬ್ಬರನ್ನೂ ಬಿಸಾಡಿ ಬಿಡುತ್ತದೆ. ಯುವಕ ಮತ್ತು ಯುವತಿ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅವರ ಹಿಂದೆ ಬರುತ್ತಿದ್ದ ಮತ್ತೊಂದು ಬೈಕ್‌ಗೂ (Bike) ಡಿಕ್ಕಿ ಸಂಭವಿಸಿದೆ. ಈ ದೃಶ್ಯ ನೋಡಿ ನೆಟ್ಟಿಗರು ಆಘಾತಗೊಂಡಿದ್ದಾರೆ.

ಈ ವಿಡಿಯೋ ಈಗ ಎಕ್ಸ್ (ಹಳೆಯ ಟ್ವಿಟರ್) ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಿಯುತ್ತಿದೆ. “ಈ ರೀತಿಯ ಮೂರ್ಖತನಕ್ಕೆ ಯಾವುದೇ ಪುರಾವೆ ಬೇಕಿಲ್ಲ” ಎಂಬ ಶೀರ್ಷಿಕೆಯಲ್ಲಿ ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋ ನೋಡಿ ನೆಟ್ಟಿಗರು ತೀವ್ರ ಕೋಪ ವ್ಯಕ್ತಪಡಿಸಿದ್ದಾರೆ,

  • “ಜನರ ಜೀವವನ್ನು ಪಣಕ್ಕಿಟ್ಟು ಕೆಲವು ಕ್ಷಣಗಳ ಖ್ಯಾತಿಗಾಗಿ ಇಂತಹ ಸ್ಟಂಟ್‌ ಮಾಡುವುದು ನಿಷೇಧಿಸಬೇಕು”,
  • “ಪೊಲೀಸರು ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಕಾಮೆಂಟ್‌ಗಳ ಸುರಿಮಳೆ ಹರಿದಿದೆ.

ಈ ಘಟನೆ ಮತ್ತೊಮ್ಮೆ ರಸ್ತೆ ಸುರಕ್ಷತೆ ಮತ್ತು ಸಾಮಾಜಿಕ ಮಾಧ್ಯಮದ ‘ವೈರಲ್ ಸಂಸ್ಕೃತಿ’ ಕುರಿತಂತೆ ಗಂಭೀರ ಚಿಂತನೆಗೆ ಕಾರಣವಾಗಿದೆ. ಖ್ಯಾತಿಗಾಗಿ ಜೀವದ ಬೆಲೆಯಾಟ ಆಡುತ್ತಿರುವ ಯುವ ಜನತೆ ಇಂತಹ ಘಟನೆಗಳಿಂದ ಪಾಠ ಕಲಿಯಬೇಕೆಂಬ ಅಭಿಪ್ರಾಯ ಜನರಲ್ಲಿ ವ್ಯಕ್ತವಾಗಿದೆ.

ಬೈಕ್‌ (Bike) ವ್ಹೀಲಿಂಗ್ ವಿಡಿಯೋ :

https://twitter.com/i/status/1984268448172736616

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments