Friday, September 20, 2024
spot_img
spot_img
spot_img
spot_img
spot_img
spot_img
spot_img

ಕಳ್ಳನ ಕಥೆ ಕೇಳಿ ಬಿಟ್ಟು ಕಳುಹಿಸಿದ ಪೊಲೀಸ್ ; ಅಂತದ್ದೇನು ಹೇಳ್ದ ಅಂತೀರಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಅಶೋಕ್‌ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ (Ashok nagar police station) ಖಾಸಗಿ ಕಾಲೇಜಿನ ಸಮೀಪ ಯುವಕನ ಕೈಲಿದ್ದ ಮೊಬೈಲ್‌ ಫೋನ್‌ ಅನ್ನು ಕಸಿದುಕೊಂಡು ಓಡುತ್ತಿದ್ದ ಕಳ್ಳನೊಬ್ಬನನ್ನು ಮಹಿಳಾ ಪೊಲೀಸ್‌ (Lady Traffic police) ಸಿಬ್ಬಂದಿಯೊಬ್ಬರು ಬೆನ್ನಟ್ಟಿ ಹಿಡಿದಿರುವ ಘಟನೆ ನಡೆದಿದೆ.

ಆದರೆ ತಗ್ಲಾಕೊಂಡ ಬಳಿಕ ಕಳ್ಳ ಹೇಳಿದ ಕಥೆ ಕೇಳಿ ಮನಕರಗಿದ ಪೊಲೀಸರು ಆತನನ್ನು ಬಿಟ್ಟು ಕಳಿಸಿದ್ದಾರೆ.

ಇದನ್ನು ಓದಿ : ಸೋನಿಯಾ ಗಾಂಧಿಗೆ ಸ್ವಂತ ಮನೆಯೂ ಇಲ್ಲ, ಕಾರು ಇಲ್ಲ ; ಒಟ್ಟು property ಎಷ್ಟು ಗೊತ್ತೇ.?

ರಾಯಚೂರು (Raichur) ಮೂಲದ ಯುವಕ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಪ್ರೇಮಿಗಳ ದಿನಾಚರಣೆಯಂದು (Valentine’s day) ಆಕೆಗೆ ಸರ್‌ ಪ್ರೈಸ್‌ ನೀಡಬೇಕೆಂಬ ಉದ್ದೇಶದಿಂದ ಆಕೆಗೆ ತಿಳಿಸದೇ ಕಾಲೇಜಿನ ಸಮೀಪ ಕಾಯುತ್ತಿದ್ದ.

ಆದರೆ ಕಾಲೇಜಿನ ಬಳಿ ಆ ಯುವತಿ ಬೇರೊಬ್ಬನೊಂದಿಗೆ ನಿಕಟವಾಗಿರುವುದನ್ನು ನೋಡಿ ಯುವಕ ರೊಚ್ಚಿಗೆದ್ದು ಗಲಾಟೆ ಮಾಡಿದ್ದ.

ಬಳಿಕ ಆ ಯುವತಿ ಈತ ನನ್ನ ಪ್ರಿಯಕರನಲ್ಲ (lover), ಕೇವಲ ಸ್ನೇಹಿತ ಅಷ್ಟೇ ಎಂದು ಹೇಳಿದ್ದಳಂತೆ. ಆದರೆ ತೃಪ್ತನಾಗದ ಭಗ್ನ ಪ್ರೇಮಿ ಅವರಿಬ್ಬರ ಮೊಬೈಲ್‌ ಚೆಕ್‌ ಮಾಡಬೇಕೆಂದು ಪ್ಲ್ಯಾನ್ ಮಾಡಿದ್ದಾನೆ.

ಇದನ್ನು ಓದಿ : Suicide : ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್‌ಟೇಬಲ್ ; ಸ್ಥಿತಿ ಗಂಭೀರ.!

ಅದರಂತೆ ಅವರ ಮೊಬೈಲ್‌ ನ್ನು ಕಸಿದುಕೊಂಡು ಓಡುತ್ತಿದ್ದಂತೆಯೇ ಇಬ್ಬರೂ ಆತನ ಬೆನ್ನೆತ್ತಿದ್ದರು. ಇದನ್ನು ಕಂಡ ಸಂಚಾರಿ ವಿಭಾಗದ ಪೊಲೀಸ್‌ ಶಾಜಿಯಾ ತಬಸ್ಸುಂ ತಾವೂ ಸಹಾ ಅವರನ್ನು ಅಟ್ಟಿಸಿಕೊಂಡು ಹೋಗಿ ಹಿಡಿದಿದ್ದರು.

ವಿಚಾರಣೆಯಲ್ಲಿ ಸತ್ಯ ಬೆಳಕಿಗೆ ಬಂದಿದ್ದು, ಮೂವರನ್ನೂ ಕರೆಸಿ ಪೊಲೀಸರು ಬುದ್ದಿಮಾತು ಹೇಳಿ ಕಳಿಸಿದ್ದಾರೆ ಎನ್ನಲಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img