ಜನಸ್ಪಂದನ ನ್ಯೂಸ್, ನೌಕರಿ : ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (Raichur & Koppal DCC Bank) ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 70 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಗ್ರೂಪ್ A, B ಮತ್ತು C ವಿಭಾಗದ ಶಾಖಾ ವ್ಯವಸ್ಥಾಪಕ, ಸಹಾಯಕರು ಮತ್ತು ಅಟೆಂಡರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕ್ನ ಅಧಿಕೃತ ವೆಬ್ಸೈಟ್ ascguru.com/raichur-dcc-bank ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು DCC Bank ಹುದ್ದೆಗಳ ವಿವರ :
- ಶಾಖಾ ವ್ಯವಸ್ಥಾಪಕರು (Branch Manager) – 15 ಹುದ್ದೆಗಳು.
- ಸಹಾಯಕರು (Assistants) – 45 ಹುದ್ದೆಗಳು.
- ಅಟೆಂಡರ್ (Attender) – 10 ಹುದ್ದೆಗಳು.
ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!
DCC Bank ವಿದ್ಯಾರ್ಹತೆ :
1. ಶಾಖಾ ವ್ಯವಸ್ಥಾಪಕರು – 15 ಹುದ್ದೆಗಳು.
- ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ ಉತ್ತೀರ್ಣರಾಗಿರಬೇಕು.
2. ಸಹಾಯಕರು – 45 ಹುದ್ದೆಗಳು.
- ಸಮರ್ಥಿತ ವಿಶ್ವವಿದ್ಯಾನಿಲಯದ ಪದವಿ ಕಡ್ಡಾಯ.
3. ಅಟೆಂಡರ್ – 10 ಹುದ್ದೆಗಳು.
- ಕಡ್ಡಾಯವಾಗಿ SSLC (10ನೇ ತರಗತಿ) ಉತ್ತೀರ್ಣರಾಗಿರಬೇಕು.
ವಯೋಮಿತಿ :
- ಕನಿಷ್ಠ: 18 ವರ್ಷ
- ಗರಿಷ್ಠ: 35 ವರ್ಷ
ಇದನ್ನು ಓದಿ : IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.
ವಯೋಮಿತಿ ಸಡಿಲಿಕೆ :
- 2A, 2B, 3A, 3B ಅಭ್ಯರ್ಥಿಗಳು : 3 ವರ್ಷಗಳು.
- SC / ST ಅಭ್ಯರ್ಥಿಗಳು : 5 ವರ್ಷಗಳು.
ಅರ್ಜಿ ಶುಲ್ಕ (Application Fee) :
1. ಶಾಖಾ ವ್ಯವಸ್ಥಾಪಕ & ಸಹಾಯಕ ಹುದ್ದೆಗಳು :
- ಸಾಮಾನ್ಯ ಮೆರಿಟ್ (GM) : ರೂ.1600/-
- ಪ.ಜಾ / ಪ.ಪಂ / ಪ್ರವರ್ಗ – 1 / ಮಾಜಿ ಸೈನಿಕರು / ಅಂಗವಿಕಲರು : ರೂ.800/-
2. ಅಟೆಂಡರ್ ಹುದ್ದೆ :
- ಪ.ಜಾ / ಪ.ಪಂ / ಪ್ರವರ್ಗ – 1 / ಮಾಜಿ ಸೈನಿಕರು / ಅಂಗವಿಕಲರು : ರೂ.500/-
- ಇತರ ಅಭ್ಯರ್ಥಿಗಳು (GM, 2A, 2B, 3A, 3B) : ರೂ.500/-
ಇದನ್ನು ಓದಿ : NWKRTC : ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಆಯ್ಕೆ ವಿಧಾನ :
ನೇಮಕಾತಿ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತದೆ:
- ಲಿಖಿತ ಪರೀಕ್ಷೆ
- ಸಂದರ್ಶನ (Interview)
DCC Bank ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ → https://tascguru.com/raichur-dcc-bank/
- ಹೋಮ್ಪೇಜ್ನಲ್ಲಿ ಕಾಣುವ “Apply Here” ಬಟನ್ ಕ್ಲಿಕ್ ಮಾಡಿ
- ಹೊಸ ಪೋರ್ಟಲ್ ತೆರೆಯುತ್ತದೆ, ನಿಮ್ಮ Email ID & Password ಬಳಸಿ Login ಅಥವಾ Register ಆಗಿ
- ಹೊಸ ಬಳಕೆದಾರರೆಂದರೆ ಮೊದಲು ಹೊಸ ಖಾತೆ ರಚಿಸಿ.
- ನಂತರ Login ಆಗಿ → ಅರ್ಜಿ ನಮೂದು ಪೂರೈಸಿ.
- ಬೇಡಿಕೆಯಿರುವ ಸ್ಕ್ಯಾನ್ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಲು ಚಲನ್ (Challan) ಪ್ರಿಂಟ್ ತೆಗೆದುಕೊಳ್ಳಿ.
- ಬ್ಯಾಂಕ್ನಲ್ಲಿ ಶುಲ್ಕ ಪಾವತಿಸಿದ ನಂತರ, ಆ ವಿವರವನ್ನು ಅರ್ಜಿಯಲ್ಲಿ ಅಪ್ಡೇಟ್ ಮಾಡಿ.
- ಅರ್ಜಿ ಸಲ್ಲಿಕೆ ಪೂರ್ಣಗೊಳ್ಳುತ್ತದೆ.
ಇದನ್ನು ಓದಿ : RRB NTPC : ಅರ್ಜಿ ಸಲ್ಲಿಕೆಯ ಗಡುವು ವಿಸ್ತರಿಸಿದ ರೈಲ್ವೆ ನೇಮಕಾತಿ ಮಂಡಳಿ
ಮುಖ್ಯ ದಿನಾಂಕಗಳು :
- ಅರ್ಜಿ ಪ್ರಾರಂಭ : ನವೆಂಬರ್ 21, 2025.
- ಕೊನೆಯ ದಿನ : ಡಿಸೆಂಬರ್ 22, 2025.
ಮುಖ್ಯ ಸೂಚನೆ :
- ಹುದ್ದೆಗಳ ಅಧಿಕೃತ ಅಧಿಸೂಚನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ:
👉 ascguru.com/raichur-dcc-bank
Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಜನಸ್ಪಂದನ ನ್ಯೂಸ್, ಬ್ರೆಝಿಲ್ : ಬ್ರೆಝಿಲ್ (Brazil) ನ ಜೋವೊ ಪೆಸ್ಸೋವಾ ಮೃಗಾಲಯ (Zoo) ದಲ್ಲಿ 19 ವರ್ಷದ ಯುವಕನೊಬ್ಬ ಸಿಂಹದ ದಾಳಿಗೆ ಬಲಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಘಟನೆಯ ಕ್ರೂರತೆಯನ್ನು ಕಂಡ ಜನ ಆಘಾತಗೊಂಡಿದ್ದಾರೆ.
ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ, ಯುವಕನು ಉದ್ದೇಶಪೂರ್ವಕವಾಗಿ ಮೃಗಾಲಯದ (Zoo) ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿದ್ದಾನೆ. ಅವನು ಮರದ ಮೂಲಕ ಕೆಳಭಾಗಕ್ಕೆ ಇಳಿಯುತ್ತಿದ್ದಾಗ, ಹತ್ತಿರದಲ್ಲೇ ತಿರುಗಾಡುತ್ತಿದ್ದ ಸಿಂಹ ಅವನ ಚಲನವಲನವನ್ನು ಗಮನಿಸಿ ಕ್ಷಣಾರ್ಧದಲ್ಲೇ ಅವನ ಮೇಲೆ ಹಲ್ಲೆ ನಡೆಸಿತು.
ಇದನ್ನು ಓದಿ : ಆಸ್ಪತ್ರೆಯಲ್ಲಿ ಡ್ಯೂಟಿ ವೇಳೆ Dance ಮಾಡಿದ ವೈದ್ಯ ; ವಿಡಿಯೋ ವೈರಲ್.
ಅಕಸ್ಮಾತ್ ದಾಳಿಯಿಂದ ಭಯಗೊಂಡ ಯುವಕ ಮರವನ್ನು ಮತ್ತೆ ಏರಲು ಪ್ರಯತ್ನಿಸಿದರೂ, ಸಿಂಹದ ಮಾರಣಾಂತಿಕ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ದಾಳಿಯಿಂದ ತೀವ್ರವಾಗಿ ಗಾಯಗೊಂಡ ಯುವಕ ಸೆಕೆಂಡ್ಗಳಲ್ಲಿ ನೆಲಕ್ಕುರುಳಿದನು ಮತ್ತು ಗಂಭೀರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟನು. ಘಟನೆಯ ವೇಳೆ ಅಲ್ಲಿದ್ದ ಪ್ರವಾಸಿಗರು ಈ ಕ್ರೂರ ದೃಶ್ಯವನ್ನು ಕಣ್ಣು ಕಂಡು ಬೆಚ್ಚಿಬಿದ್ದರು ಮತ್ತು ಕೆಲವರು ಆತಂಕದಿಂದ ಕಿರುಚುತ್ತಿದ್ದರು. ವಿಡಿಯೋದಲ್ಲಿ ಜನರ ಗಾಬರಿಯಾಗಿ ಚಿರಾಡುವುದು ಕೂಡ ವಿಡಿಯೋದಲ್ಲಿ ಕೇಳಬಹುದಾಗಿದೆ.
ಇದನ್ನು ಓದಿ : ದೆಹಲಿ : 6 ವರ್ಷದ ಬಾಲಕನ ಮೇಲೆ Pitbull ನಾಯಿ ದಾಳಿ ; ಭಯಾನಕ ವಿಡಿಯೋ ಸೆರೆ
ಘಟನೆಯ ನಂತರ ಮೃಗಾಲಯದ (Zoo) ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಯುವಕನನ್ನು ರಕ್ಷಿಸಲು ತಕ್ಷಣ ಸ್ಥಳಕ್ಕೆ ಧಾವಿಸಿದರು. ಆದರೆ ಆ ವೇಳೆಗೆ ಸಿಂಹ ಈಗಾಗಲೇ ಯುವಕನಿಗೆ ಮಾರಕ ಗಾಯಗಳನ್ನುಂಟು ಮಾಡಿದ್ದರಿಂದ ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ. ವೈದ್ಯಕೀಯ ಸಿಬ್ಬಂದಿ ಯುವಕನು ಸ್ಥಳದಲ್ಲೇ ಮೃತಪಟ್ಟಿರುವುದನ್ನು ದೃಢಪಡಿಸಿದರು.
ಇದರ ನಡುವೆ, ಯುವಕನು ನಿರ್ಬಂಧಿತ ಮತ್ತು ಅಪಾಯಕರ ಪ್ರದೇಶಕ್ಕೆ ಏಕೆ ನುಗ್ಗಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೃಗಾಲಯದ (Zoo) ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಕೆಲವು ಪ್ರತ್ಯಕ್ಷದರ್ಶಿಗಳು, ಯುವಕನು ಪ್ರದೇಶವನ್ನು ಉದ್ದೇಶಪೂರ್ವಕವಾಗಿ ಪ್ರವೇಶಿಸಿದ್ದರಿಂದ ಆತ ಯಾವುದೋ ಸಾಹಸ ಮಾಡಲು ಯತ್ನಿಸಿದ್ದಾನೆಂದು ಶಂಕಿಸಿದ್ದಾರೆ. ಆದರೆ ನಿಖರ ಕಾರಣ ತನಿಖೆ ಪೂರ್ಣವಾದ ನಂತರವೇ ತಿಳಿದುಬರುವ ಸಾಧ್ಯತೆ ಇದೆ.
ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್ : ಚಲಿಸಿದ ಗೂಡ್ಸ್ ರೈಲು ; ಮುಂದೆನಾಯ್ತು? Video ನೋಡಿ.
ಈ ಘಟನೆ ನಂತರ, ಮೃಗಾಲಯದ (Zoo) ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಹಲವರು ನಿರ್ಬಂಧಿತ ಪ್ರದೇಶಕ್ಕೆ ಯಾರಾದರೂ ಸುಲಭವಾಗಿ ಪ್ರವೇಶಿಸಬಲ್ಲ ಸ್ಥಿತಿ ಗಂಭೀರ ದುರಂತಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಝೂ (Zoo) ನಲ್ಲಿ ಸಿಂಹದ ದಾಳಿಯ ವಿಡಿಯೋ :
View this post on Instagram
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







