ಜನಸ್ಪಂದನ ನ್ಯೂಸ್, ಡೆಸ್ಕ್ : ಹಾರ್ವರ್ಡ್ ವಿಶ್ವವಿದ್ಯಾಲಯದ ಹೊಸ ಸಂಶೋಧನೆಯು ಕಂಡು ಹಿಡಿದಿರುವಂತೆ, ನಾವು ರಾತ್ರಿ (Night) ಸಮಯದಲ್ಲಿ ಬಳಸುವ ಸಣ್ಣ ಪ್ರಮಾಣದ ಕೃತಕ ಬೆಳಕು (Artificial light) ಕೂಡ ಹೃದಯದ ಆರೋಗ್ಯಕ್ಕೆ ಅಪಾಯಕಾರಿ ಆಗಬಹುದು.
ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಹೃದಯಕ್ಕೆ ಹಾನಿಕರವಾಗುವಂತೆ, ಬೆಳಕಿನ ಮಾಲಿನ್ಯವೂ ಹೃದಯದ ಸ್ತರವನ್ನು ಗಂಭೀರವಾಗಿ ಪ್ರಭಾವಿಸುತ್ತದೆ ಎಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.
ಡಾ. ಅಬೋಹಾಶೆಮ್ ಅವರ ತಂಡವು ಹತ್ತು ವರ್ಷಗಳ ಅವಧಿಯಲ್ಲಿ 466 ಆರೋಗ್ಯವಂತ ವ್ಯಕ್ತಿಗಳ ಮೇಲೆ ಈ ಅಧ್ಯಯನ ನಡೆಸಿದ್ದು, ರಾತ್ರಿ (Night) ಬೆಳಕಿಗೆ ಹೆಚ್ಚು ಒಡ್ಡಿಕೊಳ್ಳುವವರಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಗಮನಿಸಿದ್ದಾರೆ:
ಇದನ್ನು ಓದಿ : ರಾಜ್ಯದಲ್ಲಿ ಚಳಿ ಜೊತೆ ಮತ್ತೆ ಮಳೆ – ಮುಂದಿನ 5 ದಿನಗಳ Weather ಮುನ್ಸೂಚನೆ ಬಿಡುಗಡೆ.
- ಮಿದುಳಿನ ಒತ್ತಡ : ರಾತ್ರಿ (Night) ಬೆಳಕಿಗೆ ಒಡ್ಡಿಕೊಳ್ಳುವವರು ಮೆದುಳಿನಲ್ಲಿ ಒತ್ತಡದ ಚಟುವಟಿಕೆ ಹೆಚ್ಚಾಗುತ್ತವೆ.
- ಅಪಧಮನಿಗಳಲ್ಲಿ ಉರಿಯೂತ : ಮೆದುಳಿನ ಒತ್ತಡವು ರಕ್ತನಾಳಗಳಲ್ಲಿ ಉರಿಯೂತವನ್ನು ಉಂಟುಮಾಡುವ ಪ್ರತಿರಕ್ಷಣಾ ಪ್ರತಿಕ್ರಿಯೆ (Immune response) ಯನ್ನು ಪ್ರಚೋದಿಸುತ್ತದೆ. ಇದು ಕಾಲಾನುಕ್ರಮದಲ್ಲಿ ಅಪಧಮನಿಗಳ ಗಟ್ಟಿಯಾಗುವಿಕೆಗೆ ಕಾರಣವಾಗುತ್ತದೆ, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.
ಎಷ್ಟು ಅಪಾಯಕಾರಿ?
ಅಧ್ಯಯನದ ಪ್ರಕಾರ, ರಾತ್ರಿ (Night) ಬೆಳಕಿಗೆ ಹೆಚ್ಚಿನ ಒತ್ತಡವು ಐದು ವರ್ಷಗಳಲ್ಲಿ ಹೃದ್ರೋಗದ ಅಪಾಯವನ್ನು ಸುಮಾರು 35% ಹೆಚ್ಚಿಸುತ್ತದೆ. ಕಡಿಮೆ ಆದಾಯದ ಅಥವಾ ದಟ್ಟಣೆಯ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಈ ಅಪಾಯ ಹೆಚ್ಚು ಕಂಡುಬಂದಿದೆ.
ಇದನ್ನು ಓದಿ : Winter ನಲ್ಲಿ ಈ ಸಣ್ಣ ತಪ್ಪೇ ಬಾತ್ ರೂಮಿನಲ್ಲಿ ಹಠಾತ್ ಸಾವಿಗೆ ಕಾರಣ.!
ರಾತ್ರಿ (Night) ಬೆಳಕು ನಿದ್ರೆ ಮೇಲೆ ಪರಿಣಾಮ :
ಕೃತಕ ಬೆಳಕಿನ ಉಲ್ಲಾಸ ಹೃದಯಕ್ಕಲ್ಲ, ನಮ್ಮ ನಿದ್ರೆ-ಎಚ್ಚರ ಚಕ್ರವನ್ನೂ ಅಡ್ಡಿಪಡಿಸುತ್ತದೆ. ಈ ಕಾರಣದಿಂದ ಕಳಪೆ ನಿದ್ರೆ ಮತ್ತು ನಿದ್ರಾಹೀನತೆ ಉಂಟಾಗಬಹುದು.
ಆಲ್ಜೈಮರ್ಸ್ ಅಪಾಯ :
ಹಿಂದಿನ ಅಧ್ಯಯನಗಳು ತೋರಿಸುವಂತೆ ವಯಸ್ಸಾದವರಲ್ಲಿ ರಾತ್ರಿ (Night) ಯಲ್ಲಿ ಪ್ರಕಾಶಮಾನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಆಲ್ಜೈಮರ್ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ.
ಬೆಳಕಿನ ಮಾಲಿನ್ಯವನ್ನು ಕಡಿಮೆ ಮಾಡಲು ಸುಲಭ ಮಾರ್ಗಗಳು :
- ಮಲಗುವ ಕೋಣೆಯನ್ನು ಕತ್ತಲೆಯಾಗಿ ಮಾಡುವುದು : ಸಾಧ್ಯವಾದಷ್ಟು ಕತ್ತಲೆ ಇರಿಸಿಕೊಳ್ಳಿ.
- ಫೋನ್, ಟಿವಿ ಬಳಕೆ ತಪ್ಪಿಸು : ಮಲಗುವ ಮುನ್ನ ಡಿವೈಸ್ಗಳಿಂದ ದೂರವಿರಿ.
- ಬ್ಲ್ಯಾಕೌಟ್ ಕರ್ಟನ್ಗಳು ಅಥವಾ ಸ್ಲೀಪ್ ಮಾಸ್ಕ್ ಬಳಸಿ : ಹೊರಗಿನ ಬೆಳಕನ್ನು ತಡೆಯಿರಿ.
ಇದನ್ನು ಓದಿ : ಈ ಪುಟ್ಟ ಬೀಜ ಸೇವನೆಯಿಂದ ಗಂಟುಗಳ Uric-Acid ಕರಗಿ, ಕಿಡ್ನಿ ಸ್ಟೋನ್ ಹೊರಬರುತ್ತದೆ.
ಡಾ. ಅಬೋಹಾಶೆಮ್ ಪ್ರಕಾರ, “ಬೆಳಕಿನ ಮಾಲಿನ್ಯವು ಕೇವಲ ಅಸ್ವಸ್ಥತೆ ಅಲ್ಲ, ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತಿದೆ. ಅದನ್ನು ತಡೆಯುವುದು ಬಹಳ ಮುಖ್ಯ.”
Disclaimer:
ಈ ಲೇಖನದಲ್ಲಿ ನೀಡಿರುವ ಮಾಹಿತಿ ಕೇವಲ ಸಾಮಾನ್ಯ ಶೈಕ್ಷಣಿಕ ಮತ್ತು ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ಇದು ವೈದ್ಯಕೀಯ ಸಲಹೆ, Diagnosis ಅಥವಾ ಚಿಕಿತ್ಸೆಗಾಗಿ ಪರಿಗಣಿಸಬಾರದು. ಹೃದಯ, ನಿದ್ರೆ ಅಥವಾ ಯಾವುದೇ ಆರೋಗ್ಯ ಸಮಸ್ಯೆಗಳಿಗಾಗಿ ವೈದ್ಯಕೀಯ ಸಲಹೆ ಪಡೆಯಲು ಪರಾಮರ್ಶಿತ ವೈದ್ಯರನ್ನು ಸಂಪರ್ಕಿಸಿ. ಈ ಲೇಖನದ ಮಾಹಿತಿಯನ್ನು ಜನಸ್ಪಂದನ ನ್ಯೂಸ್ ದೃಢಪಡಿಸಿಲ್ಲ.
ದೇವಸ್ಥಾನದಲ್ಲಿ ನಮಸ್ಕರಿಸುವಾಗ ಮಗಳ ಮೇಲೆ ಮಚ್ಚು ಬೀಸಿದ Mother.

ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಸಂಪಿಗೆಹಳ್ಳಿ ಪ್ರದೇಶದಲ್ಲಿ ಭೀಕರ ಘಟನೆ ಸಂಭವಿಸಿದೆ. ತಾಯಿ (Mother) ತನ್ನ 22 ವರ್ಷದ ಮಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಅಗ್ರಹಾರ ಲೇಔಟ್ ಹರಿಹರೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಪೋಲೀಸ್ ವರದಿಗಳ ಪ್ರಕಾರ, ಹಲ್ಲೆಗೆ ಒಳಗಾದ ಯುವತಿಯನ್ನು ರಮ್ಯಾ ಎಂದು ಗುರುತಿಸಲಾಗಿದೆ. ರಮ್ಯಾ ಕೆಲವು ವರ್ಷಗಳ ಹಿಂದೆ ಸೋಮಶೇಖರ್ ಎಂಬಾತನೊಂದಿಗೆ ಮದುವೆಯಾದಿದ್ದು, ಇಬ್ಬರೂ ಆನೇಕಲ್ನಲ್ಲಿ ಎರಡು ಮಕ್ಕಳೊಡನೆ ವಾಸವಾಗಿದ್ದರು.
ಇನ್ನು ಸಣ್ಣ ಗಲಾಟೆಯಾದರೂ ಸಹ ರಮ್ಯಾ ತನ್ನ ಪತಿ – ಮಕ್ಕಳನ್ನು ಬಿಟ್ಟು ತವರು ಮನೆಗೆ ಓಡಿ ಬರುತ್ತಿದ್ದಳು. ಈ ನಡುವೆ ರಮ್ಯಾ ಮೂರು ದಿನಗಳ ಹಿಂದೆ ತನ್ನ ಎರಡು ಮಕ್ಕಳಿಗೆ ಅರಾಮ ಇಲ್ಲದ ಹಿನ್ನಲೆಯಲ್ಲಿ ಮತ್ತು ತನಗೂ ಆರೋಗ್ಯ ಸರಿ ಇಲ್ಲದರಿಂದ ಪತಿಯ ಜೊತೆ ತಾಯಿ (Mother) ಮನೆಗೆ ಬಂದಿದ್ದಾಳೆ.
ಇದನ್ನು ಓದಿ : Kiss ಕೊಡಲು ಮುಂದಾದ ಪ್ರಿಯಕರ ; ನಾಲಿಗೆಯನ್ನೇ ಕಚ್ಚಿ ಕತ್ತರಿಸಿದ ಪ್ರಿಯತಮೆ.
ಪದೇ ಪದೇ ತನ್ನ ಮಗಳು ತವರು ಮನೆಗೆ ಬರುತ್ತಿರುವುದರಿಂದ ಸಿಟ್ಟಾದ ತಾಯಿ (Mother) ಸರೋಜಮ್ಮ, ಮಗಳ ಜೊತೆ ಜಗಳ ಮಾಡಿದ್ದಾರೆ. ಬುಧವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಅಮವಾಸೆ ಹಿನ್ನೆಲೆಯಲ್ಲಿ ಮಗಳನ್ನು ಮಾತ್ರ ಪೂಜೆಗೆ ಹೋಗೋಣ ಎಂದು ಕರೆದುಕೊಂಡು ಮನೆಯಿಂದ ಸ್ವಲ್ಪವೇ ದೂರ ಇರುವ ದೇವಸ್ಥಾನಕ್ಕೆ ಬಂದಿದ್ದಾರೆ.
ತಾಯಿ (Mother) ಸರೋಜಮ್ಮ ತನ್ನ ಮಗಳ ಜೊತೆಗೆ ಪೂಜೆ ವಸ್ತು ಹಾಗೂ ಮಚ್ಚಿನ ಸಮೇತ ದೇವಸ್ಥಾನ ಬಂದಿದ್ದಾರೆ. ಇದನ್ನೂ ನೋಡಿದ ದೇವಸ್ಥಾನದ (Temple) ಹತ್ತಿರದ ಮನೆಯವರು ಏನಾಗುತ್ತಿದೆ ಎಂದು ನೋಡಲು ಬಂದಿದ್ದಾರೆ. ಜನರನ್ನು ನೋಡಿದ ಸರೋಜಮ್ಮ ಸಿಟ್ಟಾಗಿ ಎಲ್ಲರಿಗೂ ಬೈದು ವಾಪಸ್ ಕಳುಹಿಸಿದ್ದಾಳೆ.
ಸರೋಜಮ್ಮ ಸಿಟ್ಟಾಗಿ ಎಲ್ಲರನ್ನು ಬೈದ ಹಿನ್ನಲೆಯಲ್ಲಿ ಎಲ್ಲರೂ ಹೋದ ಮೇಲೆ ಏನೋ ಪೂಜೆ ಮಾಡಿ, ಮಗಳಿಗೆ ನಮಸ್ಕಾರ ಮಾಡುವಂತೆ ತಿಳಿಸಿದ್ದಾರೆ. ತಾಯಿ (Mother) ಮಾತಿನಂತೆ ಮಗಳು ರಮ್ಯಾ ತಲೆಬಾಗಿ ನಮಸ್ಕರಿಸುವಾಗ ಅವಳ ಕುತ್ತಿಗೆಯ ಭಾಗಕ್ಕೆ ತಾಯಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಇದನ್ನು ಓದಿ : ಈ ಪುಟ್ಟ ಬೀಜ ಸೇವನೆಯಿಂದ ಗಂಟುಗಳ Uric-Acid ಕರಗಿ, ಕಿಡ್ನಿ ಸ್ಟೋನ್ ಹೊರಬರುತ್ತದೆ.
ಮಗಳ ಕುತ್ತಿಗೆಯನ್ನು ಮಚ್ಚಿನಿಂದ ಕತ್ತರಿಸುತ್ತಿದಂತೆಯೇ ತಾಯಿ (Mother) ದೇವಸ್ಥಾನದಿಂದ ಪರಾರಿಯಾಗಿದ್ದಾರೆ. ಈ ಕೃತ್ಯದಿಂದ ತಾಯಿ ತನ್ನ ಮಗಳನ್ನೇ ನರಬಲಿ ಕೊಡೊದಕ್ಕೆ ಮುಂದಾಗಿದ್ದಾಳಾ ಎಂಬ ಅನುಮಾನ ಮೂಡತೊಡಗಿದೆ.
ಇನ್ನು ಮಚ್ಚಿನಿಂದ ಗಂಭೀರವಾದ ಗಾಯಗೊಂಡ ರಮ್ಯಾರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಸದ್ಯ ಸ್ಥಳ ಮಹಜರು ನಡೆಸಿರುವ ಸಂಪಿಗೆಹಳ್ಳಿ ಪೊಲೀಸರು ಆರೋಪಿ ಸರೋಜಮ್ಮಗಾಗಿ ಹುಡುಕಾಟ ನಡೆಸಿದ್ದಾರೆ.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







