karnataka-4-railway-stations-new-names

ಕರ್ನಾಟಕದ ಈ 4 Railway ನಿಲ್ದಾಣಗಳಿಗೆ ಹೊಸ ಹೆಸರು ; ನಿಮ್ಮ ನಿಲ್ದಾಣದ ಹೆಸರೇನು?

ಜನಸ್ಪಂದನ ನ್ಯೂಸ್‌, ಬೆಂಗಳೂರು : ಕರ್ನಾಟಕದ ನಾಲ್ಕು ಪ್ರಮುಖ ಜಿಲ್ಲೆಗಳ ರೈಲು (Railway) ನಿಲ್ದಾಣಗಳಿಗೆ ಹೊಸ ಹೆಸರು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಅಧಿಕೃತ ಪತ್ರ ರವಾನೆ ಮಾಡಿದ್ದಾರೆ.

ಸಂತರಿಂದ ಪ್ರೇರಿತವಾಗಿ, ರೈಲು (Railway)ನಿಲ್ದಾಣಗಳನ್ನು ಸ್ಥಳೀಯ ಸಾಂಸ್ಕೃತಿಕ ಮಹತ್ವದ ಹೆಸರಿನಿಂದ ನಾಮಕರಣ ಮಾಡುವಂತೆ ಶಿಫಾರಸು ಮಾಡಲಾಗಿದೆ.

2025-26ನೇ ಸಾಲಿನ SSLC ಹಾಗೂ ದ್ವಿತೀಯ PUC ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ.!
ಶಿಫಾರಸು ಮಾಡಲಾದ Railway ನಿಲ್ದಾಣಗಳ ಹೊಸ ಹೆಸರು :
  • ವಿಜಯಪುರ : ಶ್ರೀ ಸಿದ್ಧೇಶ್ವರ ಸ್ವಾಮೀಜಿ ರೈಲು ನಿಲ್ದಾಣ.
  • ಬೆಳಗಾವಿ : ಶ್ರೀ ಬಸವ ಮಹಾಸ್ವಾಮೀಜಿ ರೈಲು ನಿಲ್ದಾಣ.
  • ಬೀದರ್ : ಚನ್ನಬಸವ ಪಟ್ಟದ್ದೇವರು ರೈಲು ನಿಲ್ದಾಣ.
  • ಶಿವಮೊಗ್ಗ (ಸೂರಗೊಂಡನಕೊಪ್ಪ) : ಭಾಯಗಡ ರೈಲು ನಿಲ್ದಾಣ.

ಈ ನಾಲ್ಕು ನಿಲ್ದಾಣಗಳು ನೈರುತ್ಯ ರೈಲ್ವೆ (Railway) ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯಲ್ಲಿ ಬರುತ್ತವೆ. ಈ ಭಾಗಗಳಿಗೆ ಸಂತರ ಕೊಡುಗೆ ಮಹತ್ವದ್ದಾಗಿದೆ ಎಂದು ಸಚಿವರು ಹೇಳಿದ್ದಾರೆ. ಅವರು, ಹೊಸ ಹೆಸರುಗಳನ್ನು ಕೇಂದ್ರ ಗೃಹ ಸಚಿವಾಲಯದ ಒಪ್ಪಿಗೆಯ ನಂತರ ಆದಷ್ಟು ಬೇಗ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಮನವಿ ಮಾಡಿದ್ದಾರೆ.

ಮೂಲಸೌಕರ್ಯ ಇಲಾಖೆಯ ಮೂಲಕ ಕಳುಹಿಸಿದ ಈ ಶಿಫಾರಸು, ರಾಜ್ಯದ ರೈಲು (Railway) ನಿಲ್ದಾಣಗಳಿಗೆ ಸಾಂಸ್ಕೃತಿಕ ಗುರುತನ್ನು ನೀಡಲು ಮಹತ್ವಪೂರ್ಣ ಹಂತವಾಗಿದೆ.


ಆಕಸ್ಮಿಕ Snake ಮೇಲೆ ಹರಿದ ಬೈಕ್ – ಮುಂದೆನಾಯ್ತು? ವಿಡಿಯೋ ನೋಡಿ.!

“Biker accidentally runs over a snake on the road”

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಬೈಕ್ ಸವಾರ ಮತ್ತು ಹಾವಿನ (Snake) ನಡುವೆ ನಡೆದ ಭಯಾನಕ ಘಟನೆಯನ್ನ ಸೆರೆಹಿಡಿದಿದ್ದು, ವೀಕ್ಷಕರು ಬೆಚ್ಚಿಬೀಳಿಸುವಂತಹ ದೃಶ್ಯವಾಗಿದೆ.

ಇದು ಕೇವಲ 10 ಸೆಕೆಂಡುಗಳ ಈ ಸಣ್ಣ ಕ್ಲಿಪ್ ಆದರೂ ಸಹ ಮೈಜುಂ ಎನ್ನುವಂತಿದೆ. ಸಾಮಾನ್ಯವಾಗಿ ಕಾಣುವ ಪಾರ್ಕಿಂಗ್ ವೇಳೆ ಹೇಗೆ ಭಯಂಕರ ಕ್ಷಣಗಳು ಉಂಟಾಗಬಹುದು ಎಂಬುದನ್ನು ಈ ವಿಡಿಯೋ ತೋರಿಸುತ್ತದೆ.

ವಿಡಿಯೋದಲ್ಲಿ, ಸವಾರ ತನ್ನ ಬೈಕ್‌ನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಲು ಹೋಗುತ್ತಾನೆ. ಅಷ್ಟರಲ್ಲೇ, ಪಕ್ಕದಲ್ಲಿ ಹಾವು (Snake) ಇರುವುದನ್ನು ಅವನ ಗಮನಕ್ಕೆ ಬಂದಿರಲಿಲ್ಲ. ಬೈಕ್ ಆಕಸ್ಮಿಕವಾಗಿ ಹಾವಿನ ಮೇಲೆ ಹರಿದ ಪರಿಣಾಮ ಹಾಗೂ ಗಾಯಗೊಂಡಿದೆ.

ಗಾಯಗೊಂಡ ಹಾವು ತಕ್ಷಣವೇ ಸವಾರನನ್ನು ಕಚ್ಚಲು ಪ್ರಯತ್ನಿಸಿತ್ತಾದರೂ ಮೊದಲ ಬಾರಿಗೆ  ಸಾಧ್ಯವಾಗಲಿಲ್ಲ, ಆದರೆ ಕೆಲ ಸೆಕೆಂಡುಗಳಲ್ಲಿ ಹಾವು ಮತ್ತೆ ಮುಖಮುತ್ತಿ ಹಾರಿ ಬೈಕ್‌ ಸವಾರನ ಕಾಲನ್ನು ಕಚ್ಚಿತು.

ರಕ್ಷಣಾ ಕಾರ್ಯಾಚರಣೆಯಲ್ಲಿ Leopard ದಾಳಿಯಿಂದ ಪಾರಾದ ಪೊಲೀಸ್ ಅಧಿಕಾರಿ.!

ಬೈಕ್‌ ಸವಾರ ಹಾವೂ (Snake) ಕಚ್ಚುತ್ತಿದಂತೆಯೇ ಭಯಭೀತನಾಗಿ ತಕ್ಷಣ ಬೈಕ್ ನೆಲಕ್ಕೆ ಚಲ್ಲಿ ದೂರ ಓಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಹಾವು ರಸ್ತೆಯಲ್ಲಿ ಒದ್ದಾಡುತ್ತಿರುವುದು ಸಂಪೂರ್ಣ ಘಟನೆ CCTV ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಘಟನಾ ನಂತರ ಸವಾರ ಗಂಭೀರವಾಗಿ ಗಾಯಗೊಂಡಾರೋ ಅಥವಾ ದಪ್ಪ ಬಟ್ಟೆ ಧರಿಸಿದ್ದರಿಂದ ಹಾವಿನ ಕೋರೆಹಲ್ಲು ದೇಹಕ್ಕೆ ತಲುಪಿರಲಿಲ್ಲ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ನಡೆದ ನಿಖರ ಸ್ಥಳವನ್ನು ಕೂಡ ಖಚಿತಪಡಿಸಲಾಗಿಲ್ಲ, ಆದರೆ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳು ಮತ್ತು ಪ್ರತಿಕ್ರಿಯೆಗಳನ್ನು ಪಡೆದಿದೆ.

ಹಾವಿನ (Snake) ವಿಡಿಯೋ :

ಮತ್ತೊಂದು ಭಯಂಕರ ಘಟನೆ ; ಕಾರಿನ ಸೈಡ್ ಮಿರರ್‌ನಲ್ಲಿ ಹಾವು (Snake) :

ತಮಿಳುನಾಡಿನ ನಮಕ್ಕಲ್–ಸೆಲಂ ರಸ್ತೆಯಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದೆ. ಚಾಲಕ ತನ್ನ ಕಾರಿನ ಸೈಡ್ ಮಿರರ್‌ನಲ್ಲಿ ಹಾವು (Snake) ಇದ್ದುದನ್ನು ಕಂಡು, ಭಯದಿಂದ ದಪ್ಪಾಗಿ ಹೋದರು.

ಈ ಘಟನೆಯ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಾಹನ ಓಡಿಸುತ್ತಿರುವವರಿಗೆ ಎಚ್ಚರಿಕೆಯ ಅಗತ್ಯವನ್ನು ನೆನಪಿಸುತ್ತಿದೆ. ವಿಶೇಷವಾಗಿ ಚಳಿಗಾಲ ಮತ್ತು ಮಳೆ ಕಾಲದಲ್ಲಿ, ಹಾವು (Snake) ಗಳು ಅಥವಾ ಇತರ ಸಸ್ತನಿಗಳು ವಾಹನಗಳ ಹತ್ತಿರ ಕಾಣಿಸಿಕೊಳ್ಳಬಹುದು ಎಂದು ಸಾರುತ್ತಿದೆ.

ತಿರುವಿನಲ್ಲಿ ಬಾಲಕನ ಮೇಲೆ ಹರಿದ Lorry ; ಮನಕಲಕುವ ವಿಡಿಯೋ ವೈರಲ್.!
ಗಮನಿಸಬೇಕಾದ ಮುನ್ನೆಚ್ಚರಿಕೆಗಳು :
  • ಅರಣ್ಯ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಬಳಿಯುಳ್ಳ ಪಾರ್ಕಿಂಗ್ ಅಥವಾ ಬೈಕ್ ನಿಲ್ಲಿಸುವಾಗ ಸುತ್ತಲಿನ ಪರಿಸರಕ್ಕೆ ಎಚ್ಚರಿಕೆ ವಹಿಸಬೇಕು.
  • ದಪ್ಪ ಬಟ್ಟೆ ಅಥವಾ ಲಾಂಗ್ ಪ್ಯಾಂಟ್ ಧರಿಸುವುದು ಹಾವಿನ ದಂತಗಳಿಂದ ರಕ್ಷಿಸಬಹುದು.
  • ವಾಹನ ಸವಾರರು ಕಾರಿನ ಸೈಡ್ ಮಿರರ್ ಅಥವಾ ಕಬ್ಬಿಣದ ಭಾಗಗಳಿಗೆ ತಡವಾಗಿ ನೋಡುವುದನ್ನು ತಪ್ಪಿಸಬೇಕು.
  • ಸಿಸಿಟಿವಿ ಅಥವಾ ಮೊಬೈಲ್ ಕ್ಯಾಮೆರಾ ಮೂಲಕ ಸ್ಥಳವನ್ನು ಚೆಕ್ ಮಾಡುವುದರಿಂದ ಮುನ್ನೆಚ್ಚರಿಕೆಯೊಂದಿಗೆ ಇರುತ್ತಾರೆ.

ಈ ರೀತಿ ಸರಳ ಎಚ್ಚರಿಕೆಗಳ ಮೂಲಕ ಸವಾರರು ಮತ್ತು ವಾಹನ ಮಾಲೀಕರು ಹಾವಿನೊಡನೆ ಸಂಭವಿಸಬಹುದಾದ ಅಪಘಾತಗಳಿಂದ ತಪ್ಪಿಸಿಕೊಳ್ಳಬಹುದು.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top