ಜನಸ್ಪಂದನ ನ್ಯೂಸ್, ಡೆಸ್ಕ್ : ರಕ್ತ ಕ್ಯಾನ್ಸರ್ (Blood Cancer) ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷವೂ ವಿಶೇಷ ತಿಂಗಳನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವೈದ್ಯಕೀಯ ತಜ್ಞರು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಲಕ್ಷಣಗಳನ್ನು ತಿಳಿದುಕೊಳ್ಳುವಂತೆ ಎಚ್ಚರಿಸುತ್ತಾರೆ.
ರಕ್ತ ಕ್ಯಾನ್ಸರ್ (Blood Cancer) ಸಾಮಾನ್ಯವಾಗಿ ಮೂಳೆ ಮಜ್ಜೆಯಲ್ಲಿ ಉಂಟಾಗುತ್ತದೆ ಮತ್ತು ಬಿಳಿ ರಕ್ತಕಣಗಳ ಅಸಹಜ ವೃದ್ಧಿ ಇದರ ಪ್ರಮುಖ ಕಾರಣವೆಂದು ಹೇಳಲಾಗುತ್ತದೆ.
ಲಂಚಕ್ಕಾಗಿ ರೂ.75 ಸಾವಿರ ಕೇಳಿದ PSI ಮತ್ತು ಕಾನ್ಸ್ಟೆಬಲ್ ಲೋಕಾಯುಕ್ತರ ಬಲೆಗೆ.!
👉 ರಕ್ತ ಕ್ಯಾನ್ಸರ್ (Blood Cancer) ನ ಪ್ರಮುಖ 7 ಲಕ್ಷಣಗಳು :
- ಗಟ್ಟಿಯಾದ ಊತ : ಕುತ್ತಿಗೆ, ಕಂಕುಳ ಅಥವಾ ಇತರ ಭಾಗಗಳಲ್ಲಿ ನೋವಿಲ್ಲದ ಗಟ್ಟಿಯಾದ ಊತ ಕಂಡುಬಂದರೆ ತಕ್ಷಣ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ.
- ಅತಿಯಾದ ಬೆವರು ಮತ್ತು ಜ್ವರ : ರಾತ್ರಿ ವೇಳೆ ಹೆಚ್ಚು ಬೆವರುವುದು ಹಾಗೂ ಕಾರಣವಿಲ್ಲದ ಜ್ವರ ಕಾಣಿಸಿಕೊಳ್ಳುವುದು ಅಪಾಯದ ಸೂಚನೆ.
- ತೂಕದಲ್ಲಿ ಹಠಾತ್ ಇಳಿಕೆ : ಹಸಿವಿಲ್ಲದಿರುವುದು ಹಾಗೂ ತೂಕ ತಕ್ಷಣ ಕಡಿಮೆಯಾಗುವುದು ಗಮನಿಸಬೇಕಾದ ಮತ್ತೊಂದು ಲಕ್ಷಣ.
- ಆಯಾಸ ಮತ್ತು ಉಸಿರಾಟದ ತೊಂದರೆ : ದೇಹಕ್ಕೆ ಅಗತ್ಯವಾದ ರಕ್ತ ಉತ್ಪಾದನೆ ಸರಿಯಾಗದಿದ್ದರೆ ಶ್ರಮ ಹೆಚ್ಚು ಆಗಿ ಉಸಿರಾಟ ತೊಂದರೆ ಕಾಣಿಸಬಹುದು.
- ರಕ್ತಸ್ರಾವ : ಮೂಗು ಅಥವಾ ಒಸಡಿನಲ್ಲಿ ರಕ್ತಸ್ರಾವವಾಗುವುದು ರಕ್ತ ಕ್ಯಾನ್ಸರ್ನ ಸೂಚನೆಯಾಗಿರಬಹುದು.
- ಮೂಳೆ ಅಥವಾ ಬೆನ್ನು ನೋವು : ವಿಶೇಷವಾಗಿ ಮಲ್ಟಿಪಲ್ ಮೈಲೋಮದ ಸಂದರ್ಭದಲ್ಲಿ ಹೀಗೆ ಕಾಣಿಸಿಕೊಳ್ಳಬಹುದು.
- ಪದೇ ಪದೇ ಸೋಂಕು : ದೇಹದ ಪ್ರತಿರೋಧಕ ಶಕ್ತಿ ಕಡಿಮೆಯಾಗುವ ಕಾರಣ ಪದೇಪದೇ ಸೋಂಕು ಕಾಣಿಸಿಕೊಳ್ಳಬಹುದು.
ಒಂದೇ ಮನೆಯ ಇಬ್ಬರು sisters-in-law ನೆರೆಮನೆಯ ವಿವಾಹಿತನೊಂದಿಗೆ ಪರಾರಿ.!
ತಜ್ಞರ ಪ್ರಕಾರ, ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಮುಖ್ಯ. ಬೇಗ ಪತ್ತೆ ಹಚ್ಚಿದರೆ ಚಿಕಿತ್ಸೆ ಪರಿಣಾಮಕಾರಿ ಆಗಬಹುದು.
ರಕ್ತ ಕ್ಯಾನ್ಸರ್ (Blood Cancer) ಎಂದರೇನು? ಮತ್ತು ಅದರ ವಿಧಗಳು :
ರಕ್ತ ಕ್ಯಾನ್ಸರ್ (Blood Cancer) ದೇಹದ ರಕ್ತಕಣಗಳು, ಮುಖ್ಯವಾಗಿ ಮೂಳೆ ಮಜ್ಜೆ (Bone Marrow) ಅಥವಾ ದುಗ್ಧರಸ ವ್ಯವಸ್ಥೆ (Lymphatic System) ಯಲ್ಲಿ ಅಸಹಜವಾಗಿ ಬೆಳೆಯುವ ಗಂಭೀರ ಕಾಯಿಲೆಯಾಗುತ್ತದೆ. ಈ ಕ್ಯಾನ್ಸರ್ ಕೋಶಗಳು ಸಾಮಾನ್ಯ ರಕ್ತಕಣಗಳ ಕಾರ್ಯವನ್ನು ಅಡ್ಡಿಪಡಿಸುತ್ತವೆ ಮತ್ತು ನಿಯಂತ್ರಣವಿಲ್ಲದೆ ಬೆಳೆಯುತ್ತವೆ. ಪರಿಣಾಮವಾಗಿ ದೇಹದ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚು.
ತಜ್ಞರ ಪ್ರಕಾರ, ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆಯುವುದು ಅವಶ್ಯಕ.
ರಕ್ತ ಕ್ಯಾನ್ಸರ್ನ ವಿಧಗಳು :
- ಲ್ಯೂಕೇಮಿಯಾ (Leukemia):
ಮೂಳೆ ಮಜ್ಜೆಯಲ್ಲಿ ಉಂಟಾಗುವ, ಬಿಳಿ ರಕ್ತಕಣಗಳ ಅಸಹಜ ಬೆಳವಣಿಗೆಯಿಂದ ಉಂಟಾಗುವ ಕ್ಯಾನ್ಸರ್. - ಲಿಂಫೋಮಾ (Lymphoma):
ದುಗ್ಧರಸ ವ್ಯವಸ್ಥೆಯಲ್ಲಿ ಪ್ರಾರಂಭವಾಗುವ ಈ ಕ್ಯಾನ್ಸರ್, ಲಿಂಫೋಸೈಟ್ಗಳೆಂಬ ಬಿಳಿ ರಕ್ತಕಣಗಳ ಮೇಲೆ ಪರಿಣಾಮ ಬೀರುತ್ತದೆ. - ಮೈಲೋಮಾ (Myeloma):
ಮೂಳೆ ಮಜ್ಜೆಯಲ್ಲಿರುವ ಪ್ಲಾಸ್ಮಾ ಕೋಶಗಳಲ್ಲಿ ಪ್ರಾರಂಭವಾಗುವ ಕ್ಯಾನ್ಸರ್.
Wheat : 21 ದಿನ ಗೋಧಿ ಚಪಾತಿ ತಿನ್ನೋದು ಬಿಟ್ಟರೆ ಏನಾಗುತ್ತೇ ಗೊತ್ತಾ.?
ಸಂಪಾದಕೀಯ : ರಕ್ತ ಕ್ಯಾನ್ಸರ್ (Blood Cancer) ಒಂದು ಜೀವಕ್ಕೆ ಅಪಾಯಕಾರಿಯಾದ ಕಾಯಿಲೆಯಾಗಿದ್ದರೂ, ಶೀಘ್ರ ಪತ್ತೆ ಹಾಗೂ ಸೂಕ್ತ ಚಿಕಿತ್ಸೆಯಿಂದ ನಿಯಂತ್ರಿಸಲು ಸಾಧ್ಯ. ಆದ್ದರಿಂದ, ಯಾವುದೇ ಅಸಹಜ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅತ್ಯಂತ ಮುಖ್ಯ.
Dowry ಕಿರುಕುಳಕ್ಕೆ ಬೇಸತ್ತು ಮನೆಯ ಮೇಲಿಂದ ಜಿಗಿದ ಮಹಿಳೆ : ಆಘಾತಕಾರಿ ವಿಡಿಯೋ ವೈರಲ್.
ಜನಸ್ಪಂದನ ನ್ಯೂಸ್, ಡೆಸ್ಕ್ : ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ (Dowry) ಕಿರುಕುಳದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಮನೆಯ ಮೇಲ್ಛಾವಣಿಯಿಂದ ಹಾರಿರುವ ಆಘಾತಕಾರಿ ಘಟನೆ ನಡೆದಿದೆ.
Hotel ನಲ್ಲಿ ಹೃದಯಾಘಾತದಿಂದ ಮೃತಪಟ್ಟ 66 ವರ್ಷದ ವ್ಯಕ್ತಿ ; ಕಾರಣ ಕೇಳಿದ್ರೆ ಶಾಕ್ ಆಗತ್ತೀರಾ.!
ಈ ವೇಳೆ ಗಾಯಗೊಂಡ ಮಹಿಳೆ ಮೇಲೆ ಆಕೆಯ ಅತ್ತೆ–ಮಾವ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವರದಕ್ಷಿಣೆ (Dowry) ಕಿರುಕುಳದ ಘಟನೆಯು ಇಗ್ಲಾಸ್ ತಹಸಿಲ್ ವ್ಯಾಪ್ತಿಯ ದಮ್ಕೌಲಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಗಳಲ್ಲಿ ತಿಳಿದುಬಂದಿದೆ. ಅರ್ಚನಾ ಎಂದು ಗುರುತಿಸಲಾದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Nerve-Weakness : ನರಗಳ ದೌರ್ಬಲ್ಯವನ್ನು ನಿರ್ಲಕ್ಷಿಸಬೇಡಿ ; ಇದು ತುಂಬಾ ಅಪಾಯಕಾರಿ.!
ವಿಡಿಯೋದಲ್ಲಿ ಮಹಿಳೆ ವರದಕ್ಷಿಣೆ (Dowry) ಕಿರುಕುಳಕ್ಕೆ ಎರಡು ಅಂತಸ್ತಿನ ಮನೆಯ ಛಾವಣಿಯ ಅಂಚಿನಲ್ಲಿ ನಿಂತಿರುವುದು, ಅತ್ತೆ–ಮಾವ ಅವಳ ಮೇಲೆ ಒತ್ತಡ ಹೇರುತ್ತಿರುವುದು ಮತ್ತು ಹಾರಿದ ತಕ್ಷಣ ನೆಲಕ್ಕೆ ಬಿದ್ದ ನಂತರ ಹೊಡೆಯುತ್ತಿರುವ ದೃಶ್ಯಗಳು ದಾಖಲಾಗಿವೆ.
ಈ ಸಮಯದಲ್ಲಿ ಸ್ಥಳದಲ್ಲಿದ್ದ ಇನ್ನೊಬ್ಬ ವ್ಯಕ್ತಿ “ಮರ್ ಜಾನೆ ದೋ” (ಅವಳು ಸಾಯಲಿ) ಎಂದು ಹೇಳಿರುವುದು ಸ್ಪಷ್ಟವಾಗಿ ಕೇಳಿಬಂದಿದೆ. ಇನ್ನು ಘಟನೆಯ ಸಂದೃಭದಲ್ಲಿ ಅಪ್ರಾಪ್ತ ಮಗು ಅಳುತ್ತಿರುವ ಅಮ್ಮಾ ಅಮ್ಮಾ ಎನ್ನುವ ಧ್ವನಿಯೂ ಸಹ ಕೇಳುತ್ತಿದೆ.
ನೆರೆಮನೆಯವರ ಮಾತನ್ನು ಕುತೂಹಲ ಕದ್ದು ಕೇಳುತ್ತಿರುವ aunty ವಿಡಿಯೋ ವೈರಲ್.!
ಮಹಿಳೆ ಅರ್ಚನಾ ಸುಮಾರು ಆರು ವರ್ಷಗಳ ಹಿಂದೆ ಸೋನು ಎಂಬುವವರನ್ನು ವಿವಾಹವಾಗಿದ್ದರು. ಮದುವೆ ವೇಳೆ ಅವರ ಕುಟುಂಬವು ಸುಮಾರು 10 ಲಕ್ಷ ರೂಪಾಯಿ ವೆಚ್ಚ ಮಾಡಿದ್ದರೂ, ನಂತರವೂ ಅತ್ತೆ–ಮಾವಂದಿರು ಬುಲೆಟ್ ಮೋಟಾರ್ ಸೈಕಲ್ ಮತ್ತು 5 ಲಕ್ಷ ರೂಪಾಯಿ ನಗದು (Dowry) ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿ ಹೊರಬಂದಿದೆ.
ಈ ಘಟನೆಯ ಸಂಬಂಧ Dowry ಸಂಬಂಧಿತ ಕಾನೂನು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
IBPS-RRB ನೇಮಕಾತಿ : ಒಟ್ಟು 13217 ಹುದ್ದೆಗಳ ಖಾಲಿ ಸ್ಥಾನ ; ಈಗಲೇ ಅರ್ಜಿ ಸಲ್ಲಿಸಿ.!
ವರದಕ್ಷಿಣೆ (Dowry) ಕಿರುಕುಳಕ್ಕೆ ಮನೆಯ ಮೇಲಿಂದ ಹಾರುತ್ತಿರುವ ಮಹಿಳೆಯ ವಿಡಿಯೋ :
अलीगढ़, यूपी: ससुरालियो की प्रताड़ना से परेशान होकर विवाहिता ने छत से लगाई छलांग। वीडियो बना रही महिला ने भी उन्हें बचाने की कोशिश नहीं करी, बाद में रोने का दिखावा करने लगी। वीडियो में साफ तौर से सुना जा रहा है कि महिला को कूदने पर उकसाया गया। महिला के जमीन पर गिरते ही एक पुरुष… pic.twitter.com/6UihbQoUjN
— Krishna Chaudhary (@KrishnaTOI) September 3, 2025