ಜನಸ್ಪಂದನ ನ್ಯೂಸ್, ಕಲಬುರಗಿ : ಬಿಜೆಪಿ ಮುಖಂಡರೊಬ್ಬರನ್ನು ಬ*ರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿ ನಡೆದಿದೆ.
ಬ*ರ್ಬರವಾಗಿ ಹ*ತ್ಯೆಯಾದ ಬಿಜೆಪಿ ಮುಖಂಡರನ್ನು ಗಿರೀಶ್ ಚಕ್ರ ಎಂದು ತಿಳಿದು ಬಂದಿದೆ. ಇವರು ಸಂಸದ ಡಾ. ಉಮೇಶ್ ಜಾಧವ್ ಬೆಂಬಲಿಗರು ಕೂಡ ಆದಗಿದ್ದರೆಂದು ಹೇಳಲಾಗುತ್ತಿದೆ.
PUC ಆದವರು KEA ಮ್ಯಾನೇಜರ್ ಗ್ರೇಡ್-III ಮೇಲ್ವಿಚಾರಕೇತರ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿ.
ಹ*ತ್ಯೆಯಾದ ಗಿರೀಶ್ ಚಕ್ರ ಅವರನ್ನು ನಾಲ್ಕು ದಿನಗಳ ಹಿಂದೆಯಷ್ಟೇ BSNL ಸಲಹಾ ಸಮಿತಿ ನಿರ್ದೇಶಕರನ್ನಾಗಿ ಸಂಸದ ಉಮೇಶ್ ಜಾಧವ್ ನೇಮಕ ಮಾಡಿದ್ದರು.
BSNL ಸಲಹಾ ಸಮಿತಿ ನಿರ್ದೇಶಕರ ಅಂತ ಆಯ್ಕೆಯಾದ ಖುಷಿಯಲ್ಲಿ ಅವರಿಗೆ ಪಾರ್ಟಿ ಕೊಡಲೆಂದ ಸ್ನೇಹಿತರೇ ಜಮೀನಿಗೆ ಕರೆಸಿದ್ದರು ಎಂದು ಹೇಳಲಾಗುತ್ತಿದೆ.
Astrology : ಮಾ. 1ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಈ ಹಿನ್ನೆಲೆಯಲ್ಲಿ ಪಾರ್ಟಿಗೆಂದು ಜಮೀನಿಗೆ ಬಂದ ಗಿರೀಶ್ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಬ*ರ್ಬರವಾಗಿ ಹ*ತ್ಯೆ ಮಾಡಲಾಗಿದೆ.
ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಗಾಣಗಾಪುರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.