Tuesday, September 17, 2024
spot_img
spot_img
spot_img
spot_img
spot_img
spot_img
spot_img

ಬಡ ರೈತನಿಂದ 1 ಸಾವಿರ ರೂ. ಕೇಳಿದ ASI ; ಏಕೆ ಗೊತ್ತೇ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೀದರ್ : ಬೀದರ್ ಜಿಲ್ಲೆಯ ಹುಲಸೂರು (Hulasuru) ತಾಲೂಕಿನ ಬೇಲೂರು ಗ್ರಾಮದಲ್ಲಿ ಎಎಸ್ಐ ಅಧಿಕಾರಿಯೊಬ್ಬರು ರೈತನ ಬಳಿ ಚಿಲ್ಲರೆ ಹಣಕ್ಕೆ ಕೈ ಚಾಚಿದ ಘಟನೆ ನಡೆದಿದೆ.

ಹುಲಸೂರು ಠಾಣೆಯ ಎಎಸ್ಐ ಶೌರಾಜ್ ಈ‌ ರೀತಿ ರೈತನಿಂದ ಲಂಚ (bribe) ಸ್ವೀಕರಿಸಿದ್ದಾರೆ.

ಇದನ್ನು ಓದಿ : ಅಕ್ಕಿ ಸಾಲ ಪಡೆದ ಅಧಿಕಾರಿ Suspend.!

ಎಎಸ್ಐ ಬಡ ರೈತನ ಬಳಿ 1 ಸಾವಿರ ರೂಪಾಯಿಗೆ ಬೇಡಿಕೆಯಿಟ್ಟು, ಬಳಿಕ 400 ರೂ. ಪಡೆದಿದ್ದಾರೆ.

ಹೊಲದಲ್ಲಿ ಟ್ರಾನ್ಸ್‌ಫಾರ್ಮರ್ ಅವಾಂತರದಿಂದ 2 ಎಕರೆ ಕಬ್ಬಿನ ಬೆಳೆ ಸುಟ್ಟು ಬೂದಿಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಮಾಜಿ ಎಂಎಲ್ಸಿ ವಿಜಯಸಿಂಗ್ ತೆರಳಿ ಅಧಿಕಾರಿಗಳಿಗೆ (officer) ಕ್ಲಾಸ್ ತೆಗೆದುಕೊಂಡಿದ್ದರು.

ಬಳಿಕ ಸ್ಥಳದ ಪಂಚನಾಮೆಗೆ ಎಎಸ್ಐ ಶೌರಾಜ್ ತೆರಳಿದ್ದರು. ಪಂಚನಾಮೆಗೆ ಬಂದಿದ್ದಕ್ಕೆ ಖರ್ಚು ಆಗಿದೆ. ಆ ಖರ್ಚು ಕೊಡಿ ಎಂದು ಎಎಸ್ಐ 1,000 ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.

ಇದನ್ನು ಓದಿ : ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಕಣ್ಣೀರು ಹಾಕಿದ ಮಹಿಳಾ ಅಧಿಕಾರಿ ; Video viral.!

ಬಡ ರೈತ‌ ಹಣ ಇಲ್ಲವೆಂದು ಹೇಳಿದ್ದಾರೆ. ಆದರೂ ಇದನ್ನು ಕೇಳದ ಎಎಸ್ಐ ಕೊನೆಗೆ 400 ರೂಪಾಯಿಗಳನ್ನ ಬೇರೆಯವರ ಮೊಬೈಲ್ ಗೆ ಫೋನ್ ಪೇ (phone pay) ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img