ಜನಸ್ಪಂದನ ನ್ಯೂಸ್, ಬೆಂಗಳೂರು : ಮಹಿಳೆಯೊಬ್ಬರು ಸ್ಯಾಂಡಲ್ವುಡ್ ನಟ ಮಯೂರ್ ಪಟೇಲ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಹಿಳೆ ಕೊಟ್ಟ ದೂರಿನ ಹಿನ್ನೆಲೆ ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಇದನ್ನು ಓದಿ : ಬೆಳಗಾವಿಯ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ನಟ ಮಯೂರ್ ಪಟೇಲ್ ಅವರು ಲಿಟಿಗೇಷನ್ ಪ್ರಾಪರ್ಟಿಗೆ ಅಪರಿಚಿತರನ್ನು ಬಿಟ್ಟು ದಾಂಧಲೆ ಮಾಡಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮಹಿಳೆಗೆ ಸೇರಿದ್ದ 14.5 ಗುಂಟೆ ಜಮೀನು ಲಿಟಿಗೇಷನ್ನಲ್ಲಿದೆ. ಮಹಿಳೆಯ ಪತಿ ಮಂಜುನಾಥ ರೆಡ್ಡಿಗೆ ದಾನವಾಗಿ ಬಂದಿದ್ದ ಜಮೀನಿನಲ್ಲಿ ಹಕ್ಕು ಸ್ವಾಧೀನದಲ್ಲಿರುತ್ತಾರೆ.
ಸುಬ್ರಮಣ್ಯಂ ಮಾಸ್, ಎನ್ ಆರ್ ಭಟ್ ಹಾಗೂ ಮಯೂರ್ ಪಟೇಲ್ ಜಿಪಿಎ ಹೋಲ್ಡರ್ ಆಗಿರುತ್ತಾರೆ. ಹೀಗಾಗಿ ಕೋರ್ಟ್ ನಲ್ಲಿ ದಾವೆ ಹೂಡಿದ್ರು. ಮಂಜುನಾಥ್ ರೆಡ್ಡಿಯ ಪರವಾಗಿ ಆದೇಶ ಬಂದಿತ್ತು. ಆದೇಶವನ್ನ ಉಲ್ಲಂಘಿಸಿ ನಟ ಮಯೂರ್ ಕಡೆಯವರು ಅಕ್ರಮವಾಗಿ ಶಾಲಿನಿ ಅವರ ಜಾಗಕ್ಕೆ ಜೆಸಿಬಿ ನುಗ್ಗಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : ವಿಚ್ಛೇದನದ ಬಳಿಕ ಸೊಸೆ, ಅತ್ತೆ -ಮಾವನ ಮನೆಯಲ್ಲಿ ಇರುವಂತಿಲ್ಲ; High court ಮಹತ್ವದ ತೀರ್ಪು.!
ಅಷ್ಟೇ ಅಲ್ಲದೇ ಜಾಗದಲ್ಲಿದ್ದ ಕಾಂಪೌಂಡ್ ಕೆಡವಿದ ಮಯೂರ್ ಪಟೇಲ್ ಅವರು ಅಕ್ರಮವಾಗಿ ಶೆಡ್ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಂಬಂಧ ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.