ಶುಕ್ರವಾರ, ಜನವರಿ 2, 2026

Janaspandhan News

HomeViral VideoRoad ನಲ್ಲಿ ಬಿದ್ದ ಮಹಿಳೆಯ 50,000 ರೂ. ಕದ್ದ ಬೈಕರ್ ಕ್ಷಣಾರ್ಧದಲ್ಲಿ ಪರಾರಿ ; ವಿಡಿಯೋ...
spot_img
spot_img
spot_img

Road ನಲ್ಲಿ ಬಿದ್ದ ಮಹಿಳೆಯ 50,000 ರೂ. ಕದ್ದ ಬೈಕರ್ ಕ್ಷಣಾರ್ಧದಲ್ಲಿ ಪರಾರಿ ; ವಿಡಿಯೋ ವೈರಲ್.

- Advertisement -

ಜನಸ್ಪಂದನ ನ್ಯೂಸ್‌, ಜೈಪುರ : ರಾಜಸ್ತಾನದ ಜೈಪುರದ ಬಜಾಜ್ ನಗರದಲ್ಲಿ ಹಗಲು ದರೋಡೆ ರೀತಿಯ ಘಟನೆ ನಡೆದಿದೆ. ಶಾಪಿಂಗ್‌ಗೆ ಬಂದಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ನೆಲಕ್ಕೆ ಕೆಡವಿದ್ದ 50 ಸಾವಿರ ರೂಪಾಯಿ ಇರುವ ಹಣದ ಬಂಡಲ್‌ನ್ನು ಇಬ್ಬರು ಬೈಕರ್‌ಗಳು ಎತ್ತಿಕೊಂಡು ಪರಾರಿಯಾಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿವೆ.

ಶಾಪಿಂಗ್ ವೇಳೆ ಬಿದ್ದ ರೂ.50 ಸಾವಿರ :

ಬರ್ಕತ್ ನಗರದಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಶಾಪಿಂಗ್‌ಗೆ ಬಂದಿದ್ದ ಮಹಿಳೆ ರಸ್ತೆ (Road) ದಾಟುವಾಗ, ಕೈಯಲ್ಲಿದ್ದ 50,000 ರೂ ನಗದು ಇರುವ ಬಂಡಲ್ ಜಾರಿಬಿದ್ದು ರಸ್ತೆಗೆ ಬಿದ್ದಿದೆ. ಜನಸಂದಣಿ ಮತ್ತು ಜಾಕೆಟ್ ಹಾಕಿಕೊಳ್ಳುವ ಗಡಿಬಿಡಿಯಲ್ಲಿ ರಸ್ತೆಗೆ (Road) ಹಣ ಬಿದ್ದಿರುವುದನ್ನು ಮಹಿಳೆ ಗಮನಿಸದೇ ಹಾಗೆಯೇ ಮುಂದೆ ಸಾಗಿದ್ದಾರೆ.

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಬೈಕರ್‌ಗಳು ಕ್ಷಣಾರ್ಧದಲ್ಲಿ ಹಣ ಎತ್ತಿಕೊಂಡು ಪರಾರಿ :

ಅದೇ ವೇಳೆ ಬಂದ ಇಬ್ಬರು ಬೈಕ್ ಸವಾರರು ರಸ್ತೆ (Road) ಯಲ್ಲಿ ಬಿದ್ದಿದ್ದ ಹಣವನ್ನು ಗಮನಿಸಿ ಕ್ಷಣಾರ್ಧದಲ್ಲಿ ಬೈಕ್ ನಿಲ್ಲಿಸಿದ್ದಾರೆ. ಹಿಂಬದಿ ಸವಾರ ಕೆಳಗಿಳಿದು ರಿಕ್ಷಾ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ ಬಿದ್ದ ಹಣವನ್ನು ಎತ್ತಿಕೊಂಡು, ಮಹಿಳೆ ಅರಿತುಕೊಳ್ಳುವಷ್ಟರಲ್ಲಿ ಬೈಕ್‌ಗೆ ಏರಿ ಪರಾರಿಯಾಗಿದ್ದಾರೆ.

ರಸ್ತೆ (Road) ಮೇಲೆ ತಮ್ಮ ಹಣ ಬಿದ್ದಿದೆ ಎಂದು ಗಮನಿಸಿದ ಮಹಿಳೆ ಬೈಕ್ ನಿಲ್ಲಿಸಲು ಓಡಿ ಬಂದರೂ, ದುಷ್ಕರ್ಮಿಗಳು ಅವರನ್ನು ತಳ್ಳಿ ಸಂಚಾರ ದಟ್ಟಣೆಯ ನಡುವೆ ಪರಾರಿಯಾಗಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ಸ್ಪಷ್ಟ ದೃಶ್ಯ :

ಈ ಘಟನೆಯ ದೃಶ್ಯ ರಸ್ತೆ (Road) ಬದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇದನ್ನು ಓದಿ : ಮುಗಿದ Rasgulla ; ರಣಾಂಗಣದಂತಾಯ್ತು ಮದುವೆ ಹಾಲ್‌ ; ಗಲಾಟೆಯ ವಿಡಿಯೋ ವೈರಲ್.

ಮದುವೆ ಶಾಪಿಂಗ್‌ಗೆ ಬಂದಿದ್ದ ಮಹಿಳೆ :

SHO ಪೂನಂ ಚೌಧರಿ ನೀಡಿರುವ ಮಾಹಿತಿಯ ಪ್ರಕಾರ, “ಮಹಿಳೆ ತಮ್ಮ ಮಗಳೊಂದಿಗೆ ಮದುವೆ ಶಾಪಿಂಗ್‌ಗಾಗಿ ಜೈಪುರಕ್ಕೆ ಬಂದಿದ್ದರು. ಜನಸಂದಣಿ ಇರುವ ಬರ್ಕತ್ ನಗರದಲ್ಲಿ ರಸ್ತೆ (Road) ದಾಟುವಾಗ ಮತ್ತು ಜಾಕೆಟ್ ಹಾಕಿಕೊಳ್ಳುವ ಅವಸರದ ವೇಳೆ ಹಣ ಬಿದ್ದಿದೆ. ಬೈಕರ್‌ಗಳು ಈ ಅವಕಾಶವನ್ನು ಬಳಸಿಕೊಂಡು ನಗದನ್ನು ಕದ್ದಿದ್ದಾರೆ,” ಎಂದು ತಿಳಿಸಿದ್ದಾರೆ.

FIR ದಾಖಲು :

ಸ್ಥಳೀಯ ಬಜಾಜ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ FIR ದಾಖಲಿಸಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸುವ ಕಾರ್ಯ ಕೈಗೊಂಡಿದ್ದಾರೆ.

ವಿಡಿಯೋ :


ರೀಲ್ಸ್‌ಗಾಗಿ ಗಂಟೆಗೆ 140 ಕಿ.ಮೀ ವೇಗದಲ್ಲಿ KTM ಬೈಕ್ ಚಾಲನೆ ; ತುಂಡಾಗಿ ತಲೆ.

ktm rider fatal-accident

ಜನಸ್ಪಂದನ ನ್ಯೂಸ್‌, ಸೂರತ್‌ : ಗುಜರಾತ್‌ನ ಸೂರತ್ ನಗರದಲ್ಲಿ ಭೀಕರ ಅಪಘಾತ ಸಂಭವಿಸಿ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿದ್ದ ಯುವ ಇನ್‌ಫ್ಲುವೆನ್ಸರ್ ದುರ್ಮರಣ ಹೊಂದಿದ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ‘ಪಿಕೆಆರ್ ಬ್ಲಾಗರ್’ ಎಂದು ಪರಿಚಿತರಾದ ಪ್ರಿನ್ಸ್ ಪಟೇಲ್, ರೀಲ್ ಚಿತ್ರೀಕರಣಕ್ಕಾಗಿ ಅತಿ ವೇಗದಲ್ಲಿ ಬೈಕ್ (KTM Bike) ಸವಾರಿ ಮಾಡುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಭೀಕರವಾಗಿ ಬಿದ್ದಿದ್ದಾರೆ.

ಘಟನೆ ಸೂರತ್‌ನ ಗ್ರೇಟ್ ಲೈನರ್ ಸೇತುವೆಯ ಬಳಿಯಲ್ಲಿ ನಡೆದಿದೆ. ಪ್ರಿನ್ಸ್ ತಮ್ಮ ಕೆಟಿಎಂ ಬೈಕ್ (KTM Bike) ಅನ್ನು ಗಂಟೆಗೆ ಸುಮಾರು 140 ಕಿ.ಮೀ ವೇಗದಲ್ಲಿ ಚಲಾಯಿಸುತ್ತಿದ್ದಾಗ ಸಮತೋಲನ ಕಳೆದುಕೊಂಡು ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತವು ಎಷ್ಟು ಭೀಕರವಾಗಿತ್ತೆಂದರೆ ಬೈಕ್‌ (KTM Bike) ಕೆಲವು ನೂರು ಮೀಟರ್‌ಗಳವರೆಗೆ ಸ್ಕಿಡ್ ಆಗಿದ್ದು, ಪ್ರಿನ್ಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ಅಪಘಾತದ ಸಿಸಿಟಿವಿ ದೃಶ್ಯ ವೈರಲ್ :

ಸಿಸಿಟಿವಿ ದೃಶ್ಯಗಳಲ್ಲಿ ಪ್ರಿನ್ಸ್ ಸೇತುವೆಯ ಇಳಿಜಾರಿನಲ್ಲಿ ಅತೀವೇಗದಲ್ಲಿ KTM ಬೈಕ್ ಚಲಾಯಿಸುತ್ತಿರುವುದು ಮತ್ತು ಕ್ಷಣಾರ್ಧದಲ್ಲೇ ನಿಯಂತ್ರಣ ತಪ್ಪಿಸುವುದು ಕಾಣಿಸುತ್ತದೆ. ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ, ಅಪಘಾತದ ಸಮಯದಲ್ಲಿ ಅವರು ಹೆಲ್ಮೆಟ್ ಧರಿಸಿರಲಿಲ್ಲ, ಇದು ಗಂಭೀರ ಗಾಯಗಳಿಗೆ ಕಾರಣವಾಗಿದೆ.

ಕುಟುಂಬದ ದುಸ್ಥಿತಿ :

ಪ್ರಿನ್ಸ್ ಕುಟುಂಬ ಆರ್ಥಿಕವಾಗಿ ಅತಿಯಾಗಿ ಹಿಂದುಳಿದಿದ್ದು, ಅವರ ತಾಯಿ ಆಶ್ರಯ ತಾಣದಲ್ಲಿ ವಾಸಿಸುತ್ತಾ ಹಾಲು ಮಾರಾಟದ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಮಗನ ಅಕಾಲಿಕ ಸಾವು ಕುಟುಂಬಕ್ಕೆ ಶೋಕಾಂತಿಕೆಯಾಗಿರುವುದು ಸ್ಥಳೀಯರು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದ ಪ್ರಿನ್ಸ್ :

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಪ್ರಿನ್ಸ್ ಪಟೇಲ್ ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಯುವಕರಲ್ಲಿ, ವೇಗದ ಬೈಕಿಂಗ್ ವಿಡಿಯೊಗಳಿಂದಷ್ಟು ಜನಪ್ರಿಯರಾಗಿದ್ದರು.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅವರು ಹೊಸ ಕೆಟಿಎಂ ಬೈಕ್ (KTM Bike) ಖರೀದಿಸಿದ್ದರು ಮತ್ತು ಅದನ್ನು ‘ಲೈಲಾ’ ಎಂದು ಕರೆಯುತ್ತಿದ್ದರು. ಬೈಕ್‌ (KTM Bike) ನ ಫೋಟೋಗಳು, ರೀಲ್‌ಗಳು ಮತ್ತು ಸವಾರಿ ವಿಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಿದ್ದರು.

ಅಂತೆಯೇ, ನಾಲ್ಕು ದಿನಗಳ ಹಿಂದೆ ಅವರು ತಮ್ಮ ಸಾವನ್ನು ಉಲ್ಲೇಖಿಸುವಂತಹ ಒಂದು ಕ್ರಿಯೇಟಿವ್ ವಿಡಿಯೋ ಹಂಚಿಕೊಂಡಿದ್ದು, “ಮರಣದ ನಂತರವೂ ನನ್ನ ಲೈಲಾ (KTM Bike) ವನ್ನು ಪ್ರೀತಿಸುತ್ತೇನೆ” ಎಂಬ ಸಂದೇಶ ಸೇರಿಸಿದ್ದರು. ಈಗ ಅದು ದುಃಖದ ಸಂಧರ್ಭದಲ್ಲಿ ಮತ್ತಷ್ಟು ವೈರಲ್ ಆಗಿದೆ.

ಪ್ರಕರಣ ದಾಖಲು ; ಮುಂದುವರೆದ ತನಿಖೆ :

ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿ, ಅಗತ್ಯ ತನಿಖೆ ಕೈಗೊಂಡಿದ್ದಾರೆ. ಅತಿವೇಗ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ಅಂದಾಜು ವ್ಯಕ್ತವಾಗಿದೆ.

ಇದನ್ನು ಓದಿ : ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.

ವಿಡಿಯೋ :

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

- Advertisement -
Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments