Wednesday, March 12, 2025
HomeSpecial Newsಮೊದಲ ಗಂಡನಿಂದ ಡಿವೋರ್ಸ್ ಪಡೆಯದಿದ್ದರೂ 2ನೇ ಪತಿಯಿಂದ ಹೆಂಡತಿ ಜೀವನಾಂಶ ಪಡೆಯಬಹುದು : ಸುಪ್ರೀಂ ಕೋರ್ಟ್
spot_img
spot_img
spot_img
spot_img
spot_img

ಮೊದಲ ಗಂಡನಿಂದ ಡಿವೋರ್ಸ್ ಪಡೆಯದಿದ್ದರೂ 2ನೇ ಪತಿಯಿಂದ ಹೆಂಡತಿ ಜೀವನಾಂಶ ಪಡೆಯಬಹುದು : ಸುಪ್ರೀಂ ಕೋರ್ಟ್

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಜೀವನಾಂಶದ (sustenance) ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಮಾಹಿತಿಯನ್ನು ನೀಡಿದೆ.

ಕಾನೂನುಬದ್ಧವಾಗಿ (legally) ಮೊದಲ ಮದುವೆಯ ವಿಚ್ಚೇದನ ಪಡೆಯದಿದ್ದರೂ ಸಹ, ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 125 ರ ಅಡಿಯಲ್ಲಿ ಮಹಿಳೆ ತನ್ನ ಎರಡನೇ ಪತಿಯಿಂದ ಜೀವನಾಂಶವನ್ನು ಕೋರಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ (Supreme Court said that maintenance can be sought from the second husband).

ಇದನ್ನು ಓದಿ : ಮದುವೆಯ ದಿನವೇ ವಧುವಿನ ಮೇಲೆ ಕೈ ಮಾಡಿದ PSI ; ವಿಡಿಯೋ ವೈರಲ್.!

ಮಹಿಳೆ ಮತ್ತು ಆಕೆಯ ಮೊದಲ ಪತಿ ಬೇರೆ ಬೇರೆ ವಾಸಿಸುತ್ತಿದ್ದರೂ, ಕಾನೂನುಬದ್ಧವಾಗಿ ಡಿವೋರ್ಸ್ ಪಡೆಯದಿದ್ದರೂ ಕೂಡ ಸಹ ಮಹಿಳೆ ತನ್ನ ಎರಡನೇ ಪತಿಯಿಂದ ಜೀವನಾಂಶವನ್ನು ಪಡೆಯಬಹುದು ಎಂದು ಕೋರ್ಟ್ ಹೇಳಿದೆ.

ತೆಲಂಗಾಣ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮಹಿಳೆಗೆ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಬಿ. ವಿ. ನಾಗರತ್ನ ಅವರ ನ್ಯಾಯಪೀಠ ಪರಿಹಾರ (woman has been compensated) ನೀಡಿದೆ.

ಇದನ್ನು ಓದಿ : ಮಹಾಕುಂಭ ಮೇಳಕ್ಕೆ ಮತ್ತೇ ವಿಶೇಷ ಎಕ್ಸ್‌ಪ್ರೆಸ್ Railway ಸಂಚಾರ ; ಇಲ್ಲದೇ ಸಂಪೂರ್ಣ ಮಾಹಿತಿ.!

ಅಲ್ಲದೇ ಮಹಿಳೆಯ ಮೊದಲ ಗಂಡನೊಂದಿಗಿನ ವಿವಾಹವು ಕಾನೂನುಬದ್ಧವಾಗಿ ವಿಸರ್ಜಿಸದ ಕಾರಣ (Due to not being legally dissolved) ಎರಡನೇ ಪತಿಯಿಂದ ಜೀವನಾಂಶವನ್ನು ನಿರಾಕರಿಸಿದ ಆದೇಶವನ್ನು ತಳ್ಳಿಹಾಕಿದೆ.

ಈ ಸಂದರ್ಭ ನ್ಯಾಯಪೀಠವು, CRPC 125 ರ ಅಡಿಯಲ್ಲಿ ಜೀವನಾಂಶದ ಹಕ್ಕು ಹೆಂಡತಿ ಪಡೆದರೆ ಪ್ರಯೋಜನವಲ್ಲ, ಬದಲಿಗೆ ಪತಿ ನೀಡಬೇಕಾದ ಕಾನೂನು ಮತ್ತು ನೈತಿಕ ಕರ್ತವ್ಯವಾಗಿದೆ (Legal and moral duty) ಎಂದು ಮಾಹಿತಿ ನೀಡಿದೆ.

ಇದನ್ನು ಓದಿ : ಪತಿಗೆ ‘ಹೆತ್ತವರನ್ನು ಬಿಟ್ಟು ನನ್ನ ಜೊತೆ ವಾಸಿಸು’ ಎಂದು ಹೇಳುವುದು ಕ್ರೌರ್ಯಕ್ಕೆ ಸಮ : Highcourt

ಪ್ರಕರಣದ ಹಿನ್ನೆಲೆ :
ತನ್ನ ಮೊದಲ ಪತಿಯಿಂದ ವಿಚ್ಛೇದನ ಪಡೆಯದಿದ್ದರೂ ಮಹಿಳೆ, ಎರಡನೇ ಮದುವೆಯಾಗಿದ್ದಳು. ಮೊದಲ ಪತಿಯೊಂದಿಗೆ ವಾಸಿಸುತ್ತಿದ್ದ ಸಂದರ್ಭ ಮಗುವನ್ನು ಹೊಂದಿದ್ದರು. ಆಬಳಿಕ ವೈವಾಹಿಕ ವಿವಾದಗಳಿಂದಾಗಿ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಮಹಿಳೆಯ ಮೊದಲ ಮದುವೆಯ ಬಗ್ಗೆ ಎರಡನೇ ಪತಿಗೆ ತಿಳಿದಿತ್ತು. ಆದರೆ ಎರಡನೇ ಪತಿಯಿಂದಲೂ ಬೇರ್ಪಟ್ಟ ಬಳಿಕ, ಮಹಿಳೆ ಜೀವನಾಂಶವನ್ನು ಕೋರಿದರು. ಇದಕ್ಕೆ ಕುಟುಂಬ ನ್ಯಾಯಾಲಯವು ಅನುಮತಿ ನೀಡಿತು ಎಂದು ವರದಿಯಿಂದ ತಿಳಿದು ಬಂದಿದೆ.

ಹಿಂದಿನ ಸುದ್ದಿ : Health : ಕುಂಬಳಕಾಯಿ ಬೀಜದಿಂದ ನಿವಾರಣೆಯಾಗುತ್ತೆ ಈ ಸಮಸ್ಯೆಗಳು.!

ಜನಸ್ಪಂದನ ನ್ಯೂಸ್, ಆರೋಗ್ಯ : ಭಾರತದಲ್ಲಿ ತರಕಾರಿಗಳಲ್ಲಿ ಪ್ರಸಿದ್ಧಿ ಪಡೆದ ಒಂದು ವಿಶಿಷ್ಠವಾದ ತರಕಾರಿ ಎಂದರೆ ಅದು ಕುಂಬಳಕಾಯಿ (Pumpkin). ವಿಶೇಷವಾಗಿ ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಉತ್ಪಾದನೆ ಮಾಡಲಾಗುತ್ತದೆ.

ಕುಂಬಳಕಾಯಿ ಬಳಸಿ ಅಡುಗೆ ಮಾಡುವಾಗ ಬಹಳಷ್ಟು ‌ಜನರು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ವಿಶ್ವದ 100 ಅತ್ಯಂತ ಶಕ್ತಿಶಾಲಿ ಆಹಾರಗಳ ಪಟ್ಟಿಯಲ್ಲಿ ಕುಂಬಳಕಾಯಿ ಬೀಜ ಆರನೇ ಸ್ಥಾನವನ್ನು ಪಡೆದಿದೆ.

ಇದನ್ನು ಓದಿ : ಸಸ್ಪೆಂಡ್ ಮಾಡಿದ ಹಿರಿಯ ಅಧಿಕಾರಿಯ ಕಚೇರಿ ಮುಂದೆಯೇ Tea Shop ಇಟ್ಟ ಇನ್ಸ್‌ಪೆಕ್ಟರ್‌ ; ವಿಡಿಯೋ ವೈರಲ್.!

ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಕುಂಬಳಕಾಯಿ ಬೀಜಗಳು ಪೌಷ್ಠಿಕಾಂಶದ ವಿಷಯದಲ್ಲಿ ಮೀನಿಗಿಂತಲೂ ಹೆಚ್ಚು ಶಕ್ತಿಯುತವಾಗಿವೆ.

* ರಂಜಕ,‌ ಮೆಗ್ನೀಸಿಯಮ್ ಮತ್ತು ಸತುವನ್ನು (phosphorus, Magnesium and zinc) ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಕುಂಬಳಕಾಯಿ ಬೀಜಗಳು, ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯಲು ಸಹಾಯಕವಾಗಿವೆ.

ಇದನ್ನು ಓದಿ : Vedio : ಗಂಡನಿಗೆ ಸರ್ಪ್ರೈಸ್ ಕೊಡಲು ಮನೆಯ ಬಾಗಿಲು ತೆರೆದ ಪತ್ನಿಗೆ ಕಾದಿತ್ತು ಬಿಗ್ ಶಾಕ್.!

* ಇದರಲ್ಲಿರುವ ಫೈಬರ್ ಮತ್ತು ಪ್ರೋಟೀನ್ ಹಸಿವು ಮತ್ತು ತೂಕವನ್ನು ನಿಯಂತ್ರಿಸುತ್ತದೆ (Controls hungry and weight). ಇನ್ನೂ 100 ಗ್ರಾಂ ಕುಂಬಳಕಾಯಿ ಬೀಜಗಳು ಕೇವಲ 164 ಕ್ಯಾಲೊರಿಗಳನ್ನು ಹೊಂದಿವೆ (100 grams of pumpkin seeds has only 164 calories) ಎಂದು ವರದಿಗಳು ತಿಳಿಸಿವೆ.

* ಕುಂಬಳಕಾಯಿ ಬೀಜಗಳಲ್ಲಿನ ಫೈಟೊಕೆಮಿಕಲ್ ಸಂಯುಕ್ತಗಳು (Phytochemical compounds) ಕೂದಲು ಉದುರುವಿಕೆಗೆ ಕಾರಣವಾಗುವ ಹಾರ್ಮೋನ್ ಡೈಹೈಡ್ರೊಟೆಸ್ಟೊಸ್ಟೆರಾನ್ (ಡಿಎಚ್ ಟಿ) ಉತ್ಪಾದನೆಯನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಇದರಿಂದಾಗಿ ಕೂದಲು ಉದುರುವ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುವುದು.

ಇದನ್ನು ಓದಿ : ಆಧಾರ್ ಕಾರ್ಡ್ ಇದ್ದರೆ ಸಾಕು PM ಸ್ವನಿಧಿ ಮೂಲಕ 2.5 ಲಕ್ಷ ರೂಪಾಯಿ ವರೆಗೆ ಸಾಲ ಲಭ್ಯ.!

ಕುಂಬಳಕಾಯಿ ಬೀಜಗಳಲ್ಲಿನ ಡಿಎಚ್ ಟಿ ಮಟ್ಟವನ್ನು ಕಡಿಮೆ ಮಾಡಿ ಕೂದಲು ಉದುರುವಿಕೆ ನಿಧಾನಗೊಳಿಸಿ, ಇರುವ ಕೂದಲನ್ನು ಸಂರಕ್ಷಿಸಲು (To preserve existing hair) ಸಹಾಯ ಮಾಡುತ್ತದೆ.

* ಈ ಬೀಜಗಳಲ್ಲಿ ಇರುವ ಸತುವು ದೇಹವನ್ನು ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ನೀಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು (The immune system) ಬಲಪಡಿಸುತ್ತದೆ.

ಇದನ್ನು ಓದಿ : Strange Tradition : ಈ ರಾಜ್ಯದಲ್ಲಿ ಅಣ್ಣನನ್ನೇ ಮದುವೆಯಾಗ್ತಾಳೆ ತಂಗಿ ; ತಪ್ಪಿದರೆ ಕಟ್ಟಬೇಕಾಗುತ್ತದೆ ಭಾರೀ ದಂಡ.!

* ಇದರಲ್ಲಿರುವ ಕ್ಯಾರೊಟಿನಾಯ್ಡ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಕೆಲಸ (Work against free radicals) ಮಾಡುತ್ತವೆ.

* ಹೃದಯದ ಲಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

* ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಕೆಟ್ಟ ಕೊಲೆಸ್ಟ್ರಾಲ್ (LDL), ಉರಿಯೂತವನ್ನು ಕಡಿಮೆ ಮಾಡುತ್ತವೆ.

ಇದನ್ನು ಓದಿ : ಕೇಂದ್ರ ಬಜೆಟ್​ – 2025 : ರೈಲ್ವೆಗೆ ರೂ. 2.60 ಲಕ್ಷ ಕೋಟಿ ಮೀಸಲು ; ಕರ್ನಾಟಕಕ್ಕೆ ಬಂಪರ್​, ಇಲ್ಲಿದೆ ಮಾಹಿತಿ.!

* ವಿಟಮಿನ್ ಇ ಹೊಂದಿರುವುದರಿಂದ ಉರಿಯೂತವನ್ನು ಕಡಿಮೆ ಮಾಡುವ ಗುಣ (Anti- inflammatory properties) ಹೊಂದಿದೆ.

* ಕುಂಬಳಕಾಯಿ ಬೀಜವು ಕಬ್ಬಿಣ, ಸೆಲೆನಿಯಂ, ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳಿಂದ (Antioxidant) ಸಮೃದ್ಧವಾಗಿದೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮವಾಗಿವೆ.

* ಈ ಬೀಜಗಳ ನಿಯಮಿತ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ.

ಇದನ್ನು ಓದಿ : ಕುಂಭಮೇಳದಲ್ಲಿ Three ಬಾರಿ ಕಳೆದುಹೋದ ಪತ್ನಿ ಹುಡುಕಿಕೊಟ್ಟ ಪೊಲೀಸರು ; ವ್ಯವಸ್ಥೆ ಸರಿ ಇಲ್ಲ ಎಂದ ಪತಿ.!

* ಕುಂಬಳಕಾಯಿ ಬೀಜಗಳು ಇನ್ಸುಲಿನ್ ಅನ್ನು ಸುಧಾರಿಸಿ, ಮಧುಮೇಹದಿಂದಾಗುವ ತೊಂದರೆಗಳನ್ನು ತಡೆಯುತ್ತವೆ (Improve insulin, prevent complications of diabetes).

* ನ್ಯೂಟ್ರಿಷನ್ ರಿಸರ್ಚ್ ನಡೆಸಿದ ಅಧ್ಯಯನದ ಪ್ರಕಾರ, ಕುಂಬಳಕಾಯಿ ಬೀಜಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಂಡಿದ್ದ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿಕೊಂಡಿದ್ದಾರೆ (Lower sugar levels) ಎನ್ನಲಾಗಿದೆ.

ಇದನ್ನು ಓದಿ : ರೈಲು ಹಳಿ ಮೇಲೆ ಕುಳಿತು Mobile ನಲ್ಲಿ ಮಾತನಾಡುತ್ತಿದ್ದ ಯುವಕ : ಕೆಳಗಿಳಿದ ರೈಲು ಚಾಲಕ.!

* ಕುಂಬಳಕಾಯಿ ಬೀಜಗಳು ಕಬ್ಬಿಣ ಮತ್ತು ಮ್ಯಾಂಗನೀಸ್‌ನ ಮೂಲವಾಗಿವೆ. ಕಬ್ಬಿಣವು ದೇಹದಲ್ಲಿನ ರಕ್ತಹೀನತೆಯನ್ನು (Anemia) ತೆಗೆದು ಹಾಕುವಲ್ಲಿ ಸಹಾಯ ಮಾಡುತ್ತದೆ. ಇನ್ನೂ ಮ್ಯಾಂಗನೀಸ್ ದೇಹ ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಕುಂಬಳಕಾಯಿ ಬೀಜಗಳು ಕ್ಯಾನ್ಸರ್ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು (positive effects) ಬೀರುತ್ತವೆ ಎಂಬ ಅಂಶವನ್ನು ಅಧ್ಯಯನಗಳು ಕಂಡು ಹಿಡಿದಿವೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!