Tuesday, March 18, 2025
HomeViral Videoಮದುವೆಯ ದಿನವೇ ವಧುವಿನ ಮೇಲೆ ಕೈ ಮಾಡಿದ PSI ; ವಿಡಿಯೋ ವೈರಲ್.!
spot_img
spot_img
spot_img
spot_img
spot_img

ಮದುವೆಯ ದಿನವೇ ವಧುವಿನ ಮೇಲೆ ಕೈ ಮಾಡಿದ PSI ; ವಿಡಿಯೋ ವೈರಲ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಒಂದು ದೇವಾಲಯದಲ್ಲಿ ಮದುವೆ ಸಮಾರಂಭ (wedding ceremony ದಲ್ಲಿ ವಧುವಿನ ಮೇಲೆ ವರ ಕೈ ಮಾಡಿದ ಅಘಾತಕಾರಿ ಘಟನೆ ಬಿಹಾರದ ನವಾಡಾ (Nawada) ದಲ್ಲಿ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಧು – ವರ ಇಬ್ಬರು ಜಿಲ್ಲಾ ಪೊಲೀಸ್ ಪಡೆಯಲ್ಲಿ ನಿಯೋಜಿತರಾಗಿದ್ದ lady ಕಾನ್‌ಸ್ಟೇಬಲ್‌ ಮತ್ತು ಸಬ್ ಇನ್ಸ್‌ಪೆಕ್ಟರ್‌ ಆಗಿದ್ದು, ಅವರು ದೇವಾಲಯದಲ್ಲಿ ಮದುವೆಯಾಗಿದ್ದಾರೆ.

ಇದನ್ನು ಓದಿ : ಹಾಡಹಗಲೇ ನಡು ರಸ್ತೆಯಲ್ಲಿಯೇ ಪತ್ನಿಯ ಹ*ತ್ಯೆಗೈ*ದ ಪತಿ ; reason.?

ಇಂತಹ ಒಂದು ಸುಂದರ ಸಮಾರಂಭದಲ್ಲಿ ವಧು – ವರ ಇಬ್ಬರು ಯಾವುದೋ ವಿಷಯಕ್ಕೆ ವಿವಾದ ನಡೆದು ವಧುವಿನ ಮೇಲೆ
ವರನು ಕೈ ಮಾಡಿದ್ದಾನೆ. ವಧು (Lady Constable) ವಿನ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ವರ (Police inspector) ನನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸಲಾಗಿದೆ.

ವಧು-ವರರ ನಡುವಿನ ವಾಗ್ವಾದಕ್ಕೆ ನಿಖರವಾದ ಕಾರಣ (exact reason) ಏನೆಂಬುದು ತಿಳಿದುಬಂದಿಲ್ಲ.

ಇದನ್ನು ಓದಿ : ಭೀಕರ Road ಅಪ*ಘಾ*ತ : ಒಂದೇ ಕುಟುಂಬದ ಐವರ ಸಾವು.!

ವಿಡಿಯೋದಲ್ಲಿ ಏನಿದೆ :
ಸದ್ಯ ವೈರಲ್ (Viral) ಆಗಿರುವ ವಿಡಿಯೋ (Vedio) ದಲ್ಲಿ ಕುತ್ತಿಗೆಗೆ ಹೂಮಾಲೆ ಧರಿಸಿ ವಧು – ವರ ಕುಳಿತ್ತಿದ್ದಾರೆ. ಈ ವೇಳೆ ವರನು, ವಧುವಿನ ಜೊತೆ ಕುಳಿತು ಯಾವುದೋ ವಿಷಯದ ಬಗ್ಗೆ ಗಂಭೀರವಾಗಿ (Seriously) ಮಾತನಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ನಂತರ ಏನಾಯಿತೋ ಏನೋ ವಧುವಿನ ಮೇಲೆ ವರ ಕೈ ಎತ್ತಿದ್ದಾನೆ. ಈ ಮಧ್ಯ ಹಲ್ಲೆಯನ್ನು ತಡೆಯಲು ಇನ್ನೊಬ್ಬ ಮಹಿಳೆ ಮಧ್ಯಪ್ರವೇಶಿಸಿ (Intervene) ವರನಿಂದ ವಧುವನ್ನು ಕಾಪಾಡುವುದನ್ನು ನಾವು ದೃಶ್ಯದಲ್ಲಿ ಕಾಣಬಹುದಾಗಿದೆ.

ಹಲ್ಲೆಗೊಳಗಾದ ವಧು ಕೋಪಗೊಂಡು ವರನ ವಿರುದ್ಧ ದೂರು (complaint) ದಾಖಲಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಅವರು ವರ (Police inspector) ನನ್ನು ಅಮಾನತುಗೊಳಿಸಿದ್ದಾರೆ.

ಇದನ್ನು ಓದಿ : ಮಹಾಕುಂಭ ಮೇಳಕ್ಕೆ ಮತ್ತೇ ವಿಶೇಷ ಎಕ್ಸ್‌ಪ್ರೆಸ್ Railway ಸಂಚಾರ ; ಇಲ್ಲದೇ ಸಂಪೂರ್ಣ ಮಾಹಿತಿ.!

ಮಾಹಿತಿ ಪ್ರಕಾರ, ಮಹಿಳಾ ಕಾನ್‌ಸ್ಟೇಬಲ್‌ ಕಟಿಹಾರ್‌ನ ಕುರ್ಸೆಲಾ (Kursela of Katihar) ನಿವಾಸಿಯಾಗಿದ್ದು, ಸಬ್ ಇನ್ಸ್‌ಪೆಕ್ಟರ್‌ ಮುಂಗೇರ್ನ ಧಾರ್ಹರಾ (Dharhara of Munger) ಗ್ರಾಮದ ಸಚಿನ್ ಕುಮಾರ್ ಎಂದು ತಿಳಿದು ಬರುತ್ತದೆ.

ಈ ಆಘಾತಕಾರಿ Vedio ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ : 

ಹಿಂದಿನ ಸುದ್ದಿ : ಮಹಾಕುಂಭ ಮೇಳಕ್ಕೆ ಮತ್ತೇ ವಿಶೇಷ ಎಕ್ಸ್‌ಪ್ರೆಸ್ ರೈಲ್ವೆ ಸಂಚಾರ ;  ಇಲ್ಲದೇ ಸಂಪೂರ್ಣ ಮಾಹಿತಿ.!

ಜನಸ್ಪಂದನ ನ್ಯೂಸ್, ಬೆಳಗಾವಿ : ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಭಾಗದ ಜನರಿಗೆ ಮಹಾಕುಂಭ ಮೇಳ (Mahakumbh Mela) ಕ್ಕೆ ಹೋಗುವವರಿಗೆ ರೈಲ್ವೆ ಇಲಾಖೆ Good news ವೊಂದನ್ನು ಕೊಟ್ಟಿದೆ. ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ವಿಶೇಷ ರೈಲು ಸೇವೆ ನೀಡಲಾಗುತ್ತಿದೆ.

ಹೀಗಾಗಿ ರೈಲ್ವೆ ಮಂಡಳಿಯು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ (SSS Hubblli) ಹಾಗೂ ಉತ್ತರ ಪ್ರದೇಶದ ವಾರಣಾಸಿ (Varanasi) ನಡುವೆ ಮೂರು ಟ್ರಿಪ್ (Three trips) ವಿಶೇಷ ಎಕ್ಸ್‌ಪ್ರೆಸ್ ರೈಲು (Special express train) ಸೇವೆಗಳಿಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ಇದನ್ನು ಓದಿ : ಸಸ್ಪೆಂಡ್ ಮಾಡಿದ ಹಿರಿಯ ಅಧಿಕಾರಿಯ ಕಚೇರಿ ಮುಂದೆಯೇ Tea Shop ಇಟ್ಟ ಇನ್ಸ್‌ಪೆಕ್ಟರ್‌ ; ವಿಡಿಯೋ ವೈರಲ್.!

144 ವರ್ಷಗಳಿಗೆ ಒಮ್ಮೆ ನಡೆಯುವ ಈ ವಿಶೇಷ ಕುಂಭಮೇಳಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಪವಿತ್ರ ಮಹಾಕುಂಭ ಮೇಳದಲ್ಲಿ ಯುಪಿ ಸರ್ಕಾರದಿಂದ ಒದಗಿಸಿರುವ ಉತ್ತಮವಾದ ವ್ಯವಸ್ಥೆಯ ಬಗ್ಗೆ ಭಕ್ತಾಧಿ (Devotee) ಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಲ್ತುಳಿತ ದುರಂತ ಪ್ರಕರಣದ ನಂತರ ಉತ್ತರ ಪ್ರದೇಶ ಸರ್ಕಾರ (Government of Uttar Pradesh) ಮತ್ತೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಇದೀಗ ಕೇಂದ್ರ ಸರ್ಕಾರವು ದೇಶದ ವಿವಿಧ ಭಾಗದಲ್ಲಿ ರೈಲ್ವೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ವಿಶೇಷ ರೈಲುಗಳ ಸೇವೆ (Special train service) ಯನ್ನು ಪರಿಚಯಿಸಲಾಗಿದೆ.

ಮಹಾಕುಂಭಮೇಳಕ್ಕೆ ಲಕ್ಷಾಂತರ ಜನ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಈ ವೇಳೆ ಪ್ರಯಾಣಿಕರ/ಭಕ್ತಾಧಿಗಳ ದಟ್ಟಣೆಯನ್ನು ತಪ್ಪಿಸುವುದಕ್ಕೆ ರೈಲ್ವೆ (Railway) ಮತ್ತೇ ಮುಂದಾಗಿದೆ.

ಇದನ್ನು ಓದಿ : ವೆಸ್ಟರ್ನ್ ಉಡುಪಿನಲ್ಲಿ ಗ್ಲಾಮರಸ್ ಬೆಡಗಿಯಾದ ಮೋನಾಲಿಸಾ.? ವಿಡಿಯೋ ವೈರಲ್.!

ವಿಶೇಷ ರೈಲುಗಳ ವಿವರ ಇಲ್ಲಿದೆ :

ಹುಬ್ಬಳ್ಳಿ ಹಾಗೂ ವಾರಣಾಸಿ ನಡುವೆ ವಿಶೇಷ ರೈಲು (07383/84) : ರೈಲು ಸಂಖ್ಯೆ 07383 ಎಸ್‌ಎಸ್‌ಎಸ್ ಹುಬ್ಬಳ್ಳಿ – ವಾರಣಾಸಿ ವಿಶೇಷ ಎಕ್ಸ್‌ಪ್ರೆಸ್ ರೈಲು (SSS Hubli – Varanasi Special Express Train) ಸಂಚರಿಸಲಿದೆ. ಈ ರೈಲು ಫೆಬ್ರವರಿ 14, 21 ಮತ್ತು 28ರ ಶುಕ್ರವಾರದ ದಿನ ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಭಾನುವಾರ ಬೆಳಿಗ್ಗೆ 5.30ರ ವೇಳೆಗೆ ವಾರಣಾಸಿ ತಲುಪಲಿದೆ.

ವಾರಣಾಸಿ ಹಾಗೂ ಹುಬ್ಬಳ್ಳಿ ನಡುವೆ ವಿಶೇಷ ರೈಲು (07384) :  ರೈಲು ಸಂಖ್ಯೆ 07384 ವಾರಣಾಸಿ – ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು (Varanasi – SSS Hubli Special Express Train) ಸಹ ಸಂಚರಿಸಲಿದೆ. ಇದು ಫೆಬ್ರವರಿ 17, 24 ಮತ್ತು ಮಾರ್ಚ್ 3ರಂದು (ಸೋಮವಾರ) ಬೆಳಿಗ್ಗೆ 5 ಗಂಟೆಗೆ ವಾರಣಾಸಿಯಿಂದ ಹೊರಟು ಬುಧವಾರ ಮಧ್ಯಾಹ್ನ 12.45ಕ್ಕೆ ಹುಬ್ಬಳ್ಳಿಗೆ ಹಿಂದಿರುಗಲಿದೆ.

ಹುಬ್ಬಳ್ಳಿ – ವಾರಣಾಸಿ ರೈಲು ನಿಲ್ದಾಣಗಳ ವಿವರ : ಇನ್ನು ಈ ವಿಶೇಷ ರೈಲುಗಳು “ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್, ಘಟಪ್ರಭಾ, ರಾಯಬಾಗ, ಕುಡಚಿ, ಮೀರಜ್, ಸಾಂಗ್ಲಿ, ಕಿರ್ಲೋಸ್ಕರವಾಡಿ, ಕರಡ್, ಸತಾರಾ, ಪುಣೆ, ದೌಂಡ್ ಚಾರ್ಡ್ ಲೈನ್, ಅಹಮದ್‌ನಗರ, ಕೋಪರಗಾಂವ್, ಮನ್ಮಾಡ್, ಭೂಸಾವಲ್, ತಳವಾಡ, ತಲವಾ, ಪಿಪಾರಿಯಾ, ನರಸಿಂಗ್‌ಪುರ್, ಜಬಲ್‌ಪುರ್, ಕಟ್ನಿ, ಮೈಹಾರ್, ಸತ್ನಾ, ಮಾಣಿಕ್‌ಪುರ್, ಪ್ರಯಾಗ್‌ರಾಜ್ ಛೋಕಿ, ಮಿರ್ಜಾಪುರ್ ಹಾಗೂ ಚುನಾರ್” ನಿಲ್ದಾಣಗಳಲ್ಲಿ ರೈಲು ನಿಲುಗಡೆ ನೀಡಲಿದೆ ಎಂದು ಹೇಳಲಾಗಿದೆ.

ಇನ್ನು ಪ್ರತಿ ನಿಲ್ದಾಣದಲ್ಲಿ ರೈಲುಗಳ ಆಗಮನ ಹಾಗೂ ನಿರ್ಗಮನದ ನಿಖರ ಸಮಯ (Exact time) ವನ್ನು ನೋಡುವುದಕ್ಕೆ ಪ್ರಯಾಣಿಕರು ಭಾರತೀಯ ರೈಲ್ವೆ ವೆಬ್‌ಸೈಟ್ www.enquiry.indianrail.gov.in ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿ ಹಾಗೂ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 139 (Helpline number 139) ಕ್ಕೆ ಕರೆ ಸಹ ಮಾಡಬಹುದು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!