ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವೊಂದು ಬಗೆಯ ಹಾವುಗಳು ತುಂಬಾ ವಿಷಕಾರಿಯಾಗಿರುತ್ತವೆ. ಆಕಸ್ಮಿಕವಾಗಿ ಇಂತಹ ಹಾವು ಕಚ್ಚಿದರೆ (Accidentally bitten by a snake), ತಕ್ಷಣ ಈ ತರಕಾರಿಯ ಸಹಾಯದಿಂದ ಪರಿಹಾರವನ್ನು ಪಡೆಯಬಹುದು.
ಈ ತರಕಾರಿಯನ್ನು ಸಮಯಕ್ಕೆ ಸರಿಯಾಗಿ ಉಪಯೋಗಿಸುವುದರಿಂದ, ಒಬ್ಬ ವ್ಯಕ್ತಿಯನ್ನು ಐದು ನಿಮಿಷಗಳಲ್ಲಿ ಹಾವಿನ ವಿಷದಿಂದ ರಕ್ಷಣೆ ಮಾಡಬಹುದು (Can be protected from snake venom in 5 minutes) ಎಂದು ಆಯುರ್ವೇದ ಹೇಳುತ್ತದೆ.
ಇದನ್ನು ಓದಿ : Belagavi : ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅ*ಚಾ* ; ವಿಡಿಯೋ ವೈರಲ್ ಮಾಡುವ ಬೆದರಿಕೆ.!
ಹಾವಿನ ವಿಷವನ್ನು ತಟಸ್ಥಗೊಳಿಸುವ ಈ ವಿಸ್ಮಯಕಾರಿ ತರಕಾರಿಯ ಹೆಸರು ಮಾಡಹಾಗಲ ಅಥವಾ ಕಂಟೋಲ (Madahagala or Kantola).
ಇದು ಹತ್ತು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಇದನ್ನು ಬಳಸುವುದರಿಂದ ಹಾವಿನ ವಿಷವನ್ನು ಸಹ ತೆಗೆದು ಹಾಕಬಹುದು.
ಇದನ್ನು ಓದಿ : Divorce : ಪರಿಹಾರದ ಹಣ ಸಿಗ್ತಿದ್ದಂತೆ ಮಾಜಿ ಪತ್ನಿ ಪುಲ್ ಖುಷಿ ; ಮಾಜಿ ಗಂಡ ಪುಲ್ ಡಲ್.!
ಇನ್ನೂ ಈ ತರಕಾರಿ ಹೆಚ್ಚಾಗಿ ಕಾಡಿನಲ್ಲಿ ಸಿಗುತ್ತದೆ. ಆದರೆ ಇದು ವರ್ಷದ 90 ದಿನಗಳ ತನಕ ಬೆಳಯಲ್ಪಡುವ ತರಕಾರಿ. ಇದು ತಿನ್ನಲು ತುಂಬಾ ರುಚಿಕರವೂ (Very tasty) ಆಗಿದ್ದು, ಹಲವಾರು ಔಷಧೀಯ ಗುಣಗಳಿವೆ. ಎಲ್ಲಾ ರೀತಿಯ ವಿಷವನ್ನು ನಿವಾರಿಸುವ ಶಕ್ತಿಯನ್ನು (The power to eliminate poisons) ಈ ತರಕಾರಿ ಹೊಂದಿದೆ ಎಂದು ಹೇಳಲಾಗುತ್ತದೆ.
ಮೊದಲು ಮಾಡಹಾಗಲದ ಬೇರನ್ನು ಸಸ್ಯದಿಂದ ಬೇರ್ಪಡಿಸಬೇಕು. ಈ ಬೇರನ್ನು ಎರಡು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಬೇಕು. ಬಳಿಕ ಒಣಗಿದ ಬೇರನ್ನು ಪುಡಿಮಾಡಿಟ್ಟುಕೊಳ್ಳಬೇಕು (Grind the dried root). ಹಾವು ಕಡಿತದ ಸಂದರ್ಭ ಆ ವ್ಯಕ್ತಿಗೆ ಒಂದು ಚಮಚ ಮಾಡಹಾಗಲ ಬೇರಿನ ಪುಡಿಯನ್ನು ಹಾಲಿನೊಂದಿಗೆ ಸೇರಿಸಿ ನೀಡಬೇಕು. ವಿಷದ ಪರಿಣಾಮವು ಐದು ನಿಮಿಷಗಳಲ್ಲಿ ಕಮ್ಮಿಯಾಗುತ್ತದೆ ಎನ್ನಲಾಗಿದೆ.
ಇದನ್ನು ಓದಿ : ಸಿಎಂ ಸಿದ್ದು ಹೆಸರಿನಲ್ಲಿ Free Recharge ಅಂತಾ ಲಿಂಕ್ ಬಂತಾ ; ಕ್ಲಿಕ್ ಮಾಡುವ ಮುನ್ನ ಈ ಸುದ್ದಿ ಓದಿ.!
ಮತ್ತೊಂದು ವಿಧಾನವೆಂದರೆ ಮಾಡಹಾಗಲ ತರಕಾರಿಯನ್ನು ರುಬ್ಬಿ ಹಾವು ಕಚ್ಚಿದ ಜಾಗಕ್ಕೆ ಹಚ್ಚಿದರೆ ಕೆಲವೇ ನಿಮಿಷಗಳಲ್ಲಿ ವಿಷದ ಪರಿಣಾಮ ಕಡಿಮೆಯಾಗಿ ಅಪಾಯ ತಪ್ಪುವುದು.
ಹಿಂದಿನ ಸುದ್ದಿ : ಪ್ರೇಯಸಿಯ ಖಾಸಗಿ Video, ಪೋಟೋ ವೈರಲ್ ಮಾಡಿ ಆತ್ಮಹತ್ಯೆಗೆ ಶರಣಾದ ಯುವಕ.!
ಜನಸ್ಪಂದನ ನ್ಯೂಸ್, ಹುಬ್ಬಳ್ಳಿ : ಹುಬ್ಬಳ್ಳಿಯ ಉಣಕಲ್ನಲ್ಲಿ (Unakal of Hubli) ಪ್ರೇಯಸಿಯ ಕಾಟದಿಂದ ಬೇಸತ್ತು ಯುವಕನೋರ್ವ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ (suicide) ಘಟನೆ ನಡೆದಿದೆ.
ಇದನ್ನು ಓದಿ : ಬೆಕ್ಕಿನ ಮರಿ ಓಡಿಸಿದಂತೆ ಚಿಕ್ಕ ಕೋಲು ಹಿಡಿದು ಸಿಂಹವನ್ನು ಓಡಿಸಿದ ವ್ಯಕ್ತಿ ; Video ನೋಡಿ.!
ಹುಬ್ಬಳ್ಳಿಯ ನವನಗರ ನಿವಾಸಿ ಸಂದೇಶ್ ಉಣಕಲ್ (27) ಆತ್ಮಹತ್ಯೆಗೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿಯ ನವನಗರ ನಿವಾಸಿ ಸಂದೇಶ ಶನಿವಾರ ಮನೆಯಿಂದ ನಾಪತ್ತೆಯಾಗಿದ್ದು (missing), ಉಣಕಲ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ : ಮಧ್ಯರಾತ್ರಿ ಕರೆದಳೆಂದು ಗೆಳತಿಯ ಮನೆಗೆ ಹೋದ Lover ; ಬೆಳಗಾಗುವುದರಲ್ಲಿ ಆದದ್ದೇ ಬೇರೆ.!
ಸಂದೇಶ್ ಮೋಟಾರ್ ಬೈಕ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ ಶನಿವಾರ ದಿಢೀರ್ (suddenly) ಅಂತ ಮನೆಯಿಂದ ನಾಪತ್ತೆಯಾಗಿದ್ದ.
ಈ ಕುರಿತು ಕುಟುಂಬದವರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಸಂದೇಶ ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಜಾತ್ರೆಯಲ್ಲಿ ರೊಚ್ಚಿಗೆದ್ದು ಜನರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ ಆನೆ ; Shocking ವಿಡಿಯೋ ಇಲ್ಲಿದೆ.!
ಆತ್ಮಹತ್ಯೆಗೂ ಮುನ್ನ ಸಂದೇಶ್, ನನ್ನ ಸಾವಿಗೆ ಸಂಜನಾ ಕಾರಣ ಎಂದು ತಾಯಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾನೆ. ಅಲ್ಲದೇ ತನ್ನ ಪ್ರೇಯಸಿಯ ಜೊತೆಗಿನ ಖಾಸಗಿ ವಿಡಿಯೋ, ವಾಟ್ಸಪ್ ಚಾಟ್, ಸಂಭಾಷಣೆ ಮತ್ತು ಫೋಟೋಗಳನ್ನು ತನ್ನ ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ (He posted private video, whatsapp chat, conversation and photos with his girlfriend to his friends and on social media) ಎನ್ನಲಾಗಿದೆ.
ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (Register a case), ಪೊಲೀಸರು ತನಿಖೆ ನಡೆಸುತ್ತಿದ್ದಾರೆ.