Friday, February 14, 2025
HomeViral VideoDivorce : ಪರಿಹಾರದ ಹಣ ಸಿಗ್ತಿದ್ದಂತೆ ಮಾಜಿ ಪತ್ನಿ ಪುಲ್ ಖುಷಿ ; ಮಾಜಿ ಗಂಡ...
spot_img
spot_img
spot_img
spot_img

Divorce : ಪರಿಹಾರದ ಹಣ ಸಿಗ್ತಿದ್ದಂತೆ ಮಾಜಿ ಪತ್ನಿ ಪುಲ್ ಖುಷಿ ; ಮಾಜಿ ಗಂಡ ಪುಲ್ ಡಲ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಒಂದು ಕಡೆ ಹೆಂಡತಿಯ ಕಾಟದಿಂದ ಹಾಗೂ ಕಾನೂನು ನಮ್ಮ ಕಡೆ ಇಲ್ಲ (The law is not on our side) ಎಂದು ಬೇಸತ್ತು ಗಂಡಸರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಹೀಗಾಗಿ ಕೆಲ ಹೆಣ್ಣು ಮಕ್ಕಳು ಹಣ ಸಿಗುತ್ತೆ ಎಂದು ಕಾನೂನನ್ನು ದುರುಪಯೋಗಪಡಿಸಿಕೊಂಡು (misused) ಡಿವೋರ್ಸ್‌ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಘಟನೆಯೊಂದು ನಡೆದಿದೆ.

ಇದನ್ನು ಓದಿ : Belagavi : ಸಂಕ್ರಮಣ ಹಬ್ಬದಂದೇ ಚಾ*ಕುವಿ*ನಿಂದ ಇ*ರಿದು ಅಳಿಯನಿಂದ ಅತ್ತೆಯ ಕೊ*ಲೆ.!

ಲಾಯರ್‌ ಮುಂದೆಯೇ ಮಹಿಳೆಯೊಬ್ಬಳು ತುಂಬಾ ಖುಷಿ ಖುಷಿಯಾಗಿ ನಗುತ್ತ ಮಾಜಿ ಗಂಡನ (ex- husband) ಕೈಯಿಂದ ಪರಿಹಾರದ ಹಣವನ್ನು ತೆಗೆದುಕೊಂಡಿದ್ದಾಳೆ.

ಆ ವ್ಯಕ್ತಿ ನೋಡಿದ್ರೆನೆ ಗೊತ್ತಾಗುತ್ತೆ ಆತ ನೋವಿನಲ್ಲಿದ್ದಾನೆ ಎಂಬುದು. ಲಾಯರ್‌ ಆಫೀಸಿನಲ್ಲಿ ಆತ ಬಹಳ ನೋವಿನಿಂದ ತಾನು ಕಷ್ಟಪಟ್ಟು ಕೂಡಿಟ್ಟ (He worked hard) ಅಥವಾ ಸಾಲ ಮಾಡಿ ತಂದ ಹಣವನ್ನು ಮಾಜಿ ಹೆಂಡತಿಯ ಕೈಗೆ ಕೊಟ್ಟಿದ್ದಾನೆ.

ಇದನ್ನು ಓದಿ : ಬೆಕ್ಕಿನ ಮರಿ ಓಡಿಸಿದಂತೆ ಚಿಕ್ಕ ಕೋಲು ಹಿಡಿದು ಸಿಂಹವನ್ನು ಓಡಿಸಿದ ವ್ಯಕ್ತಿ ; Video ನೋಡಿ.!

ಆದರೆ ಆಕೆ ಒಂದು ಚೂರು ನೋವು ತೋರಿಸಿಕೊಳ್ಳದೇ ಖುಷಿ ಖುಷಿಯಾಗಿ ಪರಿಹಾರ ಹಣವನ್ನು ಸ್ವೀಕರಿಸಿದ್ದಾಳೆ (Receive compensation money). ವಿಡಿಯೋದಲ್ಲಿ ವಕೀಲರ ಆಫೀಸಿನಲ್ಲಿ ಗಂಡ ತನ್ನ ಮಾಜಿ ಹೆಂಡ್ತಿಗೆ ಪರಿಹಾರ ಹಣವನ್ನು ನೀಡುತ್ತಿರುವ ದೃಶ್ಯವನ್ನು ನೋಡಬಹುದು.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಶೋನಿ ಕಪೂರ್‌ (ShoneeKapoor) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ : ಮಧ್ಯರಾತ್ರಿ ಕರೆದಳೆಂದು ಗೆಳತಿಯ ಮನೆಗೆ ಹೋದ Lover ; ಬೆಳಗಾಗುವುದರಲ್ಲಿ ಆದದ್ದೇ ಬೇರೆ.!

ಜನವರಿ 11 ರಂದು share ಮಾಡಲಾದ ಈ ವಿಡಿಯೋ 6.8 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಈಗಂತೂ ಮದುವೆ, device ಎಲ್ಲವೂ ವ್ಯಾಪಾರವಾಗಿದೆ ಎಂದು ಕೆಲವರು comment ಮಾಡಿದ್ದಾರೆ. ಇನ್ನೂ ಕೆಲವರು ನಮ್ಮ ದೇಶದಲ್ಲಿ ಮಹಿಳಾ ಸಬಲೀಕರಣವನ್ನು ಪುರುಷರಿಗೆ ಕಿರುಕುಳ ನೀಡುವ ಅಸ್ತ್ರವನ್ನಾಗಿ (weapon) ಬದಲಾಯಿಸಲಾಗಿದೆ ಎಂದು ಟೀಕಿಸಿದ್ದಾರೆ.

ವಿಡಿಯೋ ನೋಡಿ :

ಹಿಂದಿನ ಸುದ್ದಿ : ಬೆಳಗಾವಿ : ಸಂಕ್ರಮಣ ಹಬ್ಬದಂದೇ ಚಾಕುವಿನಿಂದ ಇರಿದು ಅಳಿಯನಿಂದ ಅತ್ತೆಯ ಕೊಲೆ.!

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ರೈತ ಗಲ್ಲಿಯಲ್ಲಿ ಎಳ್ಳು ಬೆಲ್ಲ ಕೊಡಲು ಬಂದಿದ್ದ ಅತ್ತೆಯನ್ನೇ ಚಾಕುವಿನಿಂದ ಇರಿದು ಅಳಿಯನೊಬ್ಬ (Son in law) ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಅತ್ತೆ ರೇಣುಕಾಳನ್ನು (40) ಅಳಿಯ ಶುಭಂ ಬಿರ್ಜೆ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಮಧ್ಯರಾತ್ರಿ ಕರೆದಳೆಂದು ಗೆಳತಿಯ ಮನೆಗೆ ಹೋದ Lover ; ಬೆಳಗಾಗುವುದರಲ್ಲಿ ಆದದ್ದೇ ಬೇರೆ.!

ಮೂರು ವರ್ಷಗಳ ಹಿಂದಷ್ಟೇ ಛಾಯಾ ಜತೆಗೆ ಶುಭಂ ಮದುವೆ ಮಾಡಿಕೊಂಡಿದ್ದನು. ಹೀಗಾಗಿ ಅತ್ತೆ ರೇಣುಕಾ ಅವರು ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ (Background of Sankranti festival) ಬೆಳಗ್ಗೆ ಅಡುಗೆ ಮಾಡಿಕೊಂಡು ಮಗಳಿಗೆ ಹಬ್ಬದ ಊಟ ಕೊಡಬೇಕು ಎಂದು ದೊಡ್ಡ ಊಟದ ಬುತ್ತಿಯನ್ನು ಸಿದ್ಧಪಡಿಸಿಕೊಂಡು 11 ಗಂಟೆಯ ಸುಮಾರಿಗೆ ಮಗಳ ಮನೆಗೆ ತೆರಳಿದ್ದಾರೆ.

ಆದರೆ ಅಳಿಯ ಶುಭಂ ನೀವೇಕೆ ನಮ್ಮ ಮನೆಗೆ ಬರುತ್ತೀರಿ ಎಂದು ಗಲಾಟೆ ಶುರು ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ (Turn to disaster) ಅತ್ತೆಯ ತೊಡೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.

ಇದನ್ನು ಓದಿ : ಚೆನ್ನೈಯನ್ನು ಹಿಂದಿಕ್ಕಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದ Bangalore ; ಯಾವುದರಲ್ಲಿ ಗೊತ್ತಾ.?

ತೀವ್ರ ರಕ್ತಸ್ರಾವವಾಗಿ (Severe bleeding) ಬಳಲುತ್ತಿದ್ದ ರೇಣುಕಾ ಅವರನ್ನು ಕೂಡಲೇ ಸ್ಥಳೀಯರು ಸೇರಿಕೊಂಡು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ರೇಣುಕಾ ಅವರು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ (DCP Rohan Jagadish), ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೇಣುಕಾ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ (Postmortem examination) ಬೆಳಗಾವಿ ಬೀಮ್ಸ್ ಶವಗಾರಕ್ಕೆ ರವಾನಿಸಲಾಗಿದೆ.

ಬೆಳಗಾವಿ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಕೊಲೆಗೆ ಸಂಬಂಧಿಸಿದಂತೆ ಶುಭಂ ಹಾಗೂ‌ ಅವರ ತಂದೆ- ತಾಯಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!