ಜನಸ್ಪಂದನ ನ್ಯೂಸ್, ಚಿಕ್ಕಮಗಳೂರು : ಚಿಕ್ಕಮಗಳೂರು ನಗರದಲ್ಲಿ ಕಾಫಿ ಗೋಡನ್ನಲ್ಲಿರುವ (godown) ಅಂಬೇಡ್ಕರ್ ವಸತಿ ಶಾಲೆಯ ಶಿಕ್ಷಕಿಯಿಂದ ಮಕ್ಕಳಿಗೆ ಚಿತ್ರಹಿಂಸೆ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಘಟನೆಯ ಕುರಿತು ಶಿಕ್ಷಕಿ ದೀಪಾ ವಿರುದ್ಧ ಪೋಷಕರು ಗಂಭೀರ ಆರೋಪ (accusation) ಮಾಡಿದ್ದಾರೆ.
ಇದನ್ನು ಓದಿ : Pregnant ಆಗಲು ಪತಿಯಿಂದಲೇ ಕೋಟ್ಯಾಂತರ ರೂ. ಪಡೆದ ಮಹಿಳೆ.!
ಶಿಕ್ಷಕಿ ದೀಪಾ ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದರಂತೆ, ಇದರಿಂದ ಗಾಯಗೊಂಡಿರುವ ಮಕ್ಕಳು ಶಾಲೆಯಲ್ಲಿ ಕಣ್ಣೀರು ಹಾಕುತ್ತಿದ್ದು, ಶಿಕ್ಷಕಿ ವಿರುದ್ಧ 40 ಮಕ್ಕಳು ಸೇರಿದಂತೆ ಪೋಷಕರು ಲಿಖಿತ ದೂರು (Written complaint) ನೀಡಿದ್ದಾರೆ.
ದೂರು ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯೋಗೀಶ್ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಶಿಕ್ಷಕಿ ಅಮಾನತ್ತಿಗೆ (suspended) ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇದನ್ನು ಓದಿ : Tips : ಹುಡುಗರಲ್ಲಿ ಈ 5 ಅಭ್ಯಾಸಗಳಿದ್ರೆ ಹುಡುಗಿಯರು ಇಷ್ಟಪಡುವುದಿಲ್ಲವಂತೆ.!
ಇನ್ನೂ ವಸತಿ ಶಾಲೆ ನಡೆಸಲು ಕಾಫಿ ಗೋಡೌನ್ ಅನ್ನು ಅಧಿಕಾರಿಗಳು ಬಾಡಿಗೆಗೆ ಪಡೆದಿದ್ದು, ತಿಂಗಳಿಗೆ 1.93 ಲಕ್ಷ ರೂ. ನೀಡಲಾಗುತ್ತದೆ. ಒಂದೇ ಕೊಠಡಿಯಲ್ಲಿ 130ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಸವಾಗಿದ್ದು, ಮೂಲಭೂತ ಸೌಕರ್ಯವಿಲ್ಲದೆ (Basic amenities) ಮಕ್ಕಳು ಪರದಾಡುತ್ತಿದ್ದು, ಸಾಮಗ್ರಿ ಜತೆ ಚಾಪೆ ಮೇಲೆಯೇ ಮಕ್ಕಳು ಮಲಗುವ ಸ್ಥಿತಿಯಿದೆ ಎಂಬ ಆರೋಪವಿದೆ.