ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯದ ಎಲ್ಲ ಜನತೆಗೂ ಗೊತ್ತು. ಈಗ ಕರ್ನಾಟಕದ (Karnataka) ಸಿಎಂ ಯಾರು? ಅಂತ. ಆದರೆ ಈಗಲೂ ಬಸವರಾಜ ಬೊಮ್ಮಾಯಿ ಅಂತ ಹೇಳಿದ್ರೆ ನೀವು ನಮ್ಮನ್ನು ಬೈಯ್ಯೊದು ಗ್ಯಾರಂಟಿ.
ಆದರೆ ಕರ್ನಾಟಕ ಸರ್ಕಾರದ ಅಡಿಯಲ್ಲಿ ನಡೆಯುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್ಸೈಟ್ನಲ್ಲಿ (website) ಈಗಲೂ ಕೂಡ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಅಂತ ಇರುವುದನ್ನು ನೀವು ನೋಡಬಹುದು.
ಇದನ್ನು ಓದಿ : ವರ್ತೂರ್ ಸಂತೋಷ್’ಗೆ ಸನ್ಮಾನಿಸಿದ PSIಗೆ ಇಲಾಖೆ ನೀಡಿದ ಶಿಕ್ಷೆಯೇನು ಗೊತ್ತಾ.?
ಕಣಜ ಯೋಜನೆಯ ವೆಬ್ಸೈಟ್ಗೆ ನೀವು ಭೇಟಿ ನೀಡಿದರೆ ನೀವು ಈ ಬಗ್ಗೆ ನೋಡಬಹುದು.
ಇನ್ನು ಕರ್ನಾಟಕ ಸರ್ಕಾರದ ಬಹುತೇಕ ವೆಬ್ಸೈಟ್ಗಳು ಅಪ್ಡೇಟ್ (update) ಆಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇದನ್ನು ಓದಿ : Raid : ಬೆಳ್ಳಂಬೆಳಿಗ್ಗೆ ಶಾಸಕರ ಮನೆ ಮೇಲೆ ಇಡಿ ದಾಳಿ.!
ಇನ್ನಾದ್ರೂ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುವುದು.