Saturday, July 27, 2024
spot_img
spot_img
spot_img
spot_img
spot_img
spot_img

ಒಬ್ಬನ ಜೊತೆ 3 ಬಾರಿ ಮದುವೆ ; ನಾಲ್ವರೊಂದಿಗೆ ಲವ್ವಿಡವ್ವಿ, ಮುಂದೆ.?

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದ ಹೊರವಲಯದ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಮೂವರನ್ನು ಪ್ರೀತಿಸಿ, ಮೂರನೇ ಮದುವೆಯಾದ ನಂತರ ಯುವತಿ ಮತ್ತೊಬ್ಬನ ಜೊತೆ ಎಸ್ಕೇಪ್‌ (escape) ಆಗಿರುವ ಘಟನೆ ನಡೆದಿದೆ.

ಮನುಜಾ ಎಂಬಾಕೆಯೇ ಈ ರೀತಿ ನವರಂಗಿ ಆಟ ಆಡಿರುವುದು. ಮಂಜುನಾಥ ಎಂಬಾತ ಅವಳನ್ನು ಮೂರು ಬಾರಿ ಮದುವೆಯಾಗಿದ್ದಾನೆ. ಅವನು ಅವಳಿಗೆ ಮಾವನಾಗಬೇಕು. ಮಾವ ಮಾವ ಅಂತ ಹಿಂದೆ ಬಿದ್ದಿದ್ದ ಆಕೆ ಕೊನೆಗೆ ಅವನಿಗೇ ಚಳ್ಳೆ ಹಣ್ಣು ತಿನ್ನಿಸಿದ್ದಾಳೆ.

ಮೂಲತಃ ಬೆಂಗಳೂರಿನ ದೊಡ್ಡಕಲ್ಲಸಂದ್ರದ ನಿವಾಸಿಗಳಾದ ಮಂಜುನಾಥ್ ಮತ್ತು ಮನುಜಾ ನಡುವೆ ಸಣ್ಣ ವಯಸ್ಸಿನಿಂದಲೇ ಪ್ರೀತಿ (love) ಇತ್ತು. ಆದರೆ ಮನುಜಾಳ ಮನೆಯವರಿಗೆ ಅವಳನ್ನು ಮಂಜುನಾಥ್‌ಗೆ ಮದುವೆ ಮಾಡಿಕೊಡಲು ಇಷ್ಟವಿರಲಿಲ್ಲ (not like). ಆದರೆ, ಅವಳು ಮಾತ್ರ ಅವನನ್ನೇ ಮದುವೆಯಾಗ್ತಿನಿ ಅಂತ ಹಠ ಹಿಡಿದಿದ್ದಳು.

ಇದನ್ನು ಓದಿ : ಲಂಚ ಸ್ವೀಕರಿಸುತ್ತಿದ್ದ ವೇಳೆ KSRTC ಡಿಸಿ ಲೋಕಾಯುಕ್ತ ಬಲೆಗೆ.!

ಎರಡು ಬಾರಿ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದಾರೆ. ಆದರೆ, ಹುಡುಗಿ ಮನೆಯವರು ಎರಡು ಸಲವೂ ಆಕೆಯನ್ನು ಹುಡುಕಿ ಮನೆಯಲ್ಲಿ ಇಟ್ಟುಕೊಂಡಿದ್ದರು. ಕೊನೆಯದಾಗಿ ಕೆಲವೇ ದಿನದಲ್ಲಿ ಮದುವೆ ಮಾಡುವುದಾಗಿ ಮಾತು ಕೊಟ್ಟಿದ್ದರು. ಆದರೆ, ನಾಲ್ಕೈದು ವರ್ಷವಾದರೂ ಮಾಡಿ ಕೊಟ್ಟಿರಲಿಲ್ಲ.

ಕೆಲವು ದಿನಗಳ ಹಿಂದೆ ಆಕೆ ಉಟ್ಟ ಬಟ್ಟೆಯಲ್ಲೇ ಮನೆ ಬಿಟ್ಟು ಬಂದಿದ್ದ, ಕಳೆದ ಜನವರಿ 26ರಂದು ಅವರಿಬ್ಬರ ಮದುವೆ (marriage) ನಡೆದೇ ಹೋಯಿತು. ಮನುಜಳ ಮನೆಯವರು ತಲಘಟ್ಟಪುರ ಪೊಲೀಸ್‌ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದರು. ಠಾಣೆಗೆ ಬಂದ ಮನುಜ ತಾನು ಮಂಜುನಾಥ್‌ ಜತೆಗೇ ಇರುವುದಾಗಿ ಹೇಳಿದ್ದಳು. ಅವಳ ಹಠಕ್ಕೆ ಮನೆಯವರು ಒಪ್ಪಿದರು.

ಆದರೆ, ಮದುವೆಯಾದ ಮೂರೇ ದಿನಕ್ಕೆ ಮನುಜಾ ಮನೆಯಲ್ಲಿ ಇರಲಿಲ್ಲ. ಇನ್ನೊಬ್ಬನ ಜತೆ ಕಾಣೆಯಾಗಿದ್ದಳು (missing). ಕಾಣೆಯಾಗಿದ್ದಾಳೆ ಅಂತ ಮಂಜುನಾಥ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಆಕೆ ನಿಶಾಂತ್‌ ಎಂಬ ಯುವಕನ ಜತೆ ಪೊಲೀಸ್‌ ಠಾಣೆಗೆ ಪ್ರತ್ಯಕ್ಷವಾಗಿದ್ದಳು. ಮಂಜುನಾಥ್‌ ನನ್ನನ್ನು ಹೆದರಿಸಿ ಬೆದರಿಸಿ ಮದುವೆ ಮಾಡಿಸಿಕೊಂಡಿದ್ದಾರೆ. ನನಗೆ ಮಂಜುನಾಥ್ ಜೊತೆ ಮದುವೆ ಇಷ್ಟ ಇಲ್ಲ. ಹೀಗಾಗಿ ನಾನು ಮಂಜುನಾಥ್‌ ಜತೆ ಹೋಗಲ್ಲ. ಬೇಕಿದ್ದರೆ ಪೋಷಕರ ಜತೆಗೆ ಹೋಗ್ತೀನಿ ಎಂದು ನಾಟಕ (drama) ಶುರು ಮಾಡಿದ್ದಾಳೆ.

ನನಗೆ ಮದುವೆ ಹೆಸರಿನಲ್ಲಿ ವಂಚನೆ ಮಾಡಿದ್ದಾಳೆ. ನನಗೆ ನ್ಯಾಯ ಬೇಕು ಎಂದು ಮಂಜುನಾಥ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ್ದಾನೆ.

ಇದನ್ನು ಓದಿ : ಪ್ರಿಯಕರನ ಜೊತೆ ಓಡ್ಹೋದ 2 ಮಕ್ಕಳ ತಾಯಿ ; ಸಿಟ್ಟಿಗೆದ್ದ ಗಂಡನಿಂದ ಲವರ್ ಮನೆ ಧ್ವಂಸ.!

ನಾಲ್ವರ ಜೊತೆ ಲವ್ವಿಡವ್ವಿ.? : ಮನುಜಾಗೆ ಸಿಕ್ಕಾಪಟ್ಟೆ ರೀಲ್ಸ್‌ ಹುಚ್ಚು (reels crazed). ಆಕೆ ಹಲವರು ಹುಡುಗರ ಜತೆಗೆ ಲವ್ವಿ ಡವ್ವಿ ಆಟ ಆಡಿದ್ದಾಳೆ ಎನ್ನಲಾಗುತ್ತಿದೆ. ಮಂಜುನಾಥನ ಜತೆ ಮದುವೆ ಆಗುವ ಮೊದಲೇ ಒಬ್ಬ ಹುಡುಗ ಆಕೆತ ಬಾಳಲ್ಲಿ ಪ್ರವೇಶ ಮಾಡಿದ್ದ ಎನ್ನಲಾಗಿದೆ. ಈಗ ಮದುವೆಯಾದ ಬಳಿಕ ನಿಶಾಂತ್‌ ಜತೆಗೆ ಬಂದಿದ್ದಾಳೆ. ಇನ್ನೂ ಹಲವರ ಜತೆ ಆಕೆಗೆ ಸಂಬಂಧವಿದೆ (relationship) ಎನ್ನುವುದು ಮಂಜುನಾಥ್‌ ಹಾಗೂ ಸಂಬಂಧಿಕರ ಆರೋಪವಾಗಿದೆ. ಈ ವಿಚಿತ್ರ ಪ್ರಕರಣದ ಕುರಿತು ಏನು ಮಾಡಬೇಕು ಅಂತ ತಿಳಿಯದೆ ಸೂರ್ಯ ಸಿಟಿ ಪೊಲೀಸರು ಕಂಗಾಲಾಗಿದ್ದಾರೆ.

spot_img
spot_img
- Advertisment -spot_img