Friday, October 18, 2024
spot_img
spot_img
spot_img
spot_img
spot_img
spot_img
spot_img

ಸಾಕ್ಷಾತ್ ಶ್ರೀಕೃಷ್ಣನ ಶರೀರ ಸಮುದ್ರದಲ್ಲಿ ಮುಳುಗಿದ ದ್ವಾರಕಾದಲ್ಲಿದೆಯೇ? ಸಂಶೋಧನೆಗೆ ಹೋದ ವಿಜ್ಞಾನಿಗಳಿಗೆ ಕಂಡಿದ್ದೇನು..?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಧಾರ್ಮಿಕ : ಕೃಷ್ಣಾವತಾರದ ಕಥೆಗಳಲ್ಲಿ ದ್ವಾರಕ ನಗರ (Dwaraka city) ದ ಬಗ್ಗೆ ಕೂಡ ವರ್ಣನೆ ಕಂಡುಬರುತ್ತದೆ. ಪುರಾಣಗಳ ಪ್ರಕಾರ, ಈ ನಗರವನ್ನು ಸಾಕ್ಷಾತ್ ಶ್ರೀ ಕೃಷ್ಣ (Shri Krisha) ನಿರ್ಮಾಣ ಮಾಡಿದ್ದಾರೆ. ಮಹಾಭಾರತಕ್ಕೆ ಸಂಬಂಧಪಟ್ಟ ಈ ನಗರದ ಬಗ್ಗೆ ನಾವು ಬರೀ ಕಲ್ಪನೆ ಮಾಡಿಕೊಳ್ಳಬಹುದು ಅಷ್ಟೇ. ವಾತ್ಸವದಲ್ಲಿ ಇದು ಕಂಡುಬಂದರೆ ಬಹಳ ಥ್ರಿಲ್ಲಿಂಗ್ ಆಗಿ ಇರುತ್ತದೆ ಹಾಗೂ ಇದು ನಿಜ ಎಂದು ಸಾಬೀತು ಮಾಡಲು ಸಾಕ್ಷಿಯಾಗುತ್ತದೆ.

ಚರಿತ್ರೆಕಾರರ ಪ್ರಕಾರ, ದ್ವಾರಕಾ ನಗರವು ಸರಿಸುಮಾರು 9,000 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಪುರಾಣದಲ್ಲಿ ತಿಳಿಸಿದ ಪ್ರಕಾರ ಮಹಾಭಾರತ (Mahabharath) ದ ಕುರುಕ್ಷೇತ್ರ ಯುದ್ದ ನಡೆದ ಬಳಿಕ ಮೂವತ್ತಾರು ವರ್ಷಗಳ ನಂತರ ಈ ನಗರ ಸಮುದ್ರದಲ್ಲಿ ಮುಳುಗಿ ಹೋಗಿದೆ ಎಂದು ಎಲ್ಲರಿಗೂ ಗೊತ್ತು. ಈ ರೀತಿ ಆಗಲು ಮುಖ್ಯ ಕಾರಣ ಗಾಂಧಾರಿ ಶ್ರೀ ಕೃಷ್ಣನಿಗೆ ಕೊಟ್ಟ ಶಾಪ. ಹಾಗೆಯೇ ಋಷಿಮುನಿ ಒಬ್ಬರು ಶ್ರೀಕೃಷ್ಣನ ಮಗನಾದ ಸಾಂಬಾನಿಗೆ ಕೊಟ್ಟ ಶಾಪ ಎಂದು ಪುರಾಣದಲ್ಲಿ ಹೇಳಲಾಗಿದೆ.

ಈ ವರ್ಷದಿಂದ 1ನೇ ತರಗತಿ ಪ್ರವೇಶಕ್ಕೆ ಮಗುವಿಗೆ ಇಷ್ಟು ವರ್ಷ ಕಡ್ಡಾಯ : ಕೇಂದ್ರ ಸರ್ಕಾರ.!

ಸುಮಾರು 5,000 ವರ್ಷಗಳ ಹಿಂದೆಯೇ ಈ ದ್ವಾರಕಾ ನಗರ ಮುಳುಗಡೆಯಾಗಿದೆ. ಈ ದ್ವಾರಕಾ ನಗರದ ಅವಶೇಷಗಳು ಈಗಲೂ ಇದೆ ಎಂದು ಹೇಳಲಾಗುತ್ತಿತ್ತು, ಆದರೆ ಪ್ರಧಾನಿ ಮೋದಿಯವರು ಇಲ್ಲಿಯ ದೇವಾಲಯದಲ್ಲಿ ಶ್ರೀ ಕೃಷ್ಣನ ದರ್ಶನ ಪಡೆಯುವ ಮೂಲಕ ಮತ್ತೆ ದ್ವಾರಕಾ ನಗರ ಟ್ರೆಂಡ್‌ನಲ್ಲಿದೆ.

ಕಥೆಗಳ ಆಧಾರದ ಮೇಲೆ ಚರಿತ್ರಕಾರರು, ಈ ನಗರವು ನೀರಿನಲ್ಲಿ ಮುಳುಗಿ ಹೋಗಿದೆ ಎನ್ನುವುದನ್ನು ನಂಬಿ ಅದನ್ನು ಕಂಡುಕೊಳ್ಳಲು ಹುಡುಕಾಟ ನಡೆಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಇದರ ಅವಶೇಷಗಳು ಗುಜರಾತಿನ ಸಮೀಪದ ಅರೇಬಿಯ ಸಮುದ್ರದಲ್ಲಿ ಸಿಕ್ಕಿವೆ. ದ್ವಾರಕ ನಗರದ ವಿಶೇಷತೆ ಏನೆಂದರೆ ಈ ನಗರಕ್ಕೆ ಅನೇಕ ದ್ವಾರಗಳು ಇವೆ. ಹಾಗು ಚರಿತ್ರೆಕಾರರ ಕೊಟ್ಟಿರುವ ರಿಪೋರ್ಟ್ ಪ್ರಕಾರ, ಆ ದ್ವಾರಗಳಿಗೆ ಸಂಬಂಧಪಟ್ಟ ಅವಶೇಷಗಳು ಇನ್ನು ಇದೆ ಎಂದು ಗೊತ್ತಾಗುತ್ತದೆ.

ಪೇಪರ್ ಆಧಾರಿತ ಆಸ್ತಿ ನೋಂದಣಿ ವ್ಯವಸ್ಥೆ ರದ್ದು ; e-ಆಸ್ತಿ ನೋಂದಣಿ ಕಡ್ಡಾಯ.!

ಗುಜರಾತಿಗೆ ಪಶ್ಚಿಮ ಭಾಗದಲ್ಲಿ ಸಮುದ್ರದ ದಡದಲ್ಲಿ ಇಂದಿಗೂ ಧಾರ್ಮಿಕ ಕ್ಷೇತ್ರಗಳು ಬಹಳಷ್ಟಿವೆ. ದ್ವಾರಕ ಭಾರತ ದೇಶದಲ್ಲಿನ ನಾಲ್ಕು ಧಾಮಗಳಲ್ಲಿ ಒಂದು. ಭಾರತದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಇದು ಕೂಡ ಒಂದು ಎನ್ನುವ ಖ್ಯಾತಿಯನ್ನು ಪಡೆದಿದೆ. ಎರಡು ದ್ವಾರಕ ನಗರಗಳು ಇವೆ ಎಂದು ಹೇಳುತ್ತಾರೆ. ಅದರಲ್ಲಿ ಒಂದು ಗೋಮತಿ ನದಿಯ ತಟದ ಮೇಲೆ ಇದೇ, ಇದನ್ನು ಧಾಮ ಎಂದು ಕರೆಯಲಾಗುತ್ತದೆ. ಇನ್ನೊಂದು ಸಮುದ್ರದ ಗರ್ಭದಲ್ಲಿರುವುದೇ ದ್ವಾರಕಾಪುರಿ.

ಅಲ್ಲಿ ಶ್ರೀ ಕೃಷ್ಣನ ದೇಹವಿದೆ ಎನ್ನುವ ಪ್ರತೀತಿ ಈಗಲೂ ಇದೆ. ಇಲ್ಲಿಗೆ ಸೇರಬೇಕು ಎಂದರೆ ಸಮುದ್ರ ಮಾರ್ಗದಿಂದ ಮಾತ್ರ ಹೋಗಬೇಕಾಗುತ್ತದೆ. 2005ರಲ್ಲಿ ಭಾರತದ ಆರ್ಕಿಯಾಲಜಿಸ್ಟ್’ಗಳ ಮೂಲಕ ದ್ವಾರಕ ನಗರದ ಇರುವನ್ನು ಕಂಡು ಕೊಳ್ಳಲಾಗಿದೆ.

ಕಳೆದರಡು ದಿನದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ದ್ವಾರಕಾದಲ್ಲಿ ಸಮುದ್ರದ ಆಳಕ್ಕೆ ತೆರಳಿ ಮುಳುಗಿರುವ ದ್ವಾರಕಾ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದರು.

Scheme : ರೂ. 500 ಗೆ ಎಲ್‌ಪಿಜಿ ಸಿಲಿಂಡರ್ ; ಸಿಎಂ ಘೋಷಣೆ.!

ಈ ಅನುಭವ ನನಗೆ ಭಾರತದ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಬೇರುಗಳೊಂದಿಗೆ ಅಪರೂಪದ ಮತ್ತು ಆಳವಾದ ಸಂಪರ್ಕವನ್ನು ಒದಗಿಸಿದೆ ಎಂದು ಹೇಳಿದರು. ಶ್ರೀಕೃಷ್ಣನ ಕಾರ್ಯಕ್ಷೇತ್ರವಾದ ದ್ವಾರಕಾಧಾಮಕ್ಕೆ ಗೌರವಪೂರ್ವಕವಾಗಿ ನಮಿಸುತ್ತೇನೆ ಎಂದಿದ್ದರು. (ಎಜೇನ್ಸಿಸ್)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img