ಜನಸ್ಪಂದನ ನ್ಯೂಸ್, ಡೆಸ್ಕ್ : ಕಾರ್ಯಕ್ರಮವೊಂದರಲ್ಲಿ ಕಾನ್ಸ್ಟೇಬಲ್ ಓರ್ವರು ಊಟ ಮಾಡುತ್ತಿದ್ದ ವೇಳೆ ಐಪಿಎಸ್ ಅಧಿಕಾರಿ ಊಟವನ್ನು (lunch) ಅರ್ಧದಲ್ಲಿ ಬಿಟ್ಟು ಕರ್ತವ್ಯಕ್ಕೆ ಮರಳುವಂತೆ ಒತ್ತಾಯಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗಿದೆ.
ಮಧ್ಯಪ್ರದೇಶ (Madhya Pradesh) ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಅಜಂಗಢಕ್ಕೆ ಭೇಟಿ ನೀಡಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ; ನಾಲ್ವರು ಅರೆಸ್ಟ್.!
ವಿಡಿಯೋದಲ್ಲಿರುವ ದೃಶ್ಯ :
ಕಾನ್ಸ್ಟೇಬಲ್ ಊಟ ಮಾಡುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಐಪಿಎಸ್ ಅಧಿಕಾರಿ ಊಟವನ್ನು ಅರ್ಧದಲ್ಲಿ ಬಿಟ್ಟು ಕರ್ತವ್ಯಕ್ಕೆ (duty) ಮರಳುವಂತೆ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಹಿರಿಯ ಪೊಲೀಸ್ ಕಾನ್ಸ್ಟೇಬಲ್ ತನ್ನ ಅಧಿಕಾರಿಯ ಆದೇಶವನ್ನು (order) ಅನುಸರಿಸಿ ಆಹಾರವನ್ನು ಅರ್ಧದಲ್ಲಿಯೇ ಬಿಸಾಕಿ ಕೈತೊಳೆದುಕೊಂಡು ಊಟ ಮಾಡದೆ ಕರ್ತವ್ಯಕ್ಕೆ ಮರಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಗೋಮಾತೆಗೆಯೇ ಹಾಲುಣಿಸಿದ ಶ್ವಾನ ; ಪೋಟೋ ವೈರಲ್.!
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
#आजमगढ़: कार्यक्रम में खाना खाने लगा सिपाही तो आईपीएस शुभम अग्रवाल ने खाना छोड़कर सिपाही को ड्यूटी पर जाने को कहा,
साहब की डांट के बाद सिपाही को प्लेट रखना पड़ा वीडियो हुआ वायरल। pic.twitter.com/aGfjKaiGVy— Faiz khan (@JournalistFaiz1) February 13, 2024