Saturday, July 27, 2024
spot_img
spot_img
spot_img
spot_img
spot_img
spot_img

ಗಂಡ ಲಂಚ ಪಡೆದು ಸಿಕ್ಕಿಬಿದ್ರೆ ಪತ್ನಿ ಸಹ ಶಿಕ್ಷೆ ಎದುರಿಸಲು ರೆಡಿಯಾಗಿರಬೇಕು : Highcourt.

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹತ್ವಪೂರ್ಣ ತೀರ್ಪೋಂದರಲ್ಲಿ ಮದ್ರಾಸ್​ ಹೈಕೋರ್ಟ್, ಮಾಜಿ ಸರ್ಕಾರಿ ನೌಕರನ ವಿರುದ್ಧ ದಾಖಲಾಗಿರುವ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ (Higher property income) ಪ್ರಕರಣದಲ್ಲಿ ಪತ್ನಿಗೆ ವಿಧಿಸಿರುವ ಶಿಕ್ಷೆಯನ್ನು ಕೈಬಿಡುವಂತೆ ಕೋರಿದ್ದ ಮನವಿಯನ್ನು ​ನಿರಾಕರಿಸಿದೆ.

ಲಂಚ ಪಡೆಯುವ ಸರ್ಕಾರಿ ನೌಕರ ಮಾತ್ರವಲ್ಲ ಅದಕ್ಕೆ ಕುಮ್ಮಕ್ಕು ನೀಡುವ ಪತ್ನಿಯು ಕೂಡ ಶಿಕ್ಷೆಗೆ ಅರ್ಹಳು ಎಂದು​ ಮಹತ್ವದ ತೀರ್ಪು ಪ್ರಕಟಿಸಿದೆ.

ಇದನ್ನು ಓದಿ : Health : ಆರೋಗ್ಯವಂತ ವ್ಯಕ್ತಿಯ ದೇಹದ ತೂಕ ಮತ್ತು ಎತ್ತರ ಎಷ್ಟಿರಬೇಕು ಗೊತ್ತಾ.?

ನ್ಯಾಯಮೂರ್ತಿ ಕೆ.ಕೆ. ರಾಮಕೃಷ್ಣನ್ ಅವರು ಭ್ರಷ್ಟಾಚಾರ ಪ್ರಕರಣಗಳ ವಿಶೇಷ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷದ ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ,​ ಭ್ರಷ್ಟಾಚಾರ ಮನೆಯಿಂದಲೇ ಆರಂಭವಾಗುತ್ತದೆ. ಮನೆಯಲ್ಲಿರುವವರು ಭ್ರಷ್ಟಾಚಾರದಲ್ಲಿ ತೊಡಗಿದರೆ ಅದಕ್ಕೆ ಕೊನೆಯೇ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಎಂಜಾಯ್​ ಮಾಡಿದರೆ ಮುಂದೊಂದು ದಿನ ಕರ್ಮದ ಫಲ ಅನುಭವಿಸಬೇಕಾಗುತ್ತದೆ. ಕುಟುಂಬವೇ ಸರ್ವನಾಶವಾಗುತ್ತದೆ. ಅಲ್ಲದೇ
ಲಂಚ ಪಡೆಯದಂತೆ ಗಂಡನನ್ನು ಉತ್ತೇಜಿಸುವುದು ಸರ್ಕಾರಿ ನೌಕರನ ಹೆಂಡತಿಯ ಕರ್ತವ್ಯ. ಜೀವನದ ಮೂಲ ತತ್ವವೆಂದರೆ ಲಂಚದಿಂದ ದೂರವಿರುವುದು. ಯಾರಾದರೂ ಲಂಚ ಸ್ವೀಕರಿಸಿದರೆ, ಅವನು ಮತ್ತು ಅವನ ಕುಟುಂಬವು ಹಾಳಾಗುತ್ತದೆ ಎಂದಿದೆ.

ಮನೆಯಲ್ಲಿರುವವರು ಭ್ರಷ್ಟಾಚಾರದ ಪರವಾಗಿದ್ದರೆ ಅದಕ್ಕೆ ಅಂತ್ಯವೇ ಇರುವುದಿಲ್ಲ. ಹೀಗಾಗಿ ಈ ದೇಶದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದೆ. ಭ್ರಷ್ಟಾಚಾರ ಮನೆಯಿಂದಲೇ ಪ್ರಾರಂಭವಾಗುತ್ತದೆ.

ಅಕ್ರಮವಾಗಿ ಸಂಪಾದಿಸಿದ ಹಣದಿಂದಾಗಿ ಮನೆಯ ಯಜಮಾನಿಯ ಜೀವನವು ಸುಖದ ಸುಪ್ಪತ್ತಿಗೆಯಲ್ಲಿರುತ್ತದೆ. ಆದ್ದರಿಂದ ಅವಳು ಕೂಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಇದನ್ನು ಓದಿ : Lokasabha election : NDAಗೆ ಕಡಿಮೆ ಸ್ಥಾನ, ಹೃದಯಾಘಾತದಿಂದ BJP ಅಭಿಮಾನಿ ಸಾವು.!

ಪ್ರಕರಣದ ಹಿನ್ನೆಲೆ :
ಶಕ್ತಿವೇಲ್ ಹೆಸರಿನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿರುದ್ಧ 2017ರಲ್ಲಿ ಭ್ರಷ್ಟಾಚಾರ ಪ್ರಕರಣ ದಾಖಲಾಗಿತ್ತು. 1992ರ ಜನವರಿಯಿಂದ 1996ರ ಡಿಸೆಂಬರ್ ಅವಧಿಯಲ್ಲಿ ಶಕ್ತಿವೇಲ್ ಅಕ್ರಮವಾಗಿ 6.7 ಲಕ್ಷ ರೂ. ಪಡೆದಿದ್ದ ಎನ್ನಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಶಕ್ತಿವೇಲ್ ಮೃತಪಟ್ಟರು. ನಂತರ ಪೊಲೀಸರು ಆತನ ಪತ್ನಿ ದೇವ ನಾಯಕಿಯನ್ನು ಸಹ ಆರೋಪಿ ಎಂದು ಆರೋಪಪಟ್ಟಿ ಸಲ್ಲಿಸಿದ್ದರು.

ತಿರುಚಿರಾಪಳ್ಳಿಯ ವಿಶೇಷ ನ್ಯಾಯಾಲಯವು ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ನಂತರ, ಅವರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಹೈಕೋರ್ಟ್ ಅನ್ನು ಸಂಪರ್ಕಿಸಿದರು. ಆದರೆ, ಹೈಕೋರ್ಟ್​ನಲ್ಲಿ ದೇವ ನಾಯಕಿಗೆ ಹಿನ್ನೆಡೆಯಾಗಿದೆ. ಶಕ್ತಿವೇಲ್ ಮೃತಪಟ್ಟ ಕಾರಣ, ಸಹ ಆರೋಪಿ ದೇವನಾಯಕಿಗೆ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ 1000 ರೂ. ದಂಡವನ್ನು ವಿಧಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ.

spot_img
spot_img
- Advertisment -spot_img