ಜನಸ್ಪಂದನ ನ್ಯೂಸ್, ಆರೋಗ್ಯ : ಪುರುಷರು 40 ವರ್ಷದ ನಂತರ ಮಾಡಿಸಿಕೊಳ್ಳಲೇ ಬೇಕಾದ ಪ್ರಮುಖ ಆರೋಗ್ಯ ತಪಾಸಣೆ (Tests) ಗಳಿವೆ. ಬನ್ನಿ ಹಾಗಾದ್ರೆ ಯಾವು ಆ ತಪಾಸಣೆ (Tests) ಗಳು ಅಂತ ತಿಳಿಯೋಣ.!
40 ವರ್ಷದ ವಯಸ್ಸನ್ನು ಜೀವನದಲ್ಲಿ ಒಂದು ಮಹತ್ವದ ಹಂತವೆಂದು ಪರಿಗಣಿಸಲಾಗುತ್ತದೆ. ಈ ಸಮಯದಿಂದ ದೇಹದಲ್ಲಿ ಮತ್ತು ಮನಸ್ಸಿನಲ್ಲಿ ಹಲವಾರು ಬದಲಾವಣೆಗಳು ಆರಂಭವಾಗುತ್ತವೆ.
ವಿಶೇಷವಾಗಿ ಪುರುಷರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು, ಮಧುಮೇಹ, ಪ್ರಾಸ್ಟೇಟ್ ಸಮಸ್ಯೆಗಳು ಮುಂತಾದ ದೀರ್ಘಕಾಲದ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ತಜ್ಞರ ಅಭಿಪ್ರಾಯದಂತೆ, ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆಗಳನ್ನು (Tests) ಮಾಡಿಸಿಕೊಂಡರೆ ಈ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ನಿಯಂತ್ರಿಸಲು ಸಾಧ್ಯ.
Fire : 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಬೆಂಕಿಯಿಟ್ಟಿರುವ ಶಂಕೆ.!
ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ತಪಾಸಣೆ (Test) :
40 ವರ್ಷವಾದ ನಂತರ ಅಧಿಕ ರಕ್ತದೊತ್ತಡ ಹಾಗೂ ಹೆಚ್ಚು ಕೊಲೆಸ್ಟ್ರಾಲ್ ಸಾಮಾನ್ಯವಾಗುತ್ತದೆ. ಇವು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಪ್ರಮುಖ ಕಾರಣಗಳಾಗಬಹುದು. ಆದ್ದರಿಂದ ರಕ್ತದೊತ್ತಡವನ್ನು ಪ್ರತಿ ವರ್ಷ ಪರಿಶೀಲಿಸುವುದು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು 3-5 ವರ್ಷಗಳಿಗೊಮ್ಮೆ ಪರೀಕ್ಷಿಸುವುದು ಅಗತ್ಯ. ಅಸಮಾನ್ಯ ಫಲಿತಾಂಶ ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ರಕ್ತದಲ್ಲಿನ ಸಕ್ಕರೆ ಪರೀಕ್ಷೆ (Test) :
ಮಧುಮೇಹವು ಭಾರತದಲ್ಲಿ ವೇಗವಾಗಿ ಹರಡುತ್ತಿರುವ ರೋಗ. 40 ವರ್ಷದ ನಂತರ ಇದರಿಂದ ಬಳಲುವ ಅಪಾಯ ಹೆಚ್ಚುತ್ತದೆ. HbA1c ಪರೀಕ್ಷೆಯಂತಹ ರಕ್ತದಲ್ಲಿನ ಸಕ್ಕರೆ ತಪಾಸಣೆಗಳು ಮಧುಮೇಹವನ್ನು ಪತ್ತೆಹಚ್ಚಲು ಮಾತ್ರವಲ್ಲದೆ, ಕಳೆದ ಮೂರು ತಿಂಗಳ ಸಕ್ಕರೆ ನಿಯಂತ್ರಣದ ಸ್ಥಿತಿಯನ್ನೂ ತೋರಿಸುತ್ತವೆ.
Thyroid : ಥೈರಾಯ್ಡ್ ಸಮಸ್ಯೆ ಇರುವವರು ಈ 5 ಆಹಾರ ಸೇವಿಸಬೇಡಿ : ತಜ್ಞರ ಎಚ್ಚರಿಕೆ.!
ಪ್ರಾಸ್ಟೇಟ್ ಪರೀಕ್ಷೆ (Test) :
ಪುರುಷರಲ್ಲಿ 40 ವರ್ಷಗಳ ನಂತರ ಪ್ರಾಸ್ಟೇಟ್ ಗ್ರಂಥಿ ಸಂಬಂಧಿತ ಸಮಸ್ಯೆಗಳು ಸಾಮಾನ್ಯ. PSA (Prostate Specific Antigen) ಪರೀಕ್ಷೆ ಹಾಗೂ DRE (Digital Rectal Examination) ಮೂಲಕ ಪ್ರಾಸ್ಟೇಟ್ ಕ್ಯಾನ್ಸರ್ ಅಥವಾ ಹೈಪರ್ಪ್ಲಾಸಿಯಂತಹ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಬಹುದು. ಸಮಯಕ್ಕೆ ಪತ್ತೆಯಾದರೆ ಚಿಕಿತ್ಸೆಯು ಸುಲಭವಾಗುತ್ತದೆ.
ಯಕೃತ್ತು ಮತ್ತು ಮೂತ್ರಪಿಂಡ ಪರೀಕ್ಷೆಗಳು (Tests) :
ಯಕೃತ್ತು (LFT) ಮತ್ತು ಮೂತ್ರಪಿಂಡ (KFT) ಕಾರ್ಯಪರಿಣಾಮ ಪರೀಕ್ಷೆಗಳು 40 ವರ್ಷದ ನಂತರ ಅತ್ಯಂತ ಅಗತ್ಯ. ಈ ಪರೀಕ್ಷೆಗಳು ಯಕೃತ್ತಿನ ಎನ್ಜೈಮ್ ಮಟ್ಟಗಳು ಮತ್ತು ಕ್ರಿಯೇಟಿನೈನ್ ಮಾಪನದ ಮೂಲಕ ಅಂಗಗಳ ಆರೋಗ್ಯ ಸ್ಥಿತಿಯನ್ನು ತೋರಿಸುತ್ತವೆ. ಕೊಬ್ಬಿನ ಯಕೃತ್ತು ಅಥವಾ ಮೂತ್ರಪಿಂಡದ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಬಹುದು.
Fire : 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಬೆಂಕಿಯಿಟ್ಟಿರುವ ಶಂಕೆ.!
ಜನಸ್ಪಂದನ ನ್ಯೂಸ್, ಚಿತ್ರದುರ್ಗ : 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಬೆಂಕಿಯಿಟ್ಟು (Fire) ಸುಟ್ಟು ಹಾಕಿರುವ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ನಗರದ ಹೊರವಲಯದ ಗೋನೂರು ಬ್ರಿಡ್ಜ್ (ಹೊಸ ಹೆದ್ದಾರಿ) ಸಮೀಪದ ಖಾಸಗಿ ಜಮೀನಿನಲ್ಲಿ ಬೆಂಕಿಯಿಟ್ಟು (Fire) ಸುಟ್ಟು ಹಾಕಿದ ಯುವತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಮೃತಳನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕೋವೇರಹಟ್ಟಿ ಮೂಲದ 19 ವರ್ಷದ ವಿದ್ಯಾರ್ಥಿನಿ ವರ್ಷಿತಾ ಮೃತದೇಹವು ನಿನ್ನೆ ರಾಷ್ಟ್ರೀಯ ಹೆದ್ದಾರಿ ಬಳಿ ಪತ್ತೆಯಾಗಿದೆ. ವರ್ಷಿತಾ ಚಿತ್ರದುರ್ಗದಲ್ಲಿ ವಾಸ್ತವ್ಯವಿದ್ದು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಳು.
Bike-Scooter-collision : 2-3 ಸುತ್ತು ಹಾಕಿ ಕೆಳಗೆ ಬಿದ್ದ ಬೈಕ್ ಸವಾರ ; ವಿಡಿಯೋ ವೈರಲ್.!
ಅರೆಬರೆ ಸುಟ್ಟ (Fire) ಸ್ಥಿತಿಯಲ್ಲಿ ಶವ ಪತ್ತೆಯಾದ ಕಾರಣ, ಅತ್ಯಾಚಾರ ಮಾಡಿ ಕೊಲೆಗೈದು ಪೆಟ್ರೋಲ್ ಎರಚಿ ಸುಟ್ಟಿರಬಹುದೆಂಬ (Fire) ಶಂಕೆ ವ್ಯಕ್ತವಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಪೊಲೀಸರು ಮೃತದೇಹವನ್ನು ಪೋಸ್ಟ್ಮಾರ್ಟಂಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂತ್ರನಾಳದ ಸೋಂಕು (UTI) : ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಮಾರ್ಗಗಳು.!
ಈ ಘಟನೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ನಿಜಾಸಕ್ತಿ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.