Tuesday, September 16, 2025

Janaspandhan News

HomeHealth & FitnessVitamin : ನಿಮ್ಗೂ ವಿಪರೀತ ಕಾಲು ಸೆಳೆತ, ನೋವಿದ್ಯಾ ̤? ಅದಕ್ಕೆ ಇದುವೇ ಕಾರಣ.!
spot_img
spot_img
spot_img

Vitamin : ನಿಮ್ಗೂ ವಿಪರೀತ ಕಾಲು ಸೆಳೆತ, ನೋವಿದ್ಯಾ ̤? ಅದಕ್ಕೆ ಇದುವೇ ಕಾರಣ.!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ನಿಮ್ಗೂ ವಿಪರೀತ ಕಾಲು ಸೆಳೆತ, ನೋವಿದ್ಯಾ ̤? ಅದಕ್ಕೆ ಕಾರಣವೇನೆಂದು ಗೊತ್ತೇ.? ಬನ್ನಿ, ಈ ದಿನ ಕಾಲು ಸೆಳೆತ, ಕಾಲು ನೋವಿಗೆ ವಿಟಾಮಿನ್‌ (Vitamin) ಗಳೇ ಕಾರಣ.! ಈಗ ಪರಿಹಾರ ಎನೆಂದು ತಿಳಿಯೋಣ.!

ಇಂದಿನ ವೇಗದ ಜೀವನಶೈಲಿಯಲ್ಲಿ ಅನೇಕರು ತಮ್ಮ ಆರೋಗ್ಯದ ಬಗ್ಗೆ ಅಗತ್ಯ ಮಟ್ಟದ ಗಮನ ಹರಿಸಲು ಮರೆತು ಬಿಡುತ್ತಾರೆ. ಸರಿಯಾದ ಆಹಾರ ಸೇವನೆಯ ಕೊರತೆಯಿಂದ ದೇಹದಲ್ಲಿ ಅಗತ್ಯ ಪೌಷ್ಠಿಕಾಂಶಗಳು ಕಡಿಮೆಯಾಗುತ್ತವೆ.

ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ; ‘ಲೈವ್ ಸೂಸೈಡ್’ ವಿಡಿಯೋ ವೈರಲ್”

ಇದರಿಂದ ಮೂಳೆ, ಸ್ನಾಯು ಮತ್ತು ನರ ಸಂಬಂಧಿತ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಎಚ್ಚರಿಸುತ್ತಾರೆ. ಬಹಳಷ್ಟು ಜನರು ಪಾದಗಳಲ್ಲಿ ಕಾಣಿಸುವ ನೋವನ್ನ ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಆದರೆ ಇದರ ಹಿಂದಿನ ಪ್ರಮುಖ ಕಾರಣ ಪೌಷ್ಠಿಕಾಂಶಗಳ ಕೊರತೆಯೇ ಆಗಿರಬಹುದು.

ದೇಹದಲ್ಲಿ ಅಗತ್ಯ ಪ್ರಮಾಣದ ವಿಟಮಿನ್ (Vitamin) ಮತ್ತು ಖನಿಜಗಳು (Minerals) ಕಡಿಮೆಯಾದರೆ ನರ ಮತ್ತು ಸ್ನಾಯುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ನೋವು, ಜುಮ್ಮೆನಿಸುವಿಕೆ, ದೌರ್ಬಲ್ಯ ಮತ್ತು ಮರಗಟ್ಟುವಿಕೆ ಉಂಟಾಗಬಹುದು.

Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!
ವಿಟಮಿನ್ (Vitamin) ಡಿ ಕೊರತೆ :

ಮೂಳೆಗಳ ಆರೋಗ್ಯಕ್ಕೆ ವಿಟಮಿನ್ (Vitamin) ಡಿ ಅತ್ಯಗತ್ಯ. ಇದರ ಕೊರತೆಯಿಂದ ಮೂಳೆ ನೋವು, ಸ್ನಾಯು ಬಿಗಿತ ಹಾಗೂ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ದೀರ್ಘಕಾಲದವರೆಗೆ ಈ ಸಮಸ್ಯೆ ಮುಂದುವರಿದರೆ ನಡೆಯುವ ಸಾಮರ್ಥ್ಯಕ್ಕೂ ತೊಂದರೆ ಉಂಟಾಗಬಹುದು.

ವಿಟಮಿನ್ (Vitamin) B12 ಕೊರತೆ :

ನರಗಳ ಆರೋಗ್ಯಕ್ಕಾಗಿ ವಿಟಮಿನ್ (Vitamin) B12 ಮುಖ್ಯ ಪಾತ್ರ ವಹಿಸುತ್ತದೆ. ಇದರ ಕೊರತೆಯಿಂದ ನರ ಹಾನಿ, ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಮತ್ತು ಕಾಲು ನೋವಿನಂತಹ ಸಮಸ್ಯೆಗಳು ಕಂಡುಬರುತ್ತವೆ. ಮೀನು, ಮೊಟ್ಟೆ, ಹಾಲು, ಮೊಸರು, ಪನೀರ್ ಹಾಗೂ ದ್ವಿದಳ ಧಾನ್ಯಗಳ ಸೇವನೆಯಿಂದ ಈ ಕೊರತೆಯನ್ನು ತಡೆಹಿಡಿಯಬಹುದು.

sex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!
ಕಬ್ಬಿಣದ ಕೊರತೆ :

ದೇಹದಲ್ಲಿ ಕಬ್ಬಿಣ ಕಡಿಮೆಯಾದರೆ ಆಯಾಸ, ಸ್ನಾಯು ಸೆಳೆತ ಮತ್ತು ಕಾಲು ನೋವು ಕಾಣಿಸಿಕೊಳ್ಳುತ್ತದೆ. ಪಾಲಕ್, ಸೇಬು, ದಾಳಿಂಬೆ, ಬೀಟ್ರೂಟ್, ಕಡಲೆಕಾಯಿ, ಬೆಲ್ಲ, ಕುಂಬಳಕಾಯಿ ಬೀಜ ಹಾಗೂ ಅಗಸೆ ಬೀಜಗಳ ಸೇವನೆಯಿಂದ ಕಬ್ಬಿಣದ ಮಟ್ಟವನ್ನು ಹೆಚ್ಚಿಸಬಹುದು.

ಮೆಗ್ನೀಸಿಯಮ್ ಕೊರತೆ :

ದೇಹದಲ್ಲಿ ಶಕ್ತಿಯನ್ನು ಕಾಪಾಡಿಕೊಳ್ಳಲು ಮೆಗ್ನೀಸಿಯಮ್ ಅತ್ಯಂತ ಅಗತ್ಯ. ಇದರ ಕೊರತೆಯಿಂದ ದೇಹದ ವಿವಿಧ ಭಾಗಗಳಲ್ಲಿ ನೋವು ಉಂಟಾಗಬಹುದು. ಬೀನ್ಸ್, ಧಾನ್ಯಗಳು ಮತ್ತು ವಿವಿಧ ಬಗೆಯ ಬೀಜಗಳು ಮೆಗ್ನೀಸಿಯಮ್ ಉತ್ತಮ ಮೂಲಗಳಾಗಿವೆ.

Girl : “ಕಿಸ್ ಕೊಟ್ರೆ ಮಾತ್ರ ಫೋನ್‌ ವಾಪಸ್”‌, ಖಾಸಗಿ ಬಸ್‌ನಲ್ಲಿ ಅಪ್ರಾಪ್ತೆಗೆ ಚಾಲಕನ ಕಿರುಕುಳ ; ಮುಂದೆ.?

ತಜ್ಞರ ಪ್ರಕಾರ, ಪೌಷ್ಠಿಕಾಂಶ ಕೊರತೆಯ ಜೊತೆಗೆ ಸಂಧಿವಾತ, ನರ ಒತ್ತಡ, ಮಧುಮೇಹದಿಂದ ಉಂಟಾಗುವ ನರ ಹಾನಿ ಮುಂತಾದವುಗಳೂ ಕಾಲು ನೋವಿಗೆ ಕಾರಣವಾಗಬಹುದು. ಆದ್ದರಿಂದ ಕಾಲು ನೋವು ಕಂಡುಬಂದಾಗ ಅದನ್ನು ಸಾಮಾನ್ಯವೆಂದು ನಿರ್ಲಕ್ಷಿಸದೆ, ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ.


Girl : “ಕಿಸ್ ಕೊಟ್ರೆ ಮಾತ್ರ ಫೋನ್‌ ವಾಪಸ್”‌, ಖಾಸಗಿ ಬಸ್‌ನಲ್ಲಿ ಅಪ್ರಾಪ್ತೆಗೆ ಚಾಲಕನ ಕಿರುಕುಳ ; ಮುಂದೆ.?

minor girl

ಜನಸ್ಪಂದನ ನ್ಯೂಸ್‌, ಬೆಂಗಳೂರು : ಚಾರ್ಜ್‌ ಹಾಕಿದ ಮೊಬೈಲ್‌ ವಾಪಸ್‌ ಕೊಡಲು ಖಾಸಗಿ ಬಸ್‌ ಚಾಲಕನೋರ್ವ ಅಪ್ರಾಪ್ತೆ (Girl) ಗೆ “KISS” ಬೇಡಿಕೆ ಇಟ್ಟ ಆಘಾತಕಾರಿ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಸ್ಲೀಪರ್‌ ಕೋಚ್‌ ಬಸ್‌ನಲ್ಲಿ 15 ವರ್ಷದ ಅಪ್ರಾಪ್ತೆ (Girl) ಯೊಬ್ಬಳಿಗೆ ಚಾಲಕನೋರ್ವ ಮುತ್ತು (Kiss) ಕೊಡುವಂತೆ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿರುವ ಬಗ್ಗೆ ತಿಳಿದು ಬಂದಿದೆ.

Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!

ಖಾಸಗಿ ಬಸ್‌ ಚಾಲಕನ ಈ ವರ್ತನೆಯ ಬಳಿಕ ಬಾಲಕಿ (Girl) ಯ ಕುಟುಂಬಸ್ಥರು ಆಕ್ರೋಶಗೊಂಡು ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗುತ್ತಿವೆ.

ಘಟನೆ ಹೀಗಿದೆ :

ಮಾಹಿತಿಯ ಪ್ರಕಾರ, ರಾತ್ರಿ ಪ್ರಯಾಣದ ವೇಳೆ ಬಾಲಕಿ (Girl) ಯ ಮೊಬೈಲ್ ಫೋನ್‌ನಲ್ಲಿ ಚಾರ್ಜ್ ಖಾಲಿಯಾಗಿದ್ದರಿಂದ ಆಕೆ ಸ್ಪೇರ್ ಚಾಲಕನ ಬಳಿ ಫೋನ್ ಚಾರ್ಜ್ ಹಾಕುವಂತೆ ನೀಡಿದ್ದಳು. ಸ್ವಲ್ಪ ಹೊತ್ತಿನ ನಂತರ ಫೋನ್ ಹಿಂತಿರುಗಿಸಲು ಕೇಳಿದಾಗ, ಸ್ಪೇರ್ ಚಾಲಕ ಆರೀಫ್ ಅಸಭ್ಯವಾಗಿ ವರ್ತಿಸಿ “ಮುತ್ತು ಕೊಟ್ಟರೆ ಮಾತ್ರ ಫೋನ್ ಕೊಡುತ್ತೇನೆ” ಎಂದು ಒತ್ತಾಯಿಸಿದ್ದು, ಇದರಿಂದ ಬಾಲಕಿ ಬೆಚ್ಚಿಬಿದ್ದಿದ್ದಾಳೆ.

ವಾಹನಗಳ Number Plate ಮೇಲೆ ಹೆಸರು, ಲೋಗೋ & ಲಾಂಛನ ಹಾಕುವುದು ನಿಷೇಧ.!

ಅಷ್ಟೇ ಅಲ್ಲದೇ, ಮಲಗಿದ್ದಾಗ ಸೀಟ್ ಹತ್ತಿರ ಬಂದು ಆಕೆಗೆ ಪದೇ ಪದೇ ಲೈಂಗಿಕ ಕಿರುಕುಳ (Sexual Harassment) ನೀಡಿದ ಆರೋಪ ಕೂಡ ಕೇಳಿಬಂದಿದೆ. ರಾತ್ರಿ ಪೂರ್ತಿ ತೊಂದರೆ ಅನುಭವಿಸಿದ ಬಾಲಕಿ ಭಯದಿಂದ ಕುಟುಂಬಸ್ಥರ ಸಹಾಯವನ್ನು ಕೇಳಿದ್ದಾಳೆ.

ಕೊನೆಗೆ ಬಾಲಕಿ (Girl) ಹೇಗೋ ಫೋನ್ ಇಸ್ಕೊಂಡು ತನ್ನ ಅಣ್ಣ ಮತ್ತು ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

ಪೋಷಕರ ಆಕ್ರೋಶ :

ಇಂದು ಬೆಳಗ್ಗೆ ಬಸ್‌ ಬೆಂಗಳೂರಿನ ಚಾಲುಕ್ಯ ಸರ್ಕಲ್ ಬಳಿ ತಲುಪಿದಾಗ ಬಾಲಕಿಯ ತಾಯಿ ಮತ್ತು ಸಹೋದರರು ಚಾಲಕ ಆರೀಫ್‌ನನ್ನು ಕೆಳಗಿಳಿಸಿ ಪ್ರಶ್ನಿಸಿದ್ದಾರೆ. ಆ ಸಮಯದಲ್ಲಿ ಆತ ಕೈ ಮುಗಿದು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾನೆ.

ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ; ‘ಲೈವ್ ಸೂಸೈಡ್’ ವಿಡಿಯೋ ವೈರಲ್”

ಇದರಿಂದ ಕೋಪಗೊಂಡ ಕುಟುಂಬಸ್ಥರು ಬಟ್ಟೆ ಬಿಚ್ಚಿ ಸಾರ್ವಜನಿಕವಾಗಿ ಚಾಲಕನನ್ನು ಥಳಿಸಿದ್ದಾರೆ. ಇನ್ನಷ್ಟು ಅವಮಾನ ಮಾಡುವ ಉದ್ದೇಶದಿಂದ ಅವನನ್ನು ಬೆತ್ತಲೆಗೊಳಿಸಲು ಮುಂದಾದಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ತಡೆದಿದ್ದಾರೆ.

ಪೊಲೀಸರು ವಶಕ್ಕೆ ಪಡೆದ ಆರೋಪಿ :

ಘಟನೆಯ ನಂತರ, ಪೊಲೀಸರು ಆರೋಪಿ ಸ್ಪೇರ್ ಚಾಲಕ ಆರೀಫ್‌ನನ್ನು ವಶಕ್ಕೆ ಪಡೆದು ತನಿಖೆ ಪ್ರಾರಂಭಿಸಿದ್ದಾರೆ. ಬಸ್‌ನಲ್ಲಿ ಅಪ್ರಾಪ್ತ ಬಾಲಕಿ (Girl) ಯ ಮೇಲೆ ನಡೆದ ಕಿರುಕುಳದ ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರಕರಣ ದಾಖಲಾಗಿದೆ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments