Saturday, July 27, 2024
spot_img
spot_img
spot_img
spot_img
spot_img
spot_img

Astrology : ಫೆ. 7 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

spot_img

ಜನಸ್ಪಂದನ ನ್ಯೂಸ್, ಭವಿಷ್ಯ : 2024 ಫೆಬ್ರವರಿ 7ರ ಬುಧವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಮೇಷ :
ಸಂಬಂಧಿಕರ ಸ್ಥಳದಲ್ಲಿ ಶುಭಕರ ಸಮಾರಂಭದಲ್ಲಿ ಭಾಗವಹಿಸುವ ಆಹ್ವಾನವು ಇಂದು ನಿಮ್ಮನ್ನು ನಿಜವಾಗಿ ಉತ್ಸಾಹಗೊಳಿಸುವುದಿಲ್ಲ. ತಳಮಳಗೊಂಡಿರುವ ಮನಸ್ಥಿತಿ ಹಾಗೂ ದಿನವಿಡೀ ನಿಮ್ಮನ್ನು ಕಾಡುವ ಸಣ್ಣಮಟ್ಟದ ವ್ಯಾಧಿಯಿಂದಾಗಿ ದುರ್ಭರವಾಗಿರುವಂತೆ ಕಾಣಬಹುದು.

ಕಾರಣವು ಸಾಮಾನ್ಯವಾಗಿರಬಹುದು, ಸಾಮಾನ್ಯ ಬೇಸರದಿಂದ ಸಣ್ಣ ಜಗಳ ಅಥವಾ ನಿಮ್ಮ ಕಾರ್ಯಕ್ಷೇತ್ರದಲ್ಲಿ ಅಥವಾ ಮನೆಯಲ್ಲಿನ ಭಿನ್ನಾಭಿಪ್ರಾಯದಿಂದಲೂ ಆಗಿರಬಹುದು.

ನಿಮ್ಮ ಸಿಡುಕನ್ನು ನಿಯಂತ್ರಿಸುವಂತೆ ಗಣೇಶ ನಿಮಗೆ ತೀಕ್ಷ್ಣವಾಗಿ ಶಿಫಾರಸು ಮಾಡುತ್ತಾರೆ ಇಲ್ಲವಾದಲ್ಲಿ ನೀವು ನಂತರ ನೀವು ಮಾಡಿರುವ ಕ್ರಿಯೆಗಳ ಸಮರ್ಥನೆಗಾಗಿ ನೀವು ತಡಕಾಡಬೇಕಾಗಬಹುದು. ಇದು ಸದ್ಯಕ್ಕೆ ನೀವು ನಿಭಾಯಿಸುತ್ತಿರುವ ಅತಿ ಮುಖ್ಯ ಯೋಜನೆಯನ್ನು ಹಾಳುಗೆಡವಲೂಬಹುದು.

ಇದನ್ನು ಓದಿ : Astrology : ಫೆ. 5 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ವೃಷಭ :
ಧ್ಯಾನ ಮಾಡಿ ಮತ್ತು ಅದರಲ್ಲೇ ಕೇಂದ್ರೀಕೃತವಾಗಲು ಪ್ರಯತ್ನಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಕೆಲವು ದಿನಗಳು ಕೇವಲ ಕಲ್ಪನೆಯಾಗಿರುವುದಿಲ್ಲ. ಮತ್ತು ಇಂದು ಅವುಗಳಲ್ಲಿ ಒಂದು ದಿನವಾಗಿದೆ. ದಿನದ ಬಿಡುವಿನಲ್ಲಿ ನೀವು ಅನ್ಯಮನಸ್ಕರಾಗಿದ್ದಂತೆ ಕಂಡುಬರಬಹುದು. ಇದು ನಿಮ್ಮ ಮೇಲಾಧಿಕಾರಿಗಳು ಮತ್ತು ಸಹೋದ್ಯೋಗಿಗಳು ನಿಮ್ಮ ಮೇಲೆ ಕಾರ್ಯದೊತ್ತಡ ಹೇರುವುದನ್ನು ತಪ್ಪಿಸುವುದಿಲ್ಲ.

ನೀವು ಅತ್ಯಂತ ಆತುರದಿಂದ ಕಾಯುತ್ತಿದ್ದ ಫಲಿತಾಂಶಗಳು ಮುಂದಕ್ಕೆ ಹೋಗಲಿವೆ ಮತ್ತು ಪ್ರಯಾಣವು ಫಲಪ್ರದವಾಗಿರುವುದಿಲ್ಲ. ಉದಾಸೀನತೆ ಮತ್ತು ನಿರುತ್ಸಾಹವು ನಿಮ್ಮ ಸುತ್ತಲೂ ಮಬ್ಬಾಗಿರುತ್ತದೆ. ಆಶ್ಚರ್ಯವೆಂದರೆ, ಅದನ್ನೂ ನೀವು ಮಾತ್ರ ಕಾಣಬಹುದು ಮತ್ತು ಅನುಭವಿಸಬಹುದಾಗಿದೆ‌

ಇತರರು ಅದರ ಬಗ್ಗೆ ನಿರಾಸಕ್ತಿಯನ್ನು ಹೊಂದಿರುತ್ತಾರೆ. ಆದ್ದರಿಂದ ಶಾಂತರಾಗಿರಿ ಮತ್ತು ನಿಮ್ಮ ಕಾರ್ಯವನ್ನು ಮುಂದುವರಿಸಿ. ನೀವು ಏನು ತಿನ್ನುತ್ತೀರಿ ಎಂಬುದರ ಬಗ್ಗೆ ಗಮನಹರಿಸಿ. ಯಾವುದೇ ಹೊಸ ಕಾರ್ಯವನ್ನು ಪ್ರಾರಂಭಿಸಬೇಡಿ.

ಮಿಥುನ :
ಈ ದಿನ ಪೂರ್ತಿ ಸಂತಸ ಹಾಗೂ ಖುಷಿಯಿಂದಿರುವಂತೆ ಗಣೇಶ ನಿಮಗೆ ಹಾರೈಸುತ್ತಾರೆ. ನಿಮ್ಮ ವರಿಷ್ಠರು ಮತ್ತು ಸಹೋದ್ಯೋಗಿಗಳು ಮತ್ತು ಸಂಬಂಧಿಗಳ ನಡುವೆ ನೀವು ಆನಂದಿಸುತ್ತಿದ್ದ ಮರ್ಯಾದೆ ಮತ್ತು ಜನಪ್ರಿಯತೆಯು ಇನ್ನಷ್ಟು ವರ್ಧಿಸಲಿದೆ.

ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಪ್ರವಾಸಿ ತಾಣಗಳಿಗೆ ತೆರಳುವುದರಿಂದ ಸಂತಸದಿಂದಿರಿ ಮತ್ತು ಸದೃಢ ದೈಹಿಕ ಮತ್ತು ಮಾನಸಿಕ ಆರೋಗ್ಯದೊಂದಿಗೆ ಮಜಾಮಾಡಿ. ಇದು ಶಾಪಿಂಗ್ ಪ್ರವಾಸವಾಗಿಯೂ ಪರಿವರ್ತನೆಗೊಳ್ಳಬಹುದು ಅಥವಾ ನಾಲ್ಕುಚಕ್ರದ ಗಾಡಿಯಲ್ಲಿ ಸೊಗಸಾದ ರೀತಿಯಲ್ಲಿ ಅಥವಾ ನಿಮಗಿಷ್ಟವಾದ ಆಭರಣಗಳ ಮೂಲಕ ಗೋಚರಿಸುವ ಮೂಲಕ ನೀವು ಆನಂದಿಸಬಹುದು.

ನಿಮ್ಮ ಪ್ರಿಯವಾದ ತಿನಿಸುಗಳು ಎಲ್ಲಾ ಕೇಕ್‌ಗಳ ಮೇಲೆ ಐಸಿಂಗ್ ಇಟ್ಟಂತಿರುತ್ತದೆ.

ಕರ್ಕಾಟಕ :
ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಅದೃಷ್ಟದ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ವರಿಷ್ಠರಿಂದ ಮತ್ತು ಸಹೋದ್ಯೋಗಿಗಳಿಂದ ಸಹಕಾರ ಮತ್ತು ನೆರವನ್ನು ಪಡೆದುಕೊಳ್ಳುವಿರಿ ಮತ್ತು ನಿಮ್ಮ ಮೇಲಾಧಿಕಾರಿಗಳು ನಿಮ್ಮ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಖುಷಿಯ ಸಮಯವನ್ನು ಕಳೆಯುವಿರಿ.

ಇವೆಲ್ಲವೂ ನಿಮ್ಮನ್ನು ತೀವ್ರ ಉತ್ಸಾಹದಲ್ಲಿರಿಸುತ್ತದೆ ಮತ್ತು ಶಾಂತ ಸ್ಥಿತಿಯನ್ನು ನೀಡುತ್ತದೆ ಇಂಗು ನೀವು ನಿಮ್ಮ ಸ್ಪರ್ಧಿಗಳು ಮತ್ತು ಎದುರಾಳಿಗಳೊಂದಿಗೆ ಗೆಲುವು ಸಾಧಿಸುವುದರಿಂದ ಮತ್ತು ಸೃಜನಶೀಲ, ಕಲಾ ಅಥವಾ ಗುರಿಯುಕ್ತ ಆಸಕ್ತಿಗಳಿಗಾಗಿ ವೆಚ್ಚಮಾಡುವುದರಿಂದ ನೀವು ನೆಮ್ಮದಿಯಿಂದ ಇರುತ್ತೀರಿ. ವೆಚ್ಚದ ಮೇಲೆ ಗಮನಹರಿಸಿ.

ಇದನ್ನು ಓದಿ : ಬೆಳಿಗ್ಗೆ ಉಪಹಾರ ತಿನ್ನುವುದನ್ನು ತಪ್ಪಿಸಿದರೆ ಏನಾಗಬಹುದು.?

ಸಿಂಹ :
ನಿಮ್ಮಲ್ಲಿ ಸಿಡುಕನ್ನು ಉಂಟುಮಾಡುವಂತಹ ಸಣ್ಣ ಖರ್ಚುನ್ನು ಹೊರತುಪಡಿಸಿಯೂ ಇಂದು ನೀವು ಒಟ್ಟಾರೆ ಅದೃಷ್ಟದ ದಿನವನ್ನು ಹೊಂದಿರುವಿರಿ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನಿಮ್ಮ ಕೋಪದ ಮೇಲಿನ ನಿಯಂತ್ರಣವು ನಿಜವಾಗಿ ನಿಮಗೆ ಅಗತ್ಯವಿರುವ ವಿಚಾರಗಳ ಬಗ್ಗೆ ಗಮನಹರಿಸಲು ಸಹಾಯವಾಗುತ್ತದೆ. ಇದರಿಂದಾಗಿ ಆರೋಗ್ಯದ ಮೇಲೆ ಪ್ರಯೋಜನ ಉಂಟಾಗಬಹುದು.

ನೀವು ಸೃಜನಶೀಲ, ಕ್ರೀಜೆ, ಕಲೆ ಅಥವಾ ಸಂಸ್ಕೃತಿ ಒಟ್ಟಾರೆ ನೀವು ಮನಸಾರೆ ಇಷ್ಟಪಡುವಂತಹ ಚಟುವಟಿಕೆಗಳಲ್ಲಿ ನೀವು ತೊಡಗಿಕೊಳ್ಳುವಿರಿ. ವಿದ್ಯಾರ್ಥಿಗಳು ತಾವು ಆರಿಸಿದ ವಿಷಯದಲ್ಲಿ ಉತ್ತಮ ನಿರ್ವಹಣೆಯನ್ನು ಮಾಡಲಿದ್ದೀರಿ. ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗಿನ ಸಂಬಂಧವು ನಿಮ್ಮ ಉತ್ತಮ ಸಮಯಗಳಿಗೆ ಸಾಕ್ಷಿಯಾಗಿದೆ.

ಕನ್ಯಾ :
ಈ ದಿನವು ಅತ್ಯಂತ ಅನುಕೂಲಕರ ದಿನವಾಗಿರುವುದಿಲ್ಲ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಆಲಸ್ಯ, ನಿರುತ್ಸಾಹ ಮತ್ತು ಸಾಮಾನ್ಯ ಆರೋಗ್ಯದ ಕೊರತೆಯು ನಿಯೋಜಿತ ಕಾರ್ಯಗಳನ್ನು ಪೂರ್ಣಗೊಳಿಸುವ ಕುರಿತಂತೆ ನಿಮ್ಮಲ್ಲಿ ನಿರಾಸಕ್ತಿಯನ್ನು ಉಂಟುಮಾಡುತ್ತದೆ. ಇಂದು ನೀವು ಅನಾಸಕ್ತರಾಗಿರುತ್ತೀರಿ ಮತ್ತು ಇದು ಕ್ರಮವಿಲ್ಲದ ಕಾರಣಗಳಿಂದಾಗಿ ನಿಮ್ಮನ್ನು ಆತಂಕಕ್ಕೆ ಒಳಪಡಿಸುತ್ತದೆ.

ಪ್ರೀತಿಪಾತ್ರರೊಂದಿಗಿನ ಜಗಳ, ಸಂಗಾತಿಯೊಂದಿಗಿನ ಸಣ್ಣ ಮುನಿಸು, ಚುಚ್ಚುವ ರೀತಿಯಲ್ಲಿ ಮನಸ್ಸಿಗೆ ನೋವುಂಟುಮಾಡಿದ ಅವಮಾನ, ತಾಯಿಯ ಆರೋಗ್ಯದ ಕುರಿತಾದ ಚಿಂತೆ ಇವೆಲ್ಲವೂ ಇಂದು ನೀವು ಅನುಭವಿಸುವ ಕಳವಳಗಳಿಗೆ ಕಾರಣವಾಗಿರಬಹುದು. ಆಸ್ತಿ ಮತ್ತು ಕಾನೂನು ವಿಚಾರಗಳಿಗೆ ಸಂಬಂಧಿಸಿ ಅವಸರದ ನಿರ್ಧಾರವನ್ನು ಕೈಗೊಳ್ಳುವುದನ್ನು ತಪ್ಪಿಸಿ ಮತ್ತು ಜಾಗರೂಕರಾಗಿರಿ.

ತುಲಾ :
ಸಂತೋಷ ಮತ್ತು ಸಮಾಧಾನದಿಂದಿರಲು ಧಾರ್ಮಿಕ ಪ್ರದೇಶಗಳಿಗೆ ಭೇಟಿ ನೀಡಿ. ಜೀವನದಲ್ಲಿ ಎಲ್ಲಾ ಉತ್ತಮ ವಿಚಾರಗಳಿಗಾಗಿ ಧನ್ಯವಾದಗಳು ದೇವರೆ. ಸುತ್ತಲೂ ನೋಡಿ ಇಂದು ಎಲ್ಲಾ ವಿಷಯಗಳು ತುಂಬಾ ಸಂತೋಷ ಮತ್ತು ಸಡಗರದಿಂದಿರುವಂತೆ ಕಾಣುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ.

ಕುಟುಂಬ ಸಂಬಂಧಗಳಲ್ಲಿನ ಸಂತದ ಮತ್ತು ಸಂಭ್ರಮ, ವಿರೋಧಿಗಳ ವಿರುದ್ಧದ ಗೆಲುವು, ಇಂದು ನೀವು ಏನೇ ಪ್ರಯತ್ನಿಸಿದರೂ ಅದರಲ್ಲಿ ಯಶಸ್ಸು ಇವೆಲ್ಲವೂ ನಿಮಗೆ ಅನುಗ್ರಹವಾಗಿದೆ. ಪ್ರಾಯೋಗಿಕವಾಗಿ ಇಂದು ನೀವು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ. ಅಂತ್ಯದವರೆಗೂ ಆನಂದಿಸಿ. ಈ ಸಂಜೆ ಯಾರೋ ಒಬ್ಬರ ಹಿತವಾದ ಮಾತುಗಳು ನಿಮ್ಮ ಹೃದಯವನ್ನು ಸ್ಪರ್ಷಿಸಲಿವೆ.

ವೃಶ್ಚಿಕ :
ಇಂದು ನಿಮ್ಮ ಮನಸ್ಸೇ ನಿಮ್ಮ ನಾಲಗೆಯಾಗಲಿದೆ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಮನೆಯಲ್ಲಿ ಕಷ್ಟಕರ ವಾತಾವರಣವನ್ನು ಉಂಟುಮಾಡುವ ಪಿತೂರಿಯನ್ನು ಗ್ರಹಗತಿಗಳು ನಡೆಸುತ್ತಿವೆ. ಅಸಹಕಾರ ಮತ್ತು ತಾತ್ಸಾರ ಮನೋಭಾವದಿಂದಾಗಿ ಇಂದು ಕುಟುಂಬ ಸದಸ್ಯರೊಂದಿಗೆ ನೀವು ಜಗಳಕ್ಕೆ ಈಡಾಗಬಹುದು.

ನಿಮ್ಮ ಹಠಮಾರಿ ಸ್ವಭಾವವು ನಿಮ್ಮ ಚಿಂತೆಯ ವಿಚಾರವಾಗಿರಬಹುದು. ಒಬ್ಬರ ಮನಸ್ಸನ್ನು ನೀವು ನೋಯಿಸಬಹುದು ಮತ್ತು ನಂತರ ನೀವು ಇದರ ಬಗ್ಗೆ ನೀವು ಪಶ್ಚಾತ್ತಾಪ ಪಡುತ್ತೀರಿ. ತಾಳ್ಮೆಯಿಂದಿರಲು ಪ್ರಯತ್ನಿಸಿ. ಋಣಾತ್ಮಕ ಆಲೋಚನೆಗಳು ನಿಮ್ಮ ಪ್ರಯೋಜನ ಪಡೆದುಕೊಳ್ಳದಂತೆ ನೋಡಿಕೊಳ್ಳಿ. ವಿಷಯಗಳಲ್ಲಿನ ವಿಫಲತೆಯು ನಿಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ಗಮನ ಹರಿಸಲು ಕಷ್ಟಪಡಬೇಕಾಗುತ್ತದೆ.

ಧನು :
ಇಂದು ನೀವು ಸಣ್ಣ ಧಾರ್ಮಿಕ ಪ್ರವಾಸ ತೆರಳಲು ಸಿದ್ಧತೆ ನಡೆಸುತ್ತಿರುವುದನ್ನು ಗಣೇಶ ಕಾಣುತ್ತಾರೆ.ಇಂದು ನೀವು ಯೋಜಿಸಿದ ಎಲ್ಲವನ್ನೂ ಪೂರ್ಣಗೊಳಿಸುವಿರಿ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಸಂತೋಷದಲ್ಲಿರುತ್ತೀರಿ. ಇದು ನಿಮ್ಮನ್ನು ಆತ್ಮವಿಶ್ವಾಸ ಮತ್ತು ಉತ್ಸಾಹದಲ್ಲಿರಿಸುತ್ತದೆ. ಮನೆಯಲ್ಲಿ ಸಂಭ್ರಮದ ಸಮಾರಂಭಗಳು ಉಂಟಾಗುವ ಸಾಧ್ಯತೆಯಿದೆ ಮತ್ತು ಪ್ರೀತಿಪಾತ್ರರ ಭೇಟಿಯು ನಿಮ್ಮ ಸಂತಸವನ್ನು ಇನ್ನಷ್ಟು ಹೆಚ್ಚಿಸಬಹುದು. ಸಾಮಾಜಿಕವಾಗಿ ನೀವು ಗೌರವ ಸಂಪಾದಿಸುವಿರಿ.

ಮಕರ :
ಇಂದು ನಿಮ್ಮ ದೃಷ್ಟಿಯು ಪ್ರಾಥಮಿಕವಾಗಿ ನಿಮ್ಮ ಜೀವನದಲ್ಲಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಮೇಲಾಗಿರುತ್ತದೆ. ಇದಕ್ಕಾಗಿ ನೀವು ಖರ್ಚು ಮಾಡಬಹುದು. ಕಾನೂನು ಸಂಬಂಧಿ ವಿಚಾರಗಳಲ್ಲಿ ಭಾಗಿಯಾಗುವಾಗ ಹೆಚ್ಚು ಗಮನಹರಿಸಬೇಕಾಗುತ್ತದೆ. ಆದರೆ, ನೀವು ಯಾವುದರ ಬಗ್ಗೆಯೂ ಹೆಚ್ಚು ಒಲವು ತೋರುವುದಿಲ್ಲ. ಅಪಘಾತ ಮತ್ತು ಶಸ್ತ್ರಚಿಕಿತ್ಸೆಗಳನ್ನು ತಪ್ಪಿಸಿ.

ಇದನ್ನು ಓದಿ : ಫೆ. 6 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಕುಂಭ :
ಇಂದು ಅನುಕೂಲಕರ ದಿನವಾಗಲಿದೆ. ಉದ್ಯಮಿಗಳಿಗೆ, ಈ ದಿನವು ಅತ್ಯುತ್ತಮವಾಗಿರುವ ಭರವಸೆಯಿದೆ. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ ಮತ್ತು ಹೊಸ ಸ್ನೇಹಿತರನ್ನು ಸಂಪಾದಿಸುವಿರಿ. ಅವರೊಂದಿಗೆ ಸಣ್ಣ ಪ್ರವಾಸಕ್ಕೂ ತೆರಳಬಹುದು. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಉತ್ತಮ ದಿನ ಎಂಬುದಾಗಿ ಗಣೇಶ ಭಾವಿಸುತ್ತಾರೆ. ನೀವು ವಿವಾಹದ ಯೋಜನೆಯಲ್ಲಿದ್ದಲ್ಲಿ ಇಂದು ನಿಮಗೆ ಸೂಕ್ತ ದಿನ.

ಮೀನ :
ಗಣೇಶ ಇಂದು ವಿಫುಲ ಅನುಗ್ರಹವನ್ನು ತೋರುತ್ತಾರೆ ಮತ್ತು ನಿಮಗೆ ಅದೃಷ್ಟದಾಯಕ ದಿನವನ್ನು ನೀಡುತ್ತಾರೆ.ಕುಟುಂಬ, ಮನಸ್ಸು ಅಥವಾ ಕಾರ್ಯ ಯಾವುದರಲ್ಲೇ ಇರಬಹುದು ನಿರಂತರ ಮತ್ತು ಸುಲಭವಾಗಿ ಬರುವ ಲಾಭಗಳು ನಿಮ್ಮನ್ನು ಸಂತಸದಲ್ಲಿರಿಸಲಿದೆ. ಕಾರ್ಯಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಸಿಗುವ ಪ್ರಶಂಸೆಯು ನಿಮ್ಮನ್ನು ಹರ್ಷಗೊಳಿಸುತ್ತದೆ.

ನೀವು ಆನಂದದಿಂದಿರುತ್ತೀರಿ ಮತ್ತು ನಿಮ್ಮ ಕುಟುಂಬ ಸದಸ್ಯರು ಹಾಗೂ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂವಾದವನ್ನು ಹೊಂದುತ್ತೀರಿ. ನಿಮ್ಮ ಹಿರಿಯರೊಂದಿಗಿನ ಮತ್ತು ನಿಮ್ಮ ತಂದೆಯೊಂದಿಗಿನ ಸಂಬಂಧಗಳು ವೃದ್ಧಿಯಾಗಲಿವೆ ಮತ್ತು ಫಲಪ್ರದವಾಗಲಿದೆ. ಒಮ್ಮೆ ನೀಡಿರುವ ಹಣವು ಸುಲಭವಾಗಿ ಹಿಂತಿರುಗಲಿದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img